Posts

Showing posts from May, 2025

ಆಡೋಣ ಗೆಳತಿ ಬಾ

Image
  ನಲಿಯೋಣ ಬಾ ಗೆಳತಿ  ನಮ್ಮ ಮನದ ಕಸವ  ಗುಡಿಸಿ ನಾವು ನಲಿಯೋಣ  ಮೂರು ದಿನದ ಈ ಬದುಕು  ಏತಕ್ಕಾಗಿ ಅಸೂಯೆ ದ್ವೇಷ  ಎಲ್ಲ ಮರೆತು ಕುಣಿಯೋಣ ಬಾ ಗೆಳತಿ  ಕೈಯಲ್ಲಿ ಕೈ ಹಿಡಿದು  ಏಳು ಹೆಜ್ಜೆ ಒಟ್ಟಿಗೆ ನಡೆದು  ಬದುಕೋಣ ಬಾ ಗೆಳತಿ ಬದುಕೋಣ  ಮನಸ ಬಾರವ ಕಳೆದು  ಮಕ್ಕಳಂತ ಆಡುತ್ತ ಮಕ್ಕಳಾಗೋಣ  ಆಡೋಣ ಬಾ ಗೆಳತಿ ನಲಿದು ಬಾ  ದಿನಗಳು ಓಡುತ್ತಿವೆ  ಸಮಯ ಉರುಳುತ್ತಿವೆ ಕನಸುಗಳು ಕಾಡುತ್ತಿವೆ  ನನಸಾಗಿಸೋಣ ಬಾ ಗೆಳತಿ ಬಾ  ಮಾತು ಮಾತಿಗು ಕದನ ಬಿಟ್ಟು  ಶಾಂತಿ ಶಾಂತಿ ಎನ್ನುತ ಸಾಗಿ  ಜೀವನ ನಡೆಸೋಣ ಯುದ್ಧದಿ ಬಾ ಗೆಳತಿ ಬಾ  ಜಾತಿಗಳು ನೂರಾರು ಬೇದ ಭಾವಗಳ ಸೂರು  ಕಿತ್ತು ಬಿಸಾಡೋಣ ಬಾ ಗೆಳತಿ ಬಾ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -28

Image
  🌹ಮುದ್ದು ನೀನು🌹 ಎದೆಯೊಳಗೆ ನೂರು ಕನಸು ರೆಕ್ಕೆ ಬಿಚ್ಚಾವೆ  ನಿನ್ನ ಮುದ್ದಾಡೋ ಆಸೆಗಳು  ಹೆಚ್ಚಾವೆ  ನೀನೆ ನನ್ನ ಜೀವ ಎಂದು ಮನಸ್ಸು ಏಳೈತೆ  ಕಣ್ಣಿನೊಳಗೆ ನಿನ್ನ ಬಿಂಬ ಹಾಡು ಹಾಡೈತೆ  ನೀ ಇಡುವ ಹೆಜ್ಜೆ ನೋಡಿ ಹೃದಯ ಕೂಗೈತೆ  ನಿನ್ನ ನೋಡಿದ ಮನವು ಹುಚ್ಚಾಗಿ ಕುಣಿದೈತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾರೆ  ನನ್ನ ಮುದ್ದು ಕಂದ  ನಿನ್ನ ನಗುವ ನೋಡಿ ಮನದಿ ತುಂಬಿತು ಆನಂದ  ಬರಡು ಜೀವಕ್ಕೆ ಬೆಳಕಾಗಿ ನೀ ಬಂದೆ  ಸೋತ ಬದುಕಿಗೆ ಮುಂಗಾರು ಮಳೆ ತಂದೆ ಉಸಿರು ನಿಂತ ಮನಕೆ ಹಸಿರು ನೀನಾದೆ  ಪ್ರಾಣವಿಲ್ಲದ ಜೀವಕ್ಕೆ ಮರು ಜೀವ ನೀನಾದೆ  **********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -27

Image
  🌹ಕಾಗೆ ಮರಿ 🌹 ಕಾಗೆ ಮರಿ ಕಾಗೆ ಮರಿ  ನಿನ್ನ ಬಣ್ಣ ಕಪ್ಪು ಏಕೆ  ಬೆಂಕಿಯಲ್ಲಿ ನಿನ್ನ ಸುಟ್ಟಂಗೆ  ಕಾಣುತ್ತೀಯ ಏಕೆ  ಕಾಕಾ ಎಂದು ನೀನು ಕೂಗುತ್ತೀಯ  ತೊಟ್ಟಿಲಿದ್ದ ನೀರು ಕುಡಿಯುತ್ತೀಯ  ಶನೇಶ್ವರನಿಗೆ ನೀನೇ ವಾಹನವಂತೆ  ದೇವರನ್ನು  ಹೊತ್ತು ಮೆರೆಸುವಂತೆ ಊಜಿಯಲ್ಲಿದೇ ನೀರು ತಳದಿ  ಕೊಕ್ಕು ಹಾಕಿ ಸುಮ್ಮನಾದೆ ಸಿಗದಿ  ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿ  ಮೇಲೆ ಬಂದ ನೀರು ಕುಡಿದೆ  ಬದುಕಿದ್ದಾಗ ಅನ್ನ ಹಾಕದವರು  ಸತ್ತಾಗ ನಿನಗೆ ಕೂಳು ಇಟ್ಟರು  ನೀನು ಬಂದು ಕೂಳು ತಿಂದಾಗ  ಮಾಡಿದ ಪಾಪ ಕಳೆಯಿತೆಂದರು  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -26

Image
  🌹ಮುದ್ದಿನ ಗಿಳಿಯೇ 🌹 ಗಿಳಿಯೇ ನನ್ನ ಮುದ್ದಿನ ಅಚ್ಚು ಮೆಚ್ಚು ಗಿಳಿಯೇ  ಕೆಂಪು ಮೂತಿ ಹಸಿರ ಮೈಯಿನ ಬಣ್ಣದ ಗಿಳಿಯೇ  ನನ್ನ ಮನೆಗೆ ಬಾರೆ ನನ್ನಯ ಪ್ರೀತಿಯ  ಗಿಳಿಯೇ  ಮಾವಿನ ಮರದಿ ಹಣ್ಣು ಇದೆ ತಿನ್ನುವ ಗಿಳಿಯೇ  ಅಪ್ಪನ ಸಂತೆಗೆ ತರಕಾರಿ ತರಲು ಹೋಗಿಹನು  ಅಮ್ಮನು  ಸಿಹಿ ಹೋಳಿಗೆ ಅಡಿಗೆ ಮಾಡಿಹಳು  ಅಕ್ಕನು ನವೋದಯ ಪರೀಕ್ಷೆಗೆ ಓದುತ ಕೂತಿಹಳು  ನಾವು ನಲಿದು ಆಟ ಆಡೋಣ ಬಾರೆ ಗಿಳಿಯೇ  ಬೆಕ್ಕನ್ನು ಕಂಡರೆ ನಿನಗೆ ಭಯವೇ ಗಿಳಿಯೇ  ನಾಯಿ ಕಂಡರೆ ನಡುಕವೆ ನಿನಗೆ ಗಿಳಿಯೇ  ಬೋನಲ್ಲಿ ಕೂಡಿ ಹಾಕುವುದಿಲ್ಲ ಬಾರೆ ಬಳಿಗೆ  ನಾನು ನೀನು ಸೇರಿ ಚಿರುತ ಕೂಗೋಣ ಹೊಲದಿ ಸೂರ್ಯಕಾಂತಿ, ಜೋಳ ಬಂದಿಹುದು  ಸೂರ್ಯನು ನೋಡುತ ತಿರುಗಿ ನಿಂತಿಹುದು  ಜೋಳ, ಸೂರ್ಯಕಾಂತಿ ತಿನ್ನೋಣ ಬಾರೆ  ಕುಣಿಯುತ ನಲಿಯುತ ಹಾಡನ್ನು ಹೇಳುವ ಬಾರೆ  ***********ರಚನೆ********* ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -25

Image
  🌹ರೈಲು ಬಂತು🌹  ರೈಲು ಬಂತು, ರೈಲು ಬಂತು, ರೈಲು ಬಂತು ನಮ್ಮೂರ ಹೊಲದ ಹಳಿಯ ಮೇಲೆ ಬಂತು ರೈಲು ಏಕೋ ಸುಮ್ಮನೆ ಅಳುತ್ತಾ ಬಂತು  ಆಕಾಶಕ್ಕೆ ಹೊಗೆ ಉಗುಳುತ ರೈಲು ಬಂತು  ನೂರು ಮೈಲಿ ವೇಗದಿ ರೈಲು  ಓಡುತ್ತಂತೆ  ಚುಕುಬುಕು ಚುಕುಬುಕು ಶಬ್ದ ಮಾಡುತ್ತಂತೆ  ಹಳಿಗಳ ಮೇಲೆ ಜೋರಾಗಿ ನುಗ್ಗುತ್ತಂತೆ  ಚಿಣ್ಣರ ಅಚ್ಚುಮೆಚ್ಚಿನ ಮುದ್ದು ರೈಲು ಅಂತೆ  ಕೆಂಪು ಬಾವುಟ ತೋರಿಸಿದರೆ ರೈಲೂ ನಿಲ್ಲುತಂತೆ  ಹಸಿರು ಬಾವುಟ ಹಿಡಿದರೆ ರೈಲು ಮುಂದೆ ಓಡುತಂತೆ  ರೈಲ ತುಂಬಾ ನೂಕು ನುಗ್ಗೊ ಜನ ಜಂಗುಳಿ ಜಾತ್ರೆ  ಊರಿಂದ ಊರಿಗೆ ಹೊರಟಿಹರು ನಮ್ಮವರು ಯಾತ್ರೆ  ಬೆಟ್ಟಗುಡ್ಡ ಸುರಂಗ ಮಾರ್ಗದಿ ಮುನ್ನುಗ್ಗೋ ರೈಲು  ಕಾಡಿನಲ್ಲಿ ಚುಕ್ಕು ಬುಕ್ಕು ಕೂಗುತಾ ಓಡೋ ರೈಲು  ರೈಲು ನೋಡಿ ಸಣ್ಣ ಸಣ್ಣ ಮಕ್ಕಳಿಗೆ ಏನೋ ಖುಷಿ  ರೈಲು ಬಿಟ್ಟು ಓಡಿತು ಪಕ್ಕದಲ್ಲಿ ನಾವು ನೆಟ್ಟ ಸಸಿ  ರಾಮಣ್ಣ ರೈಲಿನಲ್ಲಿ ತಿಂಡಿ ಕಾಫಿ, ತಂದನಂತೆ ಸೋಮಣ್ಣ ದುಡ್ಡು ಕೊಟ್ಟು ಕಾಫಿ ಕುಡಿದನಂತೆ ರೈಲಿನಲ್ಲಿ ಅಪಾಯದಿ ಚೈನು ಎಳೆಯಬೇಕಂತೆ  ಓಡುವ ರೈಲು  ಹಳಿಯ ಮೇಲೆ ನಿಲ್ಲುತ್ತಂತೆ  ಟಿಕೆಟ್ ಇಲ್ಲದೆ ರೈಲಿನ ಪ್ರಯಾಣ ಖಂಡಿತ ತಪ್ಪು ಆದ್ರೂ ರೈಲು ಹತ್ತಿದ ಕರಿಯಣ್ಣ ಹಾಕದೆ ಸೊಪ್ಪು  ಸ್ವಚ್ಛವಾಗಿ ಇಡಬೇಕು ನಾವು ರೈಲುಗಳ ಭೋಗಿ  ಸ್ವಚ್ಛ ಭಾರತ ಎಂದು ಕೂಗುತವರೆ ನಮ್ಮ ಮೋದಿ...

ಮಕ್ಕಳ ಗೀತೆ -24

Image
  🌹ತೂಗುವ ತೊಟ್ಟಿಲು 🌹 ಮೋಡದ ಬಾನಲಿ ತೂಗುವ  ನನ್ನಯ ತೊಟ್ಟಿಲು  ಅಮ್ಮ ಕೊಟ್ಟಳು ಕುಡಿಯಲು  ಹಾಲಿನ ಬಟ್ಟಲು  ನೀಲಿ ಆಕಾಶದಿ ಭೂಮಿಯು  ಕಂಡಿತ ಬೆತ್ತಲು ಮೋಡವು ಮಳೆಯ ಹನಿಗೆ  ಸೋರಿದೆ ಸುತ್ತಲು ಬಿಳಿಯ ಬಣ್ಣದ ಮುಗಿಲು  ಎತ್ತರಕ್ಕೆ ಹಾರಿದೆ ನವಿಲು  ಬಾನು ಕಂಡಿತ ನೀಲಿ  ಭೂಮಿಗೆ ಹಾಕಿದ ಬೇಲಿ  ಚಂದಿರನ ಹಿಡಿಯಲು ಹೊರಟೆ  ಸಿಗದೇ ಹೋಗಿ ಒಡೆದೆ ಹರಟೆ  ಸೂರ್ಯನು ಕೆಂಪಾಗಿ ಬೆಂದಾನು  ಸಿಟ್ಟಲ್ಲಿ ನನ್ನನ್ನು ಸುಟ್ಟಾನು  ಚುಕ್ಕೆಗಳೆಲ್ಲ ಕಣ್ಣು ಹೊಡೆದಂತೆ  ಬೆಳ್ಳಗೆ ಹೊಳೆವ ಬಿಳಿ ಬಣ್ಣವಂತೆ  ಸಾಕು ಬಾನಿನ ಸಹವಾಸ  ತೂಗುವ ತೊಟ್ಟಿಲಲಿ ನಾ ಉಪವಾಸ  ಜೀಕುತಾ ಕಂಡೆ ತೊಟ್ಟಿಲ ಸ್ವರ್ಗ  ಮರದಿ ಕಟ್ಟಿದ ತೊಟ್ಟಿಲು ಹಗ್ಗ  ಭೂಮಿಯ ಒಂದು ಪ್ರಕೃತಿ ಬೆಡಗು  ನಮ್ಮಯ ಜೀವನ ಪ್ರೀತಿಯ ಮೆರಗು ************ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ದಿಕ್ಕು ಕಾಣದಾಗಿದೆ

Image
  ತೊರೆವ ನದಿಗೆ ಹರಿವ ಜರಿಗೆ  ದಿಕ್ಕು ಕಾಣದಾಗಿದೆ  ಮತಿಗೆಟ್ಟ ಈ ಮನುಜನಿಗೆ  ಸೊಕ್ಕು ಜಾಸ್ತಿಯಾಗಿದೆ  ಹೃದಯದ ಅಂಗಳದಲ್ಲಿ  ಮೊಗ್ಗು ಬಿರಿದಿದೆ  ಕಂಪು ಸೂಸಿ ತಂಪು ಎರೆದು ಹೂವು ಅರಳಿದೆ  ಸಕಲ ಜೀವಿಗಳಿಗೆ ಬದುಕ  ದಾರಿ ಬಿಟ್ಟು  ದೇಹ ಬಳಕುತ ನಡೆದು ಬಾಳು ಸಾಗಿದೆ  ಯಾರ ಬಾಳ ಶಾಪ ಯಾರ  ಬದುಕು ಮೂಡಿಗೋ  ಯಾರ ಬಾಳ ನೋವು ಯಾರ  ಜೀವ ತಲೆಗೋ  ಜೀವ ಮಸಣದಡೆಗೆ ಸುಮ್ಮನೆ  ಅತ್ತು  ಕರೆದು ಹೊರಟಿದೆ  ಮಣ್ಣಿನಲ್ಲಿ ಕನಸು ಹೊತ್ತು ಬಿತ್ತಿ ಬಾಳ ಪಯಣ ಮುಗಿದಿದೆ *********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಹೃದಯ ದೀಪ

Image
  ದೇಹವೆಂಬ ಗಾಜಿನ ಮನೆಯಲಿ  ಗಾಳಿ ಎಂಬ ಉಸಿರು ಹರಿದು  ರಕ್ತ ಎಂಬ ದೀಪದ ಎಣ್ಣೆ ಉರಿದು  ಹೃದಯ ದೀಪ ಬೆಳಗಿ ಬಿಟ್ಟಿತು  ದೇಹ ಕಲ್ಮಶಗಳ ಹೊರಗೆ ಹಾಕಿ  ಶುದ್ಧಗೊಳಲು ನಮ್ಮ ಬಾಳು ಬೆಳಗಿತು  ಕಾಲು ಎಂಬ ಚಕ್ರ ಹರಿದು  ನಮ್ಮ ದೇಹ ಮುಂದೆ ಚಲಿಸಿತು  ಕಣ್ಣು ಎಂಬ ಕ್ಯಾಮರದಲ್ಲಿ ಎಲ್ಲಾ  ಚಿತ್ರಗಳು ಮೆದುಳಿನಲ್ಲಿ ಬರೆಯಿತು  ಮೆದುಳು ಎಂಬ ಕಂಪ್ಯೂಟರ್  ನಮ್ಮ ದಾರಿ ಮುಂದೆ ನಡೆಸಿತು  ಆರದಿರಲಿ ಹೃದಯ ದೀಪ  ಬಾಳು ಬೆಳಗುತಿರಲಿ ಜೀವದ ಹಣತೆ  ನಡೆದು ಸಾಗಲಿ ಬದುಕ ಪಯಣ  ಒತ್ತು ಬಾರವ ದೂರ ತೀರಕೆ  **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -23

Image
  🌹ಯಾರ ಕಾಟ ಹೇಳಮ್ಮ🌹  ಅಮ್ಮ ಅಮ್ಮ ಅಮ್ಮ ಅಮ್ಮ ನನ್ನಮ್ಮ  ಹರಿವ ನೀರಿಗೆ ಯಾರ ಕಾಟ ಹೇಳಮ್ಮ  ಸಿಹಿ ಕಬ್ಬಿನ ಹಾಲಿಗೆ ನೊಣಗಳ ಕಾಟ ಸಾಕಮ್ಮ  ಹೂವಿನ ಮಕರಂದಕೆ ದುಂಬಿಯ ಕಾಟ ಏನಮ್ಮ  ಉಕ್ಕುವ ಕೆಂಪು ಲಾವಾ ರಸವನ್ನು ತಡೆಯುವವರು ಯಾರು ಹೇಳಮ್ಮ  ಹರಿವ ರಕ್ತವು ಹೃದಯದಿ ನಿಂತರೆ  ಅದುವೇ ನಮ್ಮಯ ಸಾವಮ್ಮ  ರಬಸದಿ ಹರಿವ ನದಿಗೆ ಎದುರು  ಈಜಿದರೆ ಬಿಡುವುದೇನೆಮ್ಮ  ಮೋಡಗಳು ಗುದ್ದಿ ಸಿಡಿಲು ಬಡಿದು  ಭೂಮಿಗೆ ಮಳೆ ಹನಿ  ತಡೆಯುವರು ಯಾರಮ್ಮ  ಬಿಸಿಲು ಮಳೆ ಸುರಿದು ಮೋಡದಿ ಕಾಮನಬಿಲ್ಲು  ಮೂಡಿದರೆ ಭೂಮಿಗೆ ತಂಪು ಏನಮ್ಮ  ಭೂಮಿಯು ಕಂಪಿಸಿ  ಬಿರಿದರೆ  ಜೀವಿಗಳ ಉಳಿಸುವರು ಯಾರಮ್ಮ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -21

Image
  🌹ತೋಳ ಮತ್ತು ನರಿ 🌹 ನಮ್ಮ ಊರಿನ ಏರಿಯ  ಮೇಲೆ ಬೆಟ್ಟ ಹೊಂದಿತ್ತು  ಬೆಟ್ಟ ಗುಡ್ಡದ ತಪ್ಪಲ್ಲಿನಲ್ಲಿ  ನರಿ ಮತ್ತು ತೋಳ ವಾಸ ಮಾಡಿತ್ತು  ಊರಿನ ಹೊಲದಲ್ಲಿ ನರಿಯು  ಸುತ್ತಾಡಿಕೊಂಡಿತ್ತು ಒಂದು ದಿನ ತೋಳವು  ಊಟಕ್ಕೆ ನರಿಯ ಕರೆದಿತ್ತು  ತೋಳವ ನೋಡಿದ ನರಿಗೆ  ಜೀವ ಭಯವು ತುಂಬಿತ್ತು  ತೋಳ ನನ್ನ ಕೊಲ್ಲುವನೆಂದು  ನರಿಗೆ ಚೆನ್ನಾಗಿ ತಿಳಿದಿತ್ತು  ತೋಳದಿಂದ ತಪ್ಪಿಸಿಕೊಳ್ಳಲು  ನರಿ ಉಪಾಯ ಮಾಡಿತ್ತು  ಅಲ್ಲೇ ಮೇಯುವ ಕುರಿಗಳ  ಹಿಂಡು ನೋಡಿ ತೋಳವ ಕರೆದಿತ್ತು  ತೋಳವು ನರಿಯಾ ನೋಡಲು  ಹೊಲಕ್ಕೆ ಬಂದಿತ್ತು  ನರಿಯು ಕುರಿಗಳ ಹಿಂಡಿನ  ನಡುವೆ ನಿಂತಿತ್ತು  ತೋಳವು ಕುರಿಗಳ ನೋಡಿ  ನರಿಯ ಮರೆತಿತ್ತು  ತೋಳವು ಸುತ್ತಲೂ ನೋಡಲು ನರಿಯು ಕಾಣದಾಗಿತ್ತು  ತೋಳವು ಕುರಿಯ ಮರಿಯ  ಹೊತ್ತುಕೊಂಡು ಓಡಿತ್ತು  ಇದನ್ನು ನೋಡಿದ ನರಿಗೆ  ಜೀವ ಉಳಿತೆಂದು ಖುಷಿಪಟ್ಟಿತ್ತು  ಕುರುಬನು ಬಂದು ಹಿಂಡಿನ  ಕುರಿಯ ಎಣಿಸಿತ್ತು  ಒಂದು ಕುರಿ ಕಡಿಮೆ ಇದೆ  ಎಂದು ಅವನಿಗೆ ತಿಳಿದಿತ್ತು  ಕುರಿ ಹುಡುಕುತ್ತಾ ಹೋರಟ ಕುರುಬನಿಗೆ  ತೋಳ ತಿಂದ ಕುರಿ ಸಿಕ್ಕಿತ್ತು  ಅದನ್ನು ನೋಡಿದ ಕುರುಬನಿಗೆ  ಕಣ್ಣೀರು ಸುರಿದಿತ್ತು  ಚಾಲಾಕಿ ನರಿಯು ತೋಳದಿಂದ  ಜೀವ ತಪ್...

ಮಕ್ಕಳ ಗೀತೆ -22

Image
  🌹ಕಪ್ಪು ಕೆಂಪು ಇರುವೆ 🌹 ಇರುವೆ ಇರುವೆ ಇರುವೆ ಎಲ್ಲಿಗೆ ಹೋಗುತ್ತಿರುವೆ ಸಾಲು ಸಾಲು ಕಟ್ಟಿ  ಒಗ್ಗಟ್ಟನ್ನು ಸಾರುತ್ತಿರುವೆ  ಬಣ್ಣ ಬಣ್ಣದ ಕಪ್ಪು  ಕೆಂಪನೆ ಇರುವೆ  ಮನೆಯಲ್ಲಿ ಗೋಡೆಗೆ ಬಳಿದ  ಬಣ್ಣವ ತಿನ್ನುತ್ತಿರುವೆ  ಸಿಹಿ ಸಕ್ಕರೆ ಕಂಡರೆ  ಅಕ್ಕರೆಯಿಂದ ಬರುವೆ  ಸಾಲು ಸಾಲಲ್ಲಿ ಹೊತ್ತು ಎಲ್ಲರಿಗೂ ಹಂಚುತ್ತಿರುವೆ  ನಿನಗೆ ಸಾವಿನ ಭಯ  ಕಾಣುವುದೇ ಇಲ್ಲವೇ  ವಿಷವ ಇಟ್ಟು ಮಾನವರು  ನಿನ್ನ ಕೊಲ್ಲುತಿಹರಲ್ಲವೇ  ನಿನ್ನ ತೂಕವ ನೋಡಿ  ಕಟ್ಟಿ ಗೊದ್ದ ಎನ್ನುತಿಹರು  ದಪ್ಪಗೆ ಕೆಂಪಗೆ ಇದ್ದರೆ  ಕೇಂಜಿಗೆ ಎನ್ನುತಿಹರು ಭಕ್ತರು ನಿನಗೆ ಅಕ್ಕಿ  ಕಾಳು ಹಾಕಿ ಸಾಕುತಿಹರು ನೀನು ತಿಂದರೆ ಅದುವೇ  ಪುಣ್ಯ ಎನ್ನುತಿಹರು  ನಿಮ್ಮಯ ಸಾಲು ದೇಶ ಕಾಯುವ ಸೈನಿಕನಂತೆ  ಯುದ್ಧಕ್ಕೆ ಹೊರಟ  ದಾರಿ ಕಾಣದ ನಾವಿಕನಂತೆ ದಿನವೂ ದುಡಿಮೆ  ನಿಮ್ಮ ಉಸಿರು ಇರುವೆ ಎಂದು ತಾನೆ  ನಿಮ್ಮಯ ಹೆಸರು  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ - 20

Image
  🌹ಮಂಗನ ಆಟ 🌹 ಪ್ರವಾಸಕ್ಕೆಂದು ಮಕ್ಕಳು ಕಾಡಿಗೆ ಬಂದಿತ್ತು  ಕಾಡಿನಲ್ಲಿ  ದೇವರ  ಗುಡಿ ಒಂದು ಇತ್ತು  ಮಕ್ಕಳು ಹೋಗುವ  ರಸ್ತೆ ಬದಿಯಲ್ಲಿ  ಮಂಗಗಳ ಹಿಂಡು  ಗುಂಪು ಕಟ್ಟಿ ಕುಣಿದಿತ್ತು  ದೇವರು ನೋಡಲು   ಮಕ್ಕಳು ಪೂಜೆಗೆ ಬಂದಿತ್ತು  ಬ್ಯಾಗಲ್ಲಿ ಹಣ್ಣು ಕಾಯಿ  ಇರುವುದು ಮಂಗಗಳು ನೋಡಿತ್ತು  ಮಂಗ  ಚಂಗನೆ ಜಿಗಿಯಿತು  ಮಕ್ಕಳ ಬ್ಯಾಗನ್ನು ಕಿತ್ತಿತ್ತು  ಹಿಡಿದು ಕಸಿದು  ಬಾಳೆಹಣ್ಣನ್ನು ತಿಂದಿತ್ತು  ಮಂಗಗಳ ಹಿಂಡು ಮಕ್ಕಳ ಕಂಡು  ದುರುಗುಟ್ಟಿ ನೋಡಿ  ಕಣ್ಣನ್ನು ಬಿಟ್ಟಿತು  ಹಣ್ಣು ತಿಂದ ಬ್ಯಾಗನ್ನು  ತೆಗೆದುಕೊಳ್ಳಲು ಹೋದರೆ  ಮುಸು ಮುಸು ಎಂದು  ಗದರಿತ್ತು ಮಂಗಗಳ ಆಟಕ್ಕೆ  ದೇವಸ್ಥಾನಕ್ಕೆ ಪೂಜೆಗೆ  ಬರುವ ಭಕ್ತರುಗಳಲಿ ಭಯವು ಮನೆ ಮಾಡಿತು ********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -19

Image
  🌹ಅಂಚೆ ಪೆಟ್ಟಿಗೆ🌹 ಸೈಕಲ್ ಹೋಯಿತು  ಬೈಕು ಬಂದಿತು  ನಮ್ಮ ಅಂಚೆಯ  ಅಣ್ಣ ಬೈಕಲ್ಲಿ ಬಂದಿಹನು ಮನೆಯ ಬಾಗಿಲ ತಟ್ಟಿ  ಬೆಲ್ಲನು ಒತ್ತಿ  ಅಂಚೆ ಬಂದಿದೆ  ಎಂದು ಕೂಗಿ ಕರೆದಿಹನು ಖಾಕಿ ಪ್ಯಾಂಟ್, ಶರ್ಟ್  ಕೊರಳಿನ ಚೀಲವು,  ಇಲ್ಲದೆ ಅಂಚೆ ಕೊಡುತಿಹನು  ಅಂಚೆಯ ಹಾಕಲು  ಊರಲ್ಲಿ  ಅಂಚೆ ಪೆಟ್ಟಿಗೆ  ಕಾಣೆಯಾಗಿದೆ  ಅಂಚೆ ಕಾಗದ   ಬರೆಯುವುದು  ಕಡಿಮೆ ಆಗಿದೆ  ಊರ ಮಕ್ಕಳಿಗೆ  ಅಂಚೆ ಅಣ್ಣನ  ನೆನಪು ಹೋಗಿದೆ  ಅಂಚೆ ಅಣ್ಣ ಬಂದಿಹನು  ಚಿಣ್ಣರ ಅಂಚೆ ಅಣ್ಣ  ಬಂದಿಹನು **********ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -18

Image
  🌹ನಮ್ಮ ಅಕ್ಕ 🌹 ಎಲ್ಲರಂತಲ್ಲ ನಮ್ಮ ಅಕ್ಕ  ಇವಳು ಬಾರಿ ಬಲು ಪಕ್ಕ ಇಟ್ಟರೆ ಇವಳು ಆ ಲೆಕ್ಕ  ಮುಗಿಯಿತು ಅಲ್ಲಿಗೆ ರೊಕ್ಕ  ಕೂಡಲು ಬಾರದ ಜಾಣೆ  ಕಳೆಯಲು ಹೊರಟಳು ನಾಕಾಣೆ  ಗುಣಿಸಲು ಇವಳಿಗೆ ಬರೋಕ್ಕಿಲ್ಲ  ಭಾಗಿಸುವುದು ಇವಳಿಗೆ ಗೊತ್ತಿಲ್ಲ  ಸವೆಸಿದಳು ಜೀವನದ ದಾರಿ  ಧೈರ್ಯದಿ ಮುನ್ನುಗ್ಗುವ ನಾರಿ  ಜಗಳಕ್ಕೆ ನಿಂತರೆ ಹೆಮ್ಮಾರಿ  ನೋಡಲು ತುಂಬಾ ವೈಯಾರಿ  ಅಡುಗೆ ಮನೆಯ ಇವಳ ಆಸ್ತಿ  ಸಿಟ್ಟು ತುಂಬಾ ಬಲು ಜಾಸ್ತಿ  ಶಿಸ್ತಲಿ ಆಹಾರ ಮಾಡಿಹಳು  ಎಲ್ಲರ ಹೃದಯ ಗೆದ್ದಿಹಳು  ಎಲ್ಲರಂತಲ್ಲ ನಮ್ಮ ಅಕ್ಕ  ಇವಳು ಬಾರಿ ಬಲು ಪಕ್ಕ ಇಟ್ಟರೆ ಇವಳು ಆ ಲೆಕ್ಕ  ಮುಗಿಯಿತು ಅಲ್ಲಿಗೆ ರೊಕ್ಕ  *********ರಚನೆ ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -17

Image
  🌹ಹುತ್ತದ ಹಾವೊಂದು 🌹 ಊರಿನ ಹೊರಗೆ ನಮ್ಮ  ತೋಟ ಒಂದಿತ್ತು  ತೋಟದ ಬದಿಯ ಮೇಲೆ  ಹುತ್ತವು ಬೆಳದಿತ್ತು  ಹುತ್ತದ ಒಳಗೆ ಗೆದ್ದಲು  ಮನೆಯ ಮಾಡಿತ್ತು  ಇದನ್ನು ನೋಡಿದ ಹಾವೊಂದು  ಹುತ್ತದ ಒಳಗೆ ನುಗ್ಗಿತ್ತು  ಬಿಸಿಲಾ ಬೇಗೆಯ ತಡೆಯಲಾಗದೆ  ಹಾವು ಹೊರಗೆ ಬಂದಿತ್ತು  ಹಾವನ್ನು ನೋಡಿದ ಅಮ್ಮ  ಕೈಯ ಮುಗಿದಿತ್ತು  ಮರದ ಮೇಲಿನ ಮಟ್ಟೆಯೊಂದು ಹಾವಿನ ಮೇಲೆ ಬಿದ್ದಿತ್ತು  ರೊಚ್ಚಿಗೆದ್ದ ಹಾವು ಸಿಟ್ಟಲ್ಲಿ  ಎಡೆಯ ಎತ್ತಿತ್ತು  ನೋಡಲು ಬುಸು ಬುಸು  ಸದ್ದು ಮಾಡಿತ್ತು ಮಚ್ಚರೆ ಇಟ್ಟಿದೆ ಹಾವು  ಎಂದು ಅಮ್ಮ ಹೆದರಿತ್ತು  ಪುಂಗಿ ಊದಲು ಹಾವು  ತಲೆಯ ತೂಗಿತ್ತು  ಹಾವನ್ನು ಹಿಡಿದ ಹಾವಾಡಿಗ ಕಾಡಿಗೆ ಬಿಟ್ಟಿತ್ತು  ಅಮ್ಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂರು ರೂ ಮನಿ ಆರ್ಡರ್ ಮಾಡಿತ್ತು ಮತ್ತೆ ಬರದಿರು ಹಾವೇ ಎಂದು  ಪೂಜೆ ಮಾಡಿತ್ತು  **********ರಚನೆ ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -15

Image
  🌹ನಮ್ಮೂರ ಸಂತೆ 🌹 ಸಂತೆಗೆ ಹೊರಟನು ಶಾಮಣ್ಣ  ಕೈಯಲ್ಲಿ ಹಿಡಿದನು ಬ್ಯಾಗನ್ನು  ಹತ್ತಿದ ಬುಲೆಟ್ಟು ಬೈಕನ್ನು  ಮಾಡಿದ ಬುಡು ಬುಡು ಸೌಂಡನ್ನು  ಕೊಳ್ಳಲು ಹೊರಟನು ತರಕಾರಿ  ಕೊಡಲು ಸಿದ್ದ ವ್ಯಾಪಾರಿ  ಮೂಲಂಗಿ, ಬದನೆ, ಮೆಣಸು  ಕ್ಯಾರೆಟ್, ಬೀಟ್ರೂಟ್, ಆಲೂಗೆಡ್ಡೆ  ಯಾವ ತರಕಾರಿ ಕೊಂಡರು ಇಪ್ಪತ್ತು  ತುಂಬಿದ ಚೀಲವ ಕೊಟ್ಟು ನೂರೈವತ್ತು  ಕೊಂಡನು ಸಂತೆಯಲ್ಲಿ ಕಾರ ಮಂಡಕ್ಕಿ  ಬೈಕಲ್ಲಿ ಬಿಗಿದನು ಚೀಲವ ನೂಕಿ ಸಂತೆಯ ಬಿಟ್ಟು ಹೊರಟ ಶಾಮಣ್ಣ   ಕೇರಿಯ ಬೀದಿಯಲ್ಲಿ ಸಿಕ್ಕ ರಾಮಣ್ಣ  ಊರ ಸಂತೆಯು ಮುಗಿದಾಯ್ತು  ಶಾಮಣ್ಣ ಮನೆಯ ಸೇರಾಯ್ತು  ***********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ-16

Image
  🌹ಅಜ್ಜನ ಕುದುರೆ 🌹 ನಮ್ಮ ಊರಲ್ಲಿ ಅಜ್ಜನು ಸಾಕಿದ ಕುದುರೆ ಒಂದಿತ್ತು  ಬಯಲು ನೆಲದಲ್ಲಿ ಹಸಿರು  ಉಲ್ಲನು ಮೇಯುತ್ತಲಿತ್ತು  ಮೇಯುತ್ತ ಕುದುರೆ ಏಕೋ   ಕುಂಟುತ ಸಾಗಿತ್ತು ಕಾಲಿನ ಗೊರಸಲ್ಲಿ ಕಲ್ಲೊಂದು  ಗಾಯವ ಮಾಡಿತ್ತು  ಸೊಟ್ಟಗೆ ಕುಂಟುವ ಕುದುರೆಯ  ನೋಡಿದ ನಮ್ಮಜ್ಜ  ಔಷಧಿ ತಂದು ಕಾಲಿನಾ  ಗೋರಸಿಗೆ ಹಚ್ಚಿದ ಅಜ್ಜ  ಅಜ್ಜನು ಅತ್ತಿದ ಕುದುರೆ  ಲಗಾಮು ಬಿಗಿ ಹಿಡಿದು  ಓಡಿತು ಕುದುರೆ ನೀರಿನಂತೆ  ಚಂಗನೆ ಮೇಲ್ನಗೆದು ನಮ್ಮ ಊರಲ್ಲಿ ಅಜ್ಜನು ಸಾಕಿದ ಕುದುರೆ ಒಂದಿತ್ತು  ಅಜ್ಜನು ಹಾಕಿದ ಹುರುಳಿ  ಬೀಜವ ದಿನವೂ ತಿನ್ನುತ್ತಲಿತ್ತು  ***********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -14

Image
  🌹ಶಾಲೆಗೆ ಬನ್ನಿ 🌹 ಭೂಮಿಗೆ ನಾವು  ಬಂದಾಯ್ತು  ದೇವರು ವರವ  ಕೊಟ್ಟಾಯ್ತು  ಬನ್ನಿ ಗೆಳೆಯರೇ  ಶಾಲೆಗೆ ಹೋಗೋಣ  ಕನ್ನಡ ಭಾಷೆಯನ್ನು ಕಲಿಯೋಣ ಅಕ್ಷರ ಕಲಿತರೆ  ಬಾಳು ಬೆಳಕು  ಸಾಕ್ಷರ ಆಗದೆ ಹೋದರೆ ಜೀವನ ಹುಳುಕು  ಗುರು ಹಿರಿಯರು  ನಮ್ಮಯ ದೇವರು  ಅಕ್ಷರವೇ ನಮ್ಮಯ  ಮುಂದಿನ ಗುರು  ಒಳ್ಳೆಯ ನಡೆಯನು  ಕಲಿಯೋಣ  ಜಾಣರು ನಾವು ಎಂದು  ಸಾರಿ ಹೇಳೋಣ  ಶಿಕ್ಷಣ ನಮ್ಮ ಬೆನ್ನೆಲುಬು  ಅಕ್ಷರ ನಮ್ಮ ಪಕ್ಕೆಲುಬು  ದೇಶದ ಹಣತೆ ಬೆಳಗೋಣ  ಜ್ಞಾನದ ಬೆಳಕ ಚೆಲ್ಲೋಣ  *********ರಚನೆ ******* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -12

Image
  ಮುದ್ದಿನ ಬೆಕ್ಕು  ನಮ್ಮ ಮನೆಯಲ್ಲಿ  ಅಮ್ಮ ಬೆಕ್ಕು ಸಾಕಿತ್ತು  ಬೆಕ್ಕು ನೋಡಲು  ಹುಲಿಯಾ ರೀತಿ ಕಂಡಿತ್ತು  ಬೆಕ್ಕಿಗೆ ಹಸಿವು ಆಗಿ  ಮಿಯಾವ್ ಮಿಯಾವ್ ಎಂದಿತ್ತು  ಹಿಡಿಯಲು ಹೋದರೆ ಅದನ್ನು  ನೆಗೆದು ಬರುತ್ತಿತ್ತು  ಹಾಲಿನ ಬಟ್ಟಲ ತುಂಬ  ನೊರೆ ಹಾಲು ತುಂಬಿತ್ತು  ಹಾಲನ್ನು ಕುಡಿದ ಬೆಕ್ಕು  ಕುಣಿದು ಆಡಿತ್ತು  ಮನೆಯಲ್ಲಿ ಒಂದು ಇಲಿಯು  ಓಡಾಡಿ ಕೊಂಡಿತ್ತು ದವಸಾ ಧಾನ್ಯ ತುಂಬಿದ  ಕೋಣೆಯಲ್ಲಿ ಇರುತ್ತಿತ್ತು ಇಲಿಯು ಬಂದು ದವಸದ  ಧಾನ್ಯ ಬಗೆದಿತ್ತು  ಬೆಕ್ಕಿನ ಕಣ್ಣು ಕಪ್ಪು ಇಲಿಯಾ  ಮೇಲೆ ಬಿದ್ದಿತ್ತು  ಬೆಕ್ಕು ಇಲಿಯನು ಮುಂದೆ  ಹೋಗಲು ಬಿಟ್ಟು  ಅದರ ಬಾಲ ಹಿಡಿದು  ಆಟವಾ ಆಡಿತ್ತು  ಬೆಕ್ಕಿಗೆ ಚೆಲ್ಲಾಟ ಇಲಿಗೆ . ಪ್ರಾಣ ಸಂಕಟ ಕಾದಿತ್ತು  ಇಲಿಯ ತಿಂದ ಬೆಕ್ಕು  ಬಂದು ಪಕ್ಕದಿ ಮಲಗಿತ್ತು  **********ರಚನೆ ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -13

Image
  🌹 ಆಕಾಶದಿ ಚಂದಿರ 🌹 ರಾತ್ರಿಯ ವೇಳೆಯಲ್ಲಿ ಆಕಾಶದಿ  ಚಂದಿರ ಮೂಡಿಹನು  ನಕ್ಷತ್ರಗಳ ಬಾನಿನಲ್ಲಿ  ಹೊಳೆಯುತ್ತ ಕಂಡಿಹನು  ನಾನು ಓಡಲು ಅವನು  ಮುಂದೆ ಓಡಿಹನು  ನೀರಿನ ಗುಂಡಿಯಲ್ಲಿ  ಸುಂದರವಾಗಿ ಕಂಡೀಹನು  ಯಾಕೋ ಏನೋ ಒಮ್ಮೊಮ್ಮೆ  ಚಂದಿರ ತುಂಡಾಗಿ ಕಂಡಿಹನು  ಯಾರೋ ದ್ವೇಷದಿ ಅವನ ಕಡಿದು ಕೊಂದಿಹರು  ಪೂರ್ಣ ಚಂದಿರ ಆಗಸದಿ ಶುಂಠಿ ಪೇಪರ್ ಮೆಂಟ್ ಅಂತೆ ಕಂಡಿಹನು  ಕೈಯಾಚಾಚಿದರೇ ನಾನು  ಸಿಗದೇ ದೂರದಿ ನಗುತಿಹನು  **********ರಚನೆ ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಕೂಸು ಮರಿ

Image
  ಎದೆಗೊತ್ತಿ ಕೊಂಡು ಮುದ್ದಾಡಿದ ಅಮ್ಮ ತಲೆಮೇಲೆ ಎತ್ತಿಕೊಂಡು ತಿರುಗಾಡಿದ ಅಪ್ಪ ಕೂಸುಮರಿ ಮಾಡಿ ಕುಣಿದಾಡಿದ ಅಣ್ಣ ನೆನಪುಗಳು ಇಲ್ಲಿ ಬದುಕು ಚೆಲ್ಲಾಪಿಲ್ಲಿ ಬೆಳೆದು ನಿಂತಿರುವೆ ನಾನು ಕನ್ನಡಿಯು ಏಳುತಿದೆ ಕಣ್ಣೆದುರು ಕವನ ನಾಚುತ್ತಿದೆ ಏಕೊ ನೋಡಿ ಪ್ರತಿಬಿಂಬವ ನಯನ ಬದುಕು ಬಿಡಿಸದ ಒಗಟು ಮನವು ಮಾತಲಿ ಒರಟು ಕಾಲವು ಕಣ್ಮರೆಯಾಗುತ್ತಿದೆ ಆಡಲು ಬಿಟ್ಟು ನನ್ನ ದೇಹವು ಬಾಗುತಿದೆ ಕನಸ್ಸುಗಳ ರೆಕ್ಕೆ ಮುರಿದಂತೆ ಇನ್ನ ಆಸೆಗಳ ಸುಳಿ ನುಂಗುತಿದೆ ನನ್ನ ಜೀವನವನ್ನ ಜೀವನದ ಪಯಣದಿ ಹೊರಟ ದಾರಿ ಹೋಕ ನಾನು ಕಷ್ಟಗಳ ಸರಮಾಲೆಯಲಿ  ಕುತ ಮೂಖ ನಾನು ಭಾವನೆಗೆ ಬೆಲೆ ಕಟ್ಟಿದೆ ಸಂಬಂಧಗಳ ನೆಲೆ ಎಲ್ಲಿದೆ ದಿನವೂ ಸಾಗುತಿದೆ ದೂರ ಕ್ಷಣದ ಮೌನ ಬಲು ಬಾರ ನೆನಪುಗಳು ಇಲ್ಲಿ ಖಾರ ಹೃದಯ ಬಡಿಯುತಿದೆ ಜೋರ ಬದುಕು ಬೇಕು ಬೇಡಗಳ ಸಾರ ಬದುಕುಬೇಕು ನಾವು ಮರೆತು ನೋವಿನ ತೀರ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಕ್ಕಳ ಗೀತೆ -11

Image
  🌹ಗರಿ ಗರಿ ನವಿಲು 🌹 ಗರಿ ಗರಿ ನವಿಲೇ ಗರಿ ಗರಿ ನವಿಲೇ  ಏನಿದು ನಿನ್ನಯ ಬಣ್ಣ  ಮಳೆಯೂ ಬಂದರು ಬಿಸಿಲು ಇದ್ದರೂ  ಮಾಸದು ಗರಿಯ ಬಣ್ಣ  ಗೆಳೆಯನು ಕೊಟ್ಟ ನವಿಲು ಗರಿಯ  ಪುಸ್ತಕದೀ ನಾ ಮುಚ್ಚಿಟ್ಟೆ  ನಾಲ್ಕು ದಿನಗಳು ಕಳೆದ ಮೇಲೆ  ನಿನ್ನಯ ಗರಿಗೆ ನಾ ಮುತ್ತಿಟ್ಟೆ ಅಂದದ ಹುಡುಗಿ ಚೆಂದವ ತೋರಿ ಕೇಳಿದಳು ನವಿಲು ಗರಿಯ ಓಗೆ ಹುಡುಗಿ ಕೊಡೇನು ನಾನು  ನವಿಲು ಗರಿ ಹಾಕುವುದಿಲ್ಲ ಮರಿಯಾ  ಗರಿಯ ನವಿಲು ಮರಿಯಾ ಹಾಕದೆ  ಮೊಗದಲ್ಲಿ ಇರಲಿಲ್ಲ ಕಳೆ  ಹೊಲದಲ್ಲಿ ನವಿಲು ಗರಿ ಬಿಟ್ಟು  ಹಾಡಿತು ಹೊಸ. ಬೆಳೆ ನವಿಲೂ. ರೆಕ್ಕೆ ಬಡಿದು ಹಾರಿತು ಆಗಸಕ್ಕೆ  ಗರಿಯೂ ಉದುರಿತು ನೆಲಕೆ ಹಾಯ್ದ  ಗರಿಯನು.  ದೇವರಿಗೇ ಕೊಟ್ಟೆ  ನನ್ನಯ ಮನವನು ನವಿಲಿಗೆ ಬಿಟ್ಟೆ  ಗರಿಗರಿ ನವಿಲೇ ಗರಿ ಗರಿ ನವಿಲೇ  ಏನಿದು ನಿನ್ನಯ ಬಣ್ಣ  ಮಳೆಯೂ ಬಂದರು ಬಿಸಿಲು ಇದ್ದರೂ  ಮಾಸದು ಗರಿಯ ಬಣ್ಣ  ***********ರಚನೆ ******** ಡಾ. ಚಂದ್ರಶೇಖರ್,ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -10

Image
  🌹ನಮ್ಮ ದೇಶ🌹 ನಮ್ಮ ಉಸಿರು ನಮ್ಮ ದೇಶ ಏತಕ್ಕಾಗಿ ಹಸಿರು ದ್ವೇಷ  ದ್ರೋಹ ಮನವ ತುಂಬಿ  ನಂಬಿದವರ  ಚುಚ್ಚಿ ಕೊಂದಿದೆ  . ಕಪ್ಪು ,ಕೆಂಪು ,ಮರಳು, ಮಣ್ಣು  ಜಾತಿಯೆಂಬ ವಿಷದ ಉಣ್ಣು  ನಮ್ಮ ನಾಡ ಚುಚ್ಚಿ  ತಿವಿದಿದೆ  ಸಾವ ಮೋಡ ಕವಿದಿದೆ  ಭವಿಷ್ಯದ ಎಡೆಗೆ ಚಿಂತೆ ಏಕೆ  ಈ ದಿನದ ಬದುಕು ಸಾಕೇ ಬಾಳ  ಹೊಳೆಯಲಿ  ಈಜಲು  ಜೀವದ ನದಿಯ ದಾಟಲು  ನೆಲ ,ಜಲ ,ಭಾವ, ಭಾಷೆ ನಾಡು ಕಲೆ., ಬಣ್ಣ ,ವೇಷ  ಉಸಿರು ತುಂಬಾ ತುಂಬಿದೆ  ನೂರು ಕಥೆಯ ಹೇಳಿದೆ  ಮೈಕೊಡವಿ ಮುಂದೆ ಸಾಗು  ಪ್ರೀತಿಗಾಗಿ ತಲೆಯ ಬಾಗು  ನಾಡ ಸಮೃದ್ಧಿಗಾಗಿ ದುಡಿ  ಕಟ್ಟು ನೀನು ಪ್ರೇಮದ ಗುಡಿ ***********ರಚನೆ ******** ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಶಿಶು ಗೀತೆ -9

Image
🌹 ಎದ್ದು ಬಿದ್ದ ಕಂದಮ್ಮ 🌹 ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ  ನಿನ್ನ ನೋಟ ಮನವ ಕಲಕಿತು ಹಾಗೆ  ಸುಮ್ನೆ  ಹೆಜ್ಜೆಯ ಮೇಲೆ ಹೆಜ್ಜೆ  ಕುಣಿಯಿತು ನಿನ್ನ ಗೆಜ್ಜೆ  ನಿನ್ನ ನಡುಗೆ ನೋಡಿ  ಮನಕೆ ಆಯ್ತು ಮೋಡಿ  ಎಡವಿ ಬಿದ್ದು ನೀನು  ಗಾಯವು ಆಯಿತು ತುಟಿಗೆ  ಅಮ್ಮ ಎಂದು ನೀನು  ಕೂಗಿ ಕರೆದೆ ಕೊನೆಗೆ  ಎಡವೇ ಬಿದ್ದರೂ ಛಲವ ಬಿಡೆ  ಮತ್ತೆ ಎದ್ದು ಹಠವ ಮಾಡಿಹೆ  ಪ್ರೀತಿಯಲ್ಲಿ  ಅಮ್ಮ ಎಂದಿಹೆ  ನೋವನ್ನು ನೀನು ಮರೆತು ಓಡಿಹೆ ಕಣ್ಣ ಹನಿಯು ಜಾರಿ ಬಿತ್ತು  ಕೆನ್ನೆಯ ಮೇಲೆ  ಕರಗಿತು  ಮುದ್ದು ಮೊಗವು ನಗುತಲಿತ್ತು  ತುಟಿಯ ಮೇಲಿನ ಗಾಯ ಕಾಣುತ್ತಿತ್ತು ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ  ನಿನ್ನ ನೋಟ ಮನವ ಕಲಕಿತು ಹಾಗೆ ಸುಮ್ಮನೆ  ********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ