Posts

Showing posts from March, 2022

ಎಲ್ಲಾ ಉಂಟು

Image
ಒಳಗೆ ಹೊರಗುಂಟು ಈ ಲೋಕ  ಕಗ್ಗಂಟು ಮನಸ್ಸು ಮನಸ್ಸುಗಳ ಮದ್ಯೆ ಚಿಂತೆ ನೊರೆಂಟು ಬಯಸಿದರೆ ಸಿಗದ ಬೆಳಕಲ್ಲಿ ನೋವುಂಟು ನನ್ನಾಸೆ ಹೂವಿಗೆ ಬೇಡಿಕೆ ಬಹಳ ಉಂಟು  ಹಾರುವ ಹಕ್ಕಿಗೆ ನೊರೆಂಟು ತೊಡರುಂಟು ಈಜುವ ಮೀನಿಗೆ ಸಮುದ್ರದಿ ಸಾವುಂಟು ಹಾಡುವ ಕೋಗಿಲೆಗೆ ಮಾಮರದ ಚಿಗುರುಂಟು ಬರಹಕು ಶಾಹಿಯ ಪದದಿ ಕೊನೆಉಂಟು  ಹರಿವ ನದಿಗೆ ಸಮುದ್ರದಿ ನೆಲೆ ಉಂಟು ಹಾರುವ ಗಾಳಿಪಟದ ಮುಗುದಾರ ಕೈಲುಂಟು ನಗುವ ಕೆನ್ನಗೆ ವಯಸ್ಸಲ್ಲೂ ಸುಕ್ಕುಂಟು ಮನಸ್ಸಿನ ವ್ಯಥೆಗೆ ಚಿಂತೆ ಎಂಬ ಸಮಾದಿ ಉಂಟು  ಮಾನವನಿಗೂ ಅರಿಯದ ವಿಸ್ಮಯ ಉಂಟು ಆಕಾಶದಿ ನಕ್ಷತ್ರದ ಮಿಂಚಿನ ಗೂಡು ಉಂಟು ಸೂರ್ಯನಲಿ ಕುದಿಯುವ ಬೆಂಕಿಯ ಸೆಲೆ ಉಂಟು  ಎಲ್ಲವೂ ಉಂಟು ಯಾರಿಗೂ ತಿಳಿಯದ ಕಗ್ಗಂಟು ಎಲ್ಲದಕ್ಕೂ ತನ್ನದೇ ಆದ ಹಿತಿ ಮಿತಿ ಉಂಟು  ಸರ್ವರಿಗೂ ಸಮಪಾಲು ಸಹಬಾಳ್ವೆ ಉಂಟು  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹೇನಿದು ಗೋಳು

Image
ಓ ದೇವರೇ ಒಮ್ಮೆ ನೀ ಕೇಳು ಹೇನಿದು ಗೋಳು ಕಣ್ಣ ನೋಟಕೆ ಕುಣಿದಿದೆ ಬಾಳು ತುಂಟ ನಗೆ ಬೀರಿದೆ ವಯಸ್ಸು ಮಾತು ಮಾತು ಮುತ್ತಾಗೋ ಕನಸು ಒಲವ ಪಯಣದಿ ಪ್ರೀತಿ ಮರೆತ ಹೂವು  ಅರಳುವ ಮುಂಚೆಯೇ ಯಾಕೋ ಬಾಡಿದೆ ಮನದ ಆಸೆಯ ಕಿತ್ತು ತಿಂದಿದೆ ನೋವ ತಾಳದೇ ಮನವು ಬೇರೆ ದಾರಿ ಹಿಡಿದಿದೆ ಕಾಣದ ಲೋಕ ಕೈಬಿಸಿ ಕರೆದಿದೆ ಪ್ರೀತಿಲಿ ಸೋತು ನೊಂದ ಮನವನು ಸಂತೈಸಿ ಹೇಳಿದೆ ನನ್ನ ಅಳುವ ದೊರೆ ನೀನೇ ಈ ಲೋಕವು ನಾನೇ ಹೇನಿದು ಗೋಳು ಓ ದೇವರೇ ಕೇಳು ಕಣ್ಣ ನೋಟಕೆ ಕುಣಿದಿದೆ ಬಾಳು ಜಗವ ಗೆಲ್ಲೊ ಚಲದಿ ಬಂದ ಇವನ ಬದುಕು ತರಗೇಲೇಯಂತೆ ಹುದುರಿ ನಿಂತಿದೆ ಸಾವು ಒಂದೂ ಸನಿಹಕೆ ಬಂದು ಕನಸು ಕೊಂದು ನೂರಾಸೆ ತಿಂದು ಬದುಕ ಮುಗಿಸಿದೆ ಓ ದೇವರೇ ನೋಡು ಗೋಳು ಈ ಸಾವು ನ್ಯಾಯವೇ ಹೇಳು *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನಡೆದು ಹೋಯಿತಲ್ಲ

Image
ಕವಿಯಾಗ ಬಯಸಿ ನಾ ಕವನ ಗೀಚಲಿಲ್ಲ ಅಂಕೆಗಳ ಮುಂದೆ ನಾನಿದ್ದರೆ  ಬೆಲೆ ಎಂದು ಸೊನ್ನೆ ಹುಟ್ಟಲಿಲ್ಲ ಹರಿವ ಸಿಹಿ ನದಿಯ ನೀರು ಉಪ್ಪೆಂದು ತಿಳಿದು ಸಮುದ್ರ ಸೇರಲಿಲ್ಲ ಅರಣ್ಯದಲ್ಲಿ ವನ್ಯ ಮೃಗಗಳ    ನೋಡಿ ಜಿಂಕೆ ಜೀವಿಸುತಿಲ್ಲ ಸಮುದ್ರದಿ ಸಾವೆಂದು ತಿಳಿದು ಮೀನು ಈಜು ಕಲಿಯಲಿಲ್ಲ ಬೆಂಕಿಯಲಿ ಬೇಯುವೆ ಎಂದು ಹೆದರಿ ಮರಗಿಡ ಬೆಳೆಯಲು ನಿಲ್ಲಿಸಲಿಲ್ಲ ದ್ರೋಣಚಾರ್ಯ ಎಂಬ ಗುರುವು  ಶಿಷ್ಯ ಏಕಲವ್ಯಾನಿಗೆ ವಿದ್ಯೆ ಕಲಿಸಲಿಲ್ಲ ಸೀತೆಯು ರಾವಣನ ನೋಡಿ ರಾಮಾಯಣ ಶುರುವಾಗಲಿಲ್ಲ  ಶಕುನಿ ಆಡಿದ ಪಗಡೆಯಟಕೆ ಮಹಾಭಾರತ ನಡೆಯಲಿಲ್ಲ ನನ್ನ ನಲ್ಲೆಯ ಕುಡಿ ನೋಟದ ಮೃದು ಮಾತಿಗೆ ಸೋತು ನಾನು ನಲ್ಲ ನಾಗಲಿಲ್ಲ ಚಂದ್ರನಿಗೆ ಹೆದರಿ ಓಡಿ ಸೂರ್ಯ ಮುಳುಗಲಿಲ್ಲ ಮನುಷ್ಯನ ಸೃಷ್ಟಿ ನೋಡಿ ಪ್ರಕೃತಿಯ ದೈವ ಬೆರಗಾಗಲಿಲ್ಲ  ನಡೆವ ಕಾಲದಿ ತಡೆಯದೆಯೇ ಎಲ್ಲಾ   ನಡೆದು  ಹೋಯಿತಲ್ಲ. *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಯುಗಾದಿ

Image
ನವ  ವಸಂತದ ಯುಗಾದಿ ಹೊಸವರುಷದ ಬುನಾದಿ ಚಿಗುರೆಲೇ ಚಿಗುರಿ ವನದಿ ಹಕ್ಕಿ ಚಿಲಿಪಿಲಿ ಕೂಗಿ ಸಂತಸದಿ ಮುಂಗಾರು ಮಳೆಯೂ ಬಂತು ನೋಗವ ಕಟ್ಟಿ ಜಗವ ಗೆಲ್ಲುವಂತೆ  ಹುಳುಮೆ ಭೂಮಿ ಅಸನು ಆತು ರೈತನ ಮೋಗಾದಿ ಖೂಷಿ ತಂತು ಹರಿಶಿನ ಎಣ್ಣೆ ನೀರು ಮೈ ತಾಕಿ ಚರ್ಮದ ಕಣವ ಇಂಚಿಚು ಸೋಕಿ ಕೊಳೆಯೋ ತೆಗೆಯೋ ಸ್ನಾನವೇ ಪಾಪ ಕಳೆಯೋ ಯೋಗವೆ ಆಗಸದಿ ತುಂಡಾದ  ಚಂದಿರ ನೋಡಲು ಏಕೋ ಅವಸರ ಕಂಡ ಒಡನೆ ಬೇವು ಬೆಲ್ಲ ಕಷ್ಟ ಸುಖವು ಸಮದಿ ಬಾಳ ಲ್ಲೆಲ್ಲಾ  ಊರ ತುಂಬಾ  ಒಳ್ಳೆ ಸಡಗರ ಹಿರಿಯರ ಆಶೀರ್ವಾದ ಜಯಕರ  ಈ ವರುಷ ಮಳೆಯೂ ಜಾಸ್ತಿ ಬೀಸೋ ಗಾಳಿ ಕಡಿಮೆ ಓ ಅರ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಾತಲಿ ಬೆಲ್ಲ

Image
ನಲ್ಲೆಯೇ ನಿನ್ನ ನೋಟಕೆ ಸುಮ್ಮನೆ ಸೋತಿಹೇ ನಾನೀಗ ನಿನ್ನ ಮೋಹಕ ನಗುವಿಗೆ ಪ್ರೇಮಿಯೂ ನಾನೀಗ ಮಾತಲ್ಲಿ ಬೆಲ್ಲ ಮುದ್ದಾದ ಗಲ್ಲ ಸವಿಯಲಿ ಹಿಡಿದ ನಾನೆ ನಲ್ಲ ಪಿಸು ಪಿಸು ಮಾತು ಹಾಡು ಮೆಲ್ಲ ಬಳುಕುವ ಸೊಂಟ ಕಾಮನಬಿಲ್ಲ ಹದಿಹರೆಯದ ವಯಸ್ಸು ಉಕ್ಕುವ ಸುಂದರಸೋಗಸು  ಮನದಲ್ಲಿ ಬಿತ್ತಿದೆ ಕನಸ್ಸು ಏಕೋ ಏನೋ ನಿನ ಮೇಲೆ ಮನಸ್ಸು ಕಾಡುವ ಸುಂದರ ಮೊಗದೂಳೆ  ಮುಡಿಯಲ್ಲಿ ಮಲ್ಲಿಗೆ ಮುಡಿದವಳೇ ಕಣ್ಣಲೇ ನನ್ನ ಕರೆದವಳೇ ನಗುವಲಿ ನನ್ನ ಸೆಳೆದವಳೇ ಕುಂತರು ಹಾಗೆ ನಿನ ಧ್ಯಾನ ನಿನ್ನ ಮಾತು ಸುಂದರ ಗಾನ ಆಸೆ ಏಕೋ ಬಯಸಿ ಮಿಲನ ಪ್ರೀತಿಗೆ ಪ್ರೀತಿಯ ನೆನಪೇ ಮೌನ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಕಣ್ಣಮುಚ್ಚಾಲೆ

Image
ಕಣ್ಣು ಕಾಣದಾಯಿತೇ ಕುರುಡು ಪ್ರೀತಿಗೆ ನೋಟವೇಕೋ ನಾಟಿತೆ ಮನದ ಒಲವಿಗೆ ನಿನ್ನ ಆಟ ಕಣ್ಣ ಮುಚ್ಚಾಲೆ ಸೋತ ಪ್ರೀತಿ ಊಯ್ಯಾಲೆ ಬದುಕು ಭಾರ ನಿನ್ನ ಗುಂಗಲ್ಲೇ ಮರೆತೇ  ನಿನ್ನ ನನ್ನ ಕನಸ್ಸಲ್ಲೇ ಕಾಣದ ಪ್ರೀತಿ ಏಕೋ ಕತ್ತಲೆ ಬಾಳ ಕೈಯೊಂದು ಬೆನ್ನಲ್ಲೇ ಮನವು ಕೆರಳಿತು ಮತ್ತಲ್ಲೇ ನಿನ್ನ ನೆನಪು ಬಂದಾಗ ಓ ನಲ್ಲೆ ಹೃದಯ ಭಾರವಾಯಿತು ಮನಸ್ಸು ಮೌನವಾಯಿತು ಕನಸ್ಸು ಕರಗಿ ಹೋಯಿತು ನಿನ್ನ ಹೆಸರಲ್ಲಿ ಸೋಲು ನನದಾಯಿತು *************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಪ್ರೀತಿ ನೋವು

Image
  ಮನಸ್ಸು ಯಾಕೋ ಬರಿದಾಯ್ತು ನಿನ್ನ ನೆನಪೇ ಕೊನೆಯಯ್ತು ಯಾರು ಬರೆದ ಹಣೆಯ ಬರಹ ಅಳಿಸಲಾರದ ನೋವೇ ವಿರಹ ನೀನು ಇರದ ಬದುಕು ಕಾದ ಕಬ್ಬಿಣದ ಸರಕು ಬಾಳ ನೋಗವೆ ಬಿರುಕು ತಿರುಗೋ ಕಾಲ ಚಕ್ರ ಮುರುಕು ನೂರು ಬಾರಿ ದೇವರ ಶಪಿಸಿ ಒಲವಿಗಾಗಿ ಪರಿತಪಿಸಿ ಕಾಣೆಯಾಯ್ತು ಕಂಡ ಕನಸ್ಸು ಕುಲುಮೆಯಾಗಿದೆ ಈ ಮನಸ್ಸು ಕಣ್ಣ ಹನಿಯು ರಕ್ತವಾಯ್ತೆ ಜೀವನದ ಕಥೆಯು ಮುಗಿದುವೋಯ್ತೆ ಹಾಳೆ ಹರಿದು ಗಾಳಿ ಪಟವು ಗಾಳಿಯಲ್ಲಿ ಹಾರದಾಯ್ತೆ  ಬಾಳ ಆಟದಲ್ಲಿ ಸೋತೆ ನಾನು ದಾರಿ ತಪ್ಪಿ ಅಲೆದೆ ನಾನು ತನುವು ಒಮ್ಮೆ ಹಾಗೆ ಕರಗಿ ಬಾರದೆ ಹೃದಯ ಮರುಗಿ ನೀನು ಇರದ ಲೋಕ ಶೂನ್ಯ ನಿನ್ನ ನಗುವೇ ಪ್ರೀತಿ ಮಾನ್ಯ ಬದುಕು ಒಂದೂ ಬರಡು ಭೂಮಿ ನಾನು ನಿನ್ನ ಹುಚ್ಚು ಪ್ರೇಮಿ  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ನನ್ನಾಸ್ಸೇ ಹೂವು

Image
ನನ್ನಾಸೆ ಹೂವಿಂದು ನಸುನಗುತಾ ಅರಳಿದೆ ನೂರೆಂಟು ಕನಸ ಸಿಹಿ ಹೊತ್ತು ತಂದಿದೆ ಕಾಣದ ಆಸೆಯೊಂದು ಕೈಬಿಸಿ ಕರೆದಿದೆ ನನ್ನ ನೂಕಿ ಮನವ ಕಲಕಿ ದೂರಾಗೋ ಬಯಸಿದೆ ಎಷ್ಟು ಪ್ರೀತಿ ಕೊಟ್ಟರು ದುಂಬಿ ಕನಸ ಕಂಡಿದೆ ಮನಸ್ಸೇಕೋ ಇಂದು ಚೂರಾಗಿದೆ ಯಾರಿಗೆ ಹೇಳಲಿ ನೋವನು ಒಲವೇಕೋ ಮೌನದಲ್ಲಿ ಬರಿದಾಗಿದೆ ಮೋಡದ ಮಳೆಯೂ ಸುರಿದು ಕಣ್ಣ ಹನಿಯು ನೀರಾಗಿದೆ ಕನಸ್ಸಿನ ಮೂಟೆ ಸವೆದು ಪ್ರೀತಿ ಮಂಜಿನಂತೆ ಕರಾಗೋಗಿದೆ ಗುಬ್ಬಚ್ಚಿ ಗೂಡಿನಲ್ಲಿ ಹಕ್ಕಿ ಇರದೇ ಜೋತಡೋ ಮನೆಯಾಗಿದೆ ನಸುನಕ್ಕ  ಹುವೊಂದು ಮನದಲ್ಲಿ ಬೆಂಕಿ ಇಟ್ಟು ನಗುವಿನಲ್ಲಿ ನನ್ನ ಸುಟ್ಟು ಬೇರೆಯ ಹೃದಯದ ಪಾಲಗಿದೆ ನೀರಿನಲ್ಲಿ ಮೂಡಿದ ಬಿಂಬವೊಂದು ಸಣ್ಣ ಹನಿಗೆ ಛಾಯೆಯೆ ಮಾಯವಾಗಿದೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮದುವೆ ಮುಂಚೆ ಇಂಚೆ

Image
ಮದುವೆಯ ಮುಂಚೆ ನಾನು ಒಂಟಿ ಬಯಸಿತು ಮನವು ಏಕೋ ಜಂಟಿ ಸಿಕ್ಕಳು ನನಗೆ ಒಬ್ಬಳು ತುಂಟಿ ನೋಡಲು ಇವಳು ಗೋರಂಟಿ ಸಾಗಿತು ಜೀವನ ನಗುವಿನಲಿ ಮಾಗಿತು ಮೈಮನ ಉಲ್ಲಾಸದಲ್ಲಿ ಹಾರಿತು ಮನಸ್ಸು ಆಕಾಶದಲ್ಲಿ ತೆಲಿತು ಜೀವನ ಸಮುದ್ರದಲ್ಲಿ ಸಾಗುತ ಸಾಗುತ ಏಕೋ ಬೇಸರ ಮಾತು ಮಾತಿಗೂ ಪ್ರೀತಿಯೇ ಅಪಸ್ವರ ದಿನವು ಕೂಡ ನೋಡುವೆ ಮುಷ್ಕರ ಮರೆಯಿತೇ ಕಲಿತ ಸಂಸ್ಕಾರ ಮದುವೆಯ ನಂತರ ಜೀವನ ಸಾಗಿದೆ ಬದುಕಿನಾ ಹೇಳು ಬಿಳು ಕಂಡಿದೆ ನೋವು ನಲಿವಿನ ಊಟವ ಉಂಡಿದೆ ಮನಸ್ಸುಗಳು ಪೂರ್ತಿ ಮಾಗಿದೆ ಹುಟ್ಟಿದ ಮಕ್ಕಳು ಬೆಳೆದು ನಿಂತರು ಮಾಡಿದ ಅಸ್ತಿಗೆ ಜಗಳಕೆ ಕುಂತರು ಯೋಚನೆ ಮನದಲಿ ಸುಮ್ಮನೆ ನಿಂತರು ಯಾರಿಗೆ ಹೇಳಲಿ ಮನದ ಕೆಸರು  ಕಾಲವ ಕಳೆಯುತ ಜೀವನ ದುಡುತ ದೇವರ ಬೇಡುತ ಮನದಲಿ ಮರುಗುತಾ ಹುಟ್ಟು ಸಾಕು ಜೀವನ ಸಾಕು ಮಾನವನ ಜೀವನ ಮತ್ತೆ ಬೇಕು ಕಾಣದ ಲೋಕ ಕೈಬಿಸಿ ಕರೆದಿದೆ ಸ್ವರ್ಗದ ಬಾಗಿಲು ತೆರೆದಿದೆ ಮಸಣದ ಹೂವು ನಗುತಾ ಕೇಳಿದೆ ಬರೆದ ವಿಧಿಯೂ ನೀ ಮುಡಿ ಎಂದಿದೆ ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಒಲವಿನ ಮಿಡಿತ

Image
ಕನಸಲು ಕಾಣದ ಕವಿತೆ ನೀನು ನನ್ನ ಎದೆಯ ಬಡಿತವೇ ನೀನು ಕಣ್ಣಿಲಿ ಕಂಡ ಚಿತ್ರವೇ ನೀನು ಆಕಾಶದಿ ಮಿನುಗುವ ನಕ್ಷತ್ರವೆನು ನನ್ನ ಒಲವಿನ ಮಿಡಿತವೇ ನೀನು  ಕಾಣದೆ ನಿನ್ನ ಮನಸ್ಸು ನೊಂದಿದೆ ಹೃದಯದ ಬಡಿತ ನಿನ್ನನೇ ಕೂಗಿದೆ ವಸಂತ ಮಾಸದಿ ಚಿಗುರೆಲೇ ಕರೆದಿದೆ ಹರಿಯುವ ನದಿಯು ನೀ ನನ್ನ ವಳು ಎಂದಿದೆ ಯಾರಿಗೂ ಸಿಗದ ಮಾಯೆಯೇ ನೀನು ಕನಸಲಿ ಕಂಡ ಅಪ್ಸರೆಯೇನು ಒಲವಿನ ಸೆಳೆತಕೆ ಸಿಕ್ಕ ನಾನು ನಿನ್ನನ್ನು ಬಯಸಿ ಅಲೆದಾಡಿಹೆನು ಪ್ರೀತಿಯ ಸಮುದ್ರದಿ ತೇಲೋ ದೋಣಿ ಆಕಾಶಕೆ ಹಾಕಲು ಹೊರಟೆ ಏಣಿ ಸಿಗುವುದೇ ನನ್ನಗೆ ನಿಮ್ಮನೆ ಓಣಿ ನೀನೇ ನನ್ನ ಮನಸ್ಸಿನ ರಾಣಿ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಭಾವನೆಗಳ ಚಿತ್ತಾರ

Image
ಕಾಣದ ಹೂವೊಂದು ಕೈ ಬಿಸಿ ಕರೆಯಿತು ನೋವಿನ ತೀರಕೆ ನನ್ನನ್ನು ಸೆಳೆಯಿತು ನಡು ದಾರಿಯಲ್ಲಿ ಏಕೋ ತೊರೆಯಿತು ಬಿಡಿಸದ ರಂಗೋಲಿ ಬದುಕನ್ನು ಕಟ್ಟಿತು ಒಲವಿನ ಆಸೆ ಮತ್ತೆ ಹುಟ್ಟಿತು ಜೀವನವು  ಬಣ್ಣ ನೋವು ಗೆಲುವಿನ ಸುಣ್ಣ ತೆರೆದು ನೋಡು ಕಣ್ಣ ನೆನೆದು ಸಾಗಿದ ಮಣ್ಣ ಬರೆದ ಭಾವನೆಗಳ ಚಿತ್ತಾರವೇ ನೆನಪುಗಳ ಬಣ್ಣ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಾಗರ ಹಾವು

Image
  ದಾರಿಯಲ್ಲಿ ನಡೆವಾಗ ಹುಲ್ಲು ಹಾಸಿನ ಮೇಲೆ ಹರಡಿ ಬಿದ್ದಿತ್ತು ಹಾವು ತಡೆಯಲಾರದೇ ಕಾವು ನೋಡದೆ ನಾ ತುಳಿದೆ ಬುಸ್ಸುಗೂಟ್ಟಿತ್ತು ಸರ್ಪ ಹೆಡೆಯಲ್ಲಿ ರೋಷದ ದರ್ಪ ಕಲಕಿತು ಮನಸ್ಸು ಬೆದರಿತು ದೇಹ ಹೆದರಿತು ಜೀವ ನೋಡಿ ಹೆಡೆಯೆತ್ತಿದ ಹಾವ ಕೆಣಕಿದೆ ಹಾವ ಹಾವು ಇಟ್ಟಿತ್ತು ದ್ವೇಷ ವಿಧಿಯಿಲ್ಲದೇ ಹಾವ ಸಾಹಿಸುವ ರೋಷ ಬಿಟ್ಟರೆ ನಾ ಕೆಟ್ಟೆ ದೊಣ್ಣೆಯಲ್ಲಿ ಬಡಿದೀಟ್ಟೆ  ಬೆಂಕಿಯಲ್ಲಿ ಸುಟ್ಟೆ ದೇವರ ಬಳಿ ಬಂದು ಎಳ್ಳು ದೀಪ ಹಚ್ಚಿ ಬಿಟ್ಟೆ ಮಾಡಿದೆ ನಾ ಪಾಪ ತಡೆದು ಬಿಡು ಹಾವಿನ ಶಾಪ ಇದು ಯಾವ ಜನ್ಮದ ತಾಪ ಮನದಿ ಮೂಡಿದೆ ರೂಪ ದೇವರ ಬೇಡಿದೆ ಪಾಪ ಪ್ರಜ್ಞೆಯು ಕಾಡಿದೆ ತಿಳಿಯದೆ ನಡೆದ ಘಟನೆ ಮನಸ್ಸನು ಹಿಂಡಿದೆ *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಓರೆ ನೋಟ

Image
ಓರೆಗಣ್ಣ  ನೋಟ ಕಾಡಿತೇಕೆ ನನ್ನನ್ನೇ ಮನಸ್ಸು ಬಂದು ಏಕೋ ಕೂಗಿತೇಕೆ ಮೆಲ್ಲನ್ನೇ ಆಸೆ ನೂರು ಹಾಗೆ ಬಯಸಿತು ನಿನ್ನನ್ನೇ ಸನಿಹ ನೀ ಬರಲು ನೋಟ ಚುಚ್ಚಿತು ತಣ್ಣನ್ನೇ ಮಿಡಿವ ಹೃದಯ ಕನಸ್ಸು  ಕಂಡಿದೆ ಒಲವ ಬಯಕೆ ನೂರು ಕಥೆಯ ಹೇಳಿದೆ ನಿನಗಾಗಿ ಪ್ರೀತಿ ಮೋಹ ನೀನೇ ನನ್ನ ಒಲವ ದಾಹ ಕಣ್ಣ ಮುಂದೆ ನೀ ಬಂದು ಹೇಳು ಒಮ್ಮೆ ನನ್ನವನ್ನೆಂದು ಕೊಡುವೆ ನಾ ನನ್ನೇ ಮರೆತ್ತೋಯ್ತು ನೆನ್ನೆ ಪ್ರೀತಿ ಬೆಸುಗೆ ನೆನೆದು ತನ್ನೆ ನೀ ನನ್ನ ಮಧುರ ಸೊನ್ನೆ **********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ನೋವಾಟೊ ಜೂಬ್ಲೀ

ಹಾಯ್ ಗೆಳೆಯರೆ ಈ ಕವನವನ್ನು ನಮ್ಮಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕಡೂರಿನಲ್ಲಿ ನಡೆದ ಮೊದಲೆನೆಯ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ...... ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದ ಕವನ  ವಿದ್ಯಾaಭ್ಯಾಸದಾ ಎರಡು ವರ್ಷ ಕಂಡ  ಹೊಸ  ಹರುಷ ಮರೆಯಾಗೋ  ದಿನಗಳು ಮರೆತ ಮನಸಿನ ಕಲೆಗಳು ಸೇರಬಾರದಿತ್ತು ನಾವೂ ಇಲ್ಲಿ ಸೇರಿದೆವು ನಾವೂ ತಿಳಿಯದೆ ಇಲ್ಲಿ ರಸಾಯನಶಾಸ್ತ್ರ  ಏಕೋ ಕಷ್ಟ ಓದಿದ್ದು ಮರೆತೊಗೊ ಕಾಯಿಲೆಯೇ ಇಷ್ಟ ಕಲಿತಿದ್ದು ಎಷ್ಟೋ ಮರೆತಿದ್ದು ಎಷ್ಟೋ ಕುಣಿದ  ನೆನಪು ನಲಿದ ಕ್ಷಣ ಹೊಳಪು ಹೊಸದಾಗಿ  ಬೆರೆತು ಗೆಳೆತನದಿ ಕಲೆತು ನೋವುಗಳ ಮರೆತು ಕಷ್ಟಗಳ ಅರಿತು ಪರೀಕ್ಷೆಗಳ ಬರೆದು ಉತ್ತಿರ್ಣಕ್ಕಾಗಿ  ಕಾದು ಬೇಜಾರು ಮನಸ್ಸಲ್ಲಿ ಕಡಿಮೆ ಅಂಕ ಯಾಕೋ ಇಲ್ಲಿ ಉಪನ್ಯಾಸಕರ ಶಪಿಸಿ ವಿಶ್ವವಿದ್ಯಾಲಯವ ಸ್ಮರಿಸಿ ಕಣ್ಣು ಮುಚ್ಚಿ ತೆಗೆಯೋವೊಳಗೆ ಮುಗಿದು ಹೋಯ್ತು ಎರಡು ವರ್ಷ ನೆನಪುಗಳು ಕಾಡುವುದು ಮತ್ತೆ ಕಳೆದ ದಿನಗಳ ನೆನಪಿನಲಿ ಕಾಲವನು ದೂಡುವುದು ಯಾರಿಗೆ ಹೇಳುವುದು ನಮ್ಮ ಹಣೆ ಬರಹವೇ ಇದು ಏನುತ ನಗುತಾ ಮುಂದೆ ಸಾಗುವುದು *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ಒಡೆದ ಬದುಕು

Image
ಒಲ ವಾಗೋ ನಿನ್ನ ಸೆರೆಯಿಡಿಯಲ್ಲಿ ಹೇಗೆ ಚಿನ್ನ ನಿನ್ನ ಮುದ್ದೂ ಪ್ರೀತಿಯನ್ನ ಮುದ್ದಾಡಲೆ  ರನ್ನ ಕನಸಲ್ಲಿ ಕಂಡೆ  ನಿನ್ನ ಪ್ರತಿಬಿಂಬವ ಸಣ್ಣ ಹನಿಯೊಂದು ಚೂರು ಮಾಡಿತು ನನ್ನಯ್ಯ ಒಲವ ಬಿಂಬ ಮನಸು ಮನಸು ತಾಗುವ ಮುನ್ನ ಒಲವಾಯಿತು ನಾ ಕಂಡ ಕನಸು ನಿನ್ನಿಂದ ನೆಲೆಯಾಯ್ತು ನಿನ್ನ ನಾ ಸೇರುವ ಒಳಗೆ ಜೇಡರ ಬಲೆಯಾಯ್ತು  ಮಧುರ ಬಾವದಿ ಹಾಡೊಂದು ಹಿತವಾಯ್ತು ಸಂಗೀತದ ನಾದಕೆ ಹೃದಯ ಕುಣಿದಾಯ್ತು ನಿನ್ನ ನೋಡುತ ನನಗೆ ಯಾಕೋ ಮನಸಾಯ್ತು ನಿನ್ನ ಬಿಟ್ಟಿರದೆ ಜೀವ ತೋಳಲಿದೆ ನೀ ಬಳಿ ಬಾ ಎಂದು ಮನಸ್ಸು ಕೂಗಿದೆ ನಿನ್ನ ಅಸೆ ಹೊತ್ತು ನಾನು ತಿರುಗಿದೆ ನೀ ಇರದೇ ಏಕೋ ಬದುಕು ಒಡೆದ ಕನ್ನಡಿಯಾಗಿದೆ **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

ಏ ನೀನು ಕುಡುಕ

Image
🌹🌹ಏ ನೀನು ಕುಡುಕ 🌹🌹 ಕುಡುಕ ಕುಡುಕ ಏನ ಬೇಡ ಕುಡುಕನ ನಡೆಯ ಜರಿ ಬೇಡ ಮತ್ತಿನಲಿ ಮಾತಾಡುವ ಸಿಟ್ಟಿನಲ್ಲಿ ಕೂಗಡುವ ರೂಚ್ಚಿಗೆದ್ದು ರೇಗಾಡುವ ಮನಸಲಿ ಇರುವ ನೋವ ಬಿಚ್ಚಿ ಬಿಚ್ಚಿ ಹೊರಹಾಕುವ ನೋವುಗಳು ನೂರೆಂಟು ಬೆಳೆದ ಪರಿ ನೋವುಂಟು ಅಳಿಸದ ಯಾತನೆ ಮನೆ ಮಾಡಿದೆ ಕಂಡ ಕನಸು ನೂರೆಂಟಿದೆ ಕನಸಿಗಾಗಿ ನಾ ಕುಡಿದೆ ಜೀವನದಲ್ಲಿ ಯಾವುದು ನೆರವೇರದೆ ನೋವು ಮನಸಲ್ಲಿ ನನ್ನ ಕಾಡಿದೆ ಕುಡುಕರಲಿ ನೂರೆಂಟು ವಿಧ ನೋವಿಗಾಗಿ ಕೂಡಿವರು ಸದಾ ಕುಡಿದು ಕುಡಿದು ಏರಿದೆ ಮದ ನಿಮಗಗಾಗಿ ಏಳುತಿರುವೆ ಪದ ತಟ್ಟುವೆನು ಮನೆಯ  ಕದ ಏರಿದಾಗ ನಶೆಯ ಅದ ನೋವಿಗಾಗಿ ಕೂಡಿವರು ನಶೆಯಿಂದಲೇ ಅಲೆವರು ಜೀವನವ  ಮರೆವರು ಮರೆತು ಮಾತಾಡುವರು ಯಾರು ನನ್ನವರು ಯಾರಿಗಾಗಿ ನಾನು ಕುಡಿವುದು  ಕುಡಿದು ದೇಶಕಾಗಿ ದುಡಿವುದು  ನನ್ನ ನಾ ಕುಡಿದು ಮರೆವುದು  ಕುಡಿದ ಅಮಲಿನಲಿ ಆಕಾಶದಿ ಹಕ್ಕಿಯಂತೆ ಹಾರುವುದು  ಜಾರಿಬಿದ್ದು ನಡು ದಾರಿಯಲ್ಲಿ ಮಲಗುವುದು  ಕೂಡಿದು ಮಾಡುವೇನು ಬೋದನೆ ಯಾರು ಕೇಳಬೇಕು ಇವರ ಮಾತಾನೇ ನೋಡಿ ನಗುವರು ಇವನ ಸುಮ್ಮನ್ನೆ ಕೊಡಬೇಡ ನೀನು ರೋದನೆ ಏ ಕುಡುಕ ಕುಡಿದು ಮಲಗು ನೀ ತಣ್ಣನೆ ನಿನ್ನ ನಂಬಿದವರಿಗೆ ತಪ್ಪುವುದಿಲ್ಲ ವೇದನೆ ಕುಡುಕರಿಗಾಗಿ ಬರೆದೆ ಕವನ ಹಾಗೆ ಮೆತ್ತನೆ ಬೈ ಬೇಡಿ ನನ್ನ ಓದಿ ನನ್ನ ಕವನವನೇ  *************ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

ಬಾಳು ಚದುರಂಗ

Image
  ನಿನ್ನ ಎದೆಯ ಗೂಡಿನಲಿ ನನಗೊಂದುಜಾಗ ಕೊಡುವೆಯ ನನ ಕನಸ ಸವಿ ಪ್ರೀತಿಗೆ ಮುದ್ದಾದ ಹೆಸರನಿಡುವೆಯ ನನ್ನ ಒಲವಿಗೆ ನಿನ್ನ ಸವಿ ಮನಸು ನೀಡುವೆಯ ಯಾರನು ಬಯಸದ ಮನಸ್ಸು ಏಕೋ ನೀನೇ ಒಲವು ಎಂದಿದೆ ನಿನ್ನ ಒಲವಿಗಾಗಿ ಕಾದು ಕುಂತಿದೆ ಹೇಳು ನೀ ನನ್ನವನು ಎಂದು ಕೂಗಿ ಕೇಳಿದೆ ಸಮಯದಿ ಜಾರದ ಮುದ್ದು ನೀನು ರವಿವರ್ಮನ ಕುಂಚದ ಅರಗಿಣಿ ನೀನು ಯಾರು ಅಳಿಸದ ರಂಗೋಲಿ ನೀನು ನಿನ್ನ ನುಡಿಗಾಗಿ ಕಾದಿರುವ ಮುಖ ಪ್ರೇಮಿ ನಾನು ಬಾಳು ಎಂಬ ಚದುರಂಗದಾಠದಿ ಮೆರೆವ ರಾಣಿ ನೀನು ನಿನ್ನ ಪ್ರೀತಿ ಅಂಬಾರಿಲಿ ಮೆರೆಸೋ ರಾಜ ನಾನು ಬ್ರಹ್ಮ ಆಡಿದ ಆಟವೆ  ಅಂತ್ಯ ಕೊನೆಗೆ ಇಲ್ಲಿ ಈ ಸಾಮ್ರಾಜ್ಯದಿ ಬಾಳೋಣ ನಮ್ಮ ಪ್ರೀತಿ ಚೆಲ್ಲಿ  ನಿನ್ನ ಗೆಲುವ ನೋಡುವ ಹುಚ್ಚು ಪ್ರೇಮಿ ಇಲ್ಲಿ *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಯುದ್ಧ ಯುದ್ಧ

Image
ಯುದ್ಧ ಯುದ್ಧ ಗೆದ್ದ ಗೆದ್ದ  ದೇಶ ದೇಶಗಳ ನಡುವೆ ಯುದ್ಧ ಎತಕಾಗಿ ರಣರಂಗ ನಡೆಯುತ್ತಿದೆ ಚದುರಂಗ  ಗುಂಡು ಕ್ಷಿಪಣಿಗಳ ನಡುವೆ ಕಾಳಗ ಅಕ್ರಮೀಸಲು ಹೊರಟು ನರಮೇದವು ನಡೆಯುತ್ತಿದೆ ಸೈನಿಕರ ಹತ್ಯೆ ಹಾಗುತಿದೆ ವಿದೇಶ ಜನರ ತೆರವು ಕಾರ್ಯ ನಡೆಯುತ್ತಿದೆ ಯಾರು ಗೆದ್ದರೆ ಏನು ಯಾರು ಸೋತರೆ ಏನು ಹೋದ ಜೀವಕೆ ಬೆಲೆ ಎಲ್ಲಿ ಮಾನವೀಯತೆಯ ನೆಲೆ ಎಲ್ಲಿ ಏತಕಾಗಿ ಈ ಯುದ್ಧ ಉಕ್ರೈನ್ ಗೆಲ್ಲಲು  ರಷ್ಯಾ ಶತ ಸಿದ್ದ ನಾಟೊ ಪಡೆಯ ಮುಸಿಕಿನ ಯುದ್ಧ ದೇಶಗಳು ಉಕ್ರೈನ್ ಬೆಂಬಲಿಸಿರಲು ರಷ್ಯಾ ನಿಲ್ಲಿಸಿತೇ ಕಾಳಗ ಏತಕಾಗಿ ಯುದ್ಧದ ಒಲಗ ಹುಂಬ ರಾಜಕಾರಣಿಗಳ ಜಂಬ ಜಗಳಾಕೆ ಮುಗ್ದ ಜೀವಗಳ ಬಲಿ ಸರಿಯೇ ಯಾರು ಏಳ ಬೇಕು ಬುದ್ದಿ ಯುದ್ಧ ಬೇಡ ಎಂದು ತಿದ್ದಿ  ನೆಲವನು ರಕ್ತದಲ್ಲಿ ಎದ್ದಿ ಮಾಡುವರು ಮಸಣದಿ ಶುದ್ದಿ ದೇಶ ಕಾಣುತಿದೆ ಘೋರಿ ರಸ್ತೆ ರಸ್ತೆಗಳು ಕಟ್ಟಡಗಳು ಹೊತ್ತಿ ಹುರಿದ ಕಾರುಗಳು ಹೇಳಿವೆ ಕ್ಷಿಪಣಿಗಳು ಬಾಂಬ್ಗಳು ಹಾಕಿದ ಚೂರಿ  ಮೂರನೇ ಮಹಾಯುದ್ಧ ಶುರುವಾಗುವುದೇ ಅಣುಬಾಂಬ್ಗಳ ಅಟ್ಟಹಾಸ ಮೇರುವುದೇ ಮತ್ತೊಮೆ ನರಕ ಸದೃಷವಾಗುವುದೇ ನೆಲೆಸಲಿ ಬೇಗ ಶಾಂತಿ  ಮುಗಿಯಲಿ ಯುದ್ಧ ಭೀತಿ ಬೆಳಗಲಿ ಹಸಿರು ಕ್ರಾಂತಿ ಕಿತ್ತೋಗಲಿ ಮನಸುಗಳ ಬ್ರಾಂತಿ ಪಟಿಸಲಿ ಓಂ ಶಾಂತಿ ಶಾಂತಿ *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಶಿವ ಶಿವ

Image
  ಕನಸಿನಲ್ಲಿ ಶಿವನ ಕಂಡೆ  ಇಡಿದ ಡಮಾರುಗವ ಕಂಡೆ ಮುಡಿಯಲ್ಲಿ ಚಂದಿರ ನೋಡಲೆಷ್ಟು ಸುಂದರ ನೀನೇ ತಾನೇ ಪರಶಿವ  ಹರಿವ ನೀರು ನೆತ್ತಿಯಲ್ಲಿ  ಜಾರಿದಾಗೆ ಗಂಗೆಯೂ ತೆರೆದ ಮನದ ತುಂಗೆಯೂ ಕೈಯಲ್ಲಿ ಹಿಡಿದ ತ್ರಿಶುಲಾ ನೀನೇ ತಾನೇ ಶಿವ ಶಿವ ಕೊರಳಿನಲ್ಲಿ ಸರ್ಪ ಸುತ್ತಿ ವಿಷದ ಹಾಲ ಹಲವಾ ಕುಡಿದ ನೀನೇ ವಿಷ ಕಂಠ ಧರೆಗೆ ಇಳಿದ  ಶ್ರೀ ಕಂಠ ಮೂರು ಕಣ್ಣು ಏಕೆ ನಿನಗೇ ಮುಕ್ಕೋಟಿ ಹೆಸರು ನಿನಗೆ ಸಿಟ್ಟಿನಲ್ಲಿ ಒಮ್ಮೆ ಸುಟ್ಟರೆ ಬುಮಂಡಲವೇ ಅಗ್ನಿ ದರೆ ಏಳುವೆ ನಾನು ಶಿವ ಶಿವ ಕಾಪಾಡು ನನ್ನ ಪರಶಿವ  ಪಾರ್ವತಿಯ ಪಕ್ಕದಲ್ಲಿ ನೀನು ಕುಂತೆ ಸ್ವರ್ಗದಲ್ಲಿ ಸೊಂಡಿಲ ಗಣಪ ಕಂಡ ಷಣ್ಮುಗಾ ಊರ ಸುತ್ತಿ ಬಂದ ನೀನೇ ತಾನೇ ಮಂಜುನಾಥ ಕಾಶಿಯಲ್ಲಿ  ವಿಶ್ವನಾಥ ಬಜಿಸುವೆವು ನಿನ್ನ ಕೇದಾರನಾಥ ಜೈ ಬಮ್ ಬಮ್ ಬೋಲೇನಾಥ  ನಿನ್ನ ಹೆಸರು ಸಿದ್ದಲಿಂಗ ಪೂಜಿಸುವರು ಇಷ್ಟಲಿಂಗ ಎಲ್ಲಾ ಕೊಡುವ ದೇವರೇ ಕೊಡು ನೀನು ಸುಖಧರೆ ನೀನೇ ತಾನೇ ಬ್ರಹ್ಮ ಲಿಂಗ ನನ್ನ ಕೊರಳ ಆತ್ಮಲಿಂಗ ಹರ ಹರ ಮಹಾದೇವ  ಬಜಿಸುವೆವು ನಿನ್ನ ಶಿವ ಶಿವ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್