Posts

Showing posts from November, 2021

ಸೋತ ಒಲವು

Image
ಯಾಕೆ ನೀ ದೂರದೇ ಮನದಿಂದ ಬೆರಾದೆ ಬದುಕಲ್ಲಿ ಚೂರದೆ ಒಲವಲ್ಲಿ ಸೊತೊದೆ ಪ್ರೀತಿಯ ಬೋರು ದೇವರಿಲ್ಲದ ತೇರು ಸೋರುವ ಸೂರು ಕೇಳೋರು ಯಾರು ಪ್ರೀತಿಯ ಪಯಣ ನೋವಿನ್ನ ತಲ್ಲಣ ಕೂಡದು ಕಂಕಣ ಆಸೆಯೇ ಮಸಣ  ಬದುಕು ಬರಿದು ನೀ ದೂರ ಸರಿದು ಒಲವೇ ಹರಿದು ಮನಸೇ ಮುರಿದು ಸೇರುವುದೆಲ್ಲಿಗೆ ಓ ನನ್ನ ಮಲ್ಲಿಗೆ ಬಾ ನೀನು ಬಳಿಗೆ ಓ ಕೆಂಡ ಸಂಪಿಗೆ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನಗುವ ನಯನ

Image
ನಿನ್ನ ನಯನದ ಸುಳಿವು ನೀಡಿತು ಸೂಚಿನೆ ನೀ ನನ್ನವಳೆಂದು ಕಾಡಿತು ನನ್ನನೇ ಮನಸ್ಸು ಯಾಕೋ ಬೇಡಿತು ಸುಮ್ಮನೆ ನಾನೇಗೆ ಮರೆಯಲಿ  ನಿನ್ನನೇ ಹೃದಯಕೆ ಅಪ್ಪುವ ಅಸೆ ನನ್ನ ಒಲವ ಪ್ರೀತಿ ಕನಸೇ ನನಗಾಗಿ ಹುಟ್ಟಿದ ಸೊಗಸೆ ತನುವ ಪ್ರೀತಿ ನಿನ್ನನು ಬಯಸೆ ಬಾನಂಗಳಾದ ಚುಕ್ಕಿ ನೀನು ಪ್ರೀತಿಯ ಹಾಲಾಜೇನು ನಿನಗಾಗಿ ಕಾದಿರುವೆ ನಾನು ಮತ್ತೊಮ್ಮೆ ನಗಲಾರೆಯೇನು ಕೆರಳಿದ ಕನಸ ಬಡಿದೇಬಿಸ್ಸಿ ಮನದ ನೋವ ಮರೆಯಾಗಿಸಿ ಪ್ರೀತಿ ಮಳೆಯಲಿ ತೋಯಿಸಿ ಒಲವ ಬೆಸುಗೆಯಾಲಿ ಮಾಗಿಸಿ ಬದುಕು ಕಟ್ಟೋಣ ಬಾ ಪ್ರೀತಿ ಹಂಚೋಣ ಬಾ ಕನಸ ಬಾಗಿಲ ತೆರೆದು ಬಾ ನನ್ನಾಣೆ ನೀನೇ ನನ್ನ ಗೆಲುವು ಬಾ ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನಿನ್ನಿಂದಲೇ

Image
ನಿನ್ನ ನಗುವ ಕಂಡ ಮನವು ಹೇಳಿತು ನಿನ್ನಿಂದಲೇ ಒಲವ ಇತವ ಕಂಡ ತನುವು ಹೇಳಿತು ನಿನ್ನಿಂದಲೇ ಬಯಕೆ ನೂರು ಕರೆದು ಕೂಗಿತು ನಿನಗಾಗಿಯೇ ಬಣ್ಣದ ಕಥೆ ಹೇಳಿದೆ ಜೀವನ ನಿನಗಾಗಿಯೇ ಸೋತವರುoಟೆ  ಜೀವನದಿ ಬದುಕು ಎಂಬುದು ಬಾನಿನ ತುದಿ ಹೃದಯ ಬೆಂದಿದೆ ಬಾನಂಗಳದಿ ಪ್ರೀತಿ ಸಾರಿದೆ ನೀಲಿ ಆಕಾಶದಿ ಚಂದ್ರನೊಬ್ಬ ಕರಗುತಿಹನು  ಸೂರ್ಯನೊಬ್ಬ ಊರಿಯುತಿಹನು ನಕ್ಷತ್ರ ಚುಕ್ಕಿ ಬಾನಿನಲ್ಲಿ ಮಿನುಗುತಿಹವು ಯಾರಿಗಾಗಿ ಈ ಮರಣ ನಾಲ್ಕು ದಿನದ ಈ ಪಯಣ ಪ್ರೀತಿ ಸತ್ತು ಹುಟ್ಟುತಿಹುದು ಭೂಮಿ ಏಕೋ ತಿರುಗುತಿಹುದು ಮನವು ನೊಂದು ಮರುಗಿತಿಹುದು ನೆನಪು ಯಾಕೋ ಸಾಯುತಿಹುದು ಹುಟ್ಟು ಏಕೋ ಸಾಕು ಏನಿಸುತಿಹಾದು ನಿನ್ನಿಂದಲೇ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಬಣ್ಣದ ಕಥೆ

Image
ಕಥೆ ಹೇಳ ಹೊರಟಿದೆ ಮನ ಕೇಳುವರ್ಯಾರು ಅನುದಿನ ಮುಂಜಾನೆ ಕಂಡೆ ರಂಗೋಲಿಯನ ಬಿಡಿಸಿದವಳು ನನ್ನ ಸ್ವಪ್ನ ಬಣ್ಣಗಳು ಹೇಳುತ್ತಿವೆ ಕವನ ನೋಡಲು ಸಾಕೆ ಎರಡು ನಯನ ಮಾಗಿದ ಮನಸಿನ ಸೊಬಗು ಬಿಡಿಸಿದ ಗೆರೆಗಳು ಬೇರೆಗು ಬದುಕು ಬದಲಿಸಿದ ಬಣ್ಣ ತನುವ ಕದಡಿದ ಬಿಳಿ ಸುಣ್ಣ ನಗುವ ನಯನದ ಕಣ್ಣ ನಾನೆಗೆ ಮರೆಯಲಿ ಇನ್ನ  ನನ್ನವಳು ನಕ್ಕಾಗ ಸೊಗಸು ಯಾಕೋ ಬಿದೈತೆ ಕನಸು ಚಂದ್ರನೇ ತಿರುಗಿ ನೀ ಚಲಿಸು ಪ್ರೀತಿಯ ನೆನಪು ಸುಟ್ಟಿದೆ ವಯಸು ಹೇಳಲೋರೇಟೇ ಕೊನೆ ಮಾತು ನನ್ನ ಹೃದಯದ ಕಥೆಯ ಮರೆತು ನನ್ನ ಪ್ರೀತಿಯ ಒಲವು ಬೆರೆತು ನಗುನಗುತಾ ಕಾಲವ ದೂಡುವುದೇ ಒಳಿತು *******ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ನೋವಿನ ತೀರ

Image
ಮನಸು ಏಕೋ ಭಾರ ಕನಸು ತೀರ ದೂರ ಬದುಕು ಬಲು ನೇರ ಬಾಳು ತಿಳಿದರೆ ಸಾರ ಕನಸಿನ ಅರಮನೆ ಕೊಂದು ಮನಸಿನ ಸೆರೆಮನೆ ಬೆಂದು ನೋವು ಜೀವನವ ತಿಂದು ಖುಷಿಯೇ ಕಾಣೆಯಾಗಿದೆ ಇಂದು ಪಯಣ ತಂದಿದೆ ಬೇಸರ ಜೋಡಿ ಇಲ್ಲದ ಸಂಸಾರ ಒಲವು ತಂದಿದೆ ಸಂಚಾಕರ ಪ್ರೀತಿ ನೆಮ್ಮದಿಯ ಸಂಹಾರ ಏನು ಬೇಡಲಿ ನಾ ದೇವರಲ್ಲಿ ಮೋಸವಾಯಿತೇ ಪ್ರೀತಿಯಲಿ ಕಾಲ ಹೋಯಿತು ಕಣ್ಮರೆಯಲಿ ಗಟಿಸಿದ ಘಟನೆಗಳ ನೆನಪಿನಲಿ ಕಾಣದಾಯಿತು ಸೌಂದರ್ಯ ತೋರಲಿಲ್ಲ ನೀ ಔದರ್ಯ ಮನಸು ಮರುಗಿತು ಕಥೆ ಕೇಳಿ ಕಾಲ ಹೊರಟಿತು ಕುಂಟು ನೆಪ ಹೇಳಿ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಭರವಸೆ

Image
  ಭರವಸೆ ಇಲ್ಲದ ಬದುಕು ಕಬ್ಬಿಣದ ತುಕ್ಕಿನ ಸರಕು ಕಿರಣವಿಲ್ಲದ ಕತ್ತಲೇ ಮನೆ ಕಾಣಾದಾಗಿದೆ ಕಣ್ಣು ಸುಮ್ಮನೆ ಒಲವು ಒಂದೂ ಬಾವನೆ ಮನಸ್ಸು ಕೂತಿದೆ ತಣ್ಣನೆ ಕನಸು ಬಿಚ್ಚಿದ ಅರಮನೆ ಕತ್ತಲು ಕಾಣದ ಸೆರೆಮನೆ ಬರವಸೆ ಬಾರದು ಸುಮ್ಮನೆ ಶ್ರಮದ ಕೆಲಸ ಕೇಳಿದೆ ನಿನ್ನನೇ ಕಿಂಡಿಯ ಸಂದಿಯ ಕಿರಣ ನೋಡು ಬೆಳಕಿನ ಆಭರಣ ಮನಸು ಏಕೋ ಮಾಗಿದೆ ಕನಸು ಬಾರದೆ ಹೋಗಿದೆ ನೋವಿನ ತಕ್ಕಡಿ ತೂಗಿದೆ ಗೆಲುವು ಏಕೋ ಸೋತಿದೆ ನೆಮ್ಮದಿ ಹುಡುಕುತ ಹೊರಟೆ ಸಿಗುವುದೇ ಹೊಡೆದರೆ ಅರಟೆ ಸಾಗಿತು ಬದುಕಿನ ಪಯಣ ಜೀವನ ಹುಡುಕುತ ಮರಣ  **********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಜಾತ್ರೆ ಜೋರು

Image
ಸುರಪುರದ ಜಾತ್ರೆ ಹೊರಟರು ಯಾತ್ರೆ ಬದುಕಿನ ತೇರು ಸೂರುತಿಹಾ ಸೂರು ಮನದ ಮಳಿಗೆ ನೆನೆದಾಯ್ತು ಮಳೆಗೆ ಕೊರೆವ  ಚಳಿಗೆ ಬಿಸಿಯಾದ ಘಳಿಗೆ ಬಾವದ ಬಕುತಿ ನಿಡೈತಿ ಮುಕ್ತಿ ಕೊನೆಯಗೋ ಕನಸಿಗೆ ಬಂದೈತಿ ಶಕ್ತಿ ನೆರೆ ಬಂದರೇನು ಒರೆ ಹೋದರೇನು ನಡೆದಯ್ತಿ ಕುಣಿದಯ್ತಿ ಸುರಪುರದ ಜಾತ್ರೆ ಜೀವನದ ಸೋಗಡು ಅವರೇಕಾಯಿ ರುಚಿಸೀತೆ ಕಹಿಯಾ ಉಪ್ಪಿನಕಾಯಿ ಮನದಾಸೆ ಏಕೋ ನೆಲ್ಲಿಕಾಯಿ ಕನಸಿಗೆ  ಬೇಕು ಒಂದೂ ತೆಂಗಿನಕಾಯಿ ಜಾತ್ರೆಯಲಿ ತೇರು ಪುರಿಕಾರ ಸೇರು ಮನೆಮಂದಿಯಲ್ಲ ಹೋಗೈತಿ ಮಾರು ಬದುಕಿನ ಬವಣೆ ರುಚಿಸದ ಕೀರು ನಡೆದಾಯ್ತೆ ನಮ್ಮವರ ಜಾತ್ರೆಯು ಜೋರು *****-*****ರಚನೆ *************** ಡಾ. ಚಂದ್ರಶೇಖರ. ಸಿ. ಹೆಚ್ 

ಕನಕದಾಸ ಪದ

Image
  ಕುಲ ಕುಲವೆಂದು ಕುಣಿದಾಡುವರು ಹೆಣ್ಣಿನ ಮೋಹಕೆ ಬಲಿಯಾಗುವರು ನೆಲ ಜಲಕಾಗಿ ಕೀರುಚಾಡಿಹರು  ಜಾತಿ ಮತಕೆ ಬಡಿದಾಡುವರು  ಹೆಣ್ಣು ಮಾಯೆಯೋ ಹೊನ್ನು ಮಾಯೆಯೋ ನೀ ಮಾಯೆಯೋ ನಿನ್ನಲೋಳಗಿರುವ ಆತ್ಮ ಮಾಯೆಯೋ ಹುಟ್ಟುವಾಗ ತರಲಿಲ್ಲ ಸತ್ತಾಗ ವಯ್ಯಲಿಲ್ಲ  ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಬಡಿದಡಬೇಡವೋ ಮನುಸ ಬದುಕಿನ ಛಾಯೆ ಮೂರೇ ದಿವಸ  ನರಹರಿಯ ಕೂಗಿದರು  ಬಾಗಿಲನು ತೆರೆದು ಸೇವೆಗೆ ಚಂದ್ರನನೇ ಮುರಿದ ಮೂರ ಕಣ್ಣ ಶಿವನು ನೀನ್ಯಾವಲೆಕ್ಕ ಏಳಲೇ ಮನುಜ ಖಂಡ ತುಂಡು ತಿಂದು ಅಂಗಡಿ ಮುಂಗಟ್ಟಿನಲ್ಲೂ ವ್ಯಂಗ್ಯ ಗುಟ್ಟು ಹಿರಿದೇನು ಕಿರೀದೇನು ಸರ್ವಜ್ಞನ ನೆನೆಸು ದೇವರಿಲ್ಲದ ಗುಡಿ ಬಾವವಿಲ್ಲದ ಬಕುತಿ ಧರ್ಮವಿಲ್ಲದ ಅರಸು ಒಕ್ಕಲಿಲ್ಲದ ಊರು ಸೋಕ್ಕಿ ನಡೆವ ಮನುಷ್ಯ ಅವ ಕ್ರೂರ ಕೃತ್ಯ ಇದುವೇ ಈ ಯುಗದಿ ನಡೆವ ಘೋರ ಸತ್ಯ  ಎಲ್ಲಾ ನನ್ನ ಮಿತ್ರರಿಗೂ ಕನಕ ಜಯಂತಿಯ ಶುಭಾಶಯಗಳು ,****-*****ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಏಕೆ ಹೀಗೆ ಕಾಡಿದೆ

Image
ಒಲವು ಏಕೆ ನನ್ನ ಹೀಗೆ ಕಾಡಿದೆ ಹರಿವ ಮನವು ತಿಳಿಯದೆ ಹೋಡಿದೆ ಮನವ ನಾನು ಹಿಡಿವ ಅಸೆ ಮೂಡಿದೆ ನೂರು ನೆನಪು ಕಣ್ಣ ಮುಂದೆ ಬಂದಿದೆ ಒಲವು ಒಂದೂ ಅರಿಯದ ಮಾಯೆ ಮನವು ತಾಳಕೆ ಸಿಗದೇ ಕುಣಿವ ಛಾಯೆ ಎರಡು ಕೂಡಿ ಹೃದಯವನ್ನು ಕೊಂದಿದೆ ನಿಂತು ನಿಲ್ಲದ ದೇಹವೇಕೋ ಬೆಂದಿದೆ ಬರೆಯೋಲೋರಾಟೆ  ಪ್ರೀತಿ ಕವನ ಸಿಗಳು ಅವಳು  ಎಂದು ತಿಳಿದಿದೆ ಮನ ಯಾರಿಗಾಗಿ ಬರೆಯಲಿ ಬಿಳಿ ಕಾಲಿ ಪುಟದಲ್ಲಿ ಸಾವು ಕೂಡ ಬಂದು ಹೋಗೋ ಮನದಲ್ಲಿ ಕನಸುಗಳ ಕಟ್ಟಿದೆ ಪ್ರೀತಿ ಕದವ ತಟ್ಟಿದೆ ನೆನಪುಗಳ ಮುಟ್ಟಿದೆ ನಯನವೆಕೋ ಸೋತಿದೆ ಮನಸ್ಸು ಇಂದು ಬಾಡಿದೆ ನೋವಲ್ಲಿ ಕರಗಿದೆ ಅರಿತು ಬೆರೆತು ಕುಣಿವ ವಯಸ್ಸು ಇಂದು ಸತ್ತಿದೆ ********-*ರಚನೆ ************* ಡಾ. ಚಂದ್ರಶೇಖರ. ಸಿ. ಹೆಚ್ 

ನಿನಗೆ ತಿಳಿಯದೆ

Image
ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ ತಿಳಿಯದೆ ಒಲವು ಮೂಡಿದೆ ನಿನಗಾಗಿ ಕಾದು ಕೂತಿದೆ ಮನದಲಿ ನೂರಾಸೆ ಏಕೋ ನೀನೇ ಬೇಕು ನನಗೆ ಎಂದಿದೆ ಬದುಕಲಿ ಅಸೆ ಒಂದೂ ನೀನು ನನ್ನವಳೆಂದು ಮನಸ್ಸು ಏಕೋ ಕೂಗಿ ಹೇಳಿದೆ ಒಲವು ಒಂದೂ ಮೌನ ನೀನು ಬಾ ಬಾಳಿಗೆ ಎಂದಿದೆ ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ ತಿಳಿಯದೆ ನೋವಿನ ಯಾತನೆಯೊಂದು ನೀರಿನಂತೆ ಮನದಿ ಹರಿದಿದೆ ಕಣ್ಣಾರೆಪ್ಪೆ ಮುಚ್ಹೋವರೆಗೆ ನಿನ್ನ ನೆನಪು ಏಕೋ ನನಗೆ ನಿದಿರೆ ಏಕೋ ಬಾರದಾಗಿದೆ ಕಾಲವೆಲ್ಲ ಮುಂದೆ ಹೋಗಿ ಮತ್ತೆ ಹಿಂದೆ ಬಾರದಾಗಿದೆ ಕಾಮನಬಿಲ್ಲು ಬದುಕ ಬಣ್ಣ ಮೂಡಿ ಸುರಿವ ಒಲವ ಮಳೆಯೂ ನಿಂತು ಹೋಗಿದೆ ನೀನು ಇರದೇ ಮಾತು ಒಂದೂ ನೀನೇ ನನ್ನ ಒಲವು ಎಂದಿದೆ ತಿಳಿಯದೆ ತಿಳಿಯದೆ ನನ್ನ ಮನಸ್ಸು ನಿನಗೆ ತಿಳಿಯದೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕನ್ನಡ ಸಾಹಿತ್ಯ

Image
  ಮನ ಮನದಲಿ ಮೂಡಲಿ ಸಾಹಿತ್ಯ ಚಿಣ್ಣರ ಮನದಲಿ ಚಿಗುರಲಿ ಸಾಹಿತ್ಯ ಜಿಲ್ಲೆಯ ಊದ್ದಲು ಹರಡಲಿ ದಿನ ನಿತ್ಯ ಪ್ರತಿ ದಿನವೂ ಹಬ್ಬದ ಕನ್ನಡ ಸಾಹಿತ್ಯ ಸಾಹಿತ್ಯ ಸೇವೆಗೆ ಶ್ರಮಿಸುವ ಉಸಿರಲಿ  ನೂರಾರು ಕನಸು ಹೊತ್ತ ಸಾಹಿತ್ಯ ಹೆಸರಲಿ  ನಮ್ಮಯ ನಲ್ಮೆಯ ಮನದ ಕಥೆಯಲಿ  ಸಾಹಿತ್ಯ ಸೇವೆಯಲ್ಲಿ ಬೆಳೆದ ಬೆಳೆಯಲಿ  ಕನ್ನಡ ಕನ್ನಡ ಏನಲು ಹರಿಯಲಿ ಸಾಹಿತ್ಯದ ಹೊನಲು ಪಸರಿಸಲಿ ಜೆಲ್ಲೆಯ ತುಂಬಾ ಕನ್ನಡದ ಕಡಲು ನಮೆಲ್ಲರ ಮನದಲಿ ತುಂಬಲಿ ಸಾಹಿತ್ಯದ ಒಡಲು ಸಾಹಿತ್ಯದ ಬತ್ತದ ನದಿಯು ಬರಲು  ಕನ್ನಡವೆನಲು ಕುಣಿವುದು ಮನಸು ಕನ್ನಡ ತಾಯಿಯೇ ನಮ್ಮನು ಹರಸು  ಕನ್ನಡಕಾಗಿ ಕವಿಗಳ ಸೇವೆ ನಿತ್ಯವೂ ನಡೆಯಲಿ ಸಾಹಿತ್ಯದ ಒಲವೇ *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಜಾಲಿ ರೈಡ್

Image
ಬದುಕಲ್ಲಿ ಭರವಸೆ ಇರಬೇಕು ಕಷ್ಟಗಳ ದಿನವನ್ನು ಸುಡಬೇಕು ಇಷ್ಟದ ಗೆಳೆಯರ ಪಡೀಬೇಕು ಲೈಫಲ್ಲಿ ಜಾಲಿ ಮಾಡಬೇಕು ನನ್ನಾಣೆ ಕೇಳೇ ನೀ ತುಂಬಾ ಜಾಣೆ ಬರುವೆಯಾ ನಾಳೆ ಅತ್ತೋಣ ಆಸೆಮಣೆ ಪ್ರೀತಿಯ ತೇರು ಜಾತ್ರೆಯು ಜೋರು ನೀ ಬಿಟ್ಟರೆ ನನಗೆ ಜೇವನವೇ ಬೋರು ದಾರೀಲಿ ನಾವು ಜೊತೆಯಲಿ ನಡೆವ ಪ್ರೀತಿಯ ಸಿಹಿ ವರವ ಪಡೆವ  ಕರೆದಯತೆ ನೀನು ಈ ಮನವ ನನ್ನಾಣೆ ನಿನೇ ನನ್ನ ಒಲವ  ನಕ್ಕಾಗ ಬಂಗಾರ ಆಣೆಯಲ್ಲಿ ಸಿಂಧೂರ ಮೂಡಿದಾಗ ಮಲ್ಲಿಗೆ ಕೇರಳಯತೆ ಸಂಪಿಗೆ ಮುದ್ದಾದ ಮೂಗುತಿ ಜೋಕಾಲಿಯಲಿ ಜೀಕುತಿ ನೋಡಲ್ಲೂ ನಿನ್ನ ಸಾಕೆ ಎರಡು ಕಣ್ಣ ಹೇ ಹುಡುಗಿ ಬಾರೆ ಬೈಕ್ ಮೇಲೆ ಕೂರೆ ಹೊರಡೋಣ ಸೈಡ್ ಜಾಲಿ ರೈಡ್ ಮುಟ್ಟಿದರೆ ಹೂವು ನಗುತೈತೆ ಚೆಲುವು ಜೊತೆಯಲಿ ಬಂದೆ ಕನಸ್ಸನ್ನು ತಂದೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಒಲವೇ ಒಲವೇ

Image
ಒಲವೇ ಒಲವೇ ಸುಮ್ನೆ ಅಂಗೇ ಪ್ರೀತಿ ಬಂತು ಏಕೋ ನಂಗೆ ಪ್ರೀತಿ ಹನಿಯು ಕೇಳಿದೆ ಕಾರಣ ನಿನ್ನ ಮಾತೆ ನಂಗೆ ಪ್ರಾಣ ಒಲವೇ ಒಲವೇ ಬಂತು ನಂಗೆ ನೂರು ಕನಸು ಬಿತೋದ್ಯಾನಂಗೆ ಮನಸಾರೆ ನಿನ್ನ ಕರೆದು ಜೊತೆಯಾಗಿಯೇ ನಡೆಯುವೆ ಪ್ರತೋ ಕ್ಷಣವೂ ನಿನದೆ ಧ್ಯಾನ ಮನದಲ್ಲಿ ನಿನಗಾಗಿಯೇ ಮೌನ ಭೂಮಿ ತಿರುಗೋದನು ಸುಮ್ನೆ ನಿಲ್ಲಿಸಿದನು ನಾ ನಿನ್ನ ಹಿಂದೆ ತಿರುಗುತ್ತಿರುವೆನು ನಿನ್ನ ಮಾಡಿಲ್ಲಲ್ಲಿ ಕನಸು ಕಾಣುವ ಅಸೆ ಸಾವಿನಲ್ಲೂ ಜೊತೆಯಾಗಿ ಸೇರುವ ಅಸೆ ನನ್ನ ನೀ ಸಹಿಸು ಪ್ರೀತಿಯಲಿ ಒರಿಸು ನಿನಗಾಗಿ ಹುಟ್ಟಿದ ಪ್ರೇಮಿ ನಾನೇ ಕಣೆ ಒಲವೇ ಒಲವೇ ಒಲವೇ ***********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

ಪ್ರೀತಿಯ ಪಯಣ

Image
ಕಾಡಿನಲಿ ರಾತ್ರಿ ನನ್ನೊಬ್ಬ ಯಾತ್ರಿ ಬೆಚ್ಚನೆ ಗೂಡು ಚಳಿಯ ಮರೆತು ಹಾಡು ಮುಂಜಾನೆ ಮಂಜು ಇಡಿದಂತೆ ಪಂಜು  ಉದಯಿಸಿದ ಸೂರ್ಯನ ಕಿರಣ ಇಬ್ಬನಿ ಹನಿಯ ಮರಣ ದಾರಿಯಲ್ಲಿ ಹೊರಟೆ ಮಾಡುತಾ ಅರಟೆ ಕಾವಲುಗರ ಬಂದ ಹೇಳಿದ ಹುಲಿಯಾಯೇತೆ ಮುಂದ ಹೆದರದೆ ನಡೆದೇ ಹುಲಿಯೊಂದು ಬಂತು ತುಸುದೂರ ನಿಂತು ಮನಸಾರೆ ಕರೆದೆ ಸಿಟ್ಟೇಕೋ ಹುಲಿರಾಯ ಸುಮ್ಮನೆ ಹೋರಾಡುವೆ ಮಹರಾಯ  ಘರ್ಜಿಸಿತು ಹುಲಿಯು ಕೇಳಿತು ನನ್ನ ಬಲಿಯು ಹೇಗಾರಿದ ಹುಲಿಗೆ ಗುಂಡಿನ ಮಳೆಗೆ ಹುಲಿಯಾಯ್ತು ಶವವು ಕಲಕಿತು ಮನವು *********ರಚನೆ ****-*-* ಡಾ. ಚಂದ್ರಶೇಖರ. ಸಿ. ಹೆಚ್

ಬಾಳಿನ ಬೆಳಕು

Image
  ಭರವಸೆಯ ಬೆಳುಕು ಮೂಡಿತು ಸೋಲೇಂಬ ಕತ್ತಲೆ ಕಳೆಯಿತು ಆಸೆಗಳ ಕನಸು ಮೊಳೆಯಿತು ಕಣ್ಣೀರ ಹನಿ ಕಥೆಯು ಬಾಡಿತು ದುಡೀಬೇಕು ಶ್ರಮಪಟ್ಟು ಬೆವರ ಹನಿ ಪಣಕ್ಕಿಟ್ಟು ಕಷ್ಟಗಳ ಬದಿಗಿಟ್ಟು ಕೆಲಸದಲ್ಲಿ ಮನಸಿಟ್ಟು ನೂರಸೆ ಕನಸು ಛಲ ಮನದಲ್ಲಿ ಆನೆ ಬಲ ಇಟ್ಟಾಗ ಸಿಗುವ ಫಲ ಬೂತಾಯಿಯ ನೆಲ ಬಿಡಬೇಡ ಭರವಸೆ ತೋರು ನಿನ್ನ ವರಸೆ ದೃಢವಿರಲಿ ನಿನ್ನ ಗುರಿ ಸರಿ ಇರಲಿ ನಿನ್ನ ದಾರಿ ದೇವರನು ನೀ ನಂಬು ಬಾರದಿರಲಿ ಜಂಬದ ಕೊಂಬು ಕೃಪೆಯೊಂದು ಅವನಿಡಲು ಕೆಲಸದಲ್ಲಿ ಮನವಿರಲು ಸುಡುವ ಬಿಸಿಲು ಕೊರೆವ ಚಳಿಯು ಬೆವರ ಬಿಸಿ ಹನಿಯು ಏಳುವುದು ಕಾಯಕವೇ ಕೈಲಾಸ ಅರಿತು ನಡೆ ಓ ಮನುಸ ಕಾಣುವೆ ನೀನು ಸುಖ ದಿವಸ  ಜೀವನ ತುಂಬಲಿ ಬಲು ಹರುಷ ಕಾಯಕವೇ ಕೈಲಾಸ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮನದ ನಗುವಾಗು

Image
  ಒಲವ ಹೂವಾಗು ಮನದ ನಗುವಾಗು ನನ್ನಯ ಕನಸಾಗು ಪ್ರೀತಿಯ ಹೃದಯಕೆ ಆಸರೆಯಾಗು ನೆನಪಿನ ಅಂಗಳದಿ ಹುಣ್ಣಿಮೆಯ ಬೆಳಕು ಕಣ್ಣೆರಡು ಸಾಲದು ನೋಡಲು ಚಂದ್ರನ ತಳುಕು ನಕ್ಷತ್ರವೊಂದು ನಗುತಿತ್ತು ನಿನ್ನ ಅಂದವ ನೋಡಿ ಹಸಿರಾದ ಹುಲ್ಲುಗರಿಯು ಕರೆಯುತಿತ್ತು ನೀನಿಟ್ಟ ಪಾದವ ತಿಡಿ  ಕಣ್ಣಿನ ನೋಟಕೆ ಸುಂದರ ಮೊಗಕೆ ನಸುನಗುವ  ಮನಕೆ ಯಾರಿಟ್ಟರು ಹೆಸರು ಒಲವಿಗೆ ಪ್ರಕೃತಿಯೇ ಉಸಿರು **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕಾಣದ ಕತ್ತಲೆ

Image
 ಶಿಲ್ಪ  ಮುರಿದ ಮೇಲೆ ನೋಡಲೆನಿದೆ ಶಿಲ್ಪದ ಕಲೆ ಉಸಿರು ನಿಂತಮೇಲೆ ಹೆಸರಿಗೇನಿದೆ ಬೆಲೆ ಬೆಂಕಿಯಲಿ ಬೆಂದ ಓಲೆ ಸುಡುತಿದೆ ಪಾತ್ರೆ ಇತ್ತಾಳೆ ಅನ್ನದ ಋಣದ ಮೇಲೆ ತಿನ್ನುವವನ ಹೆಸರು ಬರೆಯಲೇ ಪ್ರೀತಿ ಹೋದ ಮೇಲೆ ಕಂಡ ಕನಸಿನ ಕೊಲೆ ಕಾಣುವಳೇ ನನ್ನವಳು ನೆಲೆ ಹರಿವ ನದಿಯಂತೆ ಅವಳ ಸೆಲೆ ಜೇಡ ಎಣೆದ ಬಲೆ ತನ್ನನೇ ಸುತ್ತಿ ಸಾಯಲೇ ಬದುಕು ಕೇಳಿದೆ ನೀ ಅಬಲೆ ಯಾರಿಟ್ಟರು ವಿಧಿ ಬರಹ ಒಮ್ಮೆ ನೋಡಿ ಏಳಲೇ ಹಗಲು ಮುಗಿದ ಮೇಲೆ ಇರುಳೊಂದು ಕತ್ತಲೆ ಹೂವೊಂದು ನಗುತಿದೆ ನೋಡಿ ಇತ್ತಲೆ ಕೊನೆಯಗಲಿದೆ ನನ್ನ ಬದುಕು ಸಾವಲೆ ಎಲೆ ಉದುರಿದ ಮೇಲೆ ಎಲೆ ಬದುಕು ತರಗೇಲೇ ಯಾರಿಗೆ ಬೇಕು ಜೀವನ ಏಳಲೇ ಮನುಜ ನಿನ್ನ ಹುಟ್ಟು ಸಾವು ಕೂಡ ಬೆತ್ತಲೆ ********ರಚನೆ *********** ಡಾ. ಚಂದ್ರಶೇಖರ ಸಿ. ಹೆಚ್ 

ಬಂಧನ

Image
  ಮದುವೆ ಎಂಬ ಮುದ್ದಾದ ಸರಪಳಿ ಇಬ್ಬರನು ಬಂಧಿಸಿತು ಮನದಲಿ ಪ್ರೀತಿಯಲಿ ಹೃದಯ ಬೆಸೆದು ಒಲವಿನ ಕದವ ತೆರೆದು ಬಾಳಿ ಬದುಕಲಿ ನೂರ ದಿನ ಕಲೆತು ಮೌನದಿ ತನು ಮನ ಮಾತಿನ ಬುಗ್ಗೆ ಜೀವನದಿ ಚಿಮ್ಮಿ ಒಲವಿನ ಬೆಸುಗೆ ನಡೆಯಲಿ ಒಮ್ಮಿ ಕಲೆತು ಬೇರೆತ ಮಧುರ ಬಂಧನ ಮನೆಯ ದೀಪ ಬೆಳಗಿ ಚಂದನ ನೋವು ನಲಿವಿನ ಸರಪಳಿ ಜೀವನದಿ ಬದುಕ ಕಟ್ಟಲಿ ಮನಸು ಮನಸುಗಳ ಬೆಸುಗೆ ಬಣ್ಣದ ಕನಸಿನ ಹೊಸ ಬಗೆ ಮನದ ಮಿಡಿತ ನಿನ್ನ ಕಂಡು ಬಂಧನದಲ್ಲಿ ಸುಕುವ ಉಂಡು ಹೃದಯದಲ್ಲಿ ಏನೋ ಹೊಸತನ ಕಾಣದ ಮನಸ್ಸಿನ ಚೇತನ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಸಂಗಾತಿ

Image
  ಹೆಣ್ಣು ಎಂಬ ಮಾಯೆ ಒಲವಿನ ನೋವಿನ ಛಾಯೆ ಬದುಕಲಿ ಬಂದ ಸಂಗಾತಿ ಕೊಟ್ಟಳು ನೋವಿನ ಪ್ರೀತಿ ನೆನೆದರೆ ಪ್ರೀತಿಯ ಮುತ್ತು ಇವಳು ನನ್ನಯ ಸ್ವತ್ತು ಕರೆದೆರೆ ಬರಬೇಕಿತ್ತು ಹೊರಟಳು ಮನವ ಕಿತ್ತು ಸಂಗಾತಿ ಇಲ್ಲದ ಜೀವ ತಾಳಿದೆ ಒಲವಿನ ನೋವ ಕಾದಿದೆ ಪ್ರಣಯದ ಕಾವ ತಿಂದಿದೆ ನೋವಿನ ಬೇವ ಮಧುರ ಮಾತುಗಳ ನೆನಪು ಮನಸಿನ ಹೊಸ ಹುರುಪು ಕನಸುಗಳ ನಯ ಹೊಳಪು ಸಂಗಾತಿ ನಿನಗೆ ಮುಡಿಪು ಹೊಸಬೆಳಕು ಮಾಸಿದೆ ಬದುಕು ಏಕೋ ರೋಸಿದೆ ಸಂಗಾತಿ ಎಂಬ ಮಾಯೆ ಪ್ರೀತಿ ನೋವಿನ ಛಾಯೆ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹರಿವ ನದಿ

Image
  ಹರಿವ ನದಿಯುಜುಳು ಜುಳು ಶಬ್ದವ ಮಾಡಿ ಯಾರು ನನ್ನವರಿಲ್ಲಿ ಹರಿವೆ ಎಲ್ಲವ ತುಳಿದು  ಕಾಡಿನಲಿ ಹರಿಯುತ ಗುರಿ ಎಲ್ಲಿ ನನಗೆ ಹೊಡುತ್ತಿರುವೆ ಸಮುದ್ರದ ಕಡೆಗೆ ಯಾರು ಬಲ್ಲರು ನನ್ನ   ಪಯಣದ ಬದುಕು ಸಿಕ್ಕವರ ಕೊಚ್ಚಿ ನಡೆಯುತಿರುವೆ ತಳ್ಳಿ ದೂರಕೆ ಗಾಡಿ ಸರಕು ದಡದಲ್ಲಿಯ ಗಿಡವೊಂದು ಕೇಳಿತು ಬಿಡುವೆಯ ನನ್ನ ಬೂಮಿಯಲಿ ಬೇರು ಬಿಟ್ಟು ಜನರಿಗೆ ಕೊಡುವೆನು ಹಣ್ಣ ಕಲ್ಲುಗಳ ಕೊರೆದು ಮಣ್ಣನು        ಬಡಿದು ಹರಿವ ನದಿ ನಾನು ಎದುರಿಗೆ ಸಿಕ್ಕರೆ ಬಿಡೆನು ಯಾವ ಗಿಡವನ್ನು ಹೊರಟಿತು ನದಿಯು ಕಾಣದ ಊರಿಗೆ ಸೇರಲು ಗುರುತು ಸಿಗವ ಕಡಲಿಗೆ ಕುಡಿದರೆ ನೀರು ಉಪ್ಪು ಬಣ್ಣ ನೀಲಿ ಎಲ್ಲಿಹೋಯ್ತು ನದಿಯ ಸಿಹಿ ಒಲವಿನ ತಿಳಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಬೆಂದ ಬದುಕು

Image
ಜೀವನದ ನೋವಿನಲಿ ಬೆಯುತಿದೆ ಮನವು ಬದುಕು ಕಲಿಸಿದ ಪಾಠಕೆ ನಡುಗುತಿದೆ ತನುವು ಅಸೆ ಒಂದೂ ಜೀವಂತ ಬಿಡಿಸಿ ಏಳಿದೆ ಒಲವು ಕನಸುಗಳು ಇಲ್ಲದೆ ದೂರ ನಿಂತಿದೆ ಗೆಲುವು ಸಂಸಾರದ ಬವಣೆಯಲಿ ಸುರಿಯುತಿದೆ ಬೆವರು ಮೂಡಲಿಲ್ಲ ಯಾಕೋ ನೊಂದ ಮನದಿ ಹಸಿ ಚಿಗರು ತಿನ್ನ ಹೊರಟ ಊಟವೆಲ್ಲ ನಿನ್ನ ನೆನಪಿನ ಒಗರು ಮನಸ್ಸು ಕನಸ್ಸಗಳ ನಡುವೆ ಗುದ್ದಯತೆ ಟಗರು ಸೂರಿಲ್ಲದ ಊರಲಿ ಸೋರಗಿದೆ ಒಲವು ಬರಡು ಬದುಕಲಿ ಒಲವ ಹುಡುಕಿದೆ ಚಲವು ಸೋತ ಜೀವಕೆ ಅಳು ಮನಸಿಗೆ ಇನ್ನೇಲಿದೆ ನಲಿವು ಏಕೆ ಕೊಟ್ಟನು ದೇವರು ನೋಯಿಸಲು ವರವು  ಸಾಕಾಯಿತು ಜೀವನ  ಮನಸ್ಸು ಬೇಡುತಿದೆ ಮರಣ ಶಫೀಸುತಿದೆ ಮನವು ಬೇಡುವಗಿತ್ತು ಈ ಜನನ ತನುವು ಹಾಡೊಂದ ಹಾಡಿದೆ ಶ್ರುತಿಯಿಲ್ಲದ ಚರಣ ಬಿಟ್ಟೋಗೋ ಬಾಳಿಗೆ ಹೇಳಿ ಹೋಗು ಕಾರಣ ಎಳುಬಿಳಿನ ನಡುವೆ ಕಾಲ ಕಳೆಯಿತು ಜನನ ಮರಣದ ನಡುವೆ ಬದುಕು ನಡೆಯಿತು ಬದುಕಿದ ಜೀವನ ನೋವಲಿ ಬೆಂದಿತು ಅಳು ದೇವರ ಪಾಳು ಜೇವನವ ಶಪಿಸಿ ಹೊರಟಿತು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಕಡಲ ತೀರ

Image
ಸಮುದ್ರದ ದಡದಿ ಕೂತಿಹಳು ಹುಡುಗಿ ನೀರಿನ ಅಲೆಯ ಹೊಡೆತ ನೋಡುತ ಬೆಡಗಿ ಕಣ್ಮುಂದೆ ಬಂತು ಒಂದು  ಕನಸು ಕಳೆದು ಹೋದ ಪ್ರೀತಿಯ ಹುಡುಗನ ನನಸು ದೂರದಿ ದೋಣಿಯಲಿ ಕೈ ಬಿಸಿ ಕರೆದಂತೆ ನೆನಪಿನ ಆ ಘಳಿಗೆ ಕ್ಷಣದಲ್ಲಿ ಮರೆತಂತೆ ನಿನ್ನಯ ನೆನಪು ಎಷ್ಟು ಸುಂದರ ಅಲೆಗಳನ್ನು ಬಾಚಿ ತಬ್ಬಿದಷ್ಟು ಮಧುರ ಮರೆತ ಮನಸು ಸೆಳೆಯಿತು ಏಕೋ ಕಂಡ ಕನಸು ಮತೊಮ್ಮೆ ನನಗೆ ಬೇಕು ನಿ ಕೊಟ್ಟ ನೆನಪು ಮತ್ತೆ ಕಾಡಿದೆ ಮನಸು ತಾನೇ ನಿನ್ನ ಒಲವ ಬೇಡಿದೆ  ಬಾ ಬೇಗ ಹುಡುಗ ತೋರು ನಿನ್ನ ನಗುವ ಕಾಣದೆ ಕಾಯುತಿದೆ ಈ ಮನ ಕೂತು ದಡವ ಅಪ್ಪಳಿಸಿದ ಅಲೆಯು ಮನಸನ್ನು ಕೊಂದು ಹಿಂದೆ  ಸರಿಯಿತು ಅಲೆಯು ಕನಸನ್ನು ತಿಂದು ನಿ ಇರದೇ ಜೀವನವೇ ಬಲು ಒಂಟಿ ಬದುಕು ನಡೆಯುತ್ತಿದೆ ದಾರಿಯಲ್ಲಿ ಕುಂಟಿ ಕಡಲತೀರದಲ್ಲಿ ನಿನಗಾಗಿ ಬಂದು ಕುಂತೆ  ಮನಸ್ಸಲ್ಲಿ ನಿನ್ನ ನೆನಪಿನ ಸಾವಿರ ಚಿಂತೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಒಲವಿನ ಬಣ್ಣ

Image
ಬದಲಾಗೋ ಬಣ್ಣಕೆ ನಾ ಏನು ಹೇಳಲಿ ಮಿಂಚೋಗೋ ಬೆಳಕಿಗೆ ನಾ ಏನ್ ಅನ್ನಲಿ ಕಳೆದೋಗೋ ವಯಸ್ಸನ್ನು ನಾ ಹೇಗೆ ತಡೆಯಲಿ ಮುರಿಡೊದ ಮನಸ್ಸನು ನಾ ಹೇಗೆ ಕೂಡಿಸಲಿ ಬೇರೆತೋದ ಹೃದಯದ ಬಣ್ಣವೇ ಬರೆ ಕಲೆತೋದ ಮನಸ್ಸನು ಪ್ರೀತಿಸು ಮನಸಾರೆ ಒಡಲಾಳದಲ್ಲಿ ಹುಟ್ಟಿದ ಬೆಂಕಿ ನಾ ಅರಿಸಲಾರೆ ನೊಂದ ಜೀವದ ನೋವನು ನಾ ಸಹಿಸಲಾರೆ ಮರೆತ್ತೊಗೋ ಮಾತಿಗೆ ಗೆಜ್ಜೆ ಕಟ್ಟಲಾರೆ ಬಣ್ಣದ ಚೆಲುವು ಎಂದು ಬದುಕು ಕಟ್ಟದು ಬಯಸದ ಒಲವು ಎಂದು ಮನವ ಮುಟ್ಟದು ಪ್ರೀತಿಯ ಮನವು ನೋವಿನಲಿ ಕದವ ತಟ್ಟದು ಮನಸು ಮನಸು ಬೇರೆಯೋ ಮಧುರ ಹುಟ್ಟಿದು ಕನಸು ಕನಸುಗಳ ನಡುವೆ ಏಕೋ ಮೋಹ ಮನಸು ಒಲವಿನ ನಡುವೆ ಪ್ರೀತಿ ದಾಹ ಬೇರುತು ಕಲೆಯುವ ನಡುವೆ ಏಕೋ ಪ್ರವಾಹ ತಿಳಿಯದೆ ಆಯಿತು ಕೊನೆಗೆ ನೋವಿನ ದ್ರೋಹ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಮಿನುಗು ತಾರೆ

Image
ನನ್ನಾಸೆ ದ್ರುವತಾರೆ ನೀ ಬೇಗ ಬಳಿ ಬಾರೆ ಕಾದಿಹೆನು ಮನಸಾರೆ ಒಮ್ಮೆ ಮೊಗವತೋರೆ ನಿನ ನೋಟ ಬಲು ಚೆಂದ ಗಗನದಿಂದ ಧರೆಗೆ ಬಂದ ಕಮಲ ಕುಸುಮವೇ ಅಂದ ನನಗಾಗಿ ದೇವರು ತಂದ ಪ್ರೀತಿಯಲಿ ಬಲು ಸರಸ ಕಾಯುತಿದೆ ಈ ವಿರಹ ನಿ ನನ್ನ ಮುದ್ದು ಬರಹ ಒಲವಿಂದ ಬಾ ಸನಿಹ ಮಾತಿನಲ್ಲಿ ಬಲು ಜೋರು ನಗೆ ತುಂಬಾ ಹಾಲು ಕೀರು ನೀ ಇಲ್ಲದೆ ಜೀವನ ಬೋರು ಬಳಿ ಬಾರೆ ಪ್ರೀತಿ ಪಾರು ಮುದ್ದಾಗಿ ನಿ ಬಾರೆ ನನ್ನ ಒಲವ ತಾರೆ ಪ್ರೀತಿಸುವೆನು ಮನಸಾರೆ ಒಮ್ಮೆ ಕರುಣೆ ತೊರೆ ನನ್ನಾಣೆ ನಿ ಚೆಂದ ನಗುವಿನಲಿ ಅಂದ ಬಾ ಬಾರೆ ಒಲವೇ ನಿ ಇದ್ದರೆ ಬಲವೇ ***********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ದೀಪಾವಳಿ

Image
ದೀಪಗಳ  ಸಾಲು ಬೆಳಕಿನ  ಹೊನಲು ಕಣ್ಮುಂದೆ ಬರಲು ನವ ಜೀವನ ಬಂತು ಹೊಸತನವ ತಂತು ನಾಳೆಎಂಬುದು ಬೆಳಕು ನೆನ್ನೆ ಎಂಬುದು ಇರುಳು ಮದ್ಯೆ ನಡೆವ ತಿರುಳು ಬಲ್ಲವನಾರು  ನೀ ಹೇಳು ಮರುಳು ಬದುಕು  ಬೆಂಡಾಗಿರಲು ಜೀವನಕ್ಕೆ  ಸೊಗಸಲ್ಲಿ ಮನವೂ ಕತ್ತಲೆಯಲಿ ಅಣತೆಗಳ  ಹಚ್ಚಿ ಕನಸಿನ ಕದ ಬಿಚ್ಚಿ ದೀಪಾವಳಿಯ  ದೀಪ ಬೆಳಗಲಿ ಬಾಳಲ್ಲಿ ರೂಪ ಮನವು ಮರುಗಿ ಕತ್ತಲೆ ಕರಗಿ ನಮ್ಮೆದೆಯ ಅಸೆ ನನಸಾಗಲಿ ಕನಸೇ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್