ವಚನಗಳು -16





ದೇವನೂಬ್ಬ ನಾಮ ಹಲವೂ

ಜಾತಿ ನೂರು ಮನುಜ ಕುಲವೊಂದೇ

ಸಕಲ ಪ್ರಾಣಿಗಳಲಿ ಹರಿವುದು ರಕ್ತವೆ

ಮಾಡುವ ಕಾಯಕ ನಮ್ಮ ಗುರಿತಿಸುವುದು ನಮ್ಮ  ಬಸವಣ್ಣ


ಉರಿವ ಬೆಂಕಿಗೆ ತುಪ್ಪ ಹಾಕಿದರೆ ಧರೆಗೆ ಅವರಿಸುವುದು

ಸಂಸಾರದಲ್ಲಿ ಹುಳಿ ಹಿಂಡಿದರೆ ಮಸಣವಾಗುವುದು

ತಂದಿಕ್ಕಿ ತಮ್ಮಾಷೆ ನೋಡಬೇಡ ಓ ಮನುಜ

ಶ್ರದ್ದೆಯಿಂದ ಉತ್ತಮ ಕಾಯಕವ ಮಾಡು ಒಳಿತಾಗುವುದು

ನಮ್ಮ ಬಸವಣ್ಣ


ಮನದಲ್ಲಿ ಶಿವನ ಚಿಂತೆಯ ಮಾಡು

ಶಿವನಲ್ಲಿ ಒಳಿತನ್ನು ಬೇಡು

ಮನಸ್ಸು ಶುದ್ದಿಯಾಗಿಟ್ಟು ನೋಡು

ಮಾಡುವ ಕಾಯಕವ ಕೈ ಮುಗಿದು ಮಾಡು

ಸ್ವರ್ಗದ ಬಾಗಿಲು ತೇರೇವುದು ನೋಡು ನಮ್ಮ ಬಸವಣ್ಣ


**************ರಚನೆ **************

        ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ