ವಚನಗಳು -7




 ಕೊಟ್ಟು ಹೋಯಿತು ಎಂದು ಕೊರಗಬೇಡ

ಸುಟ್ಟು ಮೋಹದಿ ಮರುಗಬೇಡ

ಕೆಟ್ಟು ಬುದ್ದಿ ಇನಾನಾಗಿ ತಿರುಗಬೇಡ

ಬಿಟ್ಟು ಹೋಗುವ ಈ ಜಗದಲ್ಲಿ ಯಾವುದು ಶಾಶ್ವತವಲ್ಲ


ಸಂಸ್ಕೃತಿ ಇಲ್ಲದೆ ಸಂಸ್ಕಾರ ಹುಟ್ಟದು 

ಭಕ್ತಿಯು ಇಲ್ಲದೆ ಪೂಜೆಯು ಒಲಿಯದು

ಪರಿಜ್ಞಾನವಿಲ್ಲದೆ ಪರಮಾತ್ಮನ ಸಾಕ್ಷಾತ್ಕಾರವಾಗದು

ಕಾಯಕ ಒಂದೂ ಇದ್ದಾರೆ ಸಾಕು ದಿನವೂ

ಬಸವಣ್ಣನ  ಸದೃಷವಾಗುವುದು


ಕೆಡುಕ ಬಯಸಬೇಡ ಕೇಡು ನಿನಗೆ

ಖುಷಿಯ ಅಂಚಿ ನೋಡ ಖುಷಿ ನಿನಗೆ

ನೋವ ಅಂಚಿ ನೋಡ  ಒಲವು ನಿನಗೆ

ಇಷ್ಟಲಿಂಗವ ಮೆಚ್ಚಿ ನೋಡ ಬಸವಣ್ಣ ಒಲಿವ 

ನಿನಗೆ

*********ರಚನೆ ***************

ಡಾ.ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ