Posts

Showing posts from August, 2024

ಯಾರನ್ನು ಮಾಡಲಿ ಹೊಣೆ

Image
ಬದುಕ ಬವಣೆ   ನೋವ ಹೊತ್ತು ನಮ್ಮ ದಾರಿ ಸಾಗಿದೆ ಮನಸ್ಸಿನೊಳಗೆ ಬಿತ್ತಿದ ಆಸೆಗಳ ಹೊತ್ತ ಜೀವ ಏಕೋ ಅಳುತ್ತಿದೆ ನಾನು ಯಾರನ್ನ ಮಾಡಲಿ  ಹೊಣೆ ಹಣೆ ಬರಹಕ್ಕೆ ವಿಧಿಯೆ ಹಣೆ ಬದುಕ ಬಂಡಿ ನೂಕ ಬೇಕು ಕಷ್ಟ ಸುಖಗಳ ಪ್ರೀತಿ ಸಾಕು ಜಾತಿಗಳ ಬೇರಿನ ನೂಕು ನುಗ್ಗಲು ಕಾಲವೆಂಬ ಮಾಯೆ ಮುರಿದಿದೆ ಮಗ್ಗಲು ನಾವು ಯಾರು ಹೇಳಿ ಇಲ್ಲಿ ಕುಗ್ಗಲು ಏಕೆ ಬೀಳಬೇಕು ಬಂಡಿ ಜಗ್ಗಲು ಪಯಣ ಒಂದು ಅನುಭವದ ರಾಶಿ ಗುರುವೇ ನೀನು ಸಾಗು ನೆನೆದು ಕಾಶಿ ಕಾಣದ ದಾರಿಯಲ್ಲಿ ನಮ್ಮ ನಡುಗೆ ಸಹಬಾಳ್ವೆ ಜೀವನದ ಸವಿ ಉಡುಗೆ ಸಾಗಿಸೋಣ ನಮ್ಮ ಬದುಕನು ಶಪಿಸುತ್ತಾ ಕಾಣದ  ವಿಧಿಯನ್ನು ಜೀವನದ ದಾರಿ  ಮೂರು  ದಿನ ನಗುತ ಇರಲಿ ನಮ್ಮ ತನು ಮನ **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ದೇವರ ನಾಡು

Image
  ದೇವರ ನಾಡಿನಲ್ಲಿ ಮನಕುಲುಕುವ ಕಥೆ ಭೂಮಿಯೇ ಜರುಗಿದ ನೋವಿನ ವ್ಯಥೆ ಹರಿಯಿತೆ ನೀರು ಕೊಚ್ಚಿದರೆ ಜನರು ನೆತ್ತರು ನೋಡಿ ಜನ ಬೆಚ್ಚಿತೆ ಮನ ಮಣ್ಣಿನಲ್ಲಿ ಮರಣಮೃದಂಗ  ಸಾವು ನೋವಿಗೆ ದೇವರೆ ದಂಗಾ  ಹರಿಯಿತು ನೆತ್ತರು ನದಿಯಂತೆ ಸೂರುಗಳು ತೇಲಿದವು ಮರದಂತೆ ದೇವರೆ ನಿನಗೆ ಕರುಣೆಯೇ ಇಲ್ಲವೇ ಇಂಥ ಸಾವು ನೋವು ತರವೇ ಊರಿಗೆ ಊರೇ ಇಲ್ಲಿ ಸ್ಮಶಾನ ಎಲ್ಲೆಡೆಯೂ ಸೂತಕದ ಮೌನ  ಏಕಿಷ್ಟು ಕೋಪ ಈ ಪ್ರಕೃತಿಗೆ ಮನುಷ್ಯನು ಮಾಡಿದ ವಿಕೃತಿಗೆ ಕಟ್ಟಲೆ ಬೇಕು ಬೆಲೆ ಮಾಡಿದ ತಪ್ಪಿಗೆ ನೀರು ಮಣ್ಣು ಸೇರಿಯೇ ನೀಡಿದ ಅಪ್ಪುಗೆ ಎಚ್ಚರ ಎಚ್ಚರ ಮಾನವನೇ ನಿನಗೆ ಪ್ರಕೃತಿಯ ಮಡಿಲಲ್ಲಿ ನಿನ್ನ ಸುಲಿಗೆ ನೀನೆ ತೆರಬೇಕು ಸುಂಕವ ನಾಡಿಗೆ ಸಾವೆ ಉತ್ತರವೂ ನಿನಗೆ ಕೊನೆಗೆ *********ರಚನೆ*********** ಡಾ.ಚಂದ್ರಶೇಖರ್. ಸಿ. ಹೆಚ್