Posts

Showing posts from January, 2023

ಮನುಷ್ಯನ ಜೀವನ ಏಕೆ ಹುಟ್ಟಿದೆ ಮತ್ತು ಜೀವನದ ಗುರಿ ಏನು????

Image
  ನಾನು ಈ ಪ್ರಪಂಚದಲ್ಲಿ ಏಕೆ ಹುಟ್ಟಿದ್ದೇನೆ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಾಗ ಸಾಕಷ್ಟು ರೀತಿಯ ಕಾರಣಗಳು ಸಿಗಬಹುದು. ಒಬ್ಬ ಬಾಲಕನನ್ನು ಕೇಳಿದರೆ ನಾನು ಆಟ ಆಡುತ್ತಾ ಓದಿ ವಿದ್ಯಾವಂತನಾಗಲು ಹುಟ್ಟಿದ್ದೇನೆ ಎಂದು ಹೇಳಬಹುದು ಹಾಗೆಯೆ ಹದಿಹರೆಯದ ಯುವಕನನ್ನು ಕೇಳಿದರೆ ನಾನು ಚೆನ್ನಾಗಿ ಓದಿ ದುಡಿದು ಪ್ರಪಂಚದಲ್ಲಿಯ ಎಲ್ಲಾ ಸುಖಗಳನ್ನು ಅನುಭವಿಸಲು ಎಂದು ಉತ್ತರಿಸಬಹುದು. ಒಬ್ಬ ಹಿರಿಯ ವಯಸ್ಸಿನ ಪ್ರಜೆಯನ್ನು ಕೇಳಿದರೆ ನಾನು ದುಡಿದು ಸಾಕಷ್ಟು ಆಸ್ತಿಯನ್ನು ಸಂಪಾದಿಸಿ ನನ್ನ ಸಂಸಾರದಲ್ಲಿರುವ ಮಕ್ಕಳು ಮೊಮ್ಮಕ್ಕಳು ಬಂಧು ಬಳಗ ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳಲು ಎಂದು ಹೇಳಬಹುದು ಮತ್ತು ಒಬ್ಬ ಸಾಧುಸಂತರನ್ನು ಕೇಳಿದರೆ ಈ ಪ್ರಪಂಚವು ನಶ್ವರ ನಾವು ಸಂಸಾರ ಎಂಬ ಜಂಜಾಟದಲ್ಲಿ ಸಿಲುಕಿ ಸುಖಗಳನ್ನು ಪಡೆಯಲು ಹೋಗಿ ದುಃಖಗಳನ್ನು ತಂದುಕೊಳ್ಳುತ್ತೇವೆ. ಅವುಗಳು ನಮ್ಮನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ನಮ್ಮ ನೆಮ್ಮದಿಯ ಹಾಳು ಮಾಡುತ್ತವೆ ಆದ್ದರಿಂದ ನಾವು ಅವುಗಳನ್ನು ತ್ಯಜಿಸಿ ಭಗವಂತನ ನಾಮಸ್ಮರಣೆ ಧ್ಯಾನದಿಂದ ನಮಗೆ ಮುಕ್ತಿ ಸಿಗುತ್ತದೆ ಎಂದು ಹೇಳಲು ಬಹುದು. ಇನ್ನು ಚಿಂತಕರು ಹೆಚ್ಚಾಗಿ ನಾವು ದೇವರ ಲೋಕದಲ್ಲಿ ಹುಟ್ಟಿ ಮಾಡಿದ ಪಾಪಗಳಿಂದ ದೇವರು ಶಾಪ ಕೊಟ್ಟು ನಮ್ಮನ್ನು ಮನುಷ್ಯ ಜೀವಿಯಾಗಿ ಬದುಕಲು ಭೂಮಿಯಲ್ಲಿ ಬಿಟ್ಟಿದ್ದಾನೆ ಎಂದು ತಿಳಿಯಬಹುದು. ಭೂಮಿಯ ಮೇಲೆ ಹುಟ್ಟಿ ಬೆಳೆದ ಪಂಡಿತರುಗಳು ಈ ಪ್ರಪಂಚದಲ್ಲಿ ಸಾಕಷ್ಟು ಕಾರಣಗಳಿಂದ ಮ

ಸಾವಿರ ದೇವರುಗಳಲ್ಲಿ ನನ್ನವನಾರು

Image
  ನಮ್ಮ ಹಿಂದೂ ದೇಶದಲ್ಲಿ ಸಾವಿರಾರು ದೇವರು ಹಾಗೂ ದೇವತೆಯನ್ನು ಪೂಜಿಸುತ್ತಾರೆ ದೇವರು ಮತ್ತು ದೇವತೆಯರು ನ್ಯಾಯ ಪ್ರೀತಿ ಸೌಂದರ್ಯ ಆಶೀರ್ವಾದ ಮಾಡುವ ಗುಣವಿರುವ ಸೃಷ್ಟಿಕರ್ತರು. ದೇವರುಗಳ ಪ್ರತಿಕ್ರಿಯೆ ನಮ್ಮ ಈ ಎರಡು ಪ್ರಾರ್ಥನೆಯಿಂದ ಕೂಡಿರುತ್ತದೆ 1 ಬ್ರಹ್ಮಾಂಡ ಕಾನೂನು- ಪ್ರಪಂಚದ ಒಳಿತು 2. ಕರ್ಮದ ಕಾನೂನು- ವೈಯಕ್ತಿಕ ಒಳಿತು ಭಕ್ತರ ಬೇಡಿಕೆ ಮತ್ತು ಅಭಿರುಚಿಗೆ ಆರಾಧನೆಗೆ ತಕ್ಕಂತೆ ದೇವರು ಪ್ರತಿಕ್ರಿಸುತ್ತಾನೆ, ಪ್ರಕೃತಿಯು ಸತ್- ಚಿತ್ -ಆನಂದ ಎಂಬ ವಾಕ್ಯವು ಇರುವಿಕೆ - ಪ್ರಜ್ಞೆ-ಸಂತೋಷವನ್ನು ಒಳಗೊಂಡಿರುತ್ತದೆ. ಹಿಂದುಗಳಲ್ಲಿ ಬಹು ದೇವತವಾದ ಆಚರಣೆಯಲ್ಲಿದೆ ಇದರಲ್ಲಿ ಮೂರು ಮುಖ್ಯವಾದ ದೇವರುಗಳು ಇವೆ. ನಾವು ಇವುಗಳನ್ನು ತ್ರಿಮೂರ್ತಿಗಳು ಎಂದು ಕರೆಯುತ್ತೇವೆ. 1. ಬ್ರಹ್ಮ -ಅರಳಿದ ತಾವರೆಯಲ್ಲಿ ಕೂತಿರುವವ 2. ವಿಷ್ಣು -ಪ್ರಪಂಚವನ್ನು ರಕ್ಷಿಸುವವ 3. ಶಿವ -ಬ್ರಹ್ಮಾಂಡವ ವಿಸರ್ಜಿಸುವವ. ಈ ಮೂರು ದೇವತೆಗಳು ನಮ್ಮ ಲೋಕವನ್ನು ಕಾಯುವವರು ಅಂದರೆ ಲೋಕಪಾಲಕರು ಹಾಗೂ ದಿಕ್ಕುಗಳನ್ನು ಕಾಯುವವರು ಅಂದರೆ ದಿಕ್ಪಾಲಕರು. 2. ವೈದಿಕ ದೇವರುಗಳು ನಮ್ಮ ಋಗ್ವೇದದಲ್ಲಿ ನಮೂದಿಸಿರುವಂತೆ 33 ದೇವರುಗಳು ಇವೆ ವಾಸು -8 ರುದ್ರ- 11 ಆದಿತ್ಯ -12 ಹಾಗೂ ಇಂದ್ರ ಮತ್ತು ಪ್ರಜಾಪತಿ. ಈ ದೇವರುಗಳು ತಮ್ಮ ಕಾರ್ಯವನ್ನು ಪೃಥ್ವಿ,- ಭೂಮಿ, ಧ್ಯೇಯ- ಸ್ವರ್ಗ, ಆಕಾಶ- ಅಂತರಿಕ್ಷ ದಲ್ಲಿ, ನಿರ್ವಹಿಸುತ್ತಾರೆ. 2. ಆದಿತ್ಯ 12,- ದೇವರುಗಳು ಮಿತ್ರ- ಗೆಳೆಯ,

ದೇಹ ಆಕಾರ

Image
ನಮ್ಮ ದೇಹ ಒಂದು ಆಕಾರ ದೇಹದ ತುಂಬಾ ಮೂಳೆ ಮಾಂಸಗಳೇ ಪೂರ ಕಣ್ಣೊಂದು ನೋಡುತ್ತಿದೆ ಪ್ರಕೃತಿಯ ಪ್ರಚಾರ ಗಾಳಿಯು ಒಂದು ಎಳೆಯುತ್ತಿದೆ ಶ್ವಾಸದ ತೇರ ನರನಾಡಿಗಳಲ್ಲಿ ರಕ್ತದ ಸಂಚಾರ ದೇಹ ಸಂಭ್ರಮಿಸುತ್ತಿದೆ ಜೀವಕೋಶದ ವ್ಯವಹಾರ ತಲೆಯ ತುಂಬಾ ಓಡುತ್ತಿದೆ ತರ್ಲೆ ವಿಚಾರ ಮನಸ್ಸು ಕುಣಿಯುತ್ತಿದೆ ಮಂಗ ಅತ್ತಿದಂತೆ ಮರ ನಮ್ಮ ಹೃದಯದಿ ಬಡಿದಂತೆ ಸದ್ದು ಆಕಾಶದೆ ಸಿಡಿಲು ಸಿಡಿದು ಭೂಮಿಗೆ ಮಳೆ ಬಿದ್ದು ದೇಹವಾದಂತೆ ತಣ್ಣಗೆ ಖುಷಿಯ ಒದ್ದು ಸೃಷ್ಟಿಸಿದ ಸೃಷ್ಟಿಕರ್ತನು ಎಷ್ಟು ಮುದ್ದು ಮನಸ್ಸು ಏಕೋ ಕುಣಿದು ಮಾತನಾಡಿದೆ ಕಾಲು ಚಕ್ರದಂತೆ ಊರೂರು ಸುತ್ತಿದೆ ಕೈ ಒಂದು ದೇಹಕ್ಕೆ ಊಟ ತುಂಬಿದೆ ಸೃಷ್ಟಿಸಿದ ಹುಟ್ಟು ಸಾವಿಂದ ಸುಟ್ಟು ಮಸಣ ಸೇರಿದೆ ಬ್ರಹ್ಮ ಬರೆದ ಗುಟ್ಟು ನೆತ್ತಿಯಲ್ಲಿಟ್ಟು ಮಾನವನ ಮನೆಯ ಬಾಗಿಲು ತಟ್ಟಿದೆ ಸುಖ ದುಃಖಗಳ ವಿಚಾರ ದೇಹ ಮುಟ್ಟಿದೆ ವಿಧಿಯೊಂದು ಕಾಯದೆ ನಮ್ಮ ಕರೆದಿದೆ *************ರಚನೆ********** ಡಾ.ಚಂದ್ರಶೇಖರ್. ಸಿ. ಹೆಚ್

ನನ್ನ ಉಸಿರು ನೀನು

Image
  ನನ್ನ ಉಸಿರಲ್ಲಿ ಉಸಿರಾದೆ ನೀನು ನಿನ್ನ ಹೃದಯದಿ ಬಡಿದು ಹಸಿರಾದೆ ನಾನು ನೀ ಬೇಡುವ ನಯನ ನಾ ಕಾಡುವ ಕಿರಣ ಈ ನಗುವ ಒಲವೇ ಭಾವನೆಗಳಯಾನ ಆ ಬಳ್ಳಿಯ ಎಲೆಗೆ ಅಪ್ಪೋ ಇಬ್ಬನಿ ಹನಿಯು ಸೂರ್ಯನ ಕಿರಣಕೆ ತಿರುಗೋ ಆ ಹೂವೆ ನೆಲೆಯೂ ನೀ ಮನದಲಿ ಬಂದು ಕಾಡುವೆ ದಿನವೂ ನಾ ನೋಡದೆ ನಿನ್ನಾ ಹೇಗೆ ತೆರಳಲಿ ಇನ್ನಾ ನೀ ಅರಳುವ ಹೂವು ನಾ ಬೇಡುವ ದುಂಬಿ ನಾ ಹೇಗೆ ಮರೆಯಲಿ ನಿನ್ನಾ ಹೂವೆ ಹೇಳು ಹಾ ತಂಗಾಳಿಗೆ ತೇಲುವ ಅಲೆಗಳೇ ದಡವ ಸೇರಿದಂತೆ ನಗುವ ಕಡಲೆ ಕಣ್ಣ ಹನಿಯ ಬಿಂದು ಕರಗಲು ಬಿಡೆನು ಎಂದು ಆಸೆಗಳು ಕಾಡಿತಲ್ಲ  ಕಣ್ಣ ಅಂಚಲೆ ನೀ ಸಂಗೀತವಾದೆ ಹೃದಯದಿ ಬಡಿದು ನೀ ಮರಳಿ ಕಾಡುವೆ ನನ್ನ ಉಸಿರ ತೆರೆದು ನಾ ಪಡೆಯಲೇಬೇಕು ಆ ಕನಸ್ಸುಗಳನ್ನ ನಾ ಕೇಳಲೇಬೇಕು ಹಿತ ನುಡಿಗಳನ್ನ ಪ್ರೇಮಾಗಿಯ ಹೃದಯದಲ್ಲಿ ನಿನದೆ ನೆನೆಪು ಕುಡಿ ನೋಟದ ಚೆಲುವಿನಲ್ಲಿ ಕಾಡುವ ಹೊಳಪು ನಿನ್ನ ಒಮ್ಮೊಮ್ಮೆ ನೋಡುವ ಆಸೆ ನೋಡಿದ ನನಗೆ ಕರೆವಾಸೆ ಮನದ ಮನೆಗೆ ನೀ ಕಾಡುವ ಹೂವು ನಾ ಬೇಡುವ ದುಂಬಿ ನಾ ಹೇಗೆ ಮರೆಯಲಿ ನಿನ್ನ ಹೂವೆ ಹೇಳು ಕಣ್ಣ ಹನಿಯ ಬಿಂದು ಕರಗಲು ಬಿಡೆನು ಎಂದು ಆಸೆಗಳು ಕಾಡಿತಲ್ಲ ಕಣ್ಣ ಅಂಚಲೆ ನನ್ನ ನೀ ಸೇರು ಹೃದಯದಿ ಬಂದು ತಿರುಗಿ ಹೋಗಬೇಡ ಮತ್ತೆ ಎಂದು ನೀ ಕಾಡುವ ಹೂವು ನಾ ಬೇಡುವ ದುಂಬಿ ನಾ ಹೇಗೆ ಮರೆಯಲಿ ನಿನ್ನ ಹೂವೆ ಎಳು *************ರಚನೆ **** ಡಾ. ಚಂದ್ರಶೇಖರ. ಸಿ. ಹೆಚ್

ಮರೆತೇನು ನಾ

Image
  ಪ್ರೀತಿಯ ಮಧುರ ಮಾತು ಮೂಕಾಯಿತೇಕೋ ಕಂಡ ಕನಸ್ಸುಗಳೆಲ್ಲಾ ಕಾಣದೆ ಚೂರಾಯಿತೇಕೋ ಉಸಿರು ತಾಕುವ ಮುನ್ನ  ಉಸಿರೇ ನೆಣ ಯಿತೇಕೋ ಎದೆಯ ಬಡಿತವು ಸಿಡಿಯದೆ ಸಿಡಿಲಾಯಿತೇಕೋ ಮರೆಯಾದ ನೆನಪುಗಳು ಮರಳಿ ಬರುತ್ತಿವೆ ಸುಡುತ ನನ್ನ ಮನವ ತಾಕಿವೆ ಬಿಸಿಲಲ್ಲಿ ಬಂದ ಮಿಂಚು ಮಾಡಿತೆಕೋ ಸಂಚು ಮೋಡದಿ ಮರೆಯಾದ ಸೂರ್ಯ ಮರೆತ ಏಕೋ ಶೌರ್ಯ ಬೆಳಕಿಗೆ ಕಾಮನಬಿಲ್ಲು ಕರಗಿತೇ ಭಾನು ಕಣ್ಣ ಹನಿ ಸುರಿಸಿತೆ ಒಂಟಿಯಾನದಲ್ಲಿ ಮೌನಿ ನಾನು ಕಡಲಲ್ಲಿ ಮುಳುಗಿದ ದೋಣಿ ನಾನು ಅಲೆಗಳ ಸೆಳೆತಕೆ ಸಿಕ್ಕು ಸೋತೇನು ನಾ ನಲುಗುತಾ ಮನೆಯ ಮರೆತೇನು ನಾ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ವೆಂಕಟರಮಣನೇ ಗೋವಿಂದ

Image
ಹಾಡುವೆವು ನಾವು ನಿನ್ನ ನಾಮವ ಗೋವಿಂದ ಬೇಡುವೆವು ನಾವು ಅನುದಿನವೂ ಆನಂದ ನೀಡಿದರೆ ಚೆಂದ ಓ ಮುದ್ದು ಮುಕುಂದ ನಾವೆಲ್ಲರೂ ಕೂಡ ನಿನ್ನ ಪ್ರೀತಿಯ ಕಂದ ವೈಕುಂಠ ವಾಸಿ, ವೆಂಕಟರಮಣನೆ ಗೋವಿಂದ ತಿರುಪತಿಯ ವಾಸಿ ತಿಮ್ಮಪ್ಪನೆ ಗೋವಿಂದ ಭಕ್ತಿಯ ಪೂಜೆಯು ನಿನಗಾಗಿ ಗೋವಿಂದ ಕಣ್ಣು ತೆರೆದು ನೋಡು ಓ ನಮ್ಮ ಗೋವಿಂದ ಕೈಯಲ್ಲಿ ಶಂಖ ಚಕ್ರ ಹಿಡಿದು ಕಾಯುತ್ತಿರುವ ಗೋವಿಂದ ಭಕ್ತರ ಕಷ್ಟ ನೀಗದಿದ್ರೆ ಏನ್ ಚಂದ ನಿನ್ನ ನಾಮವನ್ನು ಬಜಿಸುತ್ತಿರಲು ಏನೋ ಆನಂದ ಏಳುಕುಂಡಲವಾಡ ವೆಂಕಟರಮಣನೆ ಗೋವಿಂದ ವಿಷ್ಣುವಿನ ಅವತಾರ ವೆಂಕಟೇಶನೆ ಗೋವಿಂದ ಶ್ರೀದೇವಿ ಭೂದೇವಿ ಮಲ್ಲಯಪ್ಪ ಸ್ವಾಮಿ ಗೋವಿಂದ ಭೋಗ ಶ್ರೀನಿವಾಸ ಉಗ್ರ ಶ್ರೀನಿವಾಸ ಕೊಲವು ಶ್ರೀನಿವಾಸ ಗೋವಿಂದ ರಾಮ ಲಕ್ಷ್ಮಣ ಸೀತೆ ನೋಡುತ್ತಿಹರು ಗೋವಿಂದ ಶ್ರೀಕೃಷ್ಣ ರುಕ್ಮಿಣಿ ಹೇಳುತಿಹರು ನೀನೇ ಅಂದ ಗೋವಿಂದ ಹಾಡುವೆವು ನಾವು ನಿನ್ನ ನಾಮವ ಗೋವಿಂದ ಬೇಡುವೆವು ನಾವು ಅನುದಿನವೂ ಆನಂದ ನೀಡಿದರೆ ಚೆಂದ ಓ ಮುದ್ದು ಮುಕುಂದ ನಾವೆಲ್ಲರೂ ಕೂಡ ನಿನ್ನ ಪ್ರೀತಿಯ ಕಂದ ಶ್ರಿಮದ ರಮ ರಮಣ ಗೋವಿಂದ ಗೋವಿಂದ *************ರಚನೆ********** ಡಾ. ಚಂದ್ರಶೇಖರ ಸಿ. ಹೆಚ್

ಎಲೆ ಮಾನವ

Image
ಹಾರುವ ಹಕ್ಕಿ ನಾನು ಮಿಂಚುವ ಚುಕ್ಕಿ ನೀನು ನಿನ್ನನು ಸೇರಲು ನನಗಾದಿತೆ ತೇಲುವ ಮೋಡ ನೀನು ಸಿಡಿಯುವ ಸಿಡಿಲು ನಾನು ಸದ್ದಿಗೆ ಮಳೆ ಹನಿ ಸುರಿದಿತೆ ಸೂರ್ಯನ ಕವಿದ ಮೋಡ ಮಳೆ ಹನಿ ಸುರಿಸಿತು ನೋಡ ಕಾಮನಬಿಲ್ಲು ಒಮ್ಮೆ ಮೂಡಿತೆ ನಡೆಯುವ ದಾರಿಯಲಿ ಇಬ್ಬನಿ ಹನಿಯೊಂದು ಬಳ್ಳಿಯ ತಂಪಾಗಿ ಇಟ್ಟಿತೆ ಸೂರ್ಯನ ಬೆಳಕು ತಾಗಿ ಮುಂಜಾನೆ ಉದಯವಾಗಿ ದಿನವು ನವ ಹರುಷ ತಂದಿತೆ ಬೇಡುವ ದೇವರಿಗೆ ನೆತ್ತರು ಚೆಲ್ಲಿದರೆ ಪಾಪಕೆ ಕೊನೆ ಸಿಕ್ಕೀತೆ ಸಿಟ್ಟಲಿ ಹತ್ತಿದ ಬೆಂಕಿ ಸುದುತಿದೆ ನಿನ್ನ ಮನವ ತಡೆಯಲು ನಿನ್ನಿಂದ ಹಾದಿತೆ ಕಾಯುವ ದೈವ ನೀನು ಪೂಜುವ ಭಕ್ತ ನಾನು ನಿನ್ನನು ಬೈದರೆ ಬದುಕು ಉಳಿದೀತೆ ಸತ್ತ ಕಳೆಬರಹದ ಮುಂದೆ ಸುತ್ತಿ ಅತ್ತರೆ ನೀನು ಹೋದ ಜೀವ ಮರಳಿ ಬಂದೀತೆ ಓಡುತಿರುವ ಕಾಲದಲಿ  ಹಸಿದು ಬೆಡುವವಗೆ ನಿಡದಿರೆ ಯಾರಿಗಾದೆಯೂ ಎಲೆ ಮಾನವ ಎಂದು ಕಾಲ ಹೇಳದೆ ಬಿಟ್ಟೀತೇ **************ರಚನೆ******** ಡಾ.ಚಂದ್ರಶೇಖರ ಸಿ. ಹೆಚ್

ನೋಡಿರಣ್ಣಸಗುನಿ ಬಸವೇಶನ

Image
  ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಲಿಂಗವಾಗಿ ಮೂಡಿದ ಓಂ ನಮಃ ಶಿವನ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಮುಂಜಾನೆ ಬೆಳಗಿನಲ್ಲಿ ಕಣ್ಣತೆರೆದ ಪರಶಿವನ  ಮನಸ್ಸಿನಲ್ಲಿ ಮಗುವಂತೆ ದಯೆಯಲ್ಲಿ ಹಸುವಂತೆ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಕಷ್ಟಗಳ ನಿಗೋ ಸಗುನಿ ಬಸವೇಶನ ನೂರೆಂಟು ಶಿವನ ಹೆಸರು ಶಿವನು ತಾನೇ ನಮ್ಮ ಉಸಿರು ಕಾಶಿಯಲ್ಲಿ ಕಂಡ  ವಿಶ್ವನಾಥನು ಶಿವನೇ ಕೂಗಿದಾಗ ಬರುವ ಮಂಜುನಾಥನು ಶಿವನೇ ಎಲ್ಲಾ ಬಂದ ಪಾಪ ನಿಗೋ ಹರನು ಶಿವನೆ ಕೈಲಾಸವಾಸಿ ಮಹಾದೇವನು ಶಿವನೇ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಲಿಂಗವಾಗಿ ಮೂಡಿದ ಓಂ ನಮಃ ಶಿವನ ಮರಣವನ್ನು ಜಯಿಸಿದ ಮೃತ್ಯುಂಜಯ ಶಿವ ಭಕ್ತರ ನೋವ ನಿಗೋ ರುದ್ರತಾಂಡವ ಶಿವ   ನಂಬುವವಗೆ ಮಂಗಳಕರ ಸದಾಶಿವನು ಶಿವನೇ ಸಂತೋಷ ಸಮೃದ್ಧಿ ನೀಡೋ ಶಂಕರನು ಶಿವನೇ ನೋಡಿರಣ್ಣ ನೋಡಿರೋ ಸಗುನಿ  ಬಸವೇಶನ ಲಿಂಗವಾಗಿ ಮೂಡಿದ ಓಂ ನಮಃ ಶಿವನ ಹಿಂಸೆಯನ್ನು  ಸುಟ್ಟು ಬಿಡುವ ವೀರಭದ್ರನು ಶಿವನೇ ಮಮತೆಯ ದೈವ ಮಲ್ಲಿಕಾರ್ಜುನನು ಶಿವನೇ ವಿಭೂತಿಯನ್ನು ಬಳಿದ ಭೋಲೇನಾಥಾನು ಶಿವನೇ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಲಿಂಗವಾಗಿ ಮೂಡಿದ ಓಂ ನಮಃ ಶಿವನ ಮೂರು ಕಣ್ಣು ಇರುವ ಮುಕ್ಕೋಟಿ ಒಡೆಯ ಕಷ್ಟದಿ ಕೂಗಿದರೆ ಬಳಿ ಬರುವ ನಮ್ಮ ಗೆಳೆಯ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಕೈಯಲ್ಲಿ ತ್ರಿಶೂಲ ಇಡಿದು ಡಮರುಗವ ಬಡಿದು ನೆತ್ತಿಯಲ್ಲಿ ಗಂಗೆ ಹೊತ್ತ ಪರಶಿವನ ನೋಡಿರಣ್ಣ ನೋಡಿರೋ ಸಗುನಿ ಬಸವೇಶನ ಲಿಂಗವಾಗಿ ಮೂಡಿದ ಓಂ ನಮಃ ಶಿವನ ************ರ