Posts

Showing posts from September, 2023

ಭಾವ ಗೀತೆ -25

Image
  🌹 ಒಲವಿನ ಸವಿ ನೋಟ 🌹 ನಿನ ಒಲವಿನ ಸವಿನೋಟಕೆ ಸೋತವನು ನಾನಾದೆ ನಿನ ಹೃದಯದ ಅರಮನೆಯ ಬಯಸಿ ಕುರುಡಾದೆ //ಪಲ್ಲವಿ// ಲತೆಯಲ್ಲಿರೋ ಮೊಗ್ಗೆಲ್ಲವೂ ಸವಿ ಕನಸಿಗೆ ಹೂವಾಗಿ ಮುತ್ತಿಕ್ಕಲು ಮುಂದಾದರೆ ಕನಸೆಲ್ಲವೂ ಹಾವಗಿ ಸಂಪಿಗೆಯ ಸುವಾಸನೆ ನಲ್ಲೆಯ ಮೂಡಿ ತುಂಬ ಹೂವು ಜಾರಲು ನನ್ನೊಳಗೆ ಅವಳ ನಗುವೇ ಪ್ರತಿಬಿಂಬ ಈ ಮೋಹಕ ಬಲು ಪ್ರಾಯವು ಜೇಡರ ಬಲೆಯಂತೆ ಬಿದ್ದರೆ ತಾನೇ ತಿಳಿಯುವುದು ಚಕ್ರವ್ಯೂಹದಿ ತಾ ಬಲಿಯಾದಂತೆ *********ರಚನೆ******** ಡಾ.ಚಂದ್ರಶೇಖರ್ ಸಿ.ಹೆಚ್l

ಭಾವ ಗೀತೆ -24

Image
         🌹 ನಾ ಕುರುಡು🌹 ನಿನ್ನ ಕಣ್ಣ ನೋಟವು ಕಾಡಿತು ನಲ್ಲೆ ನೀನು   ಬರದೇ ಬಾಳಲ್ಲಿ ಕುರುಡಾದನಲ್ಲೆ ನಿನ್ನ ಮೌನದ ಮಾತು ನನ್ನ ಹೃದಯವಾ ತಾಗಿತು         ನೀ ಇರದೆ ಜಗ ಕುರುಡು        ನಿನಗಾಗಿ ಹೃದಯ ಬರಡು. //ಪಲ್ಲವಿ// ನಿನ್ನ ಮನಸು ನನ್ನ ಏಕೆ ಬಯಸಿತು ಕಣ್ಣ ರೆಪ್ಪೆಯಲ್ಲಿ ಒಲವ ಕಂಬನೀ ಮಿಡಿಯಿತು ಇದುವೇ ಏನು ಪ್ರೇಮಪರ್ವ ಅಂತರಂಗದಲ್ಲಿ ಮೊಳೆತಗರ್ವ   ನೀ ಇರದ ಬದುಕು ಏನ್ ಚಂದ   ನಿನ್ನ ಒಲವೇ ನನಗೆ ಆನಂದ ನಿನ್ನ ಪಾದ ತಾಕಿ ಹೃದಯ ಮಿಡಿಯಿತು ಎಲ್ಲಾ ದಿಕ್ಕುಗಳು ನನ್ನ ಕೂಗಿ ಕರೆಯಿತು ಮನದ ಆಸೆ ಮನಸಾರೆ ಸೇರ ಬಯಸಿತು ನಾವಿಕನಿಲ್ಲದ ದೋಣಿ  ದಡ ಹೇಗೆ ಸೇರಿತು     ಓ ನನ್ನ ಚೆಲುವೆ     ಮನದ ನಗುವ ಒಲವೇ ನೀ ನಡೆದ ದಾರಿ ತುಂಬ ಹೂವು ಕಾಲವೊಂದು ನೆನೆದಿದೆ ಮಾಯದ ನೋವು ನೋವು ಎದೆಯ ತಾಕಿ ಮಾಡಿತು ಗಾಯ ಎದೆಯ ಬಡಿತ ಕೂಗಿತು ಓ ಛಾಯಾ         ಓ ನನ್ನ ಪ್ರೀತಿ ಚಿನ್ನ ಹೃದಯಕ್ಕೆ ಇಟ್ಟೆ  ಒಲವ ಗುನ್ನ ತುಟಿಗೆ ತುಟಿ ಸೇರಿ ಹಾಲು ಜೇನು ಹೀರುವಂತೆ ಕಾಡದೇಯೆ ಒಮ್ಮೆ ಬಾರೆ ಮರೆತು ನೂರು ಚಿಂತೆ    ಬೇಡಿದೆ ನನ್ನ ಅಂತರಂಗ   ಮಾಡು ನನ್ನ ಒಮ್ಮೆ ಸಂಗ ***********ರಚನೆ ******* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವಗೀತೆ -23

Image
  🌹 ಕುಣಿಯು ಬಾ ನವಿಲೇ🌹 ಕೂಗು ಬಾ ಕೋಗಿಲೆ ಕುಹೂ ಕುಹೂ ಎಂದು ರೆಕ್ಕೆ ಪುಕ್ಕ ಬಿಚ್ಚಿ ನವಿಲೇ ಕುಣಿಯು ಬಾ ಬಂದು  //ಪಲ್ಲವಿ// ಹುಣ್ಣಿಮೆಯ ಚಂದ್ರ ನೋರೆ ಹಾಲ ಬೀಳುಪು ನಕ್ಷತ್ರಗಳ ಸಾಲು ಸೀರಿಯಲ್ ಸೆಟ್ ಅಂತೆ ಹೊಳಪು ಸೂರ್ಯನ ಕೆಂಪು ಬಣ್ಣ ಸುಡುತ್ತಿದೆ ಜಗವ ಮೋಡದ ಮಳೆಹನಿಗೆ ತೋರು ನಿನ್ನ ಮೊಗವ ಸಾಗರದ ಅಲೆಯೇಕೆ   ನೀಲಿಯ ಬಣ್ಣ ಬೀಸುವ ಗಾಳಿಯು ಸುಯ್ ಎಂದು ಕೂಗಿತಣ್ಣ ಹಸಿರೇ ಉಸಿರು ಇದು ಪ್ರಕೃತಿಯ ಸೊಬಗು ಪರಿಸರವ ಕವಿತೆ ಮಾಡಿ ಹಾಡಿದರೆ ಮೆರಗು ***********ರಚನೆ ******* ಡಾ.ಚಂದ್ರಶೇಖರ್ ಸಿ ಹೆ ಚ್

ಭಾವ ಗೀತೆ -22

Image
  🌹 ಹಾಡು ಬಾ ಕೋಗಿಲೆ🌹 ಮಾಮರದ ಕೋಗಿಲೆಯೇ ಹಾಡು ಬಾ ನೀನು ರಾಗಕ್ಕೆ ತಾಳವಾಗಿ ಕುಣಿಯುವೆ ನಾನು // ಪಲ್ಲವಿ// ಋತುಗಳು ನಿನ್ನ ಕರೆದು ನಲಿಯುತ್ತಿವೆ ನೋಡು ಒಮ್ಮೆ ನೀ ಹಾಡಬಾರದೆ ಪ್ರಕೃತಿಯ ಹಾಡು ನಿನ್ನ ಧನಿಗೆ ಮಾಮರಗಳು ಚಿಗರಿ ಹೂವಾಗಿವೆ ಪ್ರಕೃತಿಯ ಮಡಿಲಲ್ಲಿ ಭಾವ ಬೆಳಗಿವೆ ಭದ್ರೆ ಹರಿಯುತಿಹಳು ವನದಿ ಜುಳು ಜುಳು ಎಂದು ಮಾರುತಗಳು ಗಾಳಿ ಬೀಸಿವೆ  ತಣ್ಣಗೆ ಸುಯ್ ಸುಯ್ ಎಂದು ಹಸಿರು ಉಸಿರಾಗಿದೆ ನಿನ್ನ ಮಧುರ ಸ್ವರಕ್ಕೆ ಮಾತು ಮೌನವಾಗಿದೆ ನಿನ್ನ ಮಾಧುರ್ಯಕ್ಕೆ ಶೃಂಗಾರ ಕಾವ್ಯ ಹೇಳು ಬಾರೆ ನಿನ್ನ ಕಂಠದಿ ಕೂಗಿ ಪ್ರೀತಿಗೂ ಸ್ವರ ಉಂಟು ಎಂದು ತೋರು ಬಾರೆ ನವರಸಗಳು ರಾಗವಾಗಿ ಹೊರ ಹೊಮ್ಮಲಿ ಕೋಗಿಲೆ ಬಾವದಿ ಹಾಡೊಂದು ಗುನುಗು  ಬಾ ಕೋಗಿಲೆ *********ರಚನೆ ******** ಡಾ. ಚಂದ್ರಶೇಖರ್ ಸಿ ಹೆ ಚ್

ಭಾವ ಗೀತೆ -21

Image
      🌹 ಕಾಡುವ ನೋಟ🌹 ಮೋಹ ಎನ್ನಲೆ  ದ್ರೋಹ ಎನ್ನಲೇ ನಿನ್ನ ಕಾಡುವ ನೋಟಕ್ಕೆ ಪ್ರಣಯ ಎನ್ನಲೇ ಪ್ರಳಯ ಎನ್ನಲೇ ಪ್ರೀತಿ ವಯಸ್ಸಿನ ಸೆಳೆತಕೆ // ಪಲ್ಲವಿ// ಓರೇಗಣ್ಣಲ್ಲಿ ಮೋಡಿ ಮಾಡಿದೆ ರೆಪ್ಪೆ ಅಂಚಲಿ ಸಂಚು ಮಾಡಿದೆ ಗೆಜ್ಜೆ ಸದ್ದಿಗೆ ಹೆಜ್ಜೆ ಕುಣಿದಿದೆ ನಾಟ್ಯ ಬೇಡಿದೆ ಮನವು ಮೌನದ ಕವಿತೆಯು ಗೀತೆಯಾಗಿದೆ ಹಾಡು ಬಾರೆ ನನ್ನೊಡತಿ ನಿನ್ನ ಪ್ರೀತಿಗೆ ಮೊಗದ ಭಾವಕೆ ಸೆಳೆತ ಎನ್ನಲೇ ನನ್ನ ಅರಸಿ ಬಿಂಕದ ನಡುಗೆ ತೋರಿ ಸಲುಗೆ ಹೃದಯ ಕದ್ದೆ ಏಕೆ ಪ್ರಣಯದ ಹೊಸಿಲಲಿ ಮನವ ಕಲಕಿ ಒಲವಲಿ ತಣಿಸು ಬಾ ನನ್ನಾಕೆ ಪ್ರಳಯದ ಸೆಳೆತವೋ ಪ್ರಣಯದ ಸೆಳೆತವೊ ಅಮಲು ತಂದಿದೆ ನನಗೆ ನಿನ್ನ ಬಲೆಯಲ್ಲಿ ಬಿದ್ದ ನನಗೆ ಭಾವಗೀತೆಯ ಹೂ ನಗೆ ********ರಚನೆ ******* ಡಾ.ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ- 20

Image
        🌹 ಬಾರೆ ಸನಿಹ🌹 ಹುಡುಗಿ ಬಾರೆ ನೀ ಸನಿಹ ನೀನು ಇರದೆ ಏಕೋ ವಿರಹ ನಿನ್ನ ನೋಡಿ ಬರೆದೆ ಕವಿತೆ ನನ್ನ ಪ್ರೀತಿ ಮಾಡೆ  ವನಿತೆ //ಪಲ್ಲವಿ// ನನಗೆ ಹೇಳು ನಿನ್ನ ಇಷ್ಟ ತಂದುಕೊಡುವೆ ಆದರೂ ಕಷ್ಟ ನನಗೇನಿಲ್ಲ ತುಂಬಾ ನಷ್ಟ ನನ್ನ ಮಾತು ಬಹಳ ಸ್ಪಷ್ಟ ನನ್ನ ಪ್ರೀತಿ ಹಿಮಾಲಯದಂತೆ ಕರಗಿ ನೀರಾದರೂ ನಿನ್ನ ಚಿಂತೆ ಬೇಡ ನಿನಗೆ ಅಂತೆ ಕಂತೆ ಸಂತೆಯಲ್ಲಿ ಕೂಡ ನಿನ್ನದೇ ಚಿಂತೆ ಬದುಕಿ ಬಾಳೋ ಹುಡುಗಿ ನೀನು ಮಾಡಬೇಡ ಯೋಚನೆಯನ್ನು ಹುಡುಗಿ ಬೇಡುವೇ ದೇವರಿಗೆ ಹರಕೆ ಬಾಳಲಿ ಕವಿತೆಯಾಗು ನನ್ನ ಸ್ವರಕ್ಕೆ ಬದುಕು ಒಂದು ಸುಂದರ ಕಡಲು ಸೇರು ನನ್ನ ಪ್ರೀತಿಯ ಮಡಿಲು ಕಾದಿರುವೆ ನಿನಗಾಗಿ ನಾನು ಬೇಕು ಹೇಳು ಮತ್ತಿನ್ನೇನು **********ರಚನೆ ******* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -19

Image
  🌹 ಪರೀಕ್ಷೆ ಬರೆಯುವ ಹುಡುಗ🌹 ನಾಳೆ ಇವನ ಪರೀಕ್ಷೆ ಅಂತೆ ಮುಂಜಾನೆದ್ದು ದೇವರ ನೋಡಿ ಅಣೆಯಲ್ಲಿ ಕುಂಕುಮದ ಮೊಡಿ ಕಿವಿಯ ತುಂಬಾ ಹೂವ ನೋಡಿ ಮೌನವಾಗಿ ನಡಿತಾ ಇರೋ ಹೈದ ಯಾರಣ್ಣ....... ಇವನು ಏನು ಮಾಡ್ಕೊಂಡವನಣ್ಣ  //ಪಲ್ಲವಿ// ( ಇವನು ವಿದ್ಯಾರ್ಥಿ ಆಗಿರ್ಬೋಹುದಾ  ಪರೀಕ್ಷೆ ಬರೆಯಲು ಹೊರಟಿರಬಹುದಾ) ಕಾಲೇಜ್ ಒಳಗೆ ಕಾಲಿಟ್ಟು ಬೆಂಚ್ ಮೇಲೆ ಕೂತ್ಬಿಟ್ಟು ಉತ್ತರ ಪತ್ರಿಕೆ ಮೇಲೆ ಕೈಯಲ್ಲಿ ತುಟಿಯ ಮುಟ್ಟಿಕೊಂಡು ಮತ್ತೆ ಎದೆಗೆ ಒತ್ತಿಕೊಂಡು ಮಾಡಿದ್ದೇನೆಣ್ಣ......... ಇವನ ಮಂತ್ರ ಕಾಣಣ್ಣ  ( ದೇವರೇ ಬಂದು ವರವ ಕೊಟ್ನಾ ದೇವರು ಬಿಟ್ರೆ ಇವನು ಕೆಟ್ನಾ) ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಉತ್ತರ ಪತ್ರಿಕೆ ಹಿಡಿದುಕೊಂಡು ಹಾಳೆಯಲ್ಲಿ ಬರಿತಾವ್ನೆ ನೋಡಣ್ಣ ನಾನು ಬಡವ ದಯವಿಟ್ಟು ಪಾಸ್ ಮಾಡಿ ಬರೆಯುತ್ತಿರುವ ಬಂಟ ಇವನಣ್ಣ ( ಶಿಕ್ಷಕರ ಮರಳು ಮಾಡುತ್ತಾವನೆ  ಅಣೆಬರಹ ಹೊಣೆ ಮಾಡ್ತಾವ್ನೆ) *******ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -18

Image
  🌹 ನೀ ನನ್ನ ಮನದರಸಿ 🌹 ನೀ ನನ್ನ ಮನದರಸಿ ಮನದಾಸೆ ನೀ ತಿಳಿಸಿ ಹೃದಯವು ನಿನ್ನ ಬಯಸಿ ಈ ಬದುಕಲಿ......... ಮತ್ತೇನಿದೆ...... ನುಡಿ ಎನ್ನ ಚೆಲುವೆ.  //ಪಲ್ಲವಿ// ಆಗಸದೆ ನಿನ್ನ ಅಲೆದಾಟ ಕಾರ್ಮೋಡದಿ ನಿನ್ನ ಸುಳಿದಾಟ ಮಳೆ ಬೋರ್ಗರೆದು ಬರುವಾಗ ಚುಂಬಿಸಿದಂತೆ........ ಇಳೆಗೆ...... ಅಪ್ಪಿ ನಿನ್ನ ಬಾಹುವಿನಲ್ಲಿ ಮುತ್ತಿಟ್ಟು ನೀ ಹೃದಯ ಸೋಕಲು ನಿನ್ನ ನುಡಿ ನನ್ನ ಮನ ತಾಕಲು ಭಾಗ್ಯವು ನನ್ನರಸಿ ಬಂದಂತೆ ಮರೆಯಿತೇಕೋ........ ಕಾಲ...... ಬದುಕ  ಬಂಧನದಲಿ ಪ್ರತಿದಿನವೂ ನಿನ್ನದೇ ಧ್ಯಾನ ಮರೆತು ನೆನೆದೆ ಮೌನ ನೀನಾದರೆ ಒಲವಗಾನ ಹಾಡುವೆ........ ಉಸಿರಾಡುವೆ..... ಈ ಪ್ರೀತಿ ಅಮರ ಎಂದು ********ರಚನೆ********** ಡಾ.ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -17

Image
  🌹 ನಲ್ಮೆಯ ಗೆಳತಿ 🌹 ನನ್ನ ನಲ್ಮೆಯ ಗೆಳತಿ ಮನದಲ್ಲಿ ನೀ ಭಾವವಾದೆ ಉಸಿರಲ್ಲಿ ನೀ ಹೆಸರಾದೆ ಬರೆದ ಪದದಿ ನೀ ಕವಿತೆಯಾದೆ //ಪಲ್ಲವಿ// ನಿನ್ನ ಕೂಗಿ ಬಳಿ ಬರಲು ನನ್ನಿಂದ ನೀ ದೂರದೆ ಸುಡುತ್ತಿದೆ ವಿರಹ ಬರೆದ ಹಣೆಬರಹ ಜೀವನ ಶೃತಿಯ ಸ್ವರಹ ಕವನ ನೀನು ಕವಿಯು ನಾನು ಇನ್ನೇನು ಮತ್ತೆ ನನಗೆ ನೀನು ನಿನ್ನಯ ಪ್ರೀತಿ ತಂತು ಹೊಸಭೀತಿ ಓಲವಲ್ಲಿ ನಾ ಹೇಗೆ ನಗಲಿ ನಿನ್ನನು ಬಿಟ್ಟು ಪ್ರೀತಿ ಕದ ತಟ್ಟಿ ಒಲವಿನ ನೆಲೆ ನನ್ನಲ್ಲಿ ಚಿಗುರುತೇಗೆ ಎದೆಯ ಬಡಿತ ನೀನು ಕನಸಿನ ರಾಣಿ ನೀನು ಮನದ ಮಿಡಿತ ನೀನು ಹೃದಯದ ತುಡಿತ ನೀನು  ಜಾತಿಗಳ ಜೊತೆಯಲ್ಲಿ ನಾವು ಬೆಂದು ಪ್ರೀತಿಯ ರೀತಿ ನೀತಿ ನಮ್ಮ ತಿಂದು ಜಗದ ಮುಂದೇ ನಾವು ಬಾಗಬೇಕೆ ನೋವಲು ತಲೆಬಗ್ಗಿಸಿ ನಾವು ನಡೆಯಬೇಕೆ *********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ-16

Image
  🌹 ಮಧುಚಂದ್ರಕ್ಕೆ ಬಾರೆ🌹 ಮಧುಚಂದ್ರಕ್ಕೆ ಬಂದ ಮೇಲೆ ಗೆಳತಿ ನೀ ಸಿಹಿ ಜೇನ ಜೊಲ್ಲೆ ವಸಂತ ಮಾಸ ಚಿಗುರಿದ ಮೇಲೆ ಕಾಯಿ ಹಣ್ಣಾಗುವುದ ಬಲ್ಲೆ //ಪಲ್ಲವಿ// ಹರಿವ ನದಿಯು ಮುಂದೆ ತಾ ಓಡುತಾ ಸೇರಿ ತೇಕೆ ಕಡಲನು ಕಡಲ ಅಲೆಯು ದಡವ  ತಾಕಿ ಮತ್ತೆ ಬಂತು ತಿರುಗಿ ನೋಡಲು ಬಯಸಿ ಬಂದ ನನ್ನ ನಲ್ಲೆ ಪ್ರೀತಿ  ಮುತ್ತು ಒಮ್ಮೆ ಕೊಡಲೆ ವಿರಹ ಒಂದು ಒಲವ ಜ್ವರವು ಚಂದ್ರನಿಗೂ ಕೂಡ ಪ್ರೀತಿ ಸ್ವರವು ಹೃದಯ ತಾಕಿ ಮನವ ಕಲಕಿ ಮನಸ್ಸು ಏಕೋ ಮಾಗಿದೆ ಜೊತೆಯಾಗಿ ಇರಲು ನನ್ನ ನಲ್ಲೆ ಬಾಳಿನ ಸೋಲು ನಾ ಗೆಲ್ಲ ಬಲ್ಲೆ ಎಂದು ಮನವು ಕೂಗಿದೆ  **********ರಚನೆ********** ಡಾ.ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -15

Image
  🌹 ಕಾರಣವ ಯಾರಿಗೆ ಕೇಳಲಿ🌹 ಕಡಲು ನೀಲಿ ಆದರೇನು ಕುಣಿವುದೆನ್ನ ಮನವು ನೀಲಿ ಅಲೆ ಬಂದು ಹೋಗಿ ತೂಗಿತೆನ್ನ ಹಡಗು       ನೀರಿಗೇಕೆ ಹರುಷವು       ಅಡಗಿಗೇಕೆ ಭಯವು ಕಾರಣವ ಯಾರಿಗೆ ಕೇಳಲಿ?  //ಪಲ್ಲವಿ// ಬಿಳಿಯ ಮೋಡ ಓಡುತಿರಲು ನೋಡಲೇಷ್ಟು ಸುಂದರ ಮೂಡಡಿಕ್ಕಿ ಒಡೆದು ಮಳೆ ಹನೀ ಬಂತು ತುಂತುರ        ಮೋಡಕೇನು ಹರುಷವು        ಮಳೆ ಹನಿ ಏಕೆ ಭಯವು ಕಾರಣವ ಯಾರಿಗೆ ಕೇಳಲಿ? ಹಕ್ಕಿಗಳು ರೆಕ್ಕೆ ಬಿಚ್ಚಿ ನೀಲಿ ಆಕಾಶಕ್ಕೆ ಹಾರಿವೆ ಗೂಡಿನಲ್ಲಿ ಮೊಟ್ಟೆ ಇಟ್ಟು ಜೀವಕ್ಕಾಗಿ ಕಾದಿವೆ          ಹಾರಲೇನು ಹರುಷವು         ಮೊಟ್ಟೆ  ಜೀವದ ಭಯವು ಕಾರಣವ ಯಾರಿಗೆ ಕೇಳಲಿ? ತಂಬೂರಿ ತಂತಿ ಮೀಟಿದಾಗ ಸಂಗೀತದ ಹೊನಲು ಪ್ರೀತಿ ಬಂದ ಹೃದಯದಿ ಮನಸ್ಸು ಏಕೋ ಕಡಲು            ನಾದಕೇನು ಹರುಷವು           ಮನಸಲೇನು ಭಯವು ಕಾರಣವ ಯಾರಿಗೆ ಕೇಳಲಿ? ಮನದಿ ಭಾವಗೀತೆ ಮೂಡಿ ಕವಿಯು ನಕ್ಕುನಲ್ಲಿವನು ಗೀತೆಯ ವ್ಯಥೆಯ ನೋಡಿ ಕೇಳುಗ ಬಾವುಕನಾದನು         ಕವಿಗೇನು ಹರುಷವು        ಕೇಳುಗನಿಗೆಕೆ ಭಯವು ಕಾರಣವ ಯಾರಿಗೆ ಕೇಳಲಿ? **********ರಚನೆ******** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -14

Image
  🌹 ನಗು ನೀ ಬೇಕು🌹 ನಗು ನೀನು ಬೇಕು ಬಾಳಿಗೆ ನನ್ನ ಹೃದಯದ ಮಲ್ಲಿಗೆ ನೀ ಓಲವ ದೀವಿಗೆ ನನ್ನ ಬಾಳ ಗೆಲುವಿಗೆ //ಪಲ್ಲವಿ// ನನ್ನವಳ ಸೆರಗಿನಲ್ಲಿ ಹಸಿರುನೆರಿಗೆ ಚೆಲುವಿನಲ್ಲಿ ಮನವ ಕೂಗಿ ಕರೆವಾಗ ಗಾನ ಕೋಗಿಲೆಯ ದನಿಯಾಗಲಿ ಬದುಕು ಬಳಲಿ ಬೆಂಡಾಗಿ ಅಳಲು ಬಂದು ಜೊತೆಯಾಗಿ ಪ್ರೀತಿ ಹೂವು ಕರೆದಿರಲು ನಗುವು ನನ್ನ ಮನದಿ ಒಡಮೂಡಲಿ ಆಕಾಶದ ಗೂಡಿನಲ್ಲಿ ಹುಣ್ಣಿಮೆಯ ಬೆಳಕಿನಲ್ಲಿ ನಕ್ಷತ್ರಗಳ ಬೀದಿಯಲ್ಲಿ  ನಗುವ ಚಂದ್ರನ ಬೆಳಕಾಗಲಿ ಬೆಂದ ಈ ಬದುಕಿನಲ್ಲಿ ಉಸಿರಿಲ್ಲದ ಹೆಸರಿನಲ್ಲಿ ನೀರಿರದ ಕೊಳದಲ್ಲಿ ಸಂತೋಷವೆಂಬ ಕಾರಂಜಿ ಪುಟಿದೆಳಲಿ *********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -12

Image
       🌹ಕನಸಿನ ರಾಣಿ🌹 ನನ್ನ ಕನಸಿನ ರಾಣಿ ನಗೆ ಚೆಲ್ಲಿ ಬರುತ್ತಾಳೆ ಕಣ್ಣ ನೋಟದೀ ಚುಚ್ಚಿ  ಕಣ್ಣ ಹನಿ ತರುತ್ತಾಳೆ  //ಪ// ಕನಸಲ್ಲಿ ಬಂದು ಮನಸಲ್ಲಿ  ಚಿತ್ರವ ಬಿಡಿಸೋಳೆ ಪ್ರೀತಿಯ ಗೋಪುರದೀ     ದೇವತೆಯಾಗಿ ನಿಲ್ಲುತಾಳೆ ಬೋರ್ಗರೆವ ನದಿಯಾಗಿ ಧುಮ್ಮಿಕ್ಕಿ ಬರುತ್ತಾಳೆ ಕಡಲ ಒಡಲ ಸೇರಿ ಉಪ್ಪಾಗಿ ಅಳುತ್ತಾಳೆ ದಟ್ಟ ಕಾಡಿನಲ್ಲಿ ಕುಹೂ ಕುಹೂ ಧ್ವನಿಯ ಕೋಗಿಲೆಯಾಗಿರುತ್ತಾಳೆ ನನ್ನ ಅರಮನೆಗೆ ನವಿಲಂತೆ ಕುಣಿದು ಬರುತ್ತಾಳೆ ಬಾನಲ್ಲು ಅವಳೇ ಭುವಿಯಲ್ಲೂ ಅವಳೇ ಎಲ್ಲೆಲ್ಲೂ ಅವಳೇ ನನ್ನ ಹೃದಯದ ಅರಮನೆಯ ರಾಣಿಯಾಗಿ ಮೇರಿತವಳೆ ***********ರಚನೆ******* ಡಾ. ಚಂದ್ರಶೇಖರ್ ಸಿ ಹೆಚ್

ಭಾವಗೀತೆ -11

Image
  🌹 ಬೆಳದಿಂಗಳ ಚಂದ್ರ 🌹 ಬೆಳದಿಂಗಳ ಚಂದ್ರ ಬಿಳಿ ಹಾಲನೊರೆಯ ಬಣ್ಣದಲ್ಲಿ ಮಾಸಿತೇಕೆ ನಡುರಾತ್ರಿಯಲ್ಲಿ ತಂಪಾದ ನಿನ್ನ ಮೋಡಗಳು ನುಂಗಿತೇಕೆ //ಪಲ್ಲವಿ// ಹಸಿರೇಕೊ ಇಂದು ಬಿಸಿಲಿಗೆ ಸುಟ್ಟು ಗಹ ಗಹಿಸಿ ಅಳುವುದೇಕೆ ತಿಳಿ ನೀಲಿ ಆಗಸದಿ, ಬಿಳಿ ಮೋಡ ಬಂದು ಬಣ್ಣವನು ತಿಂದು ತೆಗಿತೇಕೆ  ಮಾಮರ ಚಿಗುರದೆ ಕೋಗಿಲೆಯ ಕುಹೂ ಕುಹೂ  ರಾಗ ಬರುವುದೇಗೆ ಸತ್ತ ಸ್ಮಶಾನದಲ್ಲಿ ಎಡೆಯೂಟಕ್ಕೆ ಕಾಗೆಯು ಕಾ ಕಾ ಎಂದು ಹಾಗೆ ಮಲ್ಲಿಗೆಯ ಪರಿಮಳ ಕಂಪ ಸೂಸಿ ಮನವ ಕಲಕಿತೇಕೆ ಮುಡಿಗೆರಿ ಮೈದುಂಬಿ ಗಮವನ್ನು  ಚೆಲ್ಲಲು ಕಾಯಿತೇಕೆ ನದಿ ಗಾಳಿ ಕಣಿವೆ ಕಡಲು ಮೇಘಗಳು ಭೋರ್ಗರೆದು ಕೂಗಿತೇಕೆ ಭೂಮಿಯನ್ನು ತಿಂದು ಸ್ಮಶಾನವನ್ನು ಮಾಡಿದರು ಹೃದಯ ನಿಮಗಿಲ್ಲವೇಕೆ ******ರಚನೆ************ ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -10

Image
        🌹 ಅರಳಿದೆ ಕವಿತೆ 🌹 ಮನಸ್ಸಿನಲ್ಲಿ ಮೊಗ್ಗಾಗಿ ಕವಿತೆ ಹೂವು ಅರಳಿದೆ ಕವಿತೆಯು ಹಾಡಾಗಿ ಮನಸೂರೆಗೊಂಡಿದೆ //ಪಲ್ಲವಿ// ಜಗದ ತುಂಬಾ ನೆರಳು ಕಂಪಾಗಿ ಸಂಪಾಗಿ ಮನವನೇಕೊ ಕದಡಿದೆ ಬದುಕು ತಂಪಾಗಿದೆ ನೂರು ಮಾತು ಅರ್ಥವ್ಯರ್ಥ ನಾನು ಎಂಬ ಮಾತು ಜೀವನದ ಸ್ವಾರ್ಥ ಭೂಮಿ ಮುಗಿಲು ದೂರ ಪ್ರೀತಿ ಏಣಿ ಹಾಕಿ ಏರು ಬಾರ ನದಿಯು ಹರಿದು ಕಡಲ ಒಡಲು ಸೇರ ಮನುಜ ನಿನ್ನ ಮಾತೆ ಕಥನ ಪ್ರೀತಿ ಪ್ರಣಯಗಳ ವಚನ  ನನ್ನ ಹೃದಯವ ತಾಕಿ ಮೂಡಿಸಿದೆ ಸಂಚಲನ? **********ರಚನೆ******** ಡಾ.ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -9

Image
  🌹 ಹೃದಯದ ಅರಮನೆಗೆ ಬಾ ಗೆಳತಿ🌹 ನನ್ನ ಹೃದಯದ ಅರಮನೆಗೆ  ಬಲಗಾಲಿಟ್ಟು ಬಾ ಗೆಳತಿ ಕೆಂಪು ರತ್ನಗಂಬಳಿ ಹಾಸಿ  ಬಾಗಿಲಲ್ಲಿ ಕಾದಿರುವೆ ಮನದಿ ನೂರೆಂಟು ಆಸೆ  ಹೂಗನಸ ಭಾಷೆ ನನ್ನ ಮನವ ತಾಕಿದೆ  ನಕ್ಕು ನಲಿಯು ಬಾ //ಪಲ್ಲವಿ// ಮೋಡದ ಬಾನಿನಲ್ಲಿ  ಕನಸಿನ ಮನೆ ಕಟ್ಟಿ ತಂಗಾಳಿಯಲ್ಲಿ ನೀ ತೇಲಿ  ಮನವ ಮುಟ್ಟು ಬಾ ನನ್ನ ಅರಮನೆಗೆ  ನಕ್ಷತ್ರದ ಸಾಲು ಬೆಳಕು ನೀಲಿ ಆಕಾಶದಿ  ನೀ ನಡೆದು ಬಾ ನೂರು ಕವಿತೆಗಳ ಮಾಡಿ  ಕಾರ್ಮೋಡವಾಗಿದೆ ಮನವು ಸಿಡಿಲು ಬಡಿದಂತೆ ಬಡಿದು  ಕವನದ ಮಳೆ ಸುರಿಸು ಬಾ ಹಾಲು ಬೆಳದಿಂಗಳ ಚಂದ್ರನಂತೆ  ಅಕ್ಷರದ ಬಾಳು ಬೆಳಗು ಬಾ ನನ್ನದೇಯ ಗೂಡಿನಲ್ಲಿ ಮುದ್ದಾದ  ಕಾವ್ಯವಾಗಿ ಹರಿದು ಬಾ ************ ರಚನೆ******** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -8

Image
  🌹ವಂದನೆಗಳು ಗೆಳತೀ ನಿನಗೆ 🌹 ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು  ದೇಹಕ್ಕೆ ಜಡತ್ವದ ಬೀಗ ಹಾಕಿದಾಗ ಹೃದಯದ ಬಾಗಿಲು ತೆರೆದೆ ಮನಸ್ಸಿನಲ್ಲಿ ಪ್ರೀತಿಸುರಿದೆ ಗೆಳತಿ //ಪಲ್ಲವಿ// ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು ಹಣದಿಂದ ಮಾನವೀಯತೆ ಅಳೆವಾಗ ಜೀವನ ಮೌಲ್ಯಗಳಿಗೆ ಬೆಲೆ ಕೊಟ್ಟೆ ಒಲವಿನ ಸಾರವನ್ನು ಹೃದಯದಲ್ಲಿಟ್ಟೆ  ಗೆಳತಿ ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು ಮಾತಿನಲ್ಲಿ ಮಂಟಪ ಕಟ್ಟಿ ಮೋಸ ಅಧರ್ಮಗಳು ನಗುವಾಗ ನೋಟದಲ್ಲಿ ನ್ಯಾಯ ಮಿನುಗುತ್ತಿತ್ತು ಗೆಳತಿ ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು ಕವಿತೆಗೆ ಕತ್ತಲು ಕವಿದು ಭಾಷೆ ಬಾವುಕವಾದಾಗ ನಿನ್ನ ಕವನ ಮೌನದ ಉತ್ತರ ಗೆಳತಿ ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು ಬೀದಿಯಲ್ಲಿ ನಾ ಪ್ರೀತಿ ಪ್ರೇಮ ಹುಡುಕುವಾಗ ಕೆಡು ನೋಟಗಳ ಬಾಣ ತಾಕಿರಲು ನೀ ನನ್ನ ಹೃದಯದ ಹೂಬಾಣವಾದೆ ಗೆಳತಿ ********ರಚನೆ********** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -7

Image
    🌹ಗುಡಿಯಲ್ಲಿ ದೇವರಿಲ್ಲ 🌹 ದೇವಾಲಯದ ಗುಡಿಯಲಿ ದೇವರಿಲ್ಲ  ನನ್ನ ಭಕ್ತಿಗೆ ಸಾಟಿ ಯಾರಿಲ್ಲ ಪೂಜಿಸುವುದು ಕಲ್ಲುಗಳನ್ನು ಗುಡಿ ಗೋಪುರದ ತುಂಬೆಲ್ಲ //ಪಲ್ಲವಿ// ಗಂಟೆಗಳ ನಾದ ಘೋಷ ಕರ್ಪೂರದ ಆರತಿ ಮೊಳಗುತಿದೆ ನಾಮ ಸ್ತೋತ್ರ ದೇವಾ ನೀನು ಪ್ರಸನ್ನ ಮಾರುತಿ ದೈವಕ್ಕೆ ಮೆರವಣಿಗೆಯ ಜಾತ್ರೆ ತೇರು ಬೀದಿ ರಥದ ಯಾತ್ರೆ ಪ್ರೀತಿ ಮಮತೆ ಕರುಣೆಯಲ್ಲಿ  ರಥವು ನುಗ್ಗಿ ನೆಡೆವುದು  ಭಕ್ತರೆಲ್ಲ ಕಳಶಕ್ಕೆ ಬಾಳೆಹಣ್ಣು ಎಸೆದು ಹಣ್ಣು ಕಾಯಿ ತಂದು ಕೈ  ಮುಗಿವುದು  ದೈವಕೆ ಹಣದ ಕಾಣಿಕೆ ಬೇಕಿಲ್ಲ ಪಾಪದ ಮುಕ್ತಿಗೆ ಇದು ಸಾಕಲ್ಲ? **********ರಚನೆ********** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -6

Image
      🌹ನೋಟ ತಾಕೀತು 🌹 ಕಣ್ಣ ನೋಟವು ನನ್ನ ಹೃದಯ ಇರಿದೀದೆ ಗೆಳತಿ ಕಣ್ಣ ನೀರು ಕಂಬನಿಯಾಗಿದೆ ಕೇಳು ಗೆಳತಿ //ಪಲ್ಲವಿ// ಗೆಜ್ಜೆ ಕಟ್ಟಿದ ನಿನ್ನ ಹೆಜ್ಜೆ ಗುರುತು ನನ್ನ ಕಾಡಿದೆ ಗೆಳತಿ ಮನದಿ ಹೊಸತು ರಾಗ ತಂದಿಹುದು ಗೆಳತಿ ನಿನ್ನ ಮಾತು ಮುತ್ತಂತೆ ನಗುವ ಕವನ ಗೆಳತಿ ಬರೆದ ಮೇಲೆ ಬರಡು ಹೃದಯಕೆ ಜೀವ ಗೆಳತಿ ಬೆಳಕಿನಲ್ಲಿ ಮನಕೆ ಬಂದು ಇರುಳಿನಲ್ಲಿ ಕಳೆದೆ ಗೆಳತಿ ನಿನ್ನ ಉಸಿರ ಸವಿಗಾನ ಹೃದಯ ತಾಕಿದೆ ಗೆಳತಿ ನಿನ್ನ ಸೌಂದರ್ಯಕ್ಕೆ ಬೆರಗಾಗಿ ನಾ ಸೋತೆ ಗೆಳತಿ ನೀನು ಇರದ ನನ್ನ ಮನಕೆ ಬದುಕು ಬರಡು ಗೆಳತಿ **********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -5

Image
  🌹ಎದೆಯ ಬಗೆದು ತೋರಲೆ 🌹   ಎದೆಯ ಬಗೆದು ತೋರಲೆ ರಾಮ  ತೋರಿದನು ಎದೆಯ ಸೀಳಿ  ನಿನ್ನ ಹನುಮ ಇತಿಹಾಸದೀ ನಡೆದ ಕಥೆಗಳು ನೂರು ಸಾರಿವೆ ನಮ್ಮ ದೇಶ ದೈವದ ತವರೂರು //ಪ// ರಾಜರುಗಳು ನೆಲೆಸಿ ಬಿಟ್ಟರೂ ಬೀಡು ಕಟ್ಟಿದರು ಭವ್ಯ ದೇವಾಲಯಗಳ ನಾಡು ಭಕ್ತಿಗೆ ಇಲ್ಲಿ ಕೊನೆಗೂ ಕೊನೆಯಿಲ್ಲ ಭಕ್ತರಿಗೆ ಇಲ್ಲಿ ಮುಂದೆಂದೂ ಬರವಿಲ್ಲ ತಾಜ್ ಮಹಲ್ ಪ್ರೀತಿಯ ಸಂಕೇತ ಗೋಳಗುಮ್ಮಟ ಗೋರಿಯ ಸಂಕೇತ ಆಳಿ ಹೋದ ದೊರೆಗಳು ಎಷ್ಟೋ  ಸುಟ್ಟು ಹೋದ ಕನಸುಗಳು ಎಷ್ಟೋ  ಬೆಟ್ಟಗುಡ್ಡಗಳು ಇಂದೂ ಕರಗಲೆ ಇಲ್ಲ ಕರಗಿಸಲು ಶ್ರಮಪಟ್ಟ ಮಂದಿ ಬಹಳ ಇಲ್ಲ ಸಂತರುಗಳು ನೆಲೆಸಿದ ಶಾಂತಿಯ ತೋಟ ಸ್ವಾತಂತ್ರ್ಯದ ನಡೆಯಿತು ಕ್ರಾಂತಿಯ ನೋಟ ಸುರಿಸಿದರು ಬೆವರು ನಾಡು ನುಡಿಯ ಕಟ್ಟಿ  ನಡೆದರೂ ದ್ವೇಷ ವೈಷಮ್ಯ ಜಾತಿ ನೀತಿ ಮೆಟ್ಟಿ ನಮ್ಮ ದೇಶ ನಮಗೆ ಹಸಿರು ಮತ್ತು ಉಸಿರು ಬೆಳಸಬೇಕು ನಾವೂ ತಾಯಿ ಭಾರತದ ಹೆಸರು  *********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಜನಪರ ಗೀತೆ-4

Image
      🌹ಓ ನನ್ನ ಪರಿಸರ 🌹 ಪ್ರಕೃತಿಯ ಮಡಿಲಲ್ಲಿ ಬೆಟ್ಟ ಬಯಲುಗಳಲ್ಲಿ ಮರ-ಗಿಡಗಳ ವೇದನೆ ಕಾಡು ಕಡಿದು ನಾಡು ಮಾಡೋ ನರ ಮಾನವರ ರೋಧನೆ. //ಪ// ಗಾಳಿಯ ಮಲಿನಕೆ ಓಝೋನ್ ಪದರ ಬಿರುಕು ನುಗ್ಗಿದೆ ಹರಿದು ಸೂರ್ಯನ ಬೆಳಕು ರಾತ್ರಿ ಕಾಣುವ ತಂಪು ಚಂದ್ರನಿಗೂ ಸೆಕೆ ಚಂದ್ರನಲ್ಲಿ ಜೀವಿಸಲು ಮಾನವನ ಬಯಕೆ ಹುಡುಕಬೇಕು ನಾವು ಆಮ್ಲಜನಕ ಗಾಳಿ ವಾಹನವು ಬಿಡುತ್ತಿದೆ ವಿಷದ ಬಿಸಿ  ಗಾಳಿ ಉಸಿರು ನಿಂತ ಆಗಿದೆ ಶುದ್ಧ ಗಾಳಿ ಇಲ್ಲದೆ ಬೆಟ್ಟಗುಡ್ಡ ಬಯಲು ಗಿಡಮರ ಗಳಿಲ್ಲದೆ ಮಳೆ ಹನಿಯೂ ವಿಷವಾಗಿ ಭೂಮಿಗೆ ತಾ ಸೇರಿ  ಉಣಿಸುತ್ತಿಹರು ರಾಸಾಯನಿಕ ವಿಷದ ಮಾರಿ ಭೂಮಿಯನ್ನ ರಂದ್ರ ಮಾಡಿ ತೆಗೆದಿಹರು ನೀರು ಕುಡಿಯುವ ನೀರಿಗಾಗಿ ಸೋರುತ್ತಿದೆ ಸೂರು ಭೂಮಿ ತಾಯಿಗೆ ವಿಷವ ಉಣಿಸುತ್ತಿಹರು ಅನ್ನ ತಿನ್ನುವ ಬಾಯಲ್ಲಿ ರಕ್ತ ಕಕ್ಕುತಿಹರು ಪರಿಸರವ ನಾಶ ಮಾಡಿ ಹರುಷ ಪಡುತಿಹರು ಹೆತ್ತ ತಾಯಿಯ ಹಸಿರ ಬಸಿರು ಸುಡುತಿಹರು   **********ರಚನೆ********** ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -3

Image
     🌹ನಿನ್ನ ನಾ ಕಂಡೆ 🌹 ಕವನದಲ್ಲಿ ಕವಿಯ ಕಂಡೆ ಕವಿತೆ ಪಡೆದ ರಾಗ ಕಂಡೆ ರಾಗದೀ ಬೆರೆತ ಶ್ರುತಿ ಕಂಡೆ ಕೇಳಿ ನೋವ ಮರೆತು ಉಂಡೆ//ಪ// ನವಿಲ ನಾಟ್ಯ ಬಲು ಸೊಗಸು ಕೋಗಿಲೆಗೆ ವಸಂತ ಮಾಸ ದೀರಿಸು ನವ ಚೈತ್ರ ಚಿಗುರಿ ತಂತು ಕನಸು ಹಸಿರು ಹಾಸಿಗೆ ಇಳೆಗೆ ಹೊದಿಸು ಕಾಲ ಮರೆಸಿ ಬದುಕ ಸವೆಸಿದೆ ಆಸೆ ತರಿಸಿ ದುಃಖ ಬರಿಸಿದೆ ಹಗಲು ಇರುಳು ಬಂದು ಹೋಗಿ ಬದುಕು ಬೆಂದಿದೆ ವಯಸ್ಸು ಕೂಗಿ ನಾಳೆಗಳು ಭರವಸೆಯ ದಿನ ಹರುಷ ತುಂಬಲಿ ತನುಮನ ನೆನ್ನೆಗಳ ನೆನಪು ಮರೆತು ಕುಣಿದು ಕುಪ್ಪಳಿಸೋಣ ಬೆರೆತು ಜೀವದಲಿ ಭಾವ ಬೆಳಕು ತುಂಬಿ ಭಕ್ತಿಯಲ್ಲಿ ಮನೆಯ ದೈವ ನಂಬಿ ಪಾಪವೆಲ್ಲ ತೊಳೆದು  ಬದುಕು ಶುಬ್ರವಾಗಲಿ ಹೊಸ ದಿನಗಳು ಮತ್ತೆ ಬಂದು ಹಳೆಯದಾಗಲಿ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -2

Image
  🌹 ಅಮ್ಮ ನಿನ್ನ ಪಡೆದ 🌹 ಅಮ್ಮ ನಿನ್ನ ಪಡೆದ ನಾವುಗಳೇ ಧನ್ಯರು ತುತ್ತು ಕೊಟ್ಟು ಸಾಕಿದ ನೀನು ತಾನೇ ದೇವರು. //ಪ// ನೀನೆ ಮೊದಲ ಪಾಠಶಾಲೆ ನೀನು ತಾನೆ ಅಕ್ಷರ ಕೈಯ ನಾನು ಮುಗಿಯಲೇಗೆ ಗುಡಿ ಗೋಪುರ ಮಂದಿರ ಬಾಳ ದಾರಿ ತೋರಿ ಸಾಗಿದೆ ನೋವ ಬವಣೆ ಸವೆಸಿ ಹೃದಯ ಇಂದು ಮಿಡಿದಿದೆ ನಿನ್ನ ಪ್ರೀತಿ ನೆನೆಸಿ ದುಃಖಕ್ಕೆ ಕಣ್ಣೀರು ನೀನು ನಗುವ ಮೊಗವೆ ಚೆಂದ ಹೇಗೆ ವರ್ಣಿಸಲಿ ನಾನು ನಿನ್ನ ಪ್ರೀತಿ ಬಂದಾ ಕವಿತೆಯೆಂದು ಸಾಲದು ಬಣ್ಣಿಸಲು ನಿನ್ನ ಕೋಟಿ ಪದವ ಹುಡುಕಿದಲ್ಲಿ ಅಮ್ಮ ಪದವೆ ಚೆನ್ನಾ  **********ರಚನೆ******** ಡಾ. ಚಂದ್ರಶೇಖರ್ ಸಿ.ಹೆ ಚ್