Posts

Showing posts from April, 2022

ವಚನಗಳು 17

Image
ಗುರುವಿಗೆ ಗುಲಾಮನಾಗು ಮನಸ್ಸು ಆಳುವ ದೊರೆಯಾಗು ಲಿಂಗವ ಪೂಜಿ ಶಿವನಿಗೆ ಶರಣಾಗೂ ಕಾಯಕವೆಂಬ ಕೈಲಾಸದಿ  ಬಸವಣ್ಣನ ಪ್ರೀತಿ ಪಾತ್ರನಾಗು ನುಡಿದಂತೆ ನಡೆಯಬೇಕು ಇಂಗು ತಿಂದ ಮಂಗನಂತೆ ಕುಣಿಯಬೇಡ ಮಾತಿಗೆ ಬೆಲೆ ಇಲ್ಲದಾಗ ಮೌನವೇ ಲೇಸು ಮನಸ್ಸಿಗೆ ತಪ್ಪಸ್ಸು ನೀಡುವ ಕಾಯಕವೇ ಲೇಸು ನಮ್ಮ ಬಸವಣ್ಣ ಇಚ್ಛೆಯಂತೆ ನಡೆದರೆ ಮನಸ್ಸು ಕುಣಿವುದು ಬುದ್ದಿ ಶುದ್ದಿ ಇಲ್ಲದಿದ್ದರೆ ಕೇಡು ಬರುವುದು ಲಿಂಗವ ಪೋಜಿದೋಡೆ ಶಿವ ಒಲಿವುದು ಕಾಯಕವು ಮಾಡಿದ  ಕರ್ಮವ ತೆಗೆವುದು ನಮ್ಮ ಬಸವಣ್ಣ ******************ರಚನೆ ****************                  ಡಾ. ಚಂದ್ರಶೇಖರ. ಸಿ. ಹೆಚ್ 

ನನಗು ಕನಸು ಇದೆ

Image
  ಅರಸಿ ಬಂದರು ನನ ಮನೆಗೆ ಹಗಲು ಇರುಳು ಎನ್ನದೆ ಸಿಂಗರಿಸಿ ಸೀರೆ ಹುಟ್ಟು ಬಳುಕುವ ನನ್ನ ದೇಹದೊಳಗೆ ಮೈತುಂಬಾ ಬಟ್ಟೆ ನಾನು ಬಿಚ್ಚಿಟ್ಟೆ ಕನಸುಗಳ ಮೂಟೆ ಕಟ್ಟಿ ಸುತ್ತಿಟ್ಟೆ ನನ್ನ ಬದುಕು ಬವಣೆ ಕೇಳುವರು ಯಾರು ದೇಹವನ್ನು ಉಂಡು ಕುಡಿದು ಗುಂಡು ಹಾಡಿಹರು ದೇಹವನ್ನು ಚೆಂಡು ನನಗು ಆಸೆಗಳು ಕನಸುಗಳು ಇವೆ ನನ್ನ ಹೃದಯದ ಮಾತಿಗೆ ಬೆಲೆ ಇಲ್ಲ ನನ್ನ ದೇಹಕೆ ಮಾತ್ರ ಬೆಲೆ ಇಲ್ಲಿ ನುಗ್ಗಿಹರು ಸವುರುತ್ತ ಗಲ್ಲ ವಯಸ್ಸಿಗೆ ಪರಿಮಿತಿ ಇಲ್ಲ  ಬಾಳೆ ಹಣ್ಣು ತಿಂದು ಎಸೆದ ರೀತಿ ಜೇವನವಾಯ್ತು ಬದುಕಿ ಸತ್ತ ಹೆಣದ ರೀತಿ ರೋಕ್ಕ ಬಂದ ಮೇಲೆ ನಾನು ಒಂದು ಮೂಲೆ ವಯಸ್ಸು ಎಷ್ಟು ದಿನ ದೇಹ ಎಷ್ಟು ದಿನ ಬಳುಕುವುದು ಬಳ್ಳಿಯಂತೆ ಕಾವು ಇದ್ದಷ್ಟು ಕ್ಷಣ ಬಾಳು ಬೆಳಕು ಮಾಗಿದ ಹಣ್ಣ ರೀತಿ ದೇಹ ಹುಳುಕು ನೋವು ಉಂಡ ಮನಕೆ ಸಾಕು ಈ ತಳುಕು ನಾಲ್ಕು ಗೋಡೆಯ ಮದ್ಯೆ ಬಂದಿ ನಾನು ರಾಕ್ಷಸರ ಕೈಗೆ ಸಿಕ್ಕು ಚಿಂದಿ ನಾನು ಬಣ್ಣದ ಬಣ್ಣದ ಬಟ್ಟೆ ನಾನು ಕಲರಫುಲ್ ಚಿಟ್ಟೆ ಮನಸ್ಸು ಕನಸ್ಸು ಸುಟ್ಟ ಹೆಣ್ಣು ನಾನು ನನ್ನವರು ನನಗಿಲ್ಲ ಹೊತ್ತು ತಂದಿಹರು ಇಲ್ಲಿ ನೆತ್ತರು ಹರಿಸಿರು ನನ್ನ ಕಚ್ಚಿ ಬಂದು ಉಂಡು ಹೋದವರು ಎಷ್ಟೋ ಜನ ನನ್ನ ಮೆಚ್ಚಿ ನನ್ನವರ ನೆನಪು ನನ್ನ ಕಾಡಿಹುದು ಮತ್ತೆ ನೋಡಲು ಮನಸ್ಸು ಬಯಸಿಹುದು ಕಾಣದ ಪ್ರೀತಿ ಬಂದು ಬಳಗವ ಬೇಡಿಹುದು ಎಲ್ಲವೂ ಕನಸ್ಸು ಈಗ ಮನಸ್ಸು ನೊಂದಿದೆ... ಆಸೆ ಕಳಚಿದೆ ಕಚ್ಚಿ ತುಟಿಯಲಿ ರಕ್ತ ಸೋರಿದೆ ಸೇರುಗು ಜಾರಿದೆ ಬದುಕು ಕಸಿದಿದೆ ಕನಸ್ಸುಗಳು ಕ

ವಚನಗಳ ಅರ್ಪಣೆ

Image
       ಅರ್ಪಣೆ   ಮನಸ್ಸು ಶುದ್ದಿ ಇರಲಿ ನಡತೆ ಶುದ್ದಿ ಇರಲಿ ನಿನ್ನ ಮೇಲೆ ನಂಬಿಕೆ ಇರಲಿ ಕಾಯಕವೇ ಕೈಲಾಸ ನನ್ನೊಬ್ಬ ನರ ಮನುಷ್ಯ ತಪ್ಪಾಗಿರಬಹುದು ವಿಷ್ಯ ಬರೆದೆನು ಸಣ್ಣ ವಚನ ನಮಿಸಿ ಬಸವಣ್ಣನ  ಪಾದ ಚರಣ ಪದಗಳಲಿ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಬಸವಣ್ಣನ ವಚನ ಓದಿ ಸವಿದೆನಲ್ಲ ನುಡಿ ಮುತ್ತುಗಳು ಆ ಬರೆದ ಸಾಲುಗಳು ಜೀವನವ ತೆರೆದಿಡುವ ವಚನಮೃತಾಗಳು  ವಚನ ಬರೆವಷ್ಟು ಜ್ಞಾನಿ ನಾನಲ್ಲ ಆದರೂ ನಾಲ್ಕು ಸಾಲು ಬರೆದಿಹೆನಲ್ಲ  ಜೀವನದಿ ಅನುಭವ ಅಷ್ಟಿಲ್ಲಾ ನನಗೆ ತೊಚಿದ್ದು ಗೀಚಿಹೇನಲ್ಲ ಕ್ಷಮಿಸಿ ಬೀಡು ನನ್ನ ಓ ಯೋಗಿ ಬಸವಣ್ಣ                   ಸಮರ್ಪಣೆ   ***********ರಚನೆ ************* ಡಾ.. ಚಂದ್ರಶೇಖರ. ಸಿ. ಹೆಚ್ 

ವಚನಗಳು -16

Image
ದೇವನೂಬ್ಬ ನಾಮ ಹಲವೂ ಜಾತಿ ನೂರು ಮನುಜ ಕುಲವೊಂದೇ ಸಕಲ ಪ್ರಾಣಿಗಳಲಿ ಹರಿವುದು ರಕ್ತವೆ ಮಾಡುವ ಕಾಯಕ ನಮ್ಮ ಗುರಿತಿಸುವುದು ನಮ್ಮ  ಬಸವಣ್ಣ ಉರಿವ ಬೆಂಕಿಗೆ ತುಪ್ಪ ಹಾಕಿದರೆ ಧರೆಗೆ ಅವರಿಸುವುದು ಸಂಸಾರದಲ್ಲಿ ಹುಳಿ ಹಿಂಡಿದರೆ ಮಸಣವಾಗುವುದು ತಂದಿಕ್ಕಿ ತಮ್ಮಾಷೆ ನೋಡಬೇಡ ಓ ಮನುಜ ಶ್ರದ್ದೆಯಿಂದ ಉತ್ತಮ ಕಾಯಕವ ಮಾಡು ಒಳಿತಾಗುವುದು ನಮ್ಮ ಬಸವಣ್ಣ ಮನದಲ್ಲಿ ಶಿವನ ಚಿಂತೆಯ ಮಾಡು ಶಿವನಲ್ಲಿ ಒಳಿತನ್ನು ಬೇಡು ಮನಸ್ಸು ಶುದ್ದಿಯಾಗಿಟ್ಟು ನೋಡು ಮಾಡುವ ಕಾಯಕವ ಕೈ ಮುಗಿದು ಮಾಡು ಸ್ವರ್ಗದ ಬಾಗಿಲು ತೇರೇವುದು ನೋಡು ನಮ್ಮ ಬಸವಣ್ಣ **************ರಚನೆ **************         ಡಾ. ಚಂದ್ರಶೇಖರ. ಸಿ. ಹೆಚ್ 

ಹೇಗಿತ್ತು ನಿಮ್ಮ ಬಾಲ್ಯ

Image
ನಾನಿನ್ನು ಮೂರನೇ ತರಗತಿ ಯಾರು ಏತ್ತಬೇಕು ನನಗೆ ಆರತಿ ನಮ್ಮಮ್ಮನೇ ಮನೆಯ ಗೌಡತಿ ನಮ್ಮಪ್ಪನೇ ಮನೆಯ ಗೌಡ ಅಜ್ಜಿ ಕೊಟ್ಟ ಬಳುವಳಿಯ ಹಸು ನಮ್ಮನೆ ಹಿತ್ತಲಲ್ಲಿ ಮೇದಿತ್ತು ಹುಲ್ಲು ಜಗಿದು ಜಗಿದು ಕಡಿಯುತ್ತ ಹಲ್ಲು ಬಾಯಿಯಲ್ಲಿ ಸುರಿಸುತ್ತ ಜೊಲ್ಲು  ಶಾಲೆಯ ಮೇಷ್ಟ್ರ ಧರಣಿ ಮಂಡಲ ಕವನ ನನ್ನ ಮನಸ್ಸಲಿ ಹಸುವಿಗೆ ಭಕ್ತಿ ನಮನ ಅಮ್ಮ ಹೇಳುವಳು ದಿನ ಕೆಲಸ ಯಾರು ಮಾಡಬೇಕು ದಿವಸ ಹಿತ್ತಲ ಮನೆಯ ಬಾಗಿಲು ತೆಗೆದು ಹಸುವಿನ ಗಂಜಲ ತೊಟ್ಟಿಗೆ ಮಗೆದು ಬರಿ  ಕೈಲಿ ಸಗಣಿಯ ಮುಟ್ಟಿ ಮಾಡುವರಂತೆ ಸಗಣಿ ಬೆರಣಿ ತಟ್ಟಿ ಸಗಣಿಯ ತಿಪ್ಪೆಗೆ ಎಸೆದು ಬುಟ್ಟಿಯ ದೋಡ್ಡಿಲಿ ಹೊಗೆದು ಶುಭ್ರವಾಗಿ ಕೈಕಾಲು ತೊಳೆದು ಕರುವನ್ನು ಬಿಟ್ಟು ಹಾಲನು ಕುಡಿಯಲು ತಂಬಿಗೆ ತಂದು ಕೆಚ್ಚೆಲಿಗೆ ನೀರನು ಸವರಿ ಗುದ್ದುತಾ ಕರು ಹಾಲಿನ ಸವಿ ಕಂಡು ಹೊಟ್ಟೆಯ ತುಂಬಾ ಹಾಲನು ಉಂಡು ಕರುವನು ಕಟ್ಟಿ ಕೆಚ್ಚೆಲು ಮುಟ್ಟಿ ಹಾಲನು ಕರೆದು ಅಮ್ಮ ಹೇಳಿದ ಪಾತ್ರೆಗೆ ಸುರಿದು ಹಸುವಿನ ಪ್ರೀತಿ ಕರುವಿನ ಕಡೆಗೆ ಕರುವು ಪ್ರೀತಿ ಹಸುವಿನ ಎಡೆಗೆ ಹೇಗೆ ಬಣ್ಣಿಸಲಿ ಈ ಬಾಂದವ್ಯ ಪ್ರೀತಿಯ ನಲ್ಮೆಯ ವಾತ್ಸಲ್ಯ ಮನೆ ದೇವರ ಗುಡಿಗೆ ಪೂಜೆ ಬೇಡಿದೆ ದೇವರ ಒಳ್ಳೇದು ಮಾಡು ವಿದ್ಯಾ ಬುದ್ದಿ ನನಗೆ ನೀಡು ಕಳೆಯಿತು ಈಗೆ ನಮ್ಮ ಬಾಲ್ಯ ತಿನ್ನದೇ ಮುಸುರೆಗೆ ಎಸೆದ ಹಾಗಲಕಾಯಿ ಪಲ್ಯ  ನಮ್ಮ ಪಯಣ ಶಾಲೆಯ ಕಡೆಗೆ ದಿನವೂ ಶಾಲೆಗೆ ನಮ್ಮ ನಡಿಗೆ ***********ರಚನೆ ******* ಡಾ  ಚಂದ್ರಶೇಖರ. ಸಿ. ಹೆಚ್

ಬದುಕು ಬರಿದು

Image
ಬದುಕು ಬರಿದಾದ ಮೇಲೆ ಮುಖದಿ ನಗುವೆಲ್ಲಿದೆ ನೋವು ನೂರೆಂಟು ಹಾಗಿ ಕಣ್ಣ ನೀರು ಬತ್ತಿದೆ ಮನದಿ ಚಿಂತೆಯ ಬೇರು ನನ್ನ ಮನವ ಸುಡುತಿದೆ ಆಟವ ಆಡಿಸುವತನ ಕೈಲಿ ಎಲ್ಲಾ ಅಡಗಿದೆ ಯಾರಿಗೆ ಏಳಲಿ ದುಃಖ್ಖ ಮನದ ಕಟ್ಟೆ ಹೊಡೆದಿದೆ ಪ್ರತಿ ಕ್ಷಣವೂ ನಿನ್ನ ಯೋಚನೆ ಮನೆ ಮಾಡಿದೆ ಬಾರೆ ನನ್ನ ಒಲವೇ ನೋವು ಮರೆಸುವ ಚೆಲುವೆ ಎಲ್ಲಿರುವೆ ನೀನು, ಎಗೆ ಹುಡುಕಲಿ ನಿನ್ನ ಓ ಮನವೇ ಕಾಣದ ದಾರಿಯಲ್ಲಿ ನಾ ಹಾಗೆ ಸಿಲುಕಿದೆ ನಿನ್ನ ಕಾಣದೆ ಏಕೋ ನನ್ನ ತನುವು ಕಲಕಿದೆ ಮುಂಗಾರು ಮಳೆಯ ರೀತಿ ನಿನ ಆಗಮನಕೆ ಕಾದು ಮಣ್ಣು ಅಸನಗೋ ರೀತಿ ನನ ಘಾಯ ಮಾದು ಹಸಿರು ಹುಟ್ಟುವ ರೀತಿ ನನ ಕನಸ್ಸು ಚಿಗುರಲು ಗಿಡ ಮರ ಬಳ್ಳಿ ಹೂವು ಬಿಟ್ಟು ಆಸೆ ಕರೆಯಲು ಮನದಿ ಕಾಡಿದ ನೋವು ಕಣ್ಮರೆಯಾಗಲು ನೀನೇ ನನ್ನ ಊಸಿರು ಎಂದು ಒಲವಲ್ಲಿ ಬರೆಯಲು ನೂರಾಸೆ ಹೊತ್ತ ಬದುಕು ಹಣತೆಯಂತೆ ಊರಿಯಲು  ನೀನು ಬಳಿ ಬಂದು ಬಾಳುಹುಣ್ಣಿಮೆಯಂತೆ ಬೆಳಗಲು ಮುದುಡಿದ ತಾವರೆಯಂತೆ ಕನಸು ಮನಸು ಅರಳಿದೆ  ಜೀವನದಿ ಬೆಂದ ಸೂರು ನಮ್ಮನಿಗಾ ಮತ್ತೆ ಕರೆದಿದೆ ವಿಧಿಯ ಕೈಲಿ ಬೊಂಬೆಯಂತೆ ನಮ್ಮ ಜೀವನ ಆಡಿಸುವತನು ಕುಣಿಸುವಂತೆ ಕುಣಿವ ನಾವು ಅನುದಿನ ಕಾಣದತ ಕರೆದು ವರವ ನೀಡಲು ಒಮ್ಮೆ ನಾವು ಬೇಡಲು ಬಾಳು ಬಂಗಾರ ಬರಡು ಬದುಕು ಹಸಿರು ಸುರಿಸಲು  *************ರಚನೆ ***************          ಡಾ. ಚಂದ್ರಶೇಖರ. ಸಿ. ಹೆಚ್ 

ನೂರಾಸೆ ತುಂಬಿದೆ

Image
ತನನ, ತನನಾ, ತನನ, ತನನಾನನ  ಏ    ಹುಡುಗಿ    ಏಕೆ ನೂರಾಸೆ   ತುಂಬಿದೆ ಮನವೆಕೋ ಇಂದು,  ನಿನ್ನನ್ನೇ ಕೂಗಿದೆ ಬದುಕಿನ ಪಯಣದಿ ನೀ ದಾರಿ ತೋರಿದೆ ಕನಸ್ಸುಗಳ ಮೂಟೆ ಹೋತ್ತು ನಾ ನಿನ್ನಿಂದೆ ಸಾಗಿದೆ ಏ ಹುಡುಗಿ ಏಕೆ ನೂರಾಸೆ ತುಂಬಿದೆ ಏ ಹುಡುಗಿ ಏಕೆ ನೂರಾಸೆ ತುಂಬಿದೆ  ನಿನ ನೆನಪ ಸವಿ ದಾರಿಯಲಿ ನಾ ಕಾಲು ಜಾರಿದೆ ತಿಳಿಯದೆಯೇ ನನಗೆ  ನೀ ದೂರ ಹೋಡಿದೆ ಮನಸ್ಸಿಂದು ನೊಂದು  ಮೂಕವಾಗಿದೆ ಏ ಹುಡುಗಿ ಏಕೆ ನನ್ನಿಂದ ದೂರದೇ ನಿನ್ನಾಸ್ಸೇ ಹೊತ್ತು ನಾ ನಿನ್ನಿಂದೆ ಸಾಗಿದೆ ನನ್ನ ಹೃದಯವಿಗಾ ನಿನ್ನ ಹೆಸರ ಕೂಗಿದೆ ಮನಸ್ಸು ಚುಚ್ಚಿ ನೋವನ್ನು ತುಂಬಿ ನೀನೇಕೆ ಹೊಡಿದೆ ಏ ಹುಡುಗಿ ಹೇಳು ನಿನ್ನ ಹೇಗೆ ಮರೆಯಲಿ ಏ ಹುಡುಗಿ ಹೇಳು ನಿನ ಹೇಗೆ ಮರೆಯಲಿ ನನ್ನ ಈ ಪ್ರೀತಿಗೆ ಏನೆಂದು ಹೆಸರಿಡಿಲಿ ಮನದ ಮೌನದ ಹಾಡು ನಾನೇಗೆ ಮುಚ್ಚಿಡಲಿ ಏ ಹುಡುಗಿ ಒಮ್ಮೆ ಹೇಳಿ ಹೋಗು ಕಾರಣ ಕಾಲವೇಕೋ ಕಾಡುತಿದೆ ಕಹಿ ನೆನಪು ಹೊತ್ತು ನೀನಿರದೆ ನೋಡುತಿದೆ ಪ್ರೀತಿ ನಗುವ ಕಿತ್ತು ಕನಸ್ಸುಗಳಲಿ ಬದುಕಿರುವೆ ಮನದಾಸೆ  ಸತ್ತು ಏ ಹುಡುಗಿ ಏಕೆ ನೂರಾಸೆ ತುಂಬಿದೆ ನಿನ್ನಾಸೆ ಹೊತ್ತು ನಾ ನಿನ್ನಿಂದೆ ಸಾಗಿದೆ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್,

ಕನಸುಗಳ ಗೂಡು

Image
ಬದುಕು ಪಯಣದ ಊರು ನೆನಪುಗಳು ಮನೆಯ ಸೂರು ಓಡುತಿರುವ ಕಾಲ ವಿಧಿಯ ತೇರು ನಾಲ್ಕು ದಿನದ ಜಾತ್ರೆ ಜೋರು ಕನಸುಗಳ ಯಾತ್ರೆ ಗೂಡು ಮನದಿ ನೂರೆಂಟು ಆಸೆ ನೋಡು ದಿನವೂ ಕಳೆದು ಒಲವ ಹಾಡು ಜೀವನ ಜೋಕಾಲಿ ತೂಗಾಡು  ಆಡುವ ಆಟ ನವನವಿನ ಬಾಳು ಸುಂದರ ನಗುವಿನ ನೋವ ಮರೆತು ಗೆಲುವಿನ ಓಡುತಿರುವ ಸಮಯ ಸೋಪಾನ ಕುಂಟುತ್ತಿರುವ ಆಸೆಗಳೇ ನೂರೆಂಟು ಬಯಕೆಗಳೇ ಸ್ವಲ್ಪ ಕಾಲ ತಡೆಯಿರಿ ನೋವುಗಳ ಸಹಿಸಿರಿ ನಾಳೆಗಳ ತುಳಿಯಿರಿ ನೆನ್ನೆಗಳ ಮರೆಯಿರಿ ಈ ದಿನವನ್ನು ಸವಿಯಿರಿ  ಹಕ್ಕಿಯಾಗೆ ಹಾರುವಸೆ ಸಮುದ್ರದಿ ತೇಲುವಾಸೆ ಮುಗಿಲಿನಿಂದ ಬೀಳುವಾಸೆ ವಿಧಿಯ ಕೈಲಿ ಇಡೀವಾಸೆ ಮೋಡಕೆ ಡಿಕ್ಕಿ ಹೊಡೆವಾಸೆ ಸೂರ್ಯನನ್ನು ಸುಡುವಾಸೆ ಯಾರಿಗಾಗಿ ಈ ಪಯಣ ಕನಸ ಗೂಡು ದೇವರೆ ಕಾರಣ  ********ರಚನೆ ***-****- ಡಾ. ಚಂದ್ರಶೇಖರ. ಸಿ. ಹೆಚ್

ನೋಟದಿ ಪ್ರೀತಿ

Image
  ನಿನ್ನ ತುಂಟ ನಗುವಿನ ಸೆಳೆತ ಹೃದಯದಿ ನಿನದೆ ಮಿಡಿತ ಕಣ್ಣಿನ ನೋಟದಿ ಪ್ರೀತಿ ರಂಗು ನಿನ್ನಯ ಚೆಲುವು ತಂದಿದೆ ಗುಂಗು ಬದುಕಲಿ ಬಂದೆ ನೀನೇ ಒಲವೇ ನನ್ನಯ ಆಸೆ ಹೊತ್ತಾ ಮನವೇ ನೀನು ಕೂಟ್ಟೆ ಸಾವಿರ ಕನಸು ಮನದಿ ಬೆರೆತು ಮಾಡಿದೆ ನನಸು ಹಿತವಾದ ಅಪ್ಪುಗೆ ನೀಡಿತು ಪ್ರೀತಿ ಬಾಡಿದ ಮನಕೆ ನೀರೇರೆದ ರೀತಿ ಮನಸಲಿ ಪ್ರೀತಿಗೆ ಜಾಗ ಕೊಟ್ಟೆ ಮೊಗ್ಗು ಹೂವಾಗಿ ಅರಳಲು ಬಿಟ್ಟೆ ಕೋಗಿಲೆಯಾಗಿ ವಸಂತಮಾಸದಿ ಬಂದೆ ಚಿಗುರೆಲೆಯಾಗಿ ಹಣ್ಣು ಬಿಟ್ಟು ನಿಂದೆ ಒಲವ ಸುಂದರ ಪ್ರಕೃತಿ ಹಸಿರು ಎದೆ ಬಡಿತ ಕೂಗಿದೆ ನಿನ್ನ ಹೆಸರು ಜೀವನ ಪಯಣದಿ ನೀನೇ ಸಾತಿ ಬದುಕು ಸುಂದರ ಗೆಲುವಿನ ನೀತಿ ಹಾರಾಡುತ್ತಿರುವ ಹಕ್ಕಿಯು ನಾವು ಮರೆತು ಎಳು ಬಿಳಿನಾ ನೋವು ***********ರಚನೆ *********   ಡಾ. ಚಂದ್ರಶೇಖರ. ಸಿ. ಹೆಚ್

ನಮ್ಮೂರ ಕಾಫೀ

Image
ಕಾಫೀ ವರ್ಣನೆ ತೋಟದ ಬಣ್ಣನೆ ಬಿಸಿ ಕಾಫೀ ಕುಡಿಯುತ ತಣ್ಣಗೆ ಮನ ಸೋಲದವರಿಲ್ಲ ಕಾಫಿ ರುಚಿಗೆ  ಪ್ರಕೃತಿ ಮಡಿಲಲಿ ಕಾಫೀ ಸವಿದರೆ ಉಲ್ಲಾಸದಲಿ ಮೈಮನ ಮಿಂದರೆ. ಚಿಕಮಗಳೂರು ಕಾಫೀ ಚೆನ್ನ                                  ಬೆಟ್ಟ ಗುಡ್ಡ  ಕೈಬಿಸಿ ಕರೆಯಿತು ನನ್ನ ಅಮ್ಮ ಮಾಡಿದ ಕಾಫೀ ಸವಿಯುತ ನೊರೆಯ ಹಾಲಾಲಿ ಕಾಫಿ ತುಟಿಯ ಸವರುತ ರುಚಿಯು ನಾಲಿಗೆ ತಾಕಿತು  ನೂರೆಂಟು ಚಿಂತೆಯ ಮರೆಯಿತು  ಹೂವು ಬಿಟ್ಟ ಕಾಫೀ ಪರಿಮಳ ಹೂವು ತೋಟದಿ ಪಳ ಪಳ  ಸುವಾಸನೆ ನನ್ನ ಮೂಗು ತಾಕಿರಲು ಸ್ವರ್ಗದಿ ನಾನು ಹಾಗೆ ತೇಲಿದೆ ಕಾಫೀ ಹೂವಿಗೆ ಸಾಟಿ ಎಲ್ಲಿದೆ ಕಾಫಿ ನೆಟ್ಟ ಹಸಿರು ಬೆಟ್ಟ ಗಿಡ ಮರ ಬಳ್ಳಿಯ ಘಟ್ಟ ಮನಸೆಳೆಯಿತು ಹಾಗೇ ನನ್ನ ಸವಿದೆ ಪ್ರಕೃತಿ ಸೊಬಗನ್ನ ********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ನನ್ನ ಹುಡುಗಿ ಸೂಪರ್

Image
ಒರೆಗಣ್ಣಿನಲ್ಲಿ ಕುಡಿ ನೋಟ ಬೀರವಳೇ ಮನಸು ಮನಸು ತಾಗಿ ಮನದಲ್ಲೇ ನಗತಾವಳೇ ನನ್ನ ಹುಡುಗಿ ಹಾಗೆ ಸುಂದರಾಗಿ ಕಾಣತಾವಳೇ ಮಾತಿನಲ್ಲಿ ಪ್ರೀತಿ ಇಟ್ಟು ನನ್ನ ಕೂಗಿ ಕರೆದವಳೇ ಹಸಿರು ಸೀರೆ ಹುಟ್ಟು ನಸುನಗುತಾ ನಿಂತಾವಳೇ ನನ್ನ ಹುಡುಗಿ ಯಾಕೋ ಸಕತ್ತಾಗಿ ಕಾಣತಾವಳೇ ಹೆಸರು ಏನೋ ನಯನ ಯಾರು ಎತ್ತರೋ ಇವಳನ್ನ ಹಂಸದಂತ ನಡಿಗೆ ಬಾಳುಕೊ ಬಳ್ಳಿ ಹುಡುಗೇ  ನನ್ನ ಹುಡುಗಿ ಸೂಪರ್ ನೋಡಿ ನಾನು ಟ್ರಿಗ್ಗೆರ್ ನನ್ನ ಹುಡುಗಿ ಯಾಕೋ ಸಾಕ್ಕಾತ್ತಗೆ ಕಾಣತಾವಳೇ ಮಾತು ಕೂಡ ಮುತ್ತು ಹಕ್ಕಿ ನನ್ನ ಬಲೆಗೆ ಬಿತ್ತು ಮಾಡುತವಳೇ ಡಾನ್ಸ್  ಇವಳಗೆ ಅವರೇ ಫ್ಯಾನ್ಸ್ ನನ್ನ ಬುಲ್ ಬುಲ್ ಫ್ಲವರ್ ಮಗ ಇವಳು ಸಕತ್ತಾ ಫಿಗರ್ ಇವಳೇ ನನ್ನ ಚಿನ್ನ ನಾನು ಇವಳ ರನ್ನ, ನನ್ನ ಹೃದಯಕ್ಕೆ ಇಟ್ಟವಳೇ ಗುನ್ನ ಮನಸು ಏಕೋ ಕನ್ನ ಕನಸಲ್ಲಿನೂ ಬರ್ತವಳೇ ನಿದ್ದೆ ಪೂರಾ ಕದಿತವಳೇ ಮಗ ಯಾರೋ ಇವಳು ಹುಡುಗಿ ಮೀನಿನಂತ ಬೆಡಗಿ  ನೋಡಕೋ ಒಳ್ಳೆ ಬೋಲ್ಡ್ ನೋಡತಾ ಇದ್ದಾರೆ ಕುಡಿದಂಗೈತೆ  ಬ್ರಾಂಡಿ ಕೋಲ್ಡ್ ನಕ್ಕರೆ ನಾನೆ ಮಾಯ ಇಡಿಯೊದೆಂಗೆ ಕೈಯ ಮಗ ಇವಳು ಸಕ್ಕತ್ ತಿನ್ನುತ್ಸವಳೇ ಬಿಸ್ಕುತ್  ಹಾಡುತ್ತಾವಳೇ ಕನ್ನಡ ಹಾಡು ಕೇಳಿ ಒಮ್ಮೆ ನೋಡು  ಇವಳ ಮುಂದೆ ಪಾಪ್ ಸಾಂಗ್ ಡಾಮ್ಮರ, ಕನ್ನಡ ಸಾಂಗ್ ಸೂಪರ್ ನೋಡಕಿವಳು ವೈಟ್ ಕೊಡತಾವಳೇ ಸೈಟ್ ಆಡಬೇಕು ಡುಯೆಟ್ ಇವಳೇ ಮಾಧುರಿ ದೀಕ್ಷಿತಾ, ನಾನೆ ಅನಿಲ್ ಕಪೂರ್ ಸಿನಿಮಾ ಫುಲ್ ಸೂಪರ್  ಇವಳು ತುಂಬಾ ಕ್ಯೂಟ್ ಇವಳ ಜೊತೆ ನನ್ನ ಲವ್ ಫೈಟ್  ಬಿದ್ದಗೇನೇ ಇವಳು ಮಂಗಳೂರು ಮ

ವಚನಗಳು -13

Image
ಉರಿವ ದೀಪ ಬೆಳಕು ನನ್ನಿಂದ ಎಂದು ಹೇಳದು ಬೆಳಗೋ ಸೂರ್ಯ ನನ್ನಿಂದ ಬೆಳಗಾಯಿತು ಹೇಳದು ಭೂಮಿ ನನ್ನಿಂದಾನೆ ಜೀವಿಗಳ ಜೀವ ಎಂದು ಹೇಳದು ನನ್ನಿಂದ ಎಂದು ಹೇಳದೆ ಕಾಯಕ ಮಾಡು ಮನುಜ ನಮ್ಮ ಬಸವಣ್ಣ ಇಂಗಿತಾ ನಿನಗೆ ತಿಳಿವುದು. ಹಣ ಹಣ ಎಂದು ಬಡಿದಾಡ ಬೇಡ ಮನುಜ ಹೆಣ್ಣಿಗಾಗಿ ಹೊಡೆದಾಡ ಬೇಡ ಮನುಜ ಹೆಣ್ಣು, ಹೊನ್ನು,ಮಣ್ಣು ಮಾಯೆ ಮನುಜ ನಿಷ್ಠೆಯಿಂದ ಕಾಯಕವ ಮಾಡು ಎಲ್ಲವೂ ನಿನ್ನಿಂದೆ ಬರುವ ಸಮಯ ದೂರವಿಲ್ಲ ನಮ್ಮ ಬಸವಣ್ಣ ದೇವರು ದೇವಾಲಯದಲ್ಲಿ ಇಲ್ಲ ಮಗುವೇ ದೇವರು ಪರ್ವತದ ತಪ್ಪಲಿನಲ್ಲಿ ಇಲ್ಲ ಮಗುವೇ ದೇವರು ಅರಿಶಿನ ಕುಂಕುಮ ಅಚ್ಚಿದ ಕಲ್ಲುಗಳಲಿ ಇಲ್ಲ ನೀ ಕಾಯಕವ ನಿಷ್ಠೆಯಿಂದ ಮಾಡಿ ದೇವರನು ಕಾಣು  ನಮ್ಮ ಬಸವಣ್ಣ *****************ರಚನೆ ***************           ಡಾ. ಚಂದ್ರಶೇಖರ. ಸಿ. ಹೆಚ್ 

ರಾವಣ

Image
ಆರಂಭಿಸಿ ಹಾಗಿದೆ ಕಾದಂಬರಿ ರಾವಣ ಎಂದು ಬರೆದು ಮುಗಿವುದೂ ಮನದಲ್ಲಿ ತಲ್ಲಣ  ನೆನ್ನೆಯ ಮನಸು, ನಾಳೆಯ ಕನಸು, ಇಂದಿನ ಸೋಗಸು ಮೇಳಯಿಸಿ ಹೊಸತು ಹುಡುಕುವ ಕಾರಣ ಬೇಗ ಬರೆದು ಮುಗಿಯಲಿ ಕಾದಂಬರಿ ರಾವಣ ಮಿಂಚುತಿಹಾ ನೀಲಿ ಬಾನಿನಲ್ಲಿ ಕರಾಗುತಿಹಾ ಮೋಡವೊಂದು ಸುರಿಸುತಿಹಾ ಜಡಿ  ಮಳೆಗೆ ಮಳೆಹನಿ ಆಯುತು ದಿಬ್ಬಣ ರಾಮನ ತ್ಯಾಗ ಕಂಡೆ ಸೀತೆಯ ಪ್ರೀತಿ ನಲಿವ ಕಂಡೆ ಲಕ್ಷ್ಮಣನ ತಾಳ್ಮೆ ಕಂಡೆ ಹನುಮನ ಭಕ್ತಿ ಪೂಜೆ ಕಂಡೆ ಸೀತೆಯನು ಅಪಹರಿಸಿದ ರಾವಣ ಲಂಕೇಯನು ಬಾಲದಿ ಸುಟ್ಟ ಹನುಮ ಸುರಿವ ಮಳೆಹನೀಯ ರಕ್ತ ದಿಬ್ಬಣ ರಾವಣನು ಕಾರಣವೇ ನಡೆಯಲು ರಾಮಾಯಣ ************ರಚನೆ ****************          ಡಾ. ಚಂದ್ರಶೇಖರ. ಸಿ. ಹೆಚ್ 

ಬಾವಲಿ

Image
ಬಾನ ಅಂಚಿನ  ಹಾದಿಯಲಿ ಬಂದಿ ನಾನು ಈಗ ಗುಡುಗುತಿಹಾ ಮೊಡವೊಂದು ಸುರಿಸುತಿದೆ ಮೇಘ ಸುರಿವ ಜಡಿ ಮಳೆಗೆ ಜಾರಿ ಹಾರಿ ಹೋಯ್ತು ಜೀವ ನೆನೆದು ನೆನೆದು ತಣ್ಣಗಾಗಿ ದೇಹ ಕೇಳಿತು ಬಿಸಿ ಕಾವ ಮರದ ಕೊಂಬೆಯಲಿ ನೇತಾಡಿ ಜೋತಡುವ ಹಕ್ಕಿ ನಾನು ಬಾಹುಗಳನ್ನು ನೇತುಬಿಟ್ಟು ತಲೆ ಜೋತು ಬಿಟ್ಟೆ ನಾನು ಕೂಗಿ ಕೂಗಿ ಶಬ್ದ ಮಾಡಿ ಹಾರುವ ಬಾವಲಿ ನಾನು ಹಗಲಿನಲಿ ಮರಕೆ ನೇತು ಬಿದ್ದು ಮರೆತೇ ಬಿಟ್ಟೆ ನನ್ನೇ ನಾನು ಹಣ್ಣು ಕ್ರಿಮಿ ಕೀಟ ಹುಡುಕಿ ಪಾಳು ಬಂಗಲೆ ಅಲೆವೆ ನಿಫ್ ವೈರಸ್ ನನ್ನಿಂದ ಬರುವುದೆಂದು ನನ್ನ ಕೊಲುವೇ ನನ್ನ ನೋಡಿ ಶಕುನವೆಂದು ಹೆದರು ತಿರುವ ಮನುಜ ರಾತ್ರಿಯಲಿ ನನ್ನ ಕೂಗಿಗೆ ಭಯಪಡುವುದು ಸಹಜ ನಾಶದ ಅವನತಿಯಲಿ ನನ್ನ ಜಾತಿ ಪಕ್ಷಿ ಸಂಕುಲ ಕೊಲ್ಲುವ ಯೋಚನೆಯಲ್ಲಿ ಭೂಮಿಲಿ ಮನುಕುಲ ಮೊಬೈಲ್ ತರಂಗದಿಂದ ನಾನು ಸಾವ ಸುಳಿಗೆ ಮನುಷ್ಯನ ಜೀವದ ನೆಲೆಗಾಗಿ ಕೊಂದು ಆ ಘಳಿಗೆ ***************ರಚನೆ ***********            ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -12

Image
ಲಿಂಗವೆಂಬ ಬೀಜವು ಮಣ್ಣಾಗಿ ಮಣ್ಣಿನಲಿ ಬೀಜವು ಭಕ್ತಿಯ ಮೊಳಕೆಯಾಗಿ ಮೊಳಕೆಯು ಮಳೆಹನಿಗೆ ಗಿಡವಾಗಿ ಗಿಡವು ಕಾಲದಿ ಬೆಳೆದು ಮರವಾಗಿ ಮರವು ಹೂವುಬಿಟ್ಟು ಹಣ್ಣಾಗಿ ಹಣ್ಣು ಸವಿದು ಬೀಜವೆಂಬ ಲಿಂಗವು ಮಣ್ಣಿಗೆ ಸೇರುವುದೇ ಕಾಯಕ ನೋಡ ನಮ್ಮ ಬಸವಣ್ಣ ಹೆತ್ತವರು ನೀವು ಹೊತ್ತವರು ನೀವು ಬೆಳೆದು ಭಕ್ತಿಯಲಿ ಕಾಯುವರು ನೀವು ನಿಮ್ಮ ಕಾಯಕವೇ ನನ್ನ ಜೀವನ ಯೋಗಿ ಬಸವಣ್ಣ ನಿದ್ದೆ ಮಾಡುವವರ ಎಬ್ಬಿಸಬಹುದು ಕೆಲಸವೇ ಗೊತ್ತಿಲ್ಲದವರಿಗೆ ಕಲಿಸಬಹುದು ತಿಳಿದು ತಿಳಿಯದೆ ನಟಿಸುವವರ ತಿಳಿಯುವುದು ಕಷ್ಟ ಕಣ್ಣಯ್ಯ ಕಾಯಕವ ಮಾಡು ಭಕ್ತಿಯ ಕಣಜವಾಗು ನಮ್ಮ ಬಸವಣ್ಣ  ***********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು- 11

Image
ಹೊನ್ನು ನೀಡುವ ಸುಖ ಕ್ಷಣಿಕ ಕಾಮ, ಕ್ರೋದ. ಲೋಭ, ಮದ, ಮಾತಾಸರ್ಯ ನೀಡುವ ಸುಖ ಕ್ಷಣಿಕ ಧರ್ಮದಿ ನೀ ಮಾಡುವ ಕಾಯಕ ನೀಡುವುದು ಸುಖ ಕೊನೆತನಕ ನಮ್ಮ ಬಸವಣ್ಣ ಎಲ್ಲಾ ಇರುವಾಗ ನಾನು ಬೇಡಲಿಲ್ಲ ನೋವು ಮನ ತುಂಬಿದಾಗ ಬೇಡಲಿಲ್ಲ ಮೋಸವೊದಾಗ ನಾನು ಬೇಡಲಿಲ್ಲ ಕಾಯಕವು ನನ್ನ ಕೈಬಿಸಿ, ದಿನವೂ ಕ್ಷಣವು ಬಸವಣ್ಣನ ಬೇಡಿದೆ ನಿಜ ಸರ್ಪವ ಬಡಿದು ಹಳ್ಳಿಕಟ್ಟೆಯ ಸುತ್ತುವರು ಬಾವಿಯಲೀ ನೀರೇತ್ತಿ ಮಡಿ ಮೈಲಿಗೆ ನೋಡುವರು ದಿನವಿಡಿ ದೇವರ ಪೂಜೆಯನು ಮಾಡುವರು ನಿನ್ನ ಮಾಡುವ ಕಾಯಕವ ಮೆಚ್ಚುದವನು ಬಸವಣ್ಣನ ಮೆಚ್ಚುವನೇ *************ರಚನೆ ***************          ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -10

Image
ಮಾಡುವ ಕಾಯಕವ ಕಸಿದು ಬಿಟ್ಟು ಊಣ್ಣುವ ಅನ್ನಕೆ ಹಾಲಹಲವಿಟ್ಟು ಬಾಯಿಯಲ್ಲಿ ಚಿನ್ನದಂಥ ಮಾತಾಡಿಬಿಟ್ಟರೆ ನಮ್ಮ ಕಾಯಕ ಯೋಗಿ ಬಸವಣ್ಣ ಮೆಚ್ಚುನು ದುರುಳ ಮೋಸದಿ ದುಡಿದ ಹಣ ಪಾಪ ತುಂಬುವ ತನಕ  ಬಚ್ಚಿಠ ಹಣ ಪರರಿಗೆ ಕಷ್ಟಾಪಟ್ಟ ಹಣ ನಿನಗೆ  ಕಷ್ಟಪಟ್ಟು ಕಾಯಕದಿ ದುಡಿದ ಹಣ ನೀನಿರುವ ತನಕ ನಿನ್ನ ಕಾಯುವುದು ನೋಡ ಮರುಳೆ ನಮ್ಮ ಬಸವಣ್ಣ  ಚರಂಡಿಯ ನೀರು ಕುಡಿಯಲು ಯೋಗ್ಯವಲ್ಲ ನಮಗೆ ಸಿಕ್ಕದ ಹೊನ್ನು ಎಷ್ಟು ಇದ್ದರೇನು ತಿನ್ನುವ ಹಣ್ಣು ಕೊಳ್ಳಲು ದುಬಾರಿಯಾದರೆ ನಿಷ್ಠೆಯಿಂದ ಕಾಯಕವ ಮಾಡದೊಡೆನು ನಮ್ಮ ಕಾಯಕ ಯೋಗಿ ಬಸವಣ್ಣ ಮೆಚ್ಚುನು ************ರಚನೆ ******†******          ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -9

Image
ಇಂಬು ಕೊಂಬು ಜಂಬವೇಕೆ ಮೇಲು ಕೀಳು ತಾರತಮ್ಯವೇಕೆ ಆತ್ಮ ಶುದ್ದಿ ಇರದಿದ್ದರೆ ಲಿಂಗವ ಪೂಜು ನಮ್ಮ ಜಂಗಮ ಬಸವಣ್ಣ ಕಾಣುವನು ಕಂಡ ಭಕ್ತರಿಗೆ ಕೈ ಮುಗಿವನು ಭಕ್ತನಲ್ಲಯ್ಯ ದೇವರ ಜಪ ತಪ ಮಾಡಿದೊಡೆ ಭಕ್ತನಲ್ಲಯ್ಯ ಸದ ವಿನಯವು ಕೂಡ ಭಕ್ತಿಯಲ್ಲಯ್ಯ ಯಾವುದಾದರು ಕಾಯಕವಾ ಮಾಡು ಬಸವಣ್ಣ ಹೇಳಿದ ಭಕ್ತಿಯೇ ಅದು ನೋಡಯ್ಯ ವಚನದಲ್ಲಿ ಕಾಯಕವಾ ತುಂಬಿ ಕಣ್ಣಿನಲ್ಲಿ ಕಾಯಕದ ಜೀವನ ತುಂಬಿ ಮನದಲ್ಲಿ ಕಾಯಕದ ನೆನಪು ತುಂಬಿ ಕಾಯಕವೇ ಕೈಲಾಸ ಎಂದ ಬಸವಣ್ಣನ ನೆನೆ *************ರಚನೆ ***************          ಡಾ. ಚಂದ್ರಶೇಖರ. ಸಿ. ಹೆಚ್ 

ಸಂವಿಧಾನ ಶಿಲ್ಪಿ

Image
  ಅಸ್ಪುರ್ಶತೆಯ ಸಮಾಜದಲ್ಲಿ ಹುಟ್ಟಿ ಗುಲಾಮಗಿರಿಯನು ಮೆಟ್ಟಿ ಜಾತಿ ದಬ್ಬಾಳಿಕೆಗೆ ತೊಡೆ ತಟ್ಟಿ ಬೆಳೆದು ಬಂದೆ ನೀ ಸಮಾಜವ ಪುಡಿ ಗಟ್ಟಿ ವಿದ್ಯೆಯೇ ನಿನ್ನಯ ಅಸ್ತ್ರ ಪುಸ್ತಕವೇ ನಿನ್ನಯ ಶಸ್ತ್ರ ದಣಿವರಿಯದ ನಿನ್ನಯ ಓದು ಕುಣಿಯುವವರ ಕುಟ್ಟಿತು ಅಸಮಾನತೆಯಲಿ ಮೇದು  ಹೆಜ್ಜೆ ಹೆಜ್ಜೆಗೂ ಅವಮಾನ  ಮರೆಯಲಿಲ್ಲ ನೀನು ಸ್ವಾಭಿಮಾನ ನಿನ್ನ ನೋಡಿದವರಿಗೆ ಏಕೋ ಬಿಗುಮಾನ ಮೆಟ್ಟಿ ನಿಂತೆ ನೀ ಅಸ್ಪುರುಷತೆಯನ್ನ ರಾಜಕೀಯದಿ ಸಿಗಲಿಲ್ಲ  ಯಶಸ್ಸು  ಶೋಷಿತ ವರ್ಗಕೆ ನಿನ್ನಯ ತಪಸ್ಸು ಮಡಿವಂತರಿಗೆ ನಿನ್ನಮೇಲೆ ಮುನಿಸು ಕಂಡೆ ನೀನು ಸ್ವಾತಂತ್ರ್ಯದ ಕನಸ್ಸು ಸಂವಿಧಾನದ ಶಿಲ್ಪಿ ನೀನು ಪ್ರಜಾಬ್ರಭುತ್ವದ ಹಾದಿ ನೀನು ಸಮಾನತೆ ಸಾರಿದ ವೀರ ನೀನು  ಶೋಷಣೆಯ ಕೊನೆಯೇ ನೀನು ನಮ್ಮ ಭಾರತ ಸಾರಿದೆ ನಿನ್ನ ಹೆಸರು ನಮ್ಮ ಸಂವಿಧಾನಕೆ ನಿನ್ನ ಬರಹವೇ ಉಸಿರು ಅಚ್ಚಳಿಯದೆ ಊಳಿದಿದೆ ನಿನ್ನ ಹೆಸರು ಜಾತಿ ಶೋಷಿತ ವರ್ಗಕೆ ನೀನೇ ಹಸಿರು  ಡಾ. ಬಿ. ಆರ್. ಅಂಬೇಡ್ಕರ್ *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -8

Image
ಜನಿವಾರ ಕಟ್ಟಿದವನ ಬ್ರಾಹ್ಮಣನೆಂಬೆ ಲಿಂಗವ ಕಟ್ಟಿಡೋದೇ ಲಿಂಗಾಯಿತನೆಂಬೆ ಕೊಲ್ಲುವವನ ಮಾದಿಗ ನೆಂಬೆ ಮಡಿಕೆ ಮಾಡುವವನ ಕುಂಬಾರನೆಂಬೆ ಕಾಯಕ ಮಾಡುವವನ ಜಾತಿಗಳ ಮೀರಿ ಬೆಳೆದ ಮನುಜನೆಂಬೆ ಹೆತ್ತ ತಂದೆ ತಾಯಿಯನು ನೋಡಿಕೊಳ್ಳದ ಮಕ್ಕಳ್ಳು ಕುಡಿತದ ಅಮಲಿನಲಿ ತೇಲುವ ಮನೆಯೋಡೆಯ ಪರ ಸ್ತ್ರೀ, ಪುರುಷನ ವ್ಯಾಮೋಹ ಲಿಂಗವನು ಪೂಜಿಸಿದ ಭಕ್ತ ಇದ್ದರೇನು ಇರಾದ್ದಿದರೇನು ಎನ್ನ ಲಿಂಗವೆ ಕಾಯಕ  ಯೋಗಿ ಬಸವಣ್ಣ ಪ್ರೀತಿಯಿಂದ ಹೃದಯ ಗೆಲ್ಲು ವಿದ್ಯೆಯಿಂದ ಅಜ್ಞಾನವ ಗೆಲ್ಲು ಸತ್ಯದಿಂದ ಸುಳ್ಳು ಗೆಲ್ಲು ನಿಷ್ಠೆಯಿಂದ ಕಾಯಕವ ಮಾಡಿ ನಮ್ಮ ಬಸವಣ್ಣನ ಗೆಲ್ಲು ***********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -7

Image
 ಕೊಟ್ಟು ಹೋಯಿತು ಎಂದು ಕೊರಗಬೇಡ ಸುಟ್ಟು ಮೋಹದಿ ಮರುಗಬೇಡ ಕೆಟ್ಟು ಬುದ್ದಿ ಇನಾನಾಗಿ ತಿರುಗಬೇಡ ಬಿಟ್ಟು ಹೋಗುವ ಈ ಜಗದಲ್ಲಿ ಯಾವುದು ಶಾಶ್ವತವಲ್ಲ ಸಂಸ್ಕೃತಿ ಇಲ್ಲದೆ ಸಂಸ್ಕಾರ ಹುಟ್ಟದು  ಭಕ್ತಿಯು ಇಲ್ಲದೆ ಪೂಜೆಯು ಒಲಿಯದು ಪರಿಜ್ಞಾನವಿಲ್ಲದೆ ಪರಮಾತ್ಮನ ಸಾಕ್ಷಾತ್ಕಾರವಾಗದು ಕಾಯಕ ಒಂದೂ ಇದ್ದಾರೆ ಸಾಕು ದಿನವೂ ಬಸವಣ್ಣನ  ಸದೃಷವಾಗುವುದು ಕೆಡುಕ ಬಯಸಬೇಡ ಕೇಡು ನಿನಗೆ ಖುಷಿಯ ಅಂಚಿ ನೋಡ ಖುಷಿ ನಿನಗೆ ನೋವ ಅಂಚಿ ನೋಡ  ಒಲವು ನಿನಗೆ ಇಷ್ಟಲಿಂಗವ ಮೆಚ್ಚಿ ನೋಡ ಬಸವಣ್ಣ ಒಲಿವ  ನಿನಗೆ *********ರಚನೆ *************** ಡಾ.ಚಂದ್ರಶೇಖರ. ಸಿ. ಹೆಚ್ 

ವಚನಗಳು -6

Image
ಬೇಡಿ ಬೇಡಿ ಕರಗಿದವರಿಲ್ಲ ನೀಡಿ ನೀಡಿ ಕಳೆದು ಕೊಂಡವರಿಲ್ಲ ಎಲ್ಲರು ಕಾಯಕವೆಂಬ ಭಕ್ತಿಯ ಭಿಕ್ಷೆ ನೀಡಿದರೆ ಆತ್ಮಲಿಂಗವು ಮೆಚ್ಚುವುದು ಕೇಳಾ ಜಗದಲಿ ಹಿರಿಯ ಕಿರಿಯರೆಂಬ ಬೇದವಿಲ್ಲ ಭಕ್ತಿಗೆ ವಯಸ್ಸಿನ ಹಂಗಿಲ್ಲ ಆತ್ಮ ಸಾಕ್ಷಿ, ಮನಸಾಕ್ಷಿ ಕಾಯಕವ ಮಾಡು ಬಸವಣ್ಣ ಮೆಚ್ಚಿ ದಿವ್ಯ ಶಕ್ತಿ ಸಿಗುವುದು ನೋಡ ಜಗದಿ ದೇವರು ಸಾವಿರಾರು ಎಣಿಸಿನೋಡ  ಪೂಜೆಗೈವರು ದೇವರುಗಳಿಗೆ ಭಕ್ತಿಯಲ್ಲಿ ಬೇಡುವರು ವರವ ಸಿಕ್ಕ ಸಿಕ್ಕ ದೇವರುಗಳಲಿ ಹಿಡಿದ ಕಾಯಕವ ಮಾಡಿ ನೋಡ ಕೈಲಾಸ ದೊರಕುವುದು ****†**********ರಚನೆ ************           ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -5

Image
ನಂಬಿಸಿ ಒಟ್ಟಿಗೆ ಇದ್ದು ಕುತ್ತಿಗೆ ಕೊಯ್ಯಬೇಡ ಒಂದೇ ತಟ್ಟೆಯಲ್ಲಿ ಉಂಡು  ಚೂರಿ ಹಾಕಬೇಡ ಮೋಸದಿ ಬೆನ್ನಹಿಂದೆ ಯಾರನ್ನು ಬಯ್ಯಬೇಡ ಬೀಡು,ಅವರ ಆತ್ಮಲಿಂಗವು ನಂಬಲಿ ಏನು ಮಾಡಿದೆ ಎಂದು ಮನದ ಮರ್ಮವ ಬಲ್ಲವರು ಯಾರು ಒಲವ ಇಂಗೀತವ ಅರಿತವರು ಯಾರು ಜಗದಿ ಹುಟ್ಟು ಸಾವು ತಿಳಿದವರು ಯಾರು ಕಾಯಕವ ಶ್ರದೆ ಇಂದ ಮಾಡು ಕೈಲಾಸ ಕಾಣುವುದು ಸಜ್ಜನರಲ್ಲಿ ಸದ್ಗುಣವ ಬೇಡಿದೆ ವಿದ್ಯಾವಂತರಲಿ ವಿದ್ಯೆ ಬೇಡಿದೆ  ಊಟಕೆ ಇಟ್ಟಿಲ್ಲದೇ ಊಟವನ್ನು ಬೇಡಿದೆ ಪೂಜರಿಯಲಿ ದೇವರ ಭಕ್ತಿಯ ಬೇಡಿದೆ ಯಾರಲ್ಲೂ ಸಿಗಲಿಲ್ಲ ಬಸವಣ್ಣನು ನುಡಿದಂತೆ  ಕಾಯಕವ ಮಾಡಿದೆ ಎಲ್ಲವೂ ಲಭಿಸಿತು ಎನ್ನ ಆತ್ಮಲಿಂಗ  **********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -4

Image
ಬದುಕಿನೊಳು  ಹಣವೆಂಬ ಮಾಯೆ ಹೆಣ್ಣೆಂಬ ಪರ ನಾರಿಯ ಮಾಯೆ ಮಣ್ಣೇಂಬ ಭೂತಾಯಿಯು ಮಾಯೆ ಎಲ್ಲರನ್ನು ಕಾಡುವುದು ಈ ಮೂರು ಮಾಯೆ ಮನಸ್ಸಿನ್ನಲಿ ಲಿಂಗವ ಪೂಜಿಸು ಎಲ್ಲವು ಮಾಯೆ ಬೆಟ್ಟದಡಿಯಲ್ಲಿ ಕಟ್ಟಿಗೆ ಊರಿದರೆ ಅರಿಸಬಹುದು ಬೆಟ್ಟದ ಕಾಡಿಗೆ ಬೆಂಕಿ ಬಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದರೆ ಊಣ್ಣುವ ಅಮೃತವೇ ವಿಷವಾದರೆ ಮನೆಯ ಯಜಮಾನೆ ಖಜಾನೆ ಬೀಗ ಮುರಿದರೆ ಯಾರನು ದೂರುವುದು ಆತ್ಮಲಿಂಗವ ಬೇಡು ಒಲಿವನು ಶಿವನೇ ಬಸವಣ್ಣ ಹೊಲದಲ್ಲಿ  ಕಸಹುಟ್ಟಿ ಹಾಕಿದ ಫಲವ ತಿನ್ನುವಾಗ ಕಸವನ್ನು ಹಾಗೆ ಬಿಡುವುದೂ.. ಕೀಳುವುದೂ ಕೆಟ್ಟ ಕಸವನ್ನು ಕಿತ್ತು ಫಲವ ತಿನ್ನು ಎನ್ನ ಆತ್ಮಲಿಂಗವೆ ಬಸವಣ್ಣ ಹೆತ್ತ ತಂದೆ ತಾಯಿಯನು ನೋಡಿಕೊಳ್ಳದ ಮಕ್ಕಳ್ಳು ಕುಡಿತದ ಅಮಲಿನಲಿ ತೇಲುವ ಮನೆಯೋಡೆಯ ಪರ ಸ್ತ್ರೀ, ಪುರುಷನ ವ್ಯಾಮೋಹ ಲಿಂಗವನು ಪೂಜಿಸಿದ ಭಕ್ತ ಇದ್ದರೇನು ಇರಾದ್ದಿದರೇನು ಎನ್ನ ಲಿಂಗವೆ ಕಾಯಕ  ಯೋಗಿ ಬಸವಣ್ಣ ************ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

ರಾಮನವಮಿ

Image
ರಾಮ ರಾಮ ಏನಲು ಮನಸ್ಸು ಎಷ್ಟು ಅಗುರ ರಾಮ ನಿನ್ನ ಸೇವೆ ಮಾಡಲು ಕಾದಿದೆ ಭಕ್ತ ಸಾಗರ ಎಷ್ಟು ಕರೆದರೂ ಬೇಸರವೆನಿಸದ ನಿನ್ನ ಹೆಸರು ನಿನ್ನ ಹೆಸರೇ ಭಕ್ತ ಹನುಮಂತನ  ಉಸಿರು ರಾಮ ರಾಮ ರಾಮ ರಾಮ ಇನ್ನಷ್ಟು ಭಕ್ತಿಯ ಕೊಡು ನನಗೆ ಬೇಡುವೆನು ನಾನು ಕೊನೆವರೆಗೆ ನೀನಿಲ್ಲದ ಮನಸ್ಸು ಏಕೋ ಮೌನ ನಿನ್ನ ಹೆಸರಲ್ಲಿದೆ ಏನೋ ಸುಂದರ ಗಾನ ಶಕ್ತಿಯ ತಾಳ್ಮೆಯ ಪ್ರತೀಕ   ನೀ  ಶೌರ್ಯದ ವೀರ ಕೇಸರಿ ನೀ ಕೊಟ್ಟ ಮಾತಿಗೆ ವನವಾಸ ಗೈದೆ ಸೀತೆಗಾಗಿ ಲಂಕಾ ರಾವಣನ ವದೇ ನಿನ್ನ ಪೂಜೆಗೆಂದೆ ಹನುಮ ಬಂದ ಸೀತೆ ಹೋತ್ತಾ ಲಂಕೇ ಸುಟ್ಟು ಬಂದ ರಾಮ ಭೂಮಿ ಓ ರಾಮ ನಮ್ಮದು ನಿನ್ನ ಪಡೆದ ದೇಶವು ನಮ್ಮದು *********ರಚನೆ **********    ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -3

Image
ಇಟ್ಟು ಉಂಡ ಮನೆಗೆ ದ್ರೋಹವು ತರವಲ್ಲ ಮೆಟ್ಟಿ ನಿಂತ ಬದುಕ ವ್ಯಥೆಗೆ ಶಾಪವು ತರವಲ್ಲ ಬಾರದ ಒಲವಿಗೆ ಮೋಸವು ತರವಲ್ಲ ಯೋಚೆನೆಗೆ ಕೈ ಕಟ್ಟಿ ಕುರುವುದು ತರವಲ್ಲ ಕಾಯಕವಾ ಮಾಡು ಕೈಬಿಸಿ ಕರೆವುದು ಬಸವಣ್ಣನ ಹಾಡು ಬಿಲ್ವಾ ಪತ್ರೆ ಶಿವನಿಗೆ  ಪ್ರಿಯಾ ಕಮಲ ಹೂವು ಬ್ರಹ್ಮನಿಗೆ ಪ್ರಿಯಾ ಎಳು ತಲೆಯ ಹಾವು ವಿಷ್ಣುವಿಗೆ ಪ್ರಿಯಾ ಕಾಯಕವ ಮಾಡಿ  ನೋಡು ಇಷ್ಟಲಿಂಗವ ಪೂಜಿಸುವ ನಮ್ಮ ಬಸವಣ್ಣನಿಗೆ ಪ್ರಿಯ ಸುತ್ತಿ ಸುತ್ತಿ ಸುಳ್ಳು ಹೇಳಬೇಡ ಒತ್ತಿ ಒತ್ತಿ ಬೇರೆಯವರಿಗೆ ಭಯಪಡಬೇಡ ನೋಡಿ ನೋಡಿ ಸೌಂದರ್ಯ ಜರಿ ಬೇಡ ಹೇದರಿ ಹೇದರಿ ಕೆಲಸಕೆ ಇಂಜಾರಿಯಬೇಡ ಕಾಯಕವ ಮಾಡು ಬಸವಣ್ಣ ದಿನವೂ ಒಲಿವ ನೋಡ ಸಂಸ್ಕೃತಿ ಇಲ್ಲದೆ ಸಂಸ್ಕಾರ ಹುಟ್ಟದು  ಭಕ್ತಿಯು ಇಲ್ಲದೆ ಪೂಜೆಯು ಒಲಿಯದು ಪರಿಜ್ಞಾನವಿಲ್ಲದೆ ಪರಮಾತ್ಮನ ಸಾಕ್ಷಾತ್ಕಾರವಾಗದು ಕಾಯಕ ಒಂದೂ ಇದ್ದಾರೆ ಸಾಕು ದಿನವೂ ಬಸವಣ್ಣನ  ಸದೃಷವಾಗುವುದು *************ರಚನೆ *******************          ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -2

Image
ದುರ್ಜನರು ತಂದಾರು ಬಾಳಿನಲಿ ದುರಭಾಗ್ಯ ಸಜ್ಜನರು ತಂದಾರು ಬಾಳಿನಲಿ ಸೌಭಾಗ್ಯ ಮತ್ತಿಗೆಟ್ಟ ಜನರು ಮತಿಮೀರಿ ನಡೆದಿರಲು ಉಳಿಗಾಲವಿಲ್ಲಾ ಆದರ್ಶದ ಜನಕೆ ಗುರುವು ಇರುವೆಡೆ ಅರಿವು ಇರಬೇಕು ನಗು ಇರುವೆಡೆ ನಲಿವು ಇರಬೇಕು ಪ್ರೀತಿ ಇರುವೆಡೆ ವಾತ್ಸಲ್ಯ ಇರಬೇಕು  ಆತ್ಮಲಿಂಗವಿರುವೆಡೆ ಶಿವನು ಕುಣಿವನು ನೋಡ ಸೊಕ್ಕಿ ಮೆರೆವ ಮನುಜ ಪರರ ಚಿಂತೆ ಮಾಡಿದರೆ ಪಂಗನಾಮ ಒಳಿತಿನ ಚಿಂತೆ ಓಳಿತಿಗೆ ಮರುನಾಮ ಸವಿ ಮಾತ ಚಿಂತೆ ಇದ್ದಂಗೆ ಸವಿನಾಮ  ಕೆಡುಕಿನ ಚಿಂತೆ ನೆನೆದವರ ನಿರ್ನಾಮ ಲಿಂಗದ ಚಿಂತೆ ಮನಸ್ಸಿಗೆ ಶುದ್ದಿ ನಾಮ  ಕೆಡುಕ ಬಯಸಬೇಡ ಕೇಡು ನಿನಗೆ ಖುಷಿಯ ಅಂಚಿ ನೋಡ ಖುಷಿ ನಿನಗೆ ನೋವ ಅಂಚಿ ನೋಡ  ಒಲವು ನಿನಗೆ ಇಷ್ಟಲಿಂಗವ ಮೆಚ್ಚಿ ನೋಡ ಬಸವಣ್ಣ ಒಲಿವ ನಿನಗೆ **†**************ರಚನೆ ************                 ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -1

Image
ಸಂಸ್ಕಾರವಿಲ್ಲದ ಬದುಕು  ನಡೆ ಇಲ್ಲದ ನುಡಿಯು ಮೋಹ ತುಂಬಿದ ಮನವು ಕಾಮ, ಕ್ರೋದ. ಲೋಭ. ಮದ, ಮತ್ಸರ್ಯ ಗೆಲ್ಲದ ಮನಸ್ಸು ಜೇವದಲಿ ತುಂಬಿರಲು ದೇಹವು ಸಾವಿಗೆ ಸಮಾನ. ನಾನು ನಾನು ಎಂದು ಬಡಿದಾಡ  ಬೇಡವೋ ಮನುಜ ನೀನಿಟ್ಟ ಹಣ. ಉಟ್ಟ ಬಟ್ಟೆ ನೀನು ಕೊಂಡೋಯ್ಯಲಿಲ್ಲ ನೀನು ಮಾಡಿದ ಒಳಿತು ಹೇಳುವುದು ನಿನ್ನ ಹೆಸರು ಕಾಗೆ ಮುಟ್ಟದ ನಿನ ದೇಹ ಸತ್ತಾಗ ಹುಳುವರು ಮಣ್ಣಿನಲ್ಲಿ ಈಗ ಹೇಳು ನಿನದೆನು ಈ ತಿರುಗುವ ಭೂಮಿಯಲಿ. ಉದಯಿಸುವ ಸೂರ್ಯನ ಬೆಳಕು ನಿನ್ನ ನೋಡಿ ನಿಲ್ಲಲಿಲ್ಲ ಚಂದ್ರನ ದಿನ ರಾತ್ರಿ ಮಂದ ಬೆಳಕು ನಿನ್ನ ನೋಡಿ  ನಿಲ್ಲಲಿಲ್ಲ ಸುರಿವ ಮಳೆ ಆಕಾಶದಿ ಬಿಳು ವುದು  ನಿನ್ನ ನೋಡಿ  ನಿಲ್ಲಲಿಲ್ಲ ಸಮುದ್ರದ ನೀರು ನಿನ್ನ ನೋಡಿ  ಬತ್ತಲಿಲ್ಲ ನೀನೇಕೆ ಜಂಬದಿ ಬಿಗುವೆ ಹೇ ಮನುಜ ನಾನಿಲ್ಲದೆ ಏನು ಇಲ್ಲ ಕೊಟ್ಟು ಹೋಯಿತು ಎಂದು ಕೊರಗಬೇಡ ಸುಟ್ಟು ಮೋಹದಿ ಮರುಗಬೇಡ ಕೆಟ್ಟು ಬುದ್ದಿ ಇನಾನಾಗಿ ತಿರುಗಬೇಡ ಬಿಟ್ಟು ಹೋಗುವ ಈ ಜಗದಲ್ಲಿ ಯಾವುದು ಶಾಶ್ವತವಲ್ಲ ಕಾಯಕ ಯೋಗಿ ಬಸವಣ್ಣನಾ ತಿಳಿ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮುಗಿದ ಯುಗಾದಿ

Image
ಮಾವಿನ ಎಲೆಯ ತಂದು  ಬಾಗಿಲು ಕೇಳಿತು ತೋರಣ ಬಾಳೆದೆಲೆಯ ಮೇಲೆ  ಅಮ್ಮ ತಟ್ಟುತ್ತಿದದ್ದಳು ಊರಣ ಮೈಗೆ ಅರಿಸಿನದ ಎಣ್ಣೆ ಹಚ್ಚಿ ಬಿಸಿಲ ಜಳದಿ ಊರು ಸುತ್ತಿ ತೋಟದಲ್ಲಿ ಕಂಡ ಮಾವು ತಿಂದು ಊರ ಕೆರೆಯ ನೀರಲ್ಲಿ ಈಜಿ ಮನೆಗೆ ಬಂದು ಸೀಗೆ ಸ್ನಾನ ಮಾಡಿ ಊರ ದೇವರ ಗುಡಿಗೆ ಎಡೆ ಹೊಸ ಹುಡಿಗೆ ತೊಟ್ಟು ನೆಡೆ ದಾರೀಲಿ ಕಾಣತ್ತು ಹೂವ ಜಡೆ ಮನೆಗೆ ಬಂದು ಒಬ್ಬಿಟ್ಟು ಉಂಡು ಸಂಜೆ ನೋಡಬೇಕು ಚಂದ್ರ ತುಂಡು ಕಾದು ಕುಳಿತರು ಕಾಣದ ಚಂದ್ರ ಅವಿತ ಏಕೋ ಮೋಡದ ಮರೆಯಲಿ ಹೇಗೆ ನಾನು ಕೂಗಿ ಕರೆಯಲಿ ನೋಡಿ ಸೋತರುನು ಕಾಣಲಿಲ್ಲ ಹೊಸ ವರ್ಷ ಹೊಸತು ಏನಿಸಲಿಲ್ಲ ಮರುದಿನ ಕಂಡ ಚಂದ್ರ ನೋಡಿ ತಂದೆ ತಾಯಿ ಆಶೀರ್ವಾದ ಪಡೆದು ಬೇವು ಬೆಲ್ಲ ಕಹಿಸಿಹಿ ತಿಂದು ಕಂಡೆ ನಾನು ಗಣಪನ ಕೈಮುಗಿದು ಬೇಡಿ ಓ ಗುರುವೇ ಒಳಿತು ಮಾಡು ನೀನು ಬಾರಾದಾಗೆ ಏನು ಕೇಡು ಮಳೆ ಬೆಳೆ ಸಮೃದ್ಧಿ ಇರಲಿ ರೈತನ ಮೊಗದಿ ನಗುವು ತುಂಬಿರಲಿ...... ಯುಗಾದಿ ಮುಗಿದ ಈ ದಿನ ಮತ್ತೆ ಕಾಯೋಣ ಶುಭ ದಿನ  ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಗಗನ ಕುಸುಮ

Image
ಆಕಾಶದಿ ಅರಳಿದ ಸುಮವೇ ನಕ್ಷತ್ರದ ಗೂಡಿನ ಭನವೇ ಹೂವದೋಟದಲ್ಲಿ ಗಮವೇ ಮನಸ್ಸಿನ ಆಸೆ ಗಗನ ಕುಸುಮವೇ ಕಂಡ ಕನಸಿನಲಿ ಸೋತು ಮನದಾಚಿಂತೆಯಲಿ ಹುತು ನಿನಗಾಗಿ ಮೌನದ ಮಾತು ಹುಕ್ಕುತಿಹಾ ಪ್ರಣಯಕೆ ನೇತು ಬಿಸಿ ಅಪ್ಪುಗೆಯಲಿ ಸೊಗಸಿಲ್ಲ ಮನದ ನೋವಿಗೆ ಮದ್ದಿಲ್ಲ ನೊರೆಂಟು ಆಸೆಗೆ ಸಾವಿಲ್ಲ                ಕನಸು ಗಗನ ಕುಸುಮವೇ ಎಲ್ಲಾ ಬಯಸಿದ ಬಯಕೆ ತಣ್ಣೀರು ಹೀಡೇರದ ಕನಸ್ಸು ಬಿಸಿನೀರು ಅರಳಿದ ಯೌವ್ವನ ಎಳನೀರು ನನ್ನಾಸೆ ಹೂವು ಮಳೆ ನೀರು ಗಗನದಿ ಅರಳಿದ ತಾರೆಗಳು ನಕ್ಕು ಇರುಳಿನ ಚಂದ್ರಮಗೆ ಸೋಕ್ಕು ನೀಲಿ ಆಕಾಶದೆ ಏಕೋ ಬಿಳಿ ಸುಕ್ಕು ನನ್ನವೋಲವ ಗಗನಕುಸುಮ           ಕೈಗೇಟುಕದ ದಿಕ್ಕು  ಬಾಳ ಪಯಣದಿ ಅರಳಿ ಸುಮಾ ಬೀರಲಿಲ್ಲ ಬದುಕಲಿ ಘಮ ಸೋತು ಸುಮ್ಮನಾದಮೇಲೆ ನನ್ನವಳ ಹೆಸರೇ ಗಗನಕುಸುಮ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್