Posts

Showing posts from September, 2025

ಮಕ್ಕಳ ಗೀತೆ -50

Image
ನೆಗೆದು ನೆಗದು ಜಿಗಿದು ಜಿಗಿದು  ಓಡುತಿರುವೆ ಏಕೆ ಕಂದಮ್ಮ  ಗುಡಿಯಲ್ಲಿ ಗಣಪ ಕಾಯುತಿಹನು  ಬಾರೆ ಹೋಗೋಣ ಚಿನ್ನಮ್ಮ  ನೀರಲ್ಲಿ ಬೆಳಕು ಚುಮ್ಮುತಿಹುದು  ಬಣ್ಣ ಬಣ್ಣದ ನೀರು ಸುರಿಯುತಿಹುದು  ನೋಡಲು ಚಂದ ಬಾರಮ್ಮ  ಕುಣಿದು ಕುಣಿದು ಆಡು ಬಾರೆ ಕಂದಮ್ಮ  ಗಣಪನ ಪೂಜೆ ಮುಗಿದಿಹುದು  ಪಲ್ಲಾರವೆಲ್ಲ  ಅಂಚಿಹುದು  ತಿನ್ನುವ ಬಾರೆ ಚಿನ್ನಮ್ಮ  ಜಗಿದು  ತಿನ್ನು ಕಂದಮ್ಮ  ಭಾರೆ ಮನೆಗೆ ಹೋಗೋಣ  ಮುದ್ದು ನಗುವಿನ ಕಂದಮ್ಮ  ಮತ್ತೆ ನಾಳೆ ಬರೋಣ  ಗಣಪನ ಪೂಜೆ ಮಾಡೋಣ **********ರಚನೆ**********  ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ

ಪಯಣ ಸೋತಿದೆ

Image
  ನೋವು ಏಕೋ ಭಾರವಾಗಿ  ಮನಸು ಮೌನವಾಗಿದೆ  ಹೃದಯವೇಕೋ ಬಡಿದು ಬಡಿದು  ಕಣ್ಣ ನೀರು ಅಳುತಿದೆ  ಪಯಣದಲ್ಲಿ ಯಾರಿಗೆ ಯಾರೋ  ದಾರಿ ದೂರವಾಗಿದೆ  ನಡುವೆ ಬಂದ ಎಡರು ತೊಡರು ದಾರಿ ದೂಡುವಂತಿದೆ ಕಾಣದ ಊರ ನೆನೆದು ನೆನೆದು  ಕಾಲ ಏಕೋ ಸೋತಿದೆ  ಎದೆಯ ಗಾಯ ಜಿನುಗಿ ಜಿನುಗಿ  ದೀಪ ಒಂದು ಉರಿದಿದೆ  ಸತ್ತ ಮೇಲೆ ಒತ್ತಿದ ಹಣತೆ  ಯಾರಿಗಾಗಿ ಬೆಳಕು ನೀಡಿದೆ ಮಳೆ ಇಲ್ಲದೆ ಬಿತ್ತಿದ ಬೀಜ  ಮಣ್ಣಿನಲ್ಲಿ ಮಣ್ಣಾಗಿದೆ ಮೂರು ದಿನದ ಬಣ್ಣದ ಬದುಕು ಯಾರಿಗಾಗಿ ಕಾಲ ಕೇಳಿದೆ  ನಿನ್ನ ನೀನು ಅರಿತು ಕಲಿತು  ಮಾಯವಾಗು ಎಂದಿದೆ ***********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ-75

Image
  ಸರಳ   ಜೀವನವೆಂಬುದು ತಿಳಿ ನೀ ಬಲು ಸರಳ  ಕಷ್ಟ ಸುಖ ಅರಿತು ಬಾಳು ನೀ ಮರುಳ  ಬದುಕು ಏಳು ಬೀಳು ತಿಳಿ ನೀನು ದುರುಳ  ಬದುಕನ್ನು ಸವಿದವರು ಏಕೋ ಅತಿ ವಿರಳ  ಜನತೆ   ಜೀವನದ ಹಂಗು ತೊರೆದು ಜೀವಿಸುವ ಜನತೆ  ಬಾಳ ಪಯಣ ಬಲು ಕಷ್ಟ ಬಾಳು ಘನತೆ  ಬಿದ್ದವರು ಎಳುವರು ತಿಳಿದು ನಡೆ ನಿನ್ನಂತೆ ತಗ್ಗಿ ಬಗ್ಗಿ ನಡೆಯುವುದು ಬಲು ವಿನಯತೆ  ಜನನ   ಬಾಳಿನಲ್ಲಿ ಬರುವುದು ಒಮ್ಮೆ ಜನನ  ಸತ್ತ ಮೇಲೆ ಆಗುವುದು ನಿನ್ನ ಮರಣ  ಮೂರು ದಿನದ ಈ ಬಾಳು ಒಂದು ಪಯಣ  ಬದುಕಿನಲ್ಲಿ ಬಾಳು ನೀನು ಓ ತರುಣ ************ರಚನೆ************** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -74

Image
  ಕುಂಭಮೇಳ ನಡೆಯಿತು ನಮ್ಮ ದೇಶದಿ ಕುಂಭಮೇಳ  ಸಾಧು ಸಂತ ಅಘೋರಿಗಳ ಜನ ಮೇಳ  ಗಂಗಾ ನದಿಯಲ್ಲಿ ಪುಣ್ಯದ ಸ್ನಾನ  ಪಾಪು ಮರೆಯಾಯಿತು ಗಂಗಾ ಸ್ಥಾನ  ದತ್ತಪೀಠ   ಬಾಬು ಬುಡನ್ ಗಿರಿಯ ದತ್ತಪೀಠ  ಹಿಂದೂ ಮುಸಲ್ಮಾನರ ಧಾರ್ಮಿಕ ಕೂಟ  ಧರಿಸಿದರು ಧರ್ಮದ ಮಾಲೆಯನ್ನು ಸ್ಮರಿಸಿದರು ದೈವ ಸನ್ನಿಧಿಯನ್ನು  ಗಿರಿ   ನೆಲೆಸಿವೆ ನಮ್ಮಲ್ಲಿ ಹಲವು ಗಿರಿ  ಪುಣ್ಯದ ನೆಲವಂತೆ ಕಲ್ಲತ್ತಿಗಿರಿ  ಧರ್ಮದ ನೆಲೆ ಬಾಬು ಬುಡನ್ ಗಿರಿ  ಹೊಯ್ಸಳರ ದೈವವಂತೆ ಶಕುನಗಿರಿ ***********ರಚನೆ************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -73

Image
  ಸೂರ್ಯ   ಸೂರ್ಯನು ಮೂಡಿಸಿದನು ಬಾಳಲಿ ಬೆಳಕು  ತೊಲಗಿಸಿದನು ಬದುಕಿನ ಚಿಂತೆ ಕೊಳಕು  ಬೆರೆಸಿದನು ಪ್ರೀತಿ ಮಮತೆಯ ಹೊಳಪು  ಬೆಳೆಸಿದನು ನವ ಉಲ್ಲಾಸದ ಉರುಪು ದೈವ   ಬಾಳನು ಬೆಳಗಿಸಿದ ಪ್ರೀತಿ ಹಣತೆ ದೈವ  ಉಲ್ಲಾಸದ ಚಿಲುಮೆಯ ನಾಡು ಭವ್ಯ  ಮನೆಮನ ಬೆಳಗಲಿ ಶಾಂತಿಯ ನೋಟ  ಅರಳಲಿ ಬಾಳಲಿ ನಮ್ಮಯ ಕನಸಿನ ಓಟ  ಅಯೋಧ್ಯ   ಅಯೋಧ್ಯೆಯಲ್ಲಿ ರಾಮನಿಗೆ ಮಂದಿರ  ಮೂಡಿದ ಜೀವನದಿ ಹುಣ್ಣಿಮೆ ಚಂದಿರ  ಹೊಸತನ ಅರಳಲಿ ಚುಮ್ಮುತ ಪ್ರೇಮ  ನೋವು ನಲಿವು ಎಲ್ಲಾ ನೀನೇ ರಾಮ *************ರಚನೆ************   ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -72

Image
ಹನುಮಂತ   ಕಾಯೋ ನೀನು ಹನುಮಂತ  ನೀನೆ ನಮ್ಮಯ  ಧೀಮಂತ  ಸಾಗಿಸು ನಮ್ಮನ್ನು ಸರಿ ದಾರಿಯಲಿ  ಕಾಪಾಡು ಈ ನೋವಿನ ಬದುಕಿನಲ್ಲಿ  ಶಕ್ತಿ   ಗುರುವೇ ನೀನು ತಾನೆ ಶಕ್ತಿ  ಗುರುವೇ ನಿನಗೆ ನಮ್ಮ ಭಕ್ತಿ  ನಿನ್ನಿಂದ ನಮಗೆ ಪಾಪದಿ ಮುಕ್ತಿ  ಕೊಡು ನೀನು ನಮಗೆ ಯುಕ್ತಿ  ಗುರು   ಬೇಡಿದ ನಿನ್ನ ನಮ್ಮ ಗುರುವೇ  ಕೊಡು ನೀನು ಬದುಕುವ ವರವೇ  ಏಕೆ ನಿನಗೆ ಸೇಡಿನ ಛಲವೇ   ನೀನು ತಾನೇ ಬಾಳಿನ ಗೆಲುವು  *************ರಚನೆ*************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಚುಟುಕು ಕವನ -71

Image
  ಧರ್ಮಸ್ಥಳ ಧರ್ಮಸ್ಥಳದಲ್ಲಿ  ಸುಮ್ಮನೆ ಬುರುಡೆ ಬಂತು  ಟಿವಿ ತುಂಬಾ ಜನರಿಗೆ ಕುತೂಹಲ ತಂತು ಧರ್ಮ ಅಧರ್ಮಗಳ ಮುಂದಿನ ಲೆಕ್ಕಾಚಾರ  ಮಂಜುನಾಥನಿಗೆ ಇವರು ಮಾಡುವ ಅಪಚಾರ  ಚಿಂತನೆ   ಎಲ್ಲಿ ನೋಡಿದರೂ ಬುದ್ಧಿಜೀವಿಗಳ ಚಿಂತನೆ  ಲೆಕ್ಕಕ್ಕೆ ಬಾರದ ಮಾತುಗಳ ಮಂತನೆ  ನ್ಯಾಯ ನೀತಿಗಳ ಸುಮ್ಮನೆ ಬೋಧನೆ  ಆಚರಿಸದ ಪೊಳ್ಳುಬರವಸೆಗಳ ರೋಧನೆ  ಕುಟುಂಬ   ಎಲ್ಲಿ ಕಾಣೆಯಾಗಿದೆ ತುಂಬು ಕುಟುಂಬಗಳು  ಟಿವಿಯಲ್ಲಿ ಕಾಣುತ್ತಿವೆ ವಸುದೈವ ಕುಟುಂಬಗಳು  ಮನೆಗಳು ಉರಿದಿವೆ ಹಣದ ವ್ಯಾಮೋಹದಲ್ಲಿ  ಸಂಸಾರಗಳು ಬೀದಿಗೆ ಬಂದಿವೆ ಹಿರಿಯರ ನೋವಿನಲ್ಲಿ

ಚುಟುಕು ಕವನ -70

Image
  ಬದ್ಧತೆ   ಬದುಕಿನಲ್ಲಿ ಇರಬೇಕು ನಮಗೆ ಬದ್ಧತೆ  ಸರಿಯಾಗಿ ನಡೆಸಬೇಕು ನಾವು ಸಿದ್ಧತೆ  ಅರಿಯಬೇಕು ನಾವು ಕಲಿಕೆಯ ದೃಢತೆ  ವಿನಯದಿಂದ ಅರಿಯೋಣ ನಾವು ನಮ್ರತೆ  ನಿರಂತರ   ಹರಿವ ನದಿಯು ಸಾಗುವುದು ನಿರಂತರ  ಬದುಕಿನಲ್ಲಿ ಕಡಿಮೆ ಇರಲಿ ಅವಾಂತರ  ಕೆಟ್ಟವರೊಡನೆ ಇರಲಿ ಬಾಳಲಿ ಅಂತರ  ನಗುವ ಮಗುವು ನೋವಿನಲ್ಲು ಸುಂದರ  ಆಪರೇಷನ್ ಸಿಂಧೂರ ಭಾರತದ ಸೈನಿಕರು ನಡೆಸಿದರು ಆಪರೇಷನ್ ಸಿಂಧೂರ  ಉಗ್ರರ ಸದೆಬಡಿದರು ಸಾಗಿ ಬೆಟ್ಟ ಗುಡ್ಡದ ಕಂದರ  ಮೋಸ ಅನ್ಯಾಯಗಳ ತೊರೆದು ನೋಡು ಜೀವನ ಸುಂದರ  ಉಗ್ರಗಾಮಿಗಳ ಬದುಕಿನಲ್ಲಿ ಸಾವು ಬರುವುದು ನಿರಂತರ  **************ರಚನೆ*************/  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -69

Image
  ಸಮಾನತೆ   ಬೇಯುತ್ತಿದೆ ಬದುಕಲ್ಲಿ ಅಸಮಾನತೆ  ಎಲ್ಲಿ ಹುಡುಕಲಿ ನಾನು ಸಮಾನತೆ  ಬೊಗಳೆ  ಒಡೆಯುತಿಹರು ಜೀವನ ಬೆಂದರು  ಪಾಪಿಗಳನ್ನು ತಂದು ನೆತ್ತರು ಈರುತಿಹರು ಜಾಗೃತಿ   ಮೊಳಗಲಿ ಬೆಳಗಲಿ ಸ್ವಾತಂತ್ರದ ಜಾಗೃತಿ  ಉಳಿಯಲಿ ಬೆಳೆಯಲಿ ಹಿಂದುಗಳ ಸಂತತಿ  ತೊಲಗಲಿ ತೊಲಗಲಿ ಜಾತಿ ವೈಶಮ್ಯ  ನಾವು ಒಂದೇ ಎನ್ನುವುದು ಬಾಳಲಿ ಗಮ್ಯ  ಪ್ರಯತ್ನ   ಬಿಡದೆ ಮಾಡು ಬದುಕಲಿ ಪ್ರಯತ್ನ  ಸಿಕ್ಕೆ ಸಿಗುವುದು ನಿನಗೆ ಮುತ್ತು ರತ್ನ  ಕಳೆದುಕೊಳ್ಳದಿರು ಪ್ರೀತಿ ಸಹನೆಯನ್ನ ಗೆದ್ದೆ ಗೆಲ್ಲುವ ನೀನು ಬರೆದಿಡು  ಚಿನ್ನ  ***********ರಚನೆ************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ-68

Image
  ದೇಶಭಕ್ತಿ   ಬನ್ನಿ ಎಲ್ಲರೂ ಒಟ್ಟಿಗೆ ದೇಶಭಕ್ತರಾಗೋಣ  ನಮ್ಮ ದೇಶವ ಭವ್ಯ ನಾಡು ಮಾಡೋಣ  ದೇಶದ ಏಳಿಗೆಗೆ ಹಗಲು ರಾತ್ರಿ ದುಡಿಯೋಣ  ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರೋಣ  ಸಂಘ   ನಾಡು ನುಡಿಯ ಬೆಳಗಲು ಕಟ್ಟಬೇಕು ಸಂಘ  ಮೋಸ ಅನ್ಯಾಯಗಳನ್ನು ಕಿತ್ತು ಹಾಕು ರಂಗ  ಸತ್ಯ ಅಹಿಂಸೆಯ ಮಾಡಬೇಡ ಮಾನಭಂಗ  ಸೂರ್ಯ ಚಂದ್ರರ ಸಾಯಿಸುವರು ಯಾರು ಗಂಗ  ಸಾವರ್ಕರ್   ಸಾವರ್ಕರ್ ಆರ್ ಎಸ್ ಎಸ್ ಸಂಘದ ಧೀರ  ನಾಡು ನುಡಿಯ ಕಟ್ಟಿದ ಮಹಾನ್ ಶೂರ ಭವ್ಯ ಭಾರತದ ಕನಸಿನ ಕಣ್ಮಣಿ ಕುವರ  ಇಂದು ಅವರ ಸಾಧನೆ ಜಗದಲ್ಲೆಡೆ ಅಮರ **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -67

Image
  ರಾಷ್ಟ್ರ   ನಮ್ಮ ರಾಷ್ಟ್ರ ಭಾರತ  ನಾವೆಲ್ಲ ಒಂದೇ ಎನ್ನುತ್ತಾ  ಜಾತಿ ಭೇದ ಮರೆಯುತ  ಸಾಗೋಣ ನಾವು ಹಿಂದೂ ಧರ್ಮ ಸಾರುತ ಸಾಮರಸ್ಯ   ಬದುಕೋಣ ಬಾಳಲಿ ಸಾಮರಸ್ಯದಿ ನಾವು  ಕಿತ್ತಾಡದಿರೋಣ ಹಾವು ಮುಂಗುಸಿಯಂತೆ ನಾವು ಬಾಳೋಣ ದ್ವೇಷ ಅಸೂಯೆ ಮರೆತು ನಾವು  ಬನ್ನಿ ಎಲ್ಲ ಒಂದೆ ಎನ್ನುತ ಬದುಕೋಣ ನಾವು  ಸ್ವಾತಂತ್ರ್ಯ   ಬಂತು ನಮಗೆ ಬ್ರಿಟಿಷರಿಂದ  ಸ್ವಾತಂತ್ರ ಬಾಳು ಆಗದೆ ಉಳಿಯಿತು ಅತಂತ್ರ  ಬಿಟ್ಟು ಹೋಯಿತು ಬಾಳಲಿ ಪರತಂತ್ರ  ಜೀವ ಕಸಿಯಿತು  ಮೋಸದ ಕುತಂತ್ರ

ಚುಟುಕು ಕವನ-66

Image
  ಧರ್ಮ   ಮನುಜ ನೀನು ಕೊಲ್ಲಬೇಡ ಧರ್ಮ  ಸುಟ್ಟುಬಿಡು ನಿನ್ನ ದ್ವೇಷದ ಕರ್ಮ  ವಿಧಿ ಆಟ ಯಾರಿಗೂ ತಿಳಿಯದ ಮರ್ಮ  ಕೊಳೆತು ನಾರುವುದು ನಿನ್ನ ಮಾಂಸದ ಚರ್ಮ  ತತ್ವ   ಪ್ರೀತಿ ಪ್ರೇಮ ಸಾರಿದ ಜೀವನದ ಬಾಳು ತತ್ವ  ಮರೆಯಬೇಡ ಮನುಜ ನೀ ನಮ್ಮ ಮಾನವತ್ವ  ಮೆರೆದು ಬಾಳಬೇಡ ಬದುಕಲ್ಲಿ ಮನುಜ ಪತ್ವ  ಮನಸ್ಸು ಸಂಚಲನ ಜೀವನ ನಡೆಯಲಿ ದಿತ್ವ ಹಿಂದುತ್ವ   ಮಾನವನ ನೀನು ಹುಡುಕು ಸಿಂಧುತ್ವ  ಮನ ಮನೆಯಲ್ಲಿ ಬೆಳಗಲಿ ಹಿಂದುತ್ವ  ನಾವೆಲ್ಲರೂ ಒಂದೇ ಎನ್ನುವುದು ಬಂದುತ್ವ  ಸಮಾನತೆಯಲ್ಲಿ ಸಾಗೋಣ ಅದೇ ಮಾನವತ್ವ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -65

Image
  ಗಣೇಶ   ನಮ್ಮೂರಿಗೆ ಬಂದ ಮುದ್ದು ಗಣೇಶ  ಆರತಿ ಎತ್ತಿ ಇವನಿಗೆ ಶಿವನೇ ಪ್ರಾಣೇಶ  ಯಾರು ಹೆತ್ತರು ಇವನ ಹೇಳು ಪರಮೇಶ  ಸೊಂಡಿಲ ಗಣಪನಿಗೆ ನಮಿಸು ನೀ ಈಶ  ಚಂಡೆ   ಚಂಡೆ ಮದ್ದಳೆ ಬಡಿದು ಗಣಪನ ಸ್ವಾಗತಿಸು  ಪೂಜೆ ಪುರಸ್ಕಾರ ಮಾಡಿ ನೀ ನಮಿಸು  ಭಕ್ತಿಯಲ್ಲಿ ಬೇಡಿ ಗಣಪನ ಪೂಜಿಸು  ಮೋಸ ವಂಚನೆಯ ಬಾಳಲ್ಲಿ ನೀ ತ್ಯಜಿಸು  ಹುಲಿ ಕುಣಿತ   ದಾರಿಯಲ್ಲಿ ನೋಡಿದೆ ನಾವು ಹುಲಿ ಕುಣಿತ  ವೇಷ ತೊಟ್ಟಿರುವ ಮೋಸದ ಬಲು ಮೆರೆತ  ಬೆಂಕಿ ಹಚ್ಚಿ ಸುಟ್ಟರು ನ್ಯಾಯದ ಆ ಗಣಿತ ವಿಕೃತಿಯಲಿ ಹೇಗೆ ನಾ ಬಾಳಲಿ ಸಹಿಸುತ

ಚುಟುಕು ಕವನ

Image
  ಇಷ್ಟ   ನಲ್ಲೆ ನೀನು ಅಂದ್ರೆ ನನಗೆ ಇಷ್ಟ  ನಿನ್ನ ಸಿಟ್ಟು ನನಗೆ ಬಹಳ ಕಷ್ಟ  ನೀನಿಲ್ಲದಿದ್ದರೆ ಬದುಕಲ್ಲಿ ನಷ್ಟ  ನೀನೇ ನನ್ನ ಜೀವ ಇದು ಸ್ಪಷ್ಟ  ದೂರ   ಗೆಳತಿ ನಿನ್ನ ನೆನಪು ದೂರ  ಜೀವನ ಏಕೋ  ಬಲು ಬಾರ  ಬದುಕು ಪಯಣ ನೋವಿನ ತೀರ  ಜೀವನ ಬೇಸರ ತಂದಿದೆ ಕುಡಿ   ನೀರ ರಜೆ   ನನಗೆ ಇಂದು ಶಾಲೆಗೆ ರಜೆ  ಆಟ ಆಡೋಣ ಬಾ ಮಜೆ  ಮತ್ತೆ ನಾಳೆ ಶಾಲೆ ಎಂಬ ಸಜೆ  ಬದುಕು ಉಬ್ಬರ ತಿನ್ನು ಬಜೆ  ನೀನು   ಕಣ್ಣಲ್ಲಿ ಕಣ್ಣಿಟ್ಟು ನೋಡು ಬಾ ನೀನು  ಕಾದು ಕೂತಿರುವೆ ನಿನಗಾಗಿ ನಾನು  ನೀನು ನಕ್ಕರೆ ಅದೇ ಹಾಲು ಜೇನು  ನೀನಿಲ್ಲದಿದ್ದರೆ ಭೂಮಿಗೆ ಬಿದ್ದಂತೆ ಭಾನು

ಚುಟುಕು ಕವನ

Image
  ಮಾತಾಡು   ಮೌನ ಮುರಿದು ನೀನು ಒಮ್ಮೆ ಮಾತಾಡು  ಜೀವನ ಏಳು ಬೀಳು, ಒಮ್ಮೆ ಸವಿದು ನೋಡು  ಪ್ರೀತಿಯು ಹರಿವ  ನೀರಿನಂತೆ ಒಮ್ಮೆ ಕುಡಿದು ಬಿಡು  ನೋವು ಬರಡು ನೆಲದಂತೆ ಒಮ್ಮೆ ಅತ್ತುಬಿಡು  ಕುಣಿದಾಡು   ನಲ್ಲೆ ನೀನು ಮನಸಾರೆ ಕುಣಿದಾಡು  ಒಲವ ತೂಗುಯ್ಯಾಲೆಯಲ್ಲಿ ಜೋತಾಡು  ಕಷ್ಟಸುಖದಲ್ಲಿ ಬಿದ್ದು ಒದ್ದಾಡು  ಜೀವನದ ಚಿಂತೆಯ ಮರೆತು ಬಿಡು ಹೂದೋಟ   ನಮ್ಮ ಮನೆಯಲ್ಲೊಂದು ಹೂದೋಟ  ಹಕ್ಕಿ ಪಕ್ಷಿಗಳ ಪ್ರೀತಿಯ ಹಾರಾಟ  ಹಸು ಕರುಗಳ ಪ್ರೀತಿ ನುಗ್ಗಾಟ  ನಾಯಿ ಮರಿಗಳ  ಹಸಿದ ರಂಪಾಟ  ಮನಸಾರೆ   ಹುಡುಗಿ ಪ್ರೀತಿಸುವೆ ನಿನ್ನ ಮನಸಾರೆ  ನನ್ನ ಬದುಕು ದಾರಿಯಲ್ಲಿ ಕನಸಾರೆ  ಕಷ್ಟ ಸುಖಗಳ ಮರೆತು ಪ್ರೀತಿ ಸಾರೇ  ಜೀವನದ ದೋಣಿಯಲ್ಲಿ ಸಾಗು ಹುಷಾರೆ  ********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ