Posts

Showing posts from December, 2025

ಕಣ್ಣೀರ ಹನಿ*

Image
  ಎದೆಗೋಡೆದ ದುಃಖದ ಮಾತೊಂದು ಮನದಲ್ಲಿ ಸತ್ತಿತ್ತು  ಕಣ್ಣೀರು ಹನಿಯಾಗಿ ತಿಳಿ ನೀಲಿ ಕಡಲೊಳಗೆ ಸೇರಿತ್ತು ದುಃಖವು ಜಿನುಗಿ ಜಿನುಗಿ ಒಡಲೊಳಗೆ ಬೆಂದಿತ್ತು  ಮೂಕ ವೇದನೆಯು ಮನೆಯನ್ನು ಸುಟ್ಟು ತಿಂದಿತ್ತು ಯಾರೋ ಚೆಲ್ಲಿದ ಬಣ್ಣ ಕಾಮನಬಿಲ್ಲಾಗಿ ಮೂಡಿತ್ತು  ಬಿಸಿಲಲ್ಲಿ ಸುರಿದ ಮಳೆ ಇಳೆಗೆ ನೀರನ್ನು ಹೋದಿಸಿತ್ತು  ಭೂಮಿಯು ಕಾವಾಗಿ ಸುಡುತಾ ನೆಲವೆಲ್ಲ ಬಿರಿದಿತ್ತು ಹಸಿರಲ್ಲಿ ಕೆಂಪು ಹೂವೊಂದು ಮಸಣವ ಸೇರಿತ್ತು  ಈ ಲೋಕವು ನೂರೆಂಟು ಸುಳ್ಳುಪಳ್ಳುಗಳ ಸಂತೆ ಸತ್ಯಕ್ಕೆ ಕೊಡಲಿ ಪೆಟ್ಟು ಅಧರ್ಮದ ನೆಲೆಯ ಕಂತೆ  ಮೋಸ ತುಂಬಿದ ಮನುಜನಿಗೆ ನ್ಯಾಯವೆಂಬ ಚಿಂತೆ  ಯಾರಿಗೆ ನೀಡುವನು ವರವ ದೇವರು ನಿಂತೆ ಸುಡುಗಾಡಿನಲ್ಲಿ ಸಿಗುವುದೆ ಸಂತೋಷದ ಚಿಲುಮೆ  ದೇಹ ತೋರೆದ ಮನುಜನಿಗೆ ಈ ನ್ಯಾಯವೇ ಒಲುಮೆ  ಪರಲೋಕ ಸೇರಿತು ಆತ್ಮ ಮಸಣದಲ್ಲಿ ಇದೇ ಪ್ರೇತಾತ್ಮ  ಕಾಯುವವರು ಯಾರು ಬಿಟ್ಟು ಹೋದ ಜೋಳಿಗೆಯನ್ನ ಬ್ರಹ್ಮನ ಮೂರಕ್ಷರದ ಬರಹ ತಿದ್ದಲು ಆಗಲಿಲ್ಲ  ವಿಧೀ  ಎಂಬ ಬಲು ಕಪಟ ಯಾರನ್ನು ಬಿಡಲಿಲ್ಲ  ಆರು ಮೂರಡಿಯ ಮಂಟಪವೆ ನೆಲೆಯಾಯಿತಲ್ಲ  ಎಳು ಬಿಳಿನ ಜೀವನ ಕೊನೆಗೂ ಕೊನೆಯಾಯ್ತಲ್ಲ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಸಾಯಬೇಡ ಮನವೇ

Image
  ಚಿಂತೆಯೆಂಬ ಚಿತೆಯಲ್ಲಿ ಬೇಯಬೇಡ ಮನವೇ ನಕ್ಕು ನೀ ಒಮ್ಮೆ ತಿಳಿಯಾಗು  ಆಸೆಗಳ ಸಂತೆಯಲ್ಲಿ ಸಾಯಬೇಡ ಮನವೇ ನಿಟ್ಟುಸಿರು ಬಿಟ್ಟು ನೀ ಒಮ್ಮೆ ಗೆಲುವಾಗು//ಪಲ್ಲವಿ// ಕನಸುಗಳ ಮರುಭೂಮಿಯಲ್ಲಿ ಸಿಗುವುದಾದರೂ ಏನು  ಸಮುದ್ರದ ನೀರು ಕುಡಿದರೆ ರುಚಿಸುವುದೇನು ಯಾರ ಪಾಪದ ಕರ್ಮ ಯಾರೋ ಮೂಡಿಗೋ  ಯಾರೋ ಬೇವರ ಹನಿಯು ಯಾರೋ ಮನೆಗೋ  ಜೀವನದಿ ಒಳಿತು ಮಾಡಿದರೆ ಸಿಗುವುದೇ ಸ್ವರ್ಗ  ಯಾರೋ ಪಾಪಕೆ ಇನ್ನ ಯಾರಿಗೂ ನರಕ ಆಡಿ ಆಡಿ ಮನವು ನೋಂದೇಾಯ್ತು  ಬೇಡಿ ಬೇಡಿ ತನುವು ಸುಸ್ತಾಯ್ತೋ ಯಾವ ಹೊಲದ ಹೂವು ಯಾವ ದೇವರಿಗೂ  ಯಾರ ಮಲ್ಲಿಗೆ ಯಾರೋ ಮುಡಿಯಲಿ  ಯಾರ ಕನಸಿನ ದೀಪ ಎಲ್ಲೋ  ಬೆಳಗಿತು ಏಕೋ  ಯಾರ ನೋವಿನ ಶಾಪ ಯಾರಿಗೋ ತಗುಲಿತು ಏಕೋ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮನವ ಕಲಕಿದೆ

Image
  ತಿಳಿ ಮನವ ಕಲಕಿ ರಾಡಿ ಮಾಡಿದ ಒಲವೇ ಈ ಬದುಕಿಗೆ ನೀನೆ ತಾನೆ ಗೆಲುವೆ ಕಣ್ಣೀರು ನನ್ನಯ ಬಾಳಲಿ ತುಂಬಿ ಸೋತೆ ನಾನು ಈ ಒಲವ ನಂಬಿ// ಪಲ್ಲವಿ// ಜೀವನವಾಯ್ತು ಗೋಳಿನ ನರಕ ಯಾರು ನೀಡಬೇಕು ಪ್ರೀತಿಯ ಸರಕ  ಯೌವ್ವನದ ಬಯಕೆಗೆ ತಣ್ಣೀರು ಬಿಟ್ಟೆ ಆಸೆಯ ಜಾಡಲಿ ಹೊಡೆದಿದೆ ಬಾಳ ಕಟ್ಟೆ  ರುಚಿಯೇ ಇಲ್ಲ ಜೀವನದ ಊಟ ಕಲಿತರು ಕೂಡ ಮರೆತ  ಪಾಠ  ಜೀವನ ಏಳು ಬಿಳಿನ ಆಟ ಕಲಿತು ಒಡಬೇಕು ನಾವು ಓಟ ಸೋಲಲಿ ಕಲಿಯುವುದು ಬೇಕಾದಷ್ಟು ನೊವಲಿ ತಿಳಿಯುವುದು ತಿಳಿದಷ್ಟು ಬಾಳ ಪಯಣ ಬೇಸರ ತಂದಿದೆ ಬದುಕು ಏಕೋ ಕುಂಟುತ್ತ ನಡೆದಿದೆ ***********ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಬರಲಿಲ್ಲ ನನ್ನವ

Image
  ಮನದ ಮಡಿಲಲಿ ಜೋಗುಳ ಹಾಡಿದ್ದೇ ನನ್ನಯ ಮನಸನ್ನು ಅವನಿಗೆ ನೀಡಿದ್ದೆ ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ  ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ  ನೋಡಿಯೂ ನೋಡದೆ ಹೋದ ನನ್ನವ//ಪಲ್ಲವಿ// ಯಾರನ್ನು ಕೇಳಲಿ ಸೆರಗನು ಹೊಡ್ಡಿ  ಯಾರಿಗೆ ನೀಡಲಿ ಪ್ರೀತಿಯ ಬಡ್ಡಿ ಹೃದಯದಿ ಅರಮನೆ ಅವನಿಂದ ಚೂರಾಯ್ತು  ಕನಸಿನ ಗೋಪುರ ನುಚ್ಚು ನೂರಾಯ್ತು  ಯಾರನ್ನು ಕೇಳಲಿ ನನ್ನವ ಎಲ್ಲೆಂದು  ಕಾಲಲಿ ಸುತ್ತಿ ಮನೆ ದೇವರಿಗೆ ಬಂದಿದ್ದೆ  ಕೈಯ ಮೇಲೆ ಬೆಂಕಿಯ ಕರ್ಪೂರ ಹಚ್ಚಿದೆ  ಮಡಿಯಲ್ಲಿ ಬಂದು ಊರುಳು ಸೇವೆ ಮಾಡಿದ್ದೆ ಹಣ್ಣು ಕಾಯಿ ಪಲ್ಲಾರ ನೈವೇದ್ಯ ಮಾಡಿದ್ದೆ ಕರೆದು ತಾ ದೇವರೆ ನನ್ನವನ ಎಂದಿದೆ  ಬಯಕೆಗಳು ಬತ್ತಿ  ಬರಡಾಯ್ತು  ಆಸೆಗಳು ನಡು ನೀರಲ್ಲಿ ಮುಳುಗಾಯ್ತು ಕಾದು ಕಾದು ಕೂದಲು ನೆರಗಾಯ್ತು  ಕೆನ್ನೆಯ ಚರ್ಮ ಕುಂತಲ್ಲೇ ಸೂಕ್ಕಾಯ್ತು  ಹೊರಟು ಹೋದವ  ನನ್ನವ ಬರಲಿಲ್ಲ  ಸಾಯುವ ಮುಂಚೆನೆ ಗುಂಡಿ ತೊಡ್ಡಿದ್ದೆ  ದಿನವನ್ನು ಅವನ ನೆನಪಲ್ಲಿ ನೂಕಿದ್ದೆ  ಹಣೆಬರಹ ಗೀಚಿದ ಬ್ರಹ್ಮನ  ಶಪಿಸಿದ್ದೆ  ಪ್ರೀತಿಯ ಕೂಡಿಟ್ಟು ಕಣ್ಣನ್ನು ಮುಚ್ಚಿದೆ ಕೊನೆಗೂ ಬರಲಿಲ್ಲ ಕಾದರು ನನ್ನವ  ಮನದ ಮಡಿಲಲಿ ಜೋಗುಳ ಹಾಡಿದ್ದೇ ನನ್ನಯ ಮನಸನ್ನು ಅವನಿಗೆ ನೀಡಿದ್ದೆ ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ  ನ...

ಮಕ್ಕಳ ಗೀತೆ -56

Image
  ಆಟ ಆಡೋಣ ಕಂದ ನಿನ್ನ ನೋಡಲು ಕಣ್ಣು ಸಾಲದು  ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ  ನಿನ್ನ ಮೊಗವ ನೋಡಿ ಚಂದಿರ ಕರೆದಿದೆ  ನೀನು ಕಣ್ಣೀರಿಡಲು ಮಳೆಯೂ ಬಂದಿದೆ  ನೀನು ಸ್ನಾನ ಮಾಡಲು ಜರಿಯು ಹರಿದಿದೆ  ನೀನು ಬಟ್ಟೆ ತೊಡಲು ಹತ್ತಿ ಬಟ್ಟೆಯಾಗಿದೆ  ನೀನು ಹಾಲನ್ನು ಕುಡಿಯಲು ಹಸುವು ಹಾಲು ಕೊಟ್ಟಿದೆ ನೀನು ಹೆಜ್ಜೆ ಇಡಲು ಗೆಜ್ಜೆಯು ಸದ್ದು ಕುಣಿದಿದೆ  ನೀನು ಆಟ ಆಡಲು ನೀಲಿ ಬಾನು ಕರೆದಿದೆ  ನೀನು ನಗುಲು ಸೂರ್ಯ ಬೆಳಕನು ನೀಡಿದೆ ನೀನು ಬಂದು ಮಲಗಲು ತೊಟ್ಟಿಲು ತೂಗಿದೆ  ಬಾರೆ ಕಂದ ನಾವು ದೇವರ ಪೂಜೆ ಮಾಡೋಣ  ಹೂವು ಹಾರ ಹಾಕಿ ದೇವರಿಗೆ ನಮಿಸೋಣ  ಕರ್ಪೂರ ದೀಪ ಹಚ್ಚಿ ಮಂಗಳಾರತಿ ಮಾಡೋಣ  ಸಾಮ್ರಾಣಿ ಹಚ್ಚಿ ಧೂಪವಾ ಬೆಳಗೋಣ  ಕಂದ ನಿನ್ನ ನೋಡಲು ಕಣ್ಣು ಸಾಲದು  ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ  ನಿನ್ನ ಮೊಗವ ನೋಡಿ ಚಂದಿರ ಕರೆದಿದೆ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಖಾಲಿ ಪುಟದ ಹಾಳೆ

Image
  ಈ ಬಾಳು ಒಂದು ಖಾಲಿ ಪುಟದ ಹಾಳೆ  ಗೀಚಬೇಕು ನಾವು ಕಲಿತು ಕಷ್ಟ ಸುಖದ ಶಾಲೆ  ದಿನವ ದೂಕಬೇಕು ಕಲಿತು ಎಲ್ಲಾ ನಾಳೆ ಕಲಿಯದಿದ್ದರೆ ಇಲ್ಲಿ ನಾಳೆ ಎಂಬುದು ಗೋಳೇ //ಪಲ್ಲವಿ// ಬಾಳ ಬಂಡಿಯಲ್ಲಿ ಸಾಗಬೇಕು ನಾವು ಚಕ್ರ ಮುರಿದು ಬಿದ್ರೆ ಬಂಡಿಗೆ ಬಂತು ಸಾವು ಬಾಳ ನೋಗವ ಹೊತ್ತು ಸಾಗು ನೀ ಮುಂದೆ  ಓದೆಯದಿರಲಿ ನಿನಗೆ ನೋವುಗಳು ಹಿಂದೆ ಮೂರು ದಿನದ ಬದುಕು ನಗುತಾ ನೀ ಬಾಳು ಗಂಡ ಗುಂಡಿ ರಥದ ತೇರು ಎಳೆಯದಿದ್ರೆ ಒಳು  ಯಾಕೆ ಬೇಕು ನಮಗೆ ಜಿದ್ದಿನ ದ್ವೇಷ  ಹಾಕಬೇಕೆ ನಾವು ನೀತಿಗೆಟ್ಟ  ವೇಷ  ಜಾತಿ ವೈಶ್ಯಮ್ಯಕೆ ಹೊತ್ತಿ ಊರಿದಿದೆ ಊರು ಅನ್ಯಾಯಾದ ಸಿಡಿಲ ಮಳೆಗೆ ಸೋರಿದೆ ಸೂರು ಒಪ್ಪತ್ತಿನ ಊಟಕ್ಕೆ ಯಾರು  ತಾನೆ ಆಸರೆ  ಗುಲಾಮಗಿರಿಗೆ ಇಲ್ಲಿ ನಮ್ಮ ಬಾಳು ಕೈಸೇರೆ ಹರಿದ ಬಟ್ಟೆ ತೋರಿದೆ ಇಲ್ಲಿಯ ಬಡತನ  ಕೆಲಸ ಒಂದೇ ಇಲ್ಲಿ ನಮ್ಮಯ ಸಿರಿತನ  ಹಿಟ್ಟಿಗಾಗಿ ಇಲ್ಲಿ ಜೀವನವಾಯ್ತು ನರಕ ಸತ್ತ ಮೇಲೆ  ಸಿಗುವುದೇ ನಮಗೇ ಸ್ವರ್ಗ  ಪಾಪಪುಣ್ಯ ಲೆಕ್ಕ ಇಟ್ಟವರಾರು ಹೇಳು  ಅಧರ್ಮವನ್ನು ಮೆಟ್ಟಿ ನಿಲುವುದೇ ಬಾಳು  ಮೋಸದಿಂದ ಇಲ್ಲಿ ಕಟ್ಟಿದೆ ಉಸಿರ ಶ್ವಾಸ  ಹೇಗೆ ಬೀರಲಿ ನಾನು ನಗುವ ಮಂದಹಾಸ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮರೆತು ಬಿಡು ಗೋಳು

Image
  ಹುಟ್ಟು ನಿನ್ನದಲ್ಲ ಸಾವು  ನಿನಗೆ ಗೊತ್ತಿಲ್ಲ  ಹುಟ್ಟು ಸಾವು ನಡುವೆ ಬದುಕ  ಪಡೆದೆಯಲ್ಲ  ಸಾಗಬೇಕು ನೀನು ನಿನ್ನ ನೀನು ಅರಿತು  ಕನಸು ಕಾಣಬೇಕು ದುಃಖವನ್ನು ಮರೆತು  ಮೂರು ದಿನದ ಬಾಳು  ಮರೆತು ಬಿಡು ಗೋಳು//ಪಲ್ಲವಿ// ನಾಳೆ ಎಂಬ ನಿಜವ  ಅರಿತು ಬಾಳು ಮನುಜ  ಸೋಲು, ಗೆಲುವು ಎಲ್ಲ  ಈ ಬದುಕಿನಲ್ಲಿ ಸಹಜ  ಹಣದ ಆಸೆಗಾಗಿ ಮೋಸ ಮಾಡಬೇಡ  ಹೆಣ್ಣ ಆಸೆಗಾಗಿ ನಿನ್ನನ್ನು ನಿ ಮರೆಯಬೇಡ  ಮಣ್ಣು ಒಂದು ಮೋಹದ ಮಾಯೆ ನೋಡ  ಹೆಣ್ಣು, ಹೊನ್ನು, ಮಣ್ಣಿಗಾಗಿ ಇಲ್ಲಿ ಯುದ್ಧ ನೋಡ ದುಃಖದಿಂದ ನೀನು ಕಣ್ಣೀರು ಹಾಕಬೇಡ  ಸಂತಸದಿಂದ ನೀನು ಜಗ್ಗಿ ಮೆರೆಯಬೇಡ  ಈ ಆಸೆಯು ಒಂದು ನೀರ ಸುಳಿಯು ನೋಡ  ಬಿದ್ದು ಬಿಟ್ಟು ನೀನು ಸುತ್ತಿ ಸಾಯಬೇಡ  ನಾಳೆಗಾಗಿ ನಿನ್ನಲ್ಲಿ ಭರವಸೆಯೂ ಇರಲಿ  ಇಂದಿಗಾಗಿ ನಿನ್ನಲ್ಲಿ ಸ್ವಲ್ಪ ಮರುಕ ಇರಲಿ  ನೆನ್ನೆ ನಾಳೆಗಳ ಮಧ್ಯೆ ಇಂದು ನಗುತ ಇರಲಿ  ನಾಳೆ ಚಿಂತೆಯಿಂದ ಈ ಬದುಕು ಸಾಯದಿರಲಿ  ನಮ್ಮ ಆಳಿದವರು ಇಂದು ನೆನಪು ಮಾತ್ರ  ಒಳಿತು ಅರಿತು ನಡೆವುದೇ ನಮ್ಮ ಬಾಳಸೂತ್ರ  ಬದುಕು ಒಂದು ಹಾರುವ ಗಾಳಿಪಟ  ಬಿರುಗಾಳಿಗೆ ಸಿಕ್ಕರೆ ಜೀವನ ಧೂಳಿಪಟ  ನಾನು ನನ್ನದು ಶಾಶ್ವತ ಅಲ್ಲ ತಮ್ಮ  ನಾವು ನಮ್ಮದು ಬಾಳು ತಿಳಿ ನೀ ತಿಮ್ಮ  ಯಾರಿಗೆ ಯಾರು ಇಲ್ಲ ಅರಿತು ನಡೆ ಡುಮ್ಮ...

27. Life is hot

Image
  Look at the sky you are lucky one  Life is begun it starts to dance  Happiness makes the day colourful  Laziness kill the day with non meaningful  Money, money make the money in life  Honey, honey bring the chain of love  I rise in the morning with good mood  I fail in the work with heavy load  I don't know when everything will be alright  Memories eat  me like anything  Someone are tell about something  Yesterday gone for new begin  Scars  are  hitting me with loaded gun  Leaving all pain rising is good sign  Strong and kind my little daughter is mine  Nothing is important family is the first  I feel happiness blow in the sky is the best  Love the day it enhances the fragrance  Drink the pain of water which makes you glance  Life will teach everything in a shot Problems will be the fire, so life is hot  **********Writer*********  Dr. Chandrashekhar Channapura H...

ಮನವು ಸೋತಿತ್ತು

Image
  ಮನದ ಒಳಗೆ ನೋವು ಬಂದು ಮನೆಯ ಮಾಡಿತ್ತು ಕಣ್ಣ ನೀರು ಕಂಬನಿಯಾಗಿ ನಿಲ್ಲದೆ ಧುಮುಕಿತ್ತು  ಕೆನ್ನೆ ಕೆಂಪಾಗಿ ಒಣಗಿದ ಹಾಗೆ ಸುಕ್ಕು ಕಟ್ಟಿತ್ತು  ಮುಖವು ಬಾಡಿದ ಬರಡು ಭೂಮಿಯಾಗಿತ್ತು  ಉಸಿರು ಸಿಕ್ಕ ದೇಹವು ವಿಲವಿಲ ಒದ್ದಾಡಿತ್ತು  ಸೊರಗಿದ ಮನಕ್ಕೆ ಬೆಳಕು ನೀಡಲು ದೇವರ ಬೇಡಿತ್ತು  ಕಣ್ಣು ಮುಚ್ಚಿದ ದೇವರು ಗಾಡೆ ಗೂಡೆ ಆಟವಾಡಿತ್ತು  ಯಾರದ ಗಾಳಕ್ಕೆ ಸಿಕ್ಕ ಮೀನಂತೆ ಜೀವ ನಲುಗಿತ್ತು ಕಾಣದ ದಾರಿ ಹುಡುಕಿ ಹುಡುಕಿ ಜೀವ ನೊಂದಿತ್ತು  ಬಯಕೆಗಳು ನೂರು ಅಂತ್ಯದ ಸಾವಿನ ಕಥೆ ಹೇಳಿತ್ತು  ಜೀವ ಬೆದರಿ ಹೆದರಿ ಮೌನ ಮನೆ ಮಾಡಿತ್ತು  ಅಳಲು ಆಗದೆ  ಬಳಲಿ ದೇಹ ಬೆಂದು ಕೂತಿತ್ತು  ಯಾರನ್ನು ಬೇಡಲಿ ಬದುಕಲು  ಹೃದಯ ಕೇಳಿತ್ತು  ಮಾತು ಬಾರದ ಮನಸ್ಸು ಮೂಕನಾಗಿ ನಿಂತಿತ್ತು  ಕಂಡ ಕನಸುಗಳೆಲ್ಲ ಕೊಳೆತು ಸ್ಮಶಾನವಾಗಿತ್ತು  ನಿದ್ದೆಗೆಟ್ಟು ದೇಹ ಒದ್ದಾಡಿ ಸೋತು ಹೋಗಿತ್ತು  **********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಕಾಲ ನುಂಗಿ ನೀರು ಕುಡಿತಲ್ಲ

Image
  ಎದೆಯ ಗೂಡಿನ ಒಳಗೆ ಉಸಿರು ಸಿಕ್ಕಿತ್ತು  ಸುಮ್ಮನೆ ನೋವಿಗೆ ಎದೆಯು ಗಡಗಡ ಕಂಪಿಸಿತ್ತು  ಕಣ್ಣ ಹನಿಯು ರಕ್ತದ ಕಂಬನಿ ಸುರಿಸಿತ್ತು  ಮಾತು ಮೌನದ ಬದುಕಿನ ಕವನ ಬರೆದಿತ್ತು  ನೋಡುತ ನೋಡುತ ಕಾಲ ಕಾಲನ್ನು ಎಳೆದಿತ್ತು ಬದುಕಿನ ದಾರಿಯಲ್ಲಿ ಪಯಣ ಬೇಸರ ತಂದಿತ್ತು  ಸಮಾಜ ಕಲಿಸಿದ ಪಾಠ ಕಲಿಯಲೇ ಬೇಕಿತ್ತು ಮುದ್ದಾದ ಹೂವಂದು ಸುಮ್ಮನೆ ಅಳುತ್ತಿತ್ತು  ಜೀವನ ಹುಡುಕುವ ಒಳಗೆ ಕತ್ತಲೆ ಮೋಡ ಕವಿದಿತ್ತು  ಯಾರು ನನ್ನವರು ಎಂದು ದುಃಖದೀ  ಹೂವು ಕೇಳಿತ್ತು  ಹಾರಿದ ಹಣತೆ ಮತ್ತೆ ಒತ್ತಿ ಉರಿಯಲು ಬಯಸಿತ್ತು  ಹಚ್ಚಿದ ಹಣತೆ ಬೆಳಕಲ್ಲಿ ಸೂತಕದ ಮೌನ ಆಡಗಿತ್ತು  ಬಾಳಿನ ದಾರಿಯಲ್ಲಿ ಹೂವು ನಲುಗಿ ಬಾಡಿ ಹೋಗಿತ್ತು  ಬಾಡಿದ ಹೂವು ದೈವಕ್ಕೂ, ಸಾವಿಗೂ ಬೇಡವಾಗಿತ್ತು  ಮಣ್ಣಾಲಿ ಮಣ್ಣಾಗಿ ಸತ್ತ ದೇಹದ ಜೊತೆ ಹೂವು ಸತ್ತಿತ್ತು  ಕನಸು ಕೈಗೂಡ ಬಿಡದೆ ಈ ಸಮಾಜವು ಮೋಸ ಮಾಡಿತ್ತು ಹುಟ್ಟು ಸ್ವತಂತ್ರವಾಗಲಿಲ್ಲ ಸಾವು ಸ್ವತಂತ್ರವಾಗಲಿಲ್ಲ  ಕಾಲವು ಎಲ್ಲವನ್ನು ನುಂಗಿ ನೀರು ಕುಡಿಯುತಲ್ಲ  ಮನವು ಕಾಣದ ವಿಧಿಯ ನೋವಲಿ ಬಿಡದೆ ಶಪಿಸಿತ್ತು ಮಾತು ಮೌನದ ಮೂಕ ಕಥೆಯ ಕವನ ಬರೆದಿತ್ತು ಎದೆಯ ಗೂಡಿನ ಒಳಗೆ ಉಸಿರು ಸಿಕ್ಕಿತ್ತು  ಸುಮ್ಮನೆ ನೋವಿಗೆ ಎದೆಯು ಗಡಗಡ ಕಂಪಿಸಿತ್ತು  ಕಣ್ಣ ಹನಿಯು ರಕ್ತದ ಕಂಬನಿ ಸುರಿಸಿತ್ತು  ಮಾತು ಮೌನದ ಬದುಕಿನ ಕೊನೆಯ ಕವನ ಬ...

ಎಲ್ಲಾ ನನ್ನದು

Image
  ಕಣ್ಣ ಪರದೆ  ಮೇಲೆ  ಕಂಡ ಕನಸು ನನ್ನದು  ಮನದ ಭಾವದ ಒಳಗೆ  ಮೂಡಿದ ಗೀತೆ ನನ್ನದು  ಎದೆಯ ಗೂಡಿನಲ್ಲಿ ಹುಟ್ಟಿದ  ದೈವ ಭಕ್ತಿ ನನ್ನದು  ಆಚಾರ ವಿಚಾರಗಳು ತುಂಬಿದ  ನವ್ಯ ಭಾವ ನನ್ನದು  ಮೆದುಳಿನಲ್ಲಿ ಅವಿತು ಕೂತ  ಹೊಸ ಜ್ಞಾನದ ಸೆಲೆ ನನ್ನದು  ಕಣ್ಣಿನಿಂದ ಉಕ್ಕಿ ಬಂದ  ಹನಿ ನೀರು ನನ್ನದು  ಹೃದಯದಲ್ಲಿ ಮೊಳಕೆ ಒಡೆದ  ಮಧುರ ಪ್ರೀತಿ ನನ್ನದು  ಕೋಪ ತಾಪದಿಂದ ಮೂಡಿದ  ದ್ವೇಷ ರಹಿತ ತನುವು ನನ್ನದು  ಪ್ರೀತಿ ಸೆಲೇಯಲ್ಲಿ ಉಕ್ಕಿ  ಹರಿವ ಕೆಂಪು ರಕ್ತ ನನ್ನದು  ಭಾವದೊಳಗೆ ಒಡೆದು ಬಂದ  ಮಧುರ ಮಾತು ನನ್ನದು  ನಾಡು ನುಡಿಯ ಕಟ್ಟಲು ಹೋರಾಟ ನನ್ನದು  ನನ್ನ ದೇಹ ನನ್ನ ಪ್ರಾಣ  ಎಲ್ಲಾ ನನ್ನದು ಎಲ್ಲಾ ನನ್ನದು  **********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

26. My daughter

Image
  My daughter came out to look the sky  Moon is lightning the lamp with the shy The sky is full of fearful thunder  My daughter will become so fear  All the year all three seasons round and round  A day and night came one after one It cannot return  we cannot look back yesterday  In a circle of life game we go round and round  My daughter moved in all summer winter rainy seasons  In summer sun is burning make so sweat  In winter  make us  we wear sweater in day and night  In rainy for school my daughter has took umbrella  When the time has gone We look older and older  Our dreams are new success is few  All the seasons are gone we round and round  My car turned  round in the town  So dreams tell that take your time to clear your goals  Some dreams are successful in the life  Some dreams are just dreams in the wheel of life  Few dreams maker us  happy in a life stream All th...

ಬೆಳೆದು ಬಿಡು

Image
  ಅಕ್ಷರ ಬೀಜವ ಬಿತ್ತಿ ಬಿಡು  ಬುದ್ಧಿಯ ಹಸಿರಾ ಬೆಳೆದು ಬಿಡು  ಜ್ಞಾನದ ಬೆಳಕು ಹಚ್ಚಿ ಬಿಡು  ಅಜ್ಞಾನದ ಕತ್ತಲೆ ತೆಗೆದು ಬಿಡು  ದ್ವೇಷ ಅಸೂಯೆ ಮೂಟೆ ಕಟ್ಟಿ ಬಿಡು  ಕನಸನು ಒಮ್ಮೆ ಕಂಡು ಬಿಡು  ನನಸನು ಒಮ್ಮೆ ನೋಡಿ ಬಿಡು  ಸಾಧನೆ ದಾರಿಯ ತುಳಿದು ಬಿಡು  ತಿಳಿದವನೇ ಇಲ್ಲಿ ನಾಯಕನು  ಅರಿಯದವನೆ ಇಲ್ಲಿ ಗುಲಾಮನು ಅನ್ನವೇ ದೇವರು ಅಂದು ಬಿಡು  ನೀರೇ ಸುರಪಾನ ಅರಿತು ಬಿಡು  ಬಿದಿರಿನ ರೀತಿ ಬೆಳೆಯಲು ಆಗಲ್ಲ  ಚಿನ್ನದ ಮೊಟ್ಟೆ ಕೋಳಿ ಇಡಲ್ಲ ಇದ್ದರೂ ಕೋಟಿ ಹೋದರು ಕೋಟಿ ನಾನಲ್ಲ  ಕೋಗಿಲೆ ಕೂಗಲು ವಸಂತ ಮಾಸ ಬಂದಿಲ್ಲ  ನಾಲಕ್ಕು ಅಡಿಕೆಗೆ ಮಾನ ಹೋಯ್ತಲ್ಲ ಕುಡಿಕೆ ಚಿನ್ನ ಕೊಟ್ಟರು ಮತ್ತೆ ಬರುವುದಿಲ್ಲ ಯಾರಿಗೆ ಯಾರು ಇಲ್ಲಿ ಆಗಲ್ಲ  ನಂಬಿ ಕೆಟ್ಟರೆ ಕಾಯುವವರು ಯಾರಿಲ್ಲ  ಸವಿ ಸವಿ ನೆನಪು ಪಡೆದು ಬಿಡು  ನೋವನ್ನು ನೀನು ಮರೆತು ಬಿಡು  ಗೆಲುವಿನ ರುಚಿಯ ಕಂಡು ಬಿಡು  ಮೂರು ದಿನದ ಬದುಕು ಬಾಳಿ ಬಿಡು  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

25. God is Govinda

Image
  I came to your temple  Life is full of struggle  Body is burning with the fear  My heart blood flowing with your name  Yeah yeah Govinda Hey Govinda  Sorrows  are killing  Pain is full thrilling  Drinking water with thirsty  Way of life not full tasty Yeah yeah Govinda Hey Govinda  Where I have to go  Whom I have to ask  I am not finding way, Road is full of  pain  Yeah yeah Govinda Hey Govinda  You are there or not  You are existence is true or not  Devils dancing in a Ray of light  They show a killing in night  Yeah yeah Govinda Hey Govinda  Are you really god or what  I am mad for your chat  Close enemies draining my blood  Acting like a friend in a life shed  Yeah yeah Govinda Hey Govinda  *********Writer******** Dr.Chandrashekhar channapura halappa

24. Jesus save my life

Image
  Thousands of dream in my heart  Poems are flowing like a sweet  Song is wonderful in taste  Without your name life is full waste Ohhh.... Jesus... Save my life  Your making my road is clear  Your washing my pain tear You are always in my heart near  In my life bike your name is gear Ohhh...... Jisus.... save my life  Without you where is my path  Life is beautiful with your name as oath  Saying your name is a wonderful bath  Sorrows are gone happiness is get raised  Ohhh....... Jesus.....you changed my life  Praying is making mind free from stress  Bad things with your name goes with rush  I am feeling the change in my way  I am just stone in your game play  Ohhhh ..... Jesus..... your wonderful God  Without you life is empty  Without you life is dirty  With your name life is sweet  In your name I am moving date  Ohhhh.... Jesus...with  your name goal is clear  Probl...

ಮಕ್ಕಳ ಗೀತೆ -55

Image
  ಪುಟ್ಟ ಪುಟ್ಟ ಹೆಜ್ಜೆ  ಆಡುತ, ಕುಣಿಯುತ, ನಲಿಯುತ,  ಜಿಗಿಯುತ, ಬಂದಳು ಕಂದಮ್ಮ ಜಾತ್ರೆಯಲ್ಲಿ ತಂದ ಕುರ್ಚಿಯ  ನೋಡಿ ನೆಗೆದು ಕೂತಳು ಚಿನ್ನಮ್ಮ  ಅ, ಆ,  ಇ, ಈ, ಹೇಳು ಎಂದರೆ  ಅಳುತ ಕೂತಳು ಮುದ್ದಮ್ಮ  ಅಮ್ಮನು ಕೊಟ್ಟ ಬಾಳೆಹಣ್ಣು  ತಿಂದು  ಬಾಗಿಲಲ್ಲಿ ಸಿಪ್ಪೆ ಎಸೆದಳು ಪೆದ್ದಮ್ಮ  ಪುಟ್ಟ ಪುಟ್ಟ ಸಣ್ಣ ಹೆಜ್ಜೆ ಇಟ್ಟು  ಕಾಲಲ್ಲಿ ಗೆಜ್ಜೆ ತೊಟ್ಟು ನಲಿದಿಹಳು ತ. ಕ.ದಿ. ಮಿ. ತೋಮ್. ತೋಮ್  ಎಂದು ಭರತನಾಟ್ಯವ ಆಡಿಹಳು ಸ. ರಿ. ಗ. ಮ. ಪ.ದ. ನಿ. ಸ ಎಂದು  ವೀಣೆಯನ್ನು ನುಡಿಸಿಹಳು  ಹೇಳುವೆನು ನಾ ಹಾಡನ್ನು ಎಂದು  ಭಾವಗೀತೆ ಹಾಡಿದಳು ಮುದ್ದು ಮುದ್ದಾಗಿ ಕನ್ನಡ ಭಾಷೆ  ಖುಷಿಯಲ್ಲಿ ಮಾತನಾಡಿಹಳು ಪೆದ್ದು ಪೆದ್ದಾಗಿ ಸಮಾಜ ಜ್ಞಾನ  ಓದದೆ  ತಿಳಿದಿಹಳು ಆಡುತ ಕುಣಿಯುತ ನಲಿಯುತ  ಜಿಗಿಯುತ ಬಂದಳು ಕಂದಮ್ಮ ಜಾತ್ರೆಯಲ್ಲಿ ತಂದ ಕುರ್ಚಿಯ ನೋಡಿ  ನೆಗೆದು ಕೂತಳು ಚಿನ್ನಮ್ಮ  **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಬಾರ್ ನನ್ನ ಗೆಳೆಯ

Image
  ಓಣಿಯಲ್ಲಿ ಹೋಗ್ತಾ ಇದ್ದೆ ಹಾಗೆ ನಡ್ಕೊಂಡು  ಪೋರಿಯೊಬ್ಬಳು ಬರ್ತಾ ಇದ್ಲು ಮಲ್ಲಿಗೆ ಮುಡ್ಕೊಂಡು  ನನ್ನ ನೋಡಿ ಇಟ್ಟೆಬಿಟ್ಲು  ಮನಸ್ಸಿಗೆ  ಗುನ್ನಾ  ಹಾಕಿಬಿಟ್ಲು ನನ್ನ ಖಾಲಿ ಹೃದಯಕ್ಕೆ ಕನ್ನಾ  ಕಣ್ಣ ನೋಟಕ್ಕೆ ಹದಿರಿ ಹೋಯಿತು  ಯಾಕೋ ಈ ಹೃದಯ  ಸುಮ್ನೆ ಒಮ್ಮೆ ಹೇಳಿ ಬಿಡ್ಲಾ,  ಲವ್ ಯು ಬಾರೆ ನೀ ಸನಿಹ  ಪ್ರೀತಿಯಲ್ಲಿ ಮುಳುಗಿದ ಮೇಲೆ  ಬಾರ್ ನನ್ನ ಗೆಳೆಯ  ವೋಡ್ಕಾ  ಹೊಡ್ಕೊಂಡ್ ನಶೆಯಲ್ಲಿ ತೇಲುತ್ತಿದ್ದೆ ಬಾರ್ ನನ್ನ ಇನಿಯ  ಎಣ್ಣೆ ನನ್ನೊಳಗೆ ಹೋದ ಮೇಲೆ ಮರೆತೆ ಈ ಪ್ರಪಂಚ  ಹೊಡ್ದಂಗ್ ಹೊಡ್ದಂಗ್ ಏರ್ತಾಯಿತ್ತು ಕಿಕ್ಕು ನನ್ನೊಳಗೆ ಕೊಂಚ  ಏರಿಯಾದಲ್ಲಿ ಹುಡುಕುತ ಹೊರಟೆ ಎಣ್ಣೆಯ ಬಾರ್  ಸ್ವಲ್ಪ ಕುಡಿದು ನೆಕ್ಕಿ ಬಿಟ್ಟೆ ಮೀನಿನ ಸಾರು  ಬಾಟಲ್ ಏಕೋ ಬಿಡ್ತಾ ಇಲ್ಲಾ ನನ್ನಯ  ಕೈಯ  ಮಲ್ಲಿಗೆ ಮುಡಿದ ಹುಡುಗಿ ಟಚ್ ಮಾಡಿದ್ಲು ಮೈಯ  ನಶೆಯ ಒಳಗೆ ಮುಳುಗಿ ಹೋದೆನು ನಾನು  ಎಣ್ಣೆ ದೇವರು ಆಡಿಸಿದಂಗೆ ಆಡಬೇಕು ಮತ್ತೆ ಇನ್ನೇನು  ನಡೆಯೋಕೆ  ಸುಮ್ಮನೆ ಆಗ್ತಾ ಇಲ್ಲ ಬಾರೆ ನನ್ನವಳೇ  ತಲುಪಿಸು ನನ್ನ ಮನೆಯ ಗಂಟ ಕೈಯ  ಹಿಡಿದವಳೇ ಭೂಮಿ ಏಕೋ ತಿರುಗ್ತಾ ಐತೆ ದಾರಿ ಏಕೋ ನಡುಗ್ತಾ ಐತೆ  ಬಾಡಿ ಬ್ಯಾಲೆನ್ಸ್ ತಪ್ಪೋಗೈತೆ  ಇಲ್ಲಿ ಹುಡುಕಿದ್ರೂ ಸಿಕ್ತಾ ಇಲ್ಲ ಆ ನನ್ನ ಪ್ಯಾಲೇ...

ನೀ ದೂರವೇಕೆ

Image
  ಸನಿಹ ನೀನಿದ್ದರೂ ನೀ ದೂರವೇೇಕೆ  ಚಿಂತೆ ನೂರಿದ್ದರು ನೀ ಮೌನವೆಕೆ ಮನದಲಿ ನೋವಿದ್ದರೂ ಸಹಿಸಬೇಕೆ ಕೊಳಕು ಬದುಕಿಗೆ ಮೆತ್ತಿದ್ದರು ಬಾಳಬೇಕೆ  ಎದೆಯಾ ಒಳಗೆ ಒತ್ತಿದ ಹಣತೆ ಬೆಳಕು ಚೆಲ್ಲಿದೆ  ನಾಲ್ಕು ಗೋಡೆ ಮಧ್ಯೆ ಕೂತು ಹಣತೆ ಅಳುತಿದೆ ಯಾರಿಗೆ ಈ ಬೆಳಕು ಎಂದು ಜೀವ ಕೇಳಿದೆ  ಫೋಟೋಗೇ ಗೋಡೆಯಲ್ಲಿ ಹಾರ ಹಾಕಿದೆ  ನೋವಿನ. ನೊಗವ ಹೊತ್ತು ಜೀವ ಕುಸಿದಿದೆ  ಉಸಿರಲ್ಲಿ ಉಸಿರನ್ನು ಬಿಡುತ್ತಾ ಜೀವ ಬೆಂದಿದೆ  ಎಳೆಯಲು ಯಾರು ಇಲ್ಲ ಬಾಳ ಬಂಡಿಯ  ಬದುಕ ಗಾಳಿಯು ಆಗಿದೆ ಬಿರುಗಾಳಿಯು  ಕುಂಟುತ ಸಾಗಿದೆ ಬಾಳಿನ ಒಲವ ಪಯಣ  ಯಾರೋ ಕುತ್ತಿಗೆ ಕೊಯ್ದಂಗೆ ಈ ಮರಣ  ಏಳು ಬೀಳಿನ ಜೀವನದಲ್ಲಿ ಯಾರೂ ಇಲ್ಲ  ಬಾಳ ಸಂತೆಯು ಏಕೋ ಖಾಲಿ ಆಗಿದೆಯಲ್ಲ ದಿನವೂ ಮಾಡಬೇಕು ನಾವು ಇಲ್ಲಿ ಕೂಲಿ  ಆಡಿಸುವಾತನ ಆಟದಲ್ಲಿ ನಾವು  ಖಾಲಿ  ಮೇಲೆ ನಿಂತು ನೋಡುತವನೇ ಆ ಸೂತ್ರಧಾರಿ    ಕೆಲಸ ಮುಗಿಸಿ ಹೊರಡೋ ನಗುತಾ ನೀ ಪಾತ್ರದಾರಿ **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

23. Feeling lonely

Image
  Feeling very lonely in my heart  Chasing a dream of mine  Life is not make me to shine  Unhappiness taken things to burn  Watching the sky  with Sorrow  Moon not appeared in the sky  Stars are not twinkle in night  Darkness of a cloud makes sky empty  A day is full of brilliant light For whom I have to make a fight  Forest is full of green mask  Road is  full of difficult task  Life is completely full empty  Sea  is full of unhappy salty  Water waves fallen on sea shore  A life boat is never opened its door  **********Writer*********  Dr  Chandrashekhar channapura halappa

ದೇಹ ಬರಿದಾಯ್ತು

Image
  ಹೃದಯದ ಬನದಲ್ಲಿ ಸಸಿಯನ್ನು ನೆಟ್ಟಿದ್ದೆ  ಬೆಳೆಯಲು ರಕ್ತವನ್ನು ಸಸಿಗೆ ಸುರಿದಿದ್ದೆ  ಬೆಳೆದ ಸಸಿಯು  ಮನಸಲ್ಲಿ ಹಣ್ಣಾಯ್ತು ಅರಿಷಡ್ವರ್ಗಗಳು ಹಣ್ಣನ್ನು ತಿಂದಾಯ್ತು ಆಸೆ ಆಕಾಂಕ್ಷೆಗಳ ಸಂತೋಷ ತಂದಾಯ್ತು  ಬೇಕು ಬೇಡಗಳ ದುಃಖ ತಗಲಾಯ್ತು  ಚಿಂತೆಯು ಮನಸ್ಸಿಗೆ ಮೆತ್ತಾಯ್ತು  ನೋವಲಿ ಬರೀ ದೇಹ ಜಡವಾಯ್ತು  ಅಂತೆ ಕಂತೆಗಳು ಬೇಸರ ತಂದಾಯ್ತು  ನಡೆವ ದಾರಿ ಏಕೋ ಮುಳ್ಳಾಯ್ತು  ಜೀವನದ ಹಾದಿಯಲ್ಲಿ ಎಲ್ಲಾ ತೊಡರಾಯ್ತು  ಹುಣ್ಣಿಮೆ ಚಂದ್ರನು ಬೆಳಗದೆ ಮುಳುಗಾಯ್ತು  ಖುಷಿ ಕನಸುಗಳು ನನಸಾಗದೆ ಸತ್ತಾಯ್ತು  ಚಿಂತೆಯ ಚಿತೆಯಲ್ಲಿ ಮನಸ್ಸು ಹೆಣವಾಯ್ತು ಅತ್ತಿ ಉರಿದ ಬೆಂಕಿಗೆ ದೇಹ ಬರಿದಾಯ್ತು ದೇಹದ ಅಸ್ತಿಯನ್ನು ಹರಿವ ನೀರಿಗೆ ಬಿಟ್ಟಾಯ್ತು **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

22. Sun is fire

Image
  Every morning sunshine the world  Catch all things you missed at night  Don't go back to yesterday  The time is not going back  Enjoy the things where you stand  But I miss the beautiful memories  I am always a single  I am so Red hot  * Catch the sun before it burn  Here it removes darkness and shine Catch the sun before it fire  If sun is moves West lost the first*  I never understand  Why night will come  But I miss the shining day  I have always move fast and slow  Never ready to leave this world  I have always move fast and slow  But I miss the sun in the night  **********Writer********* Dr. Chandrashekhar channapura halappa