Posts

Showing posts from August, 2024

ಚುಟುಕು ಕವನ-63

Image
       🌹 *ಬಂಧನ* 🌹 ಬಿಡಿಸಿದ ನಂಟು ಈ ಬಂಧನ ನೋವು ನಲಿವುಗಳ ಸ್ಪಂದನ ಆಸೆ ಆಕಾಂಕ್ಷೆ ದಾರಿ ನಂದನ ಬಾಳಿ ಬದುಕಲಿ ಜೀವ ಅನುದಿನ           🌹 ಜೀವ🌹 ನಿನಗಾಗಿ ನಾನು ಜೀವ ಕೊಡುವೆ  ಬಾರೆ ನೀನು ನನ್ನ ಮುದ್ದು ಒಲವೇ ನೀನು ಇರದೆ ನನಗೆಲ್ಲಿ ಗೆಲುವೇ  ಕಾದು ಕುಂತ ಸುಂದರ ಮನವೆ            🌹 ಹಸಿರು 🌹 ಹಸಿರು ಜೀವಿಗಳ ಉಸಿರು  ನೀನೇ ಹೇಳು ನನ್ನ ಹೆಸರು  ಬಾಳು ಒಂದು ಸುಂದರ ಪಸಿರು  ಅರಿತವರ ಬಾಳು ಇಲ್ಲಿ ಮೊಸರು  *********ರಚನೆ******* ಡಾ.ಚಂದ್ರಶೇಖರ್. ಸಿ.ಹೆಚ್

ಚುಟುಕು ಕವನ-61

Image
         🌹 ಭ್ರಮೆ 🌹 ಭ್ರಮೆಯ ಬದುಕು ಬೇಡವೋ ಮನುಜ ಸತ್ಯವ ಅರಿತರೆ ನಿನ್ನ ಜೀವನ ಸಹಜ ಕಾಣದ ವಸ್ತುವಿಗೆ ಏಕೆ ಹುಡುಕಾಟ ಸಿಕ್ಕರೂ ಎಲ್ಲಾ ತಪ್ಪದು ಮಾನವ ಪರದಾಟ 🌹 ಚುಟುಕು ಕವನ 🌹        🌹ಸತ್ಯ🌹 ಸತ್ಯ ಮತ್ತು ಅಸತ್ಯದ ನಡುವೆ ಹೋರಾಟ ಸುಳ್ಳು ಮತ್ತು ಪೊಳ್ಳು ಭರವಸೆಯ ಕಾಟ ಬದುಕಿನ ನಡುವೆ ಮಾಗಿದ ಜೀವನದ ಓಟ ಯಾರೋ ಮಾಡಿಸಿದಂತೆ ಸಂಸಾರದಲ್ಲಿ ಮಾಟ ದಿನವೂ ಗಂಡ ಗುಂಡಿಯ ಮಾರ ಮಾರಿ ಗುದ್ದಾಟ      🌹 ಸ್ವಾತಂತ್ರ 🌹 ಸಿಕ್ಕಿದೆ ನಮಗೆ ಸ್ವಾತಂತ್ರ ಆದರೂ ಕೂಡ ಪರತಂತ್ರ ಬದುಕು ಸುಮ್ನೆ ಅತಂತ್ರ ಮಾಡುತವರೆ ಇಲ್ಲಿ ಕುತಂತ್ರ *********ರಚನೆ******** ಡಾ.ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ-60

Image
            🌹ಹಲ್ಲು🌹 ನನ್ನ ಹುಡುಗಿ ಕೇರಳ ಮಲ್ಲು  ಬಿಟ್ಟೆ ಅವಳ ನೋಡಿ ಹಲ್ಲು ಊರು ತುಂಬಾ ಇದೆ ಗುಲ್ಲು ನಮ್ಮ ಜೋಡಿ  ಚಮಕ್ ಚಲ್ಲೂ          🌹 ದಂತ 🌹 ನನ್ನವಳ ದಂತದ ಕಾಂತಿಗೆ ನಾ ಸೋತೆ ಅವಳ ಕಣ್ಣ ಸನ್ನೆಗೆ ನನ್ನ ನಾ ಮರೆತೆ ಅವಳ ಹೊಟ್ಟಿಗೆ ನಾ ಕೂಡಿ ಬೇರೆತೆ ಈಗ ಏನೋ ಕಾಡಿದೆ ಇಬ್ಬರಲು ಕೊರತೆ           🌹ಕದನ🌹 ಹೊತ್ತಿ ಉರಿದಿದೆ ದೇಶಗಳ ನಡುವೆ ಕದನ ನೆತ್ತರು ಹರಿದಿದೆ ಭೂಮಿಗೆ ಇಗ ಸುರಪಾನ ಬದುಕು ನೋವಿನ ಜಂಗುಳಿಯಲಿ ಮೌನ ಸಿಕ್ಕೀತೇ ಗೆಲುವಿನ ಜಾತ್ರೆಯ ಪ್ರೀತಿ ತನು ಮನ  **********ರಚನೆ********** ಡಾ.ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ -59

Image
          🌹ಹಸಿರು🌹 ಹಸಿರು ನೀನು ಜೀವಗಳ ಉಸಿರು ಹೇಗೆ ಮರೆಯಲಿ ನಾ ನಿನ್ನ ಹೆಸರು ಹಸಿರಿಗೆ ಉಸಿರು ಕಟ್ಟಿಸೋ ಕೆಸರು ಹಸಿರಿದ್ದರೆ ಮಾನವನ ಬದುಕು ಮೊಸರು         🌹 ಅಮೃತ 🌹 ನನ್ನಯ ಒಲವಿಗೆ ನೀನೆ ಅಮೃತ ನಿನ್ನಯ ಹೆಸರಲಿ ನಾನು ಜೀವಂತ ಓಡಿದೆ ಬಾಳು ಏಕೋ ದಾವಂತ ಗೋಳಿನ ಜೀವನ ಪ್ರೀತಿಲಿ ಸುಕಾಂತ 🌹 ಶ್ರಾವಣ 🌹 ಶ್ರಾವಣ ಬಂತು ಶ್ರಾವಣ  ಎಲ್ಲೆಡೆ ಹಸಿರಿನ ತೋರಣ ಬದುಕು ಒಂದು ಊರಣ ದೈವವೇ ಜೀವದ ಕಾರಣ ********ರಚನೆ******* ಡಾ.ಚಂದ್ರಶೇಖರ್ . ಸಿ.ಹೆಚ್

ಚುಟುಕು ಕವನ-58

Image
  🌹ಪ್ರೇಮ ಪತ್ರ 🌹 ಬಾರೆ ಚೆಲುವೆ ನನ್ನ ಹತ್ರ  ಕೊಡುವೆ ನಿನಗೆ ಪ್ರೇಮ ಪತ್ರ ನೀನು ಹೂ ಅಂದ್ರೆ ಮಾತ್ರ ನಾಳೇನೇ ಬುಕ್ ಮದುವೆ ಛತ್ರ          🌹ನಕ್ಕರೆ🌹 ಹುಡುಗಿ ನೀನು ಸುಮ್ನೆ ನಕ್ಕರೆ  ತಿಂದ ಆಗೆ ಆಯ್ತು ಕಲ್ಲ ಸಕ್ಕರೆ ನಿನ್ನ ಒಲವಿನ  ಸಿಹಿ   ಅಕ್ಕರೆ ಕುಕ್ಕಿದಾಗೆ ಆಯ್ತು ಬಿಳಿ ಕೊಕ್ಕರೆ        🌹ನಗು🌹 ಹುಡುಗಿ ನಿನ್ನ ನಗು ನೋಡಿ ನಕ್ಕ ರಘು ಪೂರ್ತಿ ನಿಂದೆ ಗುಂಗು ಈಗ ನಿನಗೇ ಮಗು **********ರಚನೆ******** ಡಾ.ಚಂದ್ರಶೇಖರ್. ಸಿ. ಹೆಚ್

ಯಾರನ್ನು ಮಾಡಲಿ ಹೊಣೆ

Image
ಬದುಕ ಬವಣೆ   ನೋವ ಹೊತ್ತು ನಮ್ಮ ದಾರಿ ಸಾಗಿದೆ ಮನಸ್ಸಿನೊಳಗೆ ಬಿತ್ತಿದ ಆಸೆಗಳ ಹೊತ್ತ ಜೀವ ಏಕೋ ಅಳುತ್ತಿದೆ ನಾನು ಯಾರನ್ನ ಮಾಡಲಿ  ಹೊಣೆ ಹಣೆ ಬರಹಕ್ಕೆ ವಿಧಿಯೆ ಹಣೆ ಬದುಕ ಬಂಡಿ ನೂಕ ಬೇಕು ಕಷ್ಟ ಸುಖಗಳ ಪ್ರೀತಿ ಸಾಕು ಜಾತಿಗಳ ಬೇರಿನ ನೂಕು ನುಗ್ಗಲು ಕಾಲವೆಂಬ ಮಾಯೆ ಮುರಿದಿದೆ ಮಗ್ಗಲು ನಾವು ಯಾರು ಹೇಳಿ ಇಲ್ಲಿ ಕುಗ್ಗಲು ಏಕೆ ಬೀಳಬೇಕು ಬಂಡಿ ಜಗ್ಗಲು ಪಯಣ ಒಂದು ಅನುಭವದ ರಾಶಿ ಗುರುವೇ ನೀನು ಸಾಗು ನೆನೆದು ಕಾಶಿ ಕಾಣದ ದಾರಿಯಲ್ಲಿ ನಮ್ಮ ನಡುಗೆ ಸಹಬಾಳ್ವೆ ಜೀವನದ ಸವಿ ಉಡುಗೆ ಸಾಗಿಸೋಣ ನಮ್ಮ ಬದುಕನು ಶಪಿಸುತ್ತಾ ಕಾಣದ  ವಿಧಿಯನ್ನು ಜೀವನದ ದಾರಿ  ಮೂರು  ದಿನ ನಗುತ ಇರಲಿ ನಮ್ಮ ತನು ಮನ **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ-57

Image
        🌹ಸ್ನೇಹ 🌹 ನನ್ನ ನಿನ್ನ ಸ್ನೇಹ ಮಧುರ ನಮ್ಮ ನಡುವೆ ಪ್ರೀತಿ ಅಮರ ಪ್ರಣಯದಲಿ ಆಸೆಯ ಹುಟ್ಟು  ಹರೆಯದಲ್ಲಿ ಪ್ರೇಮದ ಗುಟ್ಟು ನೂರೆಂಟು ಯೋಚನೆ ವಯಸ್ಸಿನಲ್ಲಿ ಬಣ್ಣದ ಬದುಕು ಈ ಬಾಳಿನಲಿ ನೋವಿಗೆ ಬೀರಿದ ಬದುಕು ಒಗಟು ಕನಸಲಿ ಮುಳುಗಿದ ಮನಸು  ಒರಟು **********ರಚನೆ******** ಡಾ.ಚಂದ್ರಶೇಖರ್. ಸಿ. ಹೆ ಚ್

ದೇವರ ನಾಡು

Image
  ದೇವರ ನಾಡಿನಲ್ಲಿ ಮನಕುಲುಕುವ ಕಥೆ ಭೂಮಿಯೇ ಜರುಗಿದ ನೋವಿನ ವ್ಯಥೆ ಹರಿಯಿತೆ ನೀರು ಕೊಚ್ಚಿದರೆ ಜನರು ನೆತ್ತರು ನೋಡಿ ಜನ ಬೆಚ್ಚಿತೆ ಮನ ಮಣ್ಣಿನಲ್ಲಿ ಮರಣಮೃದಂಗ  ಸಾವು ನೋವಿಗೆ ದೇವರೆ ದಂಗಾ  ಹರಿಯಿತು ನೆತ್ತರು ನದಿಯಂತೆ ಸೂರುಗಳು ತೇಲಿದವು ಮರದಂತೆ ದೇವರೆ ನಿನಗೆ ಕರುಣೆಯೇ ಇಲ್ಲವೇ ಇಂಥ ಸಾವು ನೋವು ತರವೇ ಊರಿಗೆ ಊರೇ ಇಲ್ಲಿ ಸ್ಮಶಾನ ಎಲ್ಲೆಡೆಯೂ ಸೂತಕದ ಮೌನ  ಏಕಿಷ್ಟು ಕೋಪ ಈ ಪ್ರಕೃತಿಗೆ ಮನುಷ್ಯನು ಮಾಡಿದ ವಿಕೃತಿಗೆ ಕಟ್ಟಲೆ ಬೇಕು ಬೆಲೆ ಮಾಡಿದ ತಪ್ಪಿಗೆ ನೀರು ಮಣ್ಣು ಸೇರಿಯೇ ನೀಡಿದ ಅಪ್ಪುಗೆ ಎಚ್ಚರ ಎಚ್ಚರ ಮಾನವನೇ ನಿನಗೆ ಪ್ರಕೃತಿಯ ಮಡಿಲಲ್ಲಿ ನಿನ್ನ ಸುಲಿಗೆ ನೀನೆ ತೆರಬೇಕು ಸುಂಕವ ನಾಡಿಗೆ ಸಾವೆ ಉತ್ತರವೂ ನಿನಗೆ ಕೊನೆಗೆ *********ರಚನೆ*********** ಡಾ.ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ -56

Image
           🌹ಬದುಕು🌹 ನೂರೆಂಟು ಕಥೆಯ ಈ ಬದುಕು ನೋವು ನಲಿವುಗಳ ಒಮ್ಮೆ ಕೇದಕು ಆಸೆಗಳ ಹುಟ್ಟನ್ನು ನೀ ಸರಿ ತದುಕು ಜೀವನವೇ ಒಂಥರಾ ತಳುಕು ಬಳುಕು ಯಾಕೀ ವೇದನೆ ನಮ್ಮಯ ಬಾಳಿನಲಿ ಸಾಕಿ ರೋಧನೆ ನಮ್ಮಯ ಬದುಕಿನಲಿ ಜೀವ ಮರಣಗಳ ನಡುವೆ ಹೋರಾಟ ಸುಖ ದುಃಖದ  ನಡುವೆ ಜಂಜಾಟ ಆಸೆ ಆಕಾಂಕ್ಷೆಗಳ ಒಳಗೆ ಹುಡುಕಾಟ ಏಳು ಬೀಳುಗಳ ಜೋತೆ ಒದ್ದಾಟ ಗಂಡ ಗುಂಡಿಯರ ಒಳಗೆ ಗುದ್ದಾಟ  ಮೂರು ದಿನದ ಬಾಳಿಗಾಗಿ ರಂಪಾಟ  **********ರಚನೆ********* ಡಾ.ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ -55

Image
          🌹ಪ್ರವಾಹ🌹 ಪ್ರವಾಹದ ಮಳೆಗೆ ಭೂಮಿಯು ತತ್ತರ ನಡುಗಿದ ಗುಡ್ಡದ ನೋವಿನ ಬಿತ್ತರ ಸಾವು ನೋವಿನ ಪ್ರಕೃತಿ ಉತ್ತರ ಚೆಲ್ಲಿದೆ ಮಣ್ಣಲಿ ಮನುಜರ ನೆತ್ತರ           🌹ನೆರೆ🌹 ಮಳೆಯ ಹನಿಗೆ ನದಿಯು ಹರಿಯಿತು ನೆರೆಯು ಬಂದು ಬದುಕು ಮಸಣವಾಯಿತು ಹನಿ ಹನಿ ನೀರು ಮನುಜರ ನೆತ್ತರು ಚೆಲ್ಲಿ ಜೀವನವಾಯಿತು ಸೂರಿಲ್ಲದೆ ಬಾಳು ಚೆಲ್ಲ ಪಿಲ್ಲಿ 🌹ತಂಗಾಳಿ🌹 ಮಲ್ಲಿಗೆ ವನದಿ ಸುಗಂಧದ ತಂಗಾಳಿ ಸುಳಿಯಿತು ಮನಕೆ ಮೋಹದ ರಸ ಗಾಳಿ ವನದಿ ಅಪ್ಸರೆಯರ ಪ್ರೀತಿ ಹಾವಳಿ ಮುಡಿಯಲಿ ಮಲ್ಲಿಗೆ ನಗುವು ಅರಳಿ **********ರಚನೆ******** ಡಾ. ಚಂದ್ರಶೇಖರ್. ಸಿ.ಹೆಚ್