ವಚನಗಳ ಅರ್ಪಣೆ




       ಅರ್ಪಣೆ

 

ಮನಸ್ಸು ಶುದ್ದಿ ಇರಲಿ

ನಡತೆ ಶುದ್ದಿ ಇರಲಿ

ನಿನ್ನ ಮೇಲೆ ನಂಬಿಕೆ ಇರಲಿ

ಕಾಯಕವೇ ಕೈಲಾಸ


ನನ್ನೊಬ್ಬ ನರ ಮನುಷ್ಯ

ತಪ್ಪಾಗಿರಬಹುದು ವಿಷ್ಯ

ಬರೆದೆನು ಸಣ್ಣ ವಚನ

ನಮಿಸಿ ಬಸವಣ್ಣನ  ಪಾದ ಚರಣ


ಪದಗಳಲಿ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ

ಬಸವಣ್ಣನ ವಚನ ಓದಿ ಸವಿದೆನಲ್ಲ

ನುಡಿ ಮುತ್ತುಗಳು ಆ ಬರೆದ ಸಾಲುಗಳು

ಜೀವನವ ತೆರೆದಿಡುವ ವಚನಮೃತಾಗಳು 


ವಚನ ಬರೆವಷ್ಟು ಜ್ಞಾನಿ ನಾನಲ್ಲ

ಆದರೂ ನಾಲ್ಕು ಸಾಲು ಬರೆದಿಹೆನಲ್ಲ 

ಜೀವನದಿ ಅನುಭವ ಅಷ್ಟಿಲ್ಲಾ

ನನಗೆ ತೊಚಿದ್ದು ಗೀಚಿಹೇನಲ್ಲ

ಕ್ಷಮಿಸಿ ಬೀಡು ನನ್ನ ಓ ಯೋಗಿ ಬಸವಣ್ಣ


                  ಸಮರ್ಪಣೆ 

 ***********ರಚನೆ *************

ಡಾ.. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20