Posts

Showing posts from July, 2025

ಮಕ್ಕಳ ಗೀತೆ -43

Image
  🌹ಸೂರ್ಯನು ಹುಟ್ಟಿದನು🌹 ಹುಟ್ಟಿದನು ಸೂರ್ಯನು ಹುಟ್ಟಿದನು  ನೆತ್ತರು ಚೆಲ್ಲುವ ಬಣ್ಣವ ಒತ್ತಿಹನು  ಕತ್ತಲು ಕಳಚಿ ಬೆಳಕನು ಚೆಲ್ಲಿ  ಭೂಮಿಯ ಬೆತ್ತಲು ಮಾಡಿಹನು  ನೆಲದಿ ರಂಗೋಲಿ ಬಿತ್ತುವಂತೆ ಹೇಳಿಹನು  ಮುಂಜಾನೆ ಎಂದು ಎಲ್ಲರ ಎಬ್ಬಿಸಿಹನು  ಕೋಳಿಯ ಕೂಗಿಸಿ ಹಕ್ಕಿಯ ಹಾಡಿಸಿ  ಭುವಿಯಲ್ಲಿ ನವ ಚೈತ್ರ ಮೂಡಿಸಿಹನು  ಭೂಮಿಗೆ ಹಸಿರ ಹೊದಿಕೆ ಒದಿಸಿಹನು  ಬಾನಲ್ಲಿ ನೀಲಿ ಬಣ್ಣವ ಚೆಲ್ಲಿಹನು  ತಾನು ಸುಡತ ಆಕಾಶದಿ ಏರುತಾ  ಪ್ರಪಂಚವ ಬೆಳಗಿ ಸುಮ್ಮನೆ ನಗುತಿಹನು  ಮುಳುಗಿದನು ರವಿ ಮುಳುಗಿದನು  ಬೆಂಕಿಯ ಹೋತ್ತು ಸಮುದ್ರದಿ ಮುಳುಗಿಹನು ಸುಟ್ಟವನು ತಂಪಾಗುತ್ತಾನೆ ನೀರಿನ ಅಲೆಯಲ್ಲಿ  ಎನ್ನುತ ಭೂಮಿಗೆ ಕತ್ತಲು ಸುತ್ತಿಹನು  *********ರಚನೆ*******  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Image
                                          ಲೇಖಕರ ನುಡಿ  ವ್ಯಕ್ತಿತ್ವ ವಿಕಸನ ನಾನು ಸಸ್ಯಹಾರಿಯಾಗಿ ಹುಟ್ಟಿ ನನ್ನ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಇದೆ ಎಂದು ತಿಳಿದು ನಾನು ಚಿಕ್ಕವನಿದ್ದಾಗ ಕೋಳಿ ಮೊಟ್ಟೆಯನ್ನು ಸೇವಿಸಿ ಮತ್ತು ನನ್ನ ಶಿಕ್ಷಣಕ್ಕಾಗಿ ನಗರದಲ್ಲಿ ವಾಸಿಸಿ ಆಹಾರವನ್ನು ನಾನೇ ಸಿದ್ಧಪಡಿಸಿ ತಿನ್ನಲು ತಯಾರಾದಾಗ ರಾತ್ರಿಯ ವೇಳೆ ಸಾಂಬಾರನ್ನು ಹೋಟೆಲ್ಗಳಲ್ಲಿ ತಂದು ತಿನ್ನುವಾಗ ಒಮ್ಮೊಮ್ಮೆ ವಾಕರಿಕೆ ಬಂದಂತಾದರೂ ಅದನ್ನೇ ತಿಂದು ಅರ್ಧ ರಾತ್ರಿಯಲ್ಲಿ ಹೊಟ್ಟೆ ಹಸಿದು ಮಲಗುವಾಗ ಆದ ಪೋಷ್ಟಕಾಂಶದ ತೊಂದರೆ. ಊಟ ಮಾಡುವ ಆಹಾರದಲ್ಲಿ ರಾಸಾಯನಿಕ ಮಿಶ್ರಿತ ಆಹಾರದಿಂದ ನಾನು  ಪಿ.ಎಚ್.ಡಿ    ಮಾಡುವ ಸಂದರ್ಭದಲ್ಲಿ ನನ್ನನ್ನು ಮಾನಸಿಕ ತಜ್ಞರ ಬಳಿ ಸೇರುವಂತೆ ಮಾಡಿದ ನನ್ನ ಗೆಳೆಯರು ಮತ್ತು ನನ್ನ ಶಿಕ್ಷಕರು ಅಂದಿನಿಂದಲೂ ಇದುವರೆಗೆ ರಾಸಾಯನಿಕ ಯುಕ್ತ ಆಹಾರಗಳನ್ನು ತಿಂದು ದೇಹದಲ್ಲಿ ಅನಾರೋಗ್ಯ ಕಾಡಿ ಬಳಲಿ ಸುಮಾರು 20 ವರ್ಷಗಳು ಕಳೆದು ನನ್ನ ಸ್ಕೀಜೋಫ್ರೇಣೀಯ ಖಾಯಿಲೆಗೆ ಮತ್ತು ನಿದ್ರಾಹೀನತೆಗೆ ಔಷಧಿಯನ್ನು ಪಡೆದು ಗುಳಿಗೆ ನುಂಗುತ್ತಿರುವಾಗ, ನನ್ನ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡಾಗ, ನನ್ನ ಊಟದ ಆಹಾರಗಳಲ್ಲಿ ಇತ್ತೀಚಿಗೆ ಉತ್ತಮ ಪೋಷಕಾಂಶ ದೊರಕುತ್ತಿದೆ. ನಾನು ತಿನ್ನುವ...

ಮಕ್ಕಳ ಗೀತೆ -42

Image
 🌹 ಕೃಷ್ಣನೆ ಬಾರೋ 🌹 ಬೆಣ್ಣೆಯ ಕದ್ದ  ಕೃಷ್ಣನೆ ಬಾರೋ  ಕೊಳಲನ್ನು ಊದುತ  ಹಾಡುತ ಬಾರೋ  ಮಹಾಭಾರತಕೆ ದೈವ  ಸಾರಥಿ ನೀನಂತೆ  ರಾಧೆಯ ಮನವ  ಗೆದ್ದ ಚಿತ್ತ ಚೋರನಂತೆ  ಕೌರವರ ನೀನು ಮುಳುಗಿಸಿದೆ  ಪಾಂಡವರ ಗೆದ್ದು ಬೀಗಿಸಿದೆ  ಚಕ್ರವ ಹಿಡಿದ ಶೂರ ನೀನು  ಕೊಳಲನ್ನು ನುಡಿಸೋ ಪೋರ ನೀನು  ನಮ್ಮ ಮುದ್ದುಕೃಷ್ಣ  ಹೊಳೆಯುವೆ ನೀನು ತಕ್ಷಣ  ನೀನು ಧರ್ಮದ ದಾರಿ  ಅಧರ್ಮಕ್ಕೆ ನೀನೇ ಸಂಹಾರಿ  *********ರಚನೆ********* ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -41

Image
  🌹ಹಕ್ಕಿಯು ಬಂದಿತು🌹 ಹಕ್ಕಿಯು ಬಂದಿತು  ಬಾನಲಿ ಚುಕ್ಕಿ ತೋರಿತು ಸಂಜೆ ಸೂರ್ಯನ  ನಗುತಾ ಮುಳುಗಿಸಿತು  ಮರದ ಕೊಂಬೆಯಲಿ  ಗೂಡನ್ನು ಕಟ್ಟಿತು  ಪುಟ್ಟ ಮರಿಗಳ  ಗೂಡಿನ ಒಳಗೆ ಬಿಟ್ಟಿತು  ರೈತ ಹೊಲ ಉಳಲು  ಕೀಟಗಳ ಎಕ್ಕಿ  ತಂದಿತು ಅಳುವ ಮಕ್ಕಳಿಗೆ  ತುತ್ತನು ಇಟ್ಟಿತು  ಲೈಟ್ ಕಂಬದಿ ಕೂತು  ಚಿಲಿಪಿಲಿ ಎಂದಿತು  ತೊಟ್ಟಿಯ ನೀರನು  ಗುಟುಕು ಕುಡಿಯಿತು  ಹಾರುತ ಬಾನಲ್ಲಿ ಹೊರಟಿತು  ತೋಟದಿ ಮರದಿ ಕೂತಿತು  ಚಿಲಿಪಿಲಿ ಎಂದು ಕೂಗಿತು  ಸಮಯವ ನೂಕುತ ಹಾರಿತು *********ರಚನೆ********** ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -40

Image
  ರಾಜರು ಬಂದರು ನಮ್ಮನು ಆಳಲು ರಾಜರು ಬಂದರು  ಗುಡ್ಡದ ಗುಹೆಯ ನುಸುಳಿ ಬಂದರು  ಕತ್ತಿ ಗುರಾಣಿ ಹಿಡಿದು ತೋರುತ ನಿಂತರು  ಬಂದರು ನಮ್ಮನು ಆಳಲು ರಾಜರು ಬಂದರು ಚಳಿಯಲ್ಲಿ ಕಂಬಳಿ ಒದ್ದು ನಿಂತರು  ನಿದ್ದೆ ಇಲ್ಲದೆ ಸೊರಗಿ ಸೋತರು  ಸುದ್ದಿ ತಿಳಿಯಿತು ಪಕ್ಕದ ರಾಜ್ಯಕ್ಕೆ  ರಾಜ್ಯದ ಸೈನಿಕರು ನೆಗೆದು ನಡೆದರು  ಗಡ್ಡವ್ವ ಬಿಟ್ಟು ಗುಡ್ಡವ ನೋಡಿ  ಮರದ ಕೊಂಬೆಯ ಜಿಗಿದು ಆಡಿ  ಗಿಡ್ಡನೆ ಚಡ್ಡಿಯ ತಂದಿಹೆ ಬಾರೋ  ಮೇಳದ ಕುಣಿತ ನೋಡುವ ಬಾರೋ  ಕಳ್ಳ ಮಳ್ಳ ಸುಳ್ಳರ ತೆಗೆದುಹಾಕು ಧೈರ್ಯದಿ ನಿಂತು ಗುಟುರು ಹಾಕು  ಗಂಡೆದೆ ಬಂಟನ ನಿನ್ನಲ್ಲಿ ತೋರು  ಶಿಳ್ಳೆಯ ಹಾಕುತ ಸೈನಿಕರು ನಡಿಗೆ ಜೋರು  **********ರಚನೆ**********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -39

Image
  ನಾಡ ಧ್ವಜ   ಏರುತಿದೆ ಏರುತ್ತಿದೆ  ನಮ್ಮ ಪ್ರೀತಿ ಧ್ವಜ  ಹಾರುತಿದೆ ಹಾರುತಿದೆ  ನಮ್ಮ ನಾಡ ಧ್ವಜ  ಹಸಿರು ನೀಲಿ ಕೇಸರಿ  ಬಣ್ಣ  ಸಾರುತಿದೆ ನಮ್ಮ ಜಗಕೆ  ಸ್ನೇಹ ಸಹಬಾಳ್ವೆಯ ನ್ಯಾಯ  ಧರ್ಮ ನೀತಿ ಯುಗಕ್ಕೆ  ಶಾಂತಿಯು ನಮ್ಮಯ  ದೇಶದ ಮೂಲ ಮಂತ್ರ  ಗಾಂಧಿ ನೆಹರು ಹೇಳಿದ  ಪ್ರೀತಿಯ ಗೆಲುವ ತಂತ್ರ  ಯಾಕೆ ಬೇಕು ಯುದ್ಧ  ಪ್ರೀತಿಸಲು ನಾವು ಸಿದ್ಧ  ಬೇಡ ನಮಗೆ ಕುತಂತ್ರ  ಬಯಸಿಹೆವು ಸ್ವತಂತ್ರ  ಏರಿಸಿ ಏರಿಸಿ ನಮ್ಮ ಬಾವುಟ  ಹಾರಿಸಿ ಹಾರಿಸಿ ಶಾಂತಿಪಟ  ಭಾರತೀಯರು ನಾವೆಲ್ಲ ಒಂದೇ ತೋರಿಹೆವು ಪ್ರೀತಿ ನಿಮ್ಮ ಮುಂದೆ  ಏರುತಿದೆ ಏರುತ್ತಿದೆ  ನಮ್ಮ ಪ್ರೀತಿ ಧ್ವಜ  ಹಾರುತಿದೆ ಹಾರುತಿದೆ  ನಮ್ಮ ನಾಡ ಧ್ವಜ  *********ರಚನೆ********** ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ವೀಳ್ಯದೆಲೆ

Image
  ಬಳ್ಳಿಯಾಗಿ ಹಬ್ಬಿದೆ ನಾನು ಮರಕೆ  ಬುಡದಿಂದ ತುದಿಗೆ ಸುತ್ತಿದೆ ಕುಣಿಕೆ  ಉಸಿರು ಕೊಟ್ಟೆ ನಾನು ಮನುಕುಲಕ್ಕೆ  ತಂಪ ನೆರೆಯಿರಿ ನೀವು ನನ್ನ ಬುಡಕ್ಕೆ  ಹಚ್ಚ ಹಸರಿನಾ ಕೊನೆ ಎಲೆಯಾಗಿ  ಮರದ ಸುತ್ತ ನಾನು ಬಲೆಯಾಗಿ  ಮನುಜನಿಗೆ ತಿನ್ನಲು ವೀಳ್ಯದೆಲೆಯಾಗಿ ನನ್ನ ಜಗಿದು ಉಗಿಯಿರಿ ನೀವು ಖುಷಿಯಾಗಿ ಹಲ್ಲು ತುಂಬ ಕೆಂಪು ಈ ವೀಳ್ಯದೆಲೆ  ಮನಸ್ಸು ಏಕೋ ತಂಪು ನೀ ತಿನ್ನುತ್ತಲೆ  ಬಳ್ಳಿಯಾದೆ ನಾ ಸುಂದರ ಬಳ್ಳಿಯಾದೆ  ಎದುರು ತೊಡರಿಗೆ ಜಗ್ಗದ ಮಿಂಚುಳ್ಳಿಯಾದೆ  *********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -38

Image
  🌹ಕಾಲದ ಕುಣಿತ 🌹 ಚಳಿಗಾಲ ಬಂದೈತೆ ಏಕೋ ಚಳಿ ಚಳಿ  ಬಿಸಿಲ ದಗೆ ಸುಡುತೈತಿ, ಏಕೋ ಬಿಸಿ ಬಿಸಿ  ಮಳೆಯು ಇಳೆಗೆ ಬೆರೆತೈತಿ ಹಸಿ ಹಸಿ  ಋತುಗಳು ಕಥೆ ಹೇಳೈತಿ ಸಿಹಿ ಸಿಹಿ  ಚಿಗುರು ವಸಂತ ಮಾಸ ಬಂತು ನೋಡು  ಹೂವು ಅರಳಿ ಕಂಪು ವಾಸನೆ ನೋಡು  ಹಣ್ಣು ತಿಂದು ಸಿಹಿಯ ಸವಿ ನೋಡು  ಕಾಲಗಳು ವ್ಯಥೆಯ ಹೇಳೈತಿ ನೋಡು  ನಿಂತವರನ್ನು ಯಾರು ಕೇಳರು  ಮಲಗಿದರೆ ಮುಟ್ಟಿ ನೋಡರು  ಓದಿದರೆ ಹಿಂದೆ ಯಾರೂ ಬಾರರು  ದೇಹದ ನುಡಿಯ ಯಾರು ಅರಿವರು  ಓದಿದವರಿಗೇ ಜಗವು ಇದು ಅಲ್ಲ  ಬರೆದಿಡಲು ಯಾರು ಬೆದರುವುದಿಲ್ಲ  ಬಯಕೆಗಳಿಗೆ ಬಣ್ಣ ಬಳಿದಿಹರಲ್ಲ  ಹುಚ್ಚು ಗಿಚ್ಚು ಜಗಕೆ ಯಾರುಬಲ್ಲ  **********ರಚನೆ******** ಡಾ.ಚಂದ್ರಶೇಖರ್, ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -37

Image
 🌹ಕುಣಿಯಲಿ ಕನ್ನಡ 🌹 ಭಾವ ದೊಳಗೆ ನಲಿವ ಕನ್ನಡ  ನಮ್ಮ ಜೀವದಿ ಬೆರೆತ ಕನ್ನಡ  ನಾಡು ನುಡಿಯ ಗುಡಿ ಕನ್ನಡ  ಇದುವೇ ನಮ್ಮ ನಾಡು ಕನ್ನಡ  ಕವಿಗಳ ಸಾಲಲ್ಲಿ ಕುಣಿದ ಕನ್ನಡ  ಗಾಯಕರ ಕಂಠದಿ ಬೆರೆತ ಕನ್ನಡ  ಸುಂದರ ಸಂಗೀತದ ಚಿತ್ರ ಕನ್ನಡ  ಇದುವೇ ನಮ್ಮ ನಾಡು ಕನ್ನಡ  ವಿಜ್ಞಾನಿಗಳ ಸೆಲೆಯು ಕನ್ನಡ  ಅಣೆಕಟ್ಟುಗಳ ಬೀಡು ಕನ್ನಡ  ದೇವತೆಗಳ ಗುಡಿಯು ಕನ್ನಡ ಇದುವೇ ನಮ್ಮ ನಾಡು ಕನ್ನಡ  ಪ್ರಕೃತಿಯ ಸೊಬಗು ಕನ್ನಡ  ನದಿವನಗಳ ಬೀಡು ಕನ್ನಡ  ಸಮುದ್ರದಲೆಯ ಸೆಳೆತ ಕನ್ನಡ  ಇದುವೇ ನಮ್ಮ ನಾಡು ಕನ್ನಡ  ***********ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -36

Image
  🌹ನಮ್ಮ ದೇಶ ಭಾರತ 🌹 ಭಾಷೆಗಳು ನೂರಾರು  ವೇಷಗಳು ನೂರಾರು  ಸಂಸ್ಕೃತಿಯ ಸವಿಯ ರಥ  ಅದುವೇ ನಮ್ಮ ಭಾರತ  ಎಲ್ಲಿ ನೋಡು ನಾಡ ಹಬ್ಬ  ಊರುಗಳಲ್ಲಿ ದೈವದಬ್ಬ  ಜಾತಿ ಜಾತಿಗಳ ನಡುವೆ ಪ್ರೀತಿ  ಹೆಸರು ಒಂದೇ ನಮ್ಮ ಭಾರತ  ಧರ್ಮಗಳಿಗೆ ಭೇದವಿಲ್ಲ  ಪ್ರೀತಿ ನೀತಿ ಮರೆತ್ತಿಲ್ಲ  ನಾವೆಲ್ಲರೂ ಮನುಜರು  ನಮ್ಮ ದೇಶ ಭಾರತ  ಕೂಡಿ ಬಾಳುವ ನೆಲೆಯಿದು  ಭೇದಭಾವ ಎಂದು ತೋರದು  ಉಸಿರುಗಟ್ಟಿ ಹೇಳುವೆ  ನಮ್ಮ ದೇಶ ಭಾರತ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -35

Image
  🌹ನಗುತಿರು ಕಂದ 🌹 ನನ್ನ ಬಾಳ ಜಗವು ನೀನೆ  ನನ್ನ ಖುಷಿಯ ಮಗುವು ನೀನೆ  ನನ್ನ ನೋಡಿ ನೀ ಅಳಲು  ಜಗವು ಏಕೆ ನಗುವುದು  ನನ್ನೆದೆಯ ಊರಿನಲ್ಲಿ  ನಗುವ ಚಿಲುಮೆ ಉಕ್ಕಿರಲು ಭಾನು ಬಂದು ಕರೆವುದೆ  ಕುಣಿಯುತ ಓಲವ ಹಾಡದೆ  ಮೋಡದಲ್ಲಿ ನಿನ್ನ ಕಂಡೆ  ಮಿಂಚಂತೆ ಬಾಳಲಿ ಬಂದೆ  ಕೈ ಹಿಡಿದು ನಡೆ ಕಂದ  ಆಕಾಶವೇ ದಾರಿ ನಿನಗೆ  ವಿಶ್ವದಲ್ಲಿ ನೀನೇ ಬೆರಗು  ನಿನ್ನ ನೋಟ ಬಲು ಸೊಬಗು  ನೀನು ತಾನೆ ನನ್ನ ಖುಷಿ  ನೀನು ತಾನೆ ಬಾಳ ಸಿಹಿ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

2. ನಾವು ಸೇವಿಸುವ ಆಹಾರದಿಂದ ಸಂತೋಷ ಸಾಧ್ಯವೇ

Image
  2. ನಾವು ಸೇವಿಸುವ ಆಹಾರದಿಂದ ಸಂತೋಷ ಸಾಧ್ಯವೇ   ಆಹಾರ ನಮ್ಮ ಹಸಿವನ್ನು ಹಿಂಗಿಸುತ್ತದೆ ಮತ್ತು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ ನಾವು ಜೀವಿಸಲು ಸಹಾಯ ಮಾಡುತ್ತದೆ. ಆಹಾರವು ನಮಗೆ ಸಂತೋಷವನ್ನು ಕೊಡುತ್ತದೆ. ಇದನ್ನು ಪ್ರತಿದಿನ ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಉಪಯೋಗಿಸುತ್ತೇವೆ ಹಾಗೂ ಆಹಾರವು ನಮ್ಮ ಬೆಳವಣಿಗೆ, ನಾವು ಕೆಲಸ ಮಾಡಲು ಶಕ್ತಿ ಮತ್ತು ಅಂಗಾಂಶಗಳ ಸರಿಪಡಿಸುವಿಕೆ ಹಾಗೂ ನಮ್ಮ ದೇಹದ ಚಲನವಲನಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ .  ಅಷ್ಟೇ ಅಲ್ಲ ಆಹಾರವು ನಮ್ಮ ಭಾವನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವು ಯಾವುವು ಎಂದರೆ ಭದ್ರತೆ, ಪ್ರೀತಿ, ಗಮನ, ಸಂತೋಷ, ದುಃಖ ಮುಂತಾದ ಮಾನಸಿಕ ಕಾರ್ಯಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಪೌಷ್ಟಿಕಾಂಶದ ವಿಜ್ಞಾನವು ನಮ್ಮ ಆಹಾರವು ದೇಹವನ್ನು ಸೇರಿದಾಗ ಮತ್ತು ಸೇರಿದ ಮೇಲೆ ಯಾವ ಕಾರ್ಯಗಳು ಆಗುತ್ತವೆ, ಅಂದರೆ ಜೀರ್ಣಕ್ರಿಯೆ ನಡೆಯುವುದು   ತಿಳಿಸುತ್ತದೆ. ಪೌಷ್ಟಿಕಾಂಶಗಳನ್ನು ರಾಸಾಯನಿಕ ವಸ್ತು ಎಂದು ತಿಳಿಯಬಹುದು, ಇದು ನಮ್ಮ ಆಹಾರದಲ್ಲಿ ಇರುತ್ತದೆ. ಅದು ಕಣ್ಣಿಗೆ ಕಾಣುವುದಿಲ್ಲ ನಮ್ಮ ದೇಹದ ಆರೋಗ್ಯಕ್ಕೆ ಪೋಸ್ಟಿಕಾಂಶವು ಒಳ್ಳೆಯದು . ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಯಾವುವೆಂದರೆ ...