Posts

ಭಾವ ಗೀತೆ -56

Image
    🌹 ಬಾಳ ಬಂಡಿ ಸಂತೆ🌹 ಬಾಳ ಬಂಡಿಯ ಸಂತೆಯಲ್ಲಿ ನೋವುಗಳು ನೂರೆಂಟು ನೆಮ್ಮದಿ ಹುಡುಕುತ ಮನೆಯಲ್ಲಿ ದಿಂಬಿಗೂ ಗೊರಕೆ ಉಂಟು //ಪಲ್ಲವಿ// ಬದುಕಿನ ಗಂಡ ಗುಂಡಿಯಲ್ಲಿ ತೊಳೆ ಕಲ್ಮಶ ಪೊರಕೆ ಇಡಿದು ನಿಜ ಜೀವನದ ನಡಿಗೆಯಲ್ಲಿ ಕಂಡೆ ಬಾಚಿ ದೋಚಿದವರನ್ನು ಅಳೆದು ಕಣ್ಣಿನ ನೋಟಕ್ಕೆ ಮಾವು  ಉದುರೀತೆ ಮಂತ್ರ ತಂತ್ರಕ್ಕೆ ದೇವರ ದರ್ಶನವಾಯಿತೆ ನೂಕುವಿರೇಕೆ ಟಿವಿಯ ನೋಡುತ ಕಾಲ ಕಳೆದ ಸಮಯ ಮತ್ತೆ ಜಯ ತರುವುದಿಲ್ಲ ಬಾಳ ನೋಗಕೆ  ಹೆಗಲು ಕೊಡು ಹೆಜ್ಜೆ ಹೆಜ್ಜೆಯ ತುಸು ಮುಂದಾನೀಡು ಭಯಜಯಗಳನ್ನು ನೂಕಿ ಬಿಡು ನಾಚಿಕೆಯ ಲಜ್ಜೆ ತೊರೆದು ಬಿಡು ನ್ಯಾಯಕ್ಕೆ ಮೋಡಗಳು ಡಿಕ್ಕಿ ಹೊಡೆದು ನಮ್ಮ ಧ್ವನಿಯು ಸಿಡಿಲಂತೆ ಸಿಡಿದು ಮಳೆ ಹನಿಗಳು ಉದರಲ್ಲಿ ಪ್ರೀತಿ ತಿಳಿದು ಬದುಕು ಹಸಿರಾಗಲಿ ಕಷ್ಟವ ತೊಳೆದು ಹಾಗಿದ್ದು ಹಾಗಿ ಹೋಯಿತು ಚಿಂತೆ ಏಕೆ ನಾಳೆಯೂ ಬರುವುದು ಆತಂಕವೆಕೆ ನೆನ್ನೆ ನಾಳೆಗಳ ಮಧ್ಯೆ ಗೋಣಗಾಟವೇಕೆ ಮನಸ್ಸು ಇದ್ದರೆ ಜೀವನ ಖುಷಿಯ ನೌಕೆ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -55

Image
      🌹ಕೂಡಿ ಬಾಳೋಣ🌹 ಕೂಡಿ ಬಾಳೋಣ ನಾವೆಲ್ಲರೂ ಒಂದು ನಮ್ಮಯ ಧರ್ಮವೇ ಹಿಂದೂ ನಮ್ಮೊಳಗೆ ಏಕೆ ಕಿತ್ತಾಟ ಅಶಾಂತಿಯ ಮನೆಯಲ್ಲಿ ಏಕೆ ಒದ್ದಾಟ //ಪಲ್ಲವಿ// ದೇವರು ಸೃಷ್ಟಿಸಿಲ್ಲ ಜಾತಿ ಮರೆತು ಹೋಗುತ್ತಿದ್ದೇವೆ ನೀತಿ ಗುಡಿಯಾ ಒಳಗೆ ದೇವರು ನೀನು ಮನದ ನುಡಿಯ ಒಳಗೂ ದೇವರು ನೀನು ಧರ್ಮ ಬೇರೆ ಆದರೂ ದೇಶ ಭಾರತ ಭಾಷೆ ವೇಷ ಬೇರೆ ಆದರೂ ದೇಶ ಭಾರತ ನೆಲದಲ್ಲಿ ಹರಿಯುವ ಜಲ ಒಂದೇ ಬಾವಿಯಲ್ಲಿರುವ ನೀರು ಒಂದೇ ಬೇಧ ಭಾವಗಳು ನಮ್ಮಲ್ಲಿ ಬೆರೆತರು ನಾವು ಹೇಳಬೇಕು ತಾಯಿ ಒಂದೇ ಎಂದು ಕಲೆತು ಎದೆ ತಟ್ಟಿ ಹೇಳು ನಾನು ಹಿಂದೂ ಜಾತಿ ಧರ್ಮಗಳ ನಡುವೆಯೂ ಮುಂದು *********ರಚನೆ********** ಡಾ. ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ -54

Image
         🌹 ಬಿಲ್ಲಿನ ಬಾಣ🌹 ಮನದಲ್ಲಿ ಬಿಲ್ಲಿನ ಬಾಣ ನಡೆದಿದೆ ನೋವಿನ ಕದನ ತನುವಲ್ಲಿ ಹೂವಿನ ಬಾಣ ಕುಣಿಯುವ ಬಾರ ಮದನ  //ಪಲ್ಲವಿ// ಒತ್ತಿದೆ ಓಟು ನಾನು ನೋಟು ಕೊಟ್ಟ ನೀನು ಬ್ಯಾಲೆಟ್ ವೋಟನ್ನು ಕುಕ್ಕಿ  ಬುಲೆಟ್ ಎದೆಯ ಹೋಕ್ಕಿ  ಜೀವನ ಕನಸಿನ ಬ್ರಾಂತಿ ಬದುಕಲಿ ನೂರೆಂಟು ಕ್ರಾಂತಿ ಅಕ್ಷರವ ಬರೆಯಿತು ನೆತ್ತರು ಯಾರು ನಿನ್ನ ಹೊತ್ತವರು ಹೆತ್ತರು ಮೌನವು ಇಂದು ಮಾತನಾಡಿದೆ ಮಾತು ಏಕೋ ಮರೆತು ಹೋಗಿದೆ ಗುಂಡಿಗೆ ಗಟ್ಟಿ ಇದ್ದರೆ ಜೀವ ಕಾಲವು ಕಾಣದ ವಿಷದ ಹಾವ ಜೀವನ ಸುಖ ದುಃಖದ ಕದನ ಮಾಡು ಮೋಸದ ದಮನ ಹೆಸರು ಇದ್ದರೆ ವಿಳಾಸ ಬದುಕಲಿ ಮರೆಯಾದ ವಿಲಾಸ *********ರಚನೆ********** ಡಾ. ಚಂದ್ರಶೇಖರ್ ಸಿ .ಹೆಚ್

ಭಾವ ಗೀತೆ -53

Image
🌹 ಶಾಂತಿ ಭಜನೆ🌹 ಗಾಂಧಿ ಮಾಡಿದ ಶಾಂತಿ ಭಜನೆ ಮಾಡಿತು ಭಾರತ ಪಾಕ್ ವಿಭಜನೆ ದೇಶಗಳು ನಮ್ಮವು ದ್ವೇಷಗಳು ನಮ್ಮವು ಯಾಕೆ ನಮಗೆ ಸಮರ. //ಪಲ್ಲವಿ// ಆಲದ ಮರ ಒಂದೇ ಗೊಂಬೆಗಳ ಅದಕ್ಕೆ ನೂರು ನಮಗೆ ಏಕೆ ದ್ವೇಷ ಕಟ್ಟೋಣ ನಾವು ದೇಶ ಕೊಂಡೆವು ನಾವು ಟಿಕೆಟ್ ನೋಡಲು ಭಾರತ ಪಾಕ್ ಕ್ರಿಕೆಟ್ ಗೆದ್ದರೆ ನಾವು ನಕ್ಕಂತೆ ಬಿದ್ದರೆ ಅವರು ಸೋತಂತೆ ಆಟದಿ ಸಹಜ ಸೋಲು ಗೆಲುವು ಸಾಮರಸ್ಯಧಿ ಬಾಳಬೇಕು ನಾವು ಕೆಡಿಸಿಕೊಂಡರೆ ನಾವು ಹೆಸರು ಮಲಿನವಾದಂತೆ ನಮ್ಮ ಉಸಿರು ಮನುಜ ನೀಡು ಪ್ರೇಮ ಬಜಿಸು ದೇವರ ನಾಮ ಬೇಡ ಯುದ್ಧದ ಛಾಯೆ ಜೀವನ ತಿಳಿಯದ ಮಾಯೆ **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ಭಾವ ಗೀತೆ -52

Image
  🌹 ಕನ್ನಡ ಸಾಹಿತ್ಯದ ಜಾತ್ರೆ🌹 ಕನ್ನಡವೆಂದರೆ ಮನ ಕುಣಿಯುತಿದೆ ಸಾಹಿತ್ಯದ ಜಾತ್ರೆಯಲಿ ಕನ್ನಡವೆಂದರೆ ಹೃದಯ ಬಡಿಯುತ್ತಿದೆ ಕೋಗಿಲೆ ಕುಹೂ ಸವಿಗಾನದಲಿ //ಪಲ್ಲವಿ// ಪ್ರಕೃತಿಯು ಹಸಿರು ತೋರಣ ಪಂಪ ಭಾರತ ಅರಳುವಲಿ ಸಮಾಜವಾಯಿತು ಸುಂದರ ಬಸವಣ್ಣನ ಕಾಯಕ ಕೈಲಾಸ ಆಗುವಲಿ ವಿರೂಪಾಕ್ಷನಾದನು ಪುನೀತ ಹರಿಹರನ ರಗಳೆಯ ಭಕ್ತಿಯಲಿ ಕರ್ನಾಟಕದ ಏಕೀಕರಣ ಕನ್ನಡ ಭಾಷೆ ನಗುವಿನಲಿ ಕುಮಾರವ್ಯಾಸನು ಗುಡುಗಿದನು ವ್ಯಾಸರ ಮಹಾಭಾರತ ಚಿಗುರುತಲಿ ಲಕ್ಷ್ಮೀಶನ ಅಲಂಕಾರಗಳ ಶೃಂಗಾರ ಜೈಮಿನಿ ಭಾರತ ಮೆರೆಯುವಲಿ ಬದುಕು ಆಯಿತು ಬೆತ್ತಲೆ ಸರ್ವಜ್ಞನ ತ್ರಿಪದಿಗಳ ನುಡಿಯಲಿ ದಾಸರು ಸಂತರ ಹಾಡಿನಲಿ ಮನಸುಗಳು ನಕ್ಕವು ಶುಭ್ರತೆಯಲಿ ವರಕವಿ ಯುಗ ಕವಿ ಹಾಡಲು ಸಾಹಿತ್ಯದ ನುಡಿ ಮಿಡಿಯುತಲಿ ಜೋಗದ ಸಿರಿ ಬೆಳಕಿನಲಿ ನಿಸಾರ್ ಅಹ್ಮದರ ನಿತ್ಯೋತ್ಸವದಲಿ ಹಳ್ಳಿಯ ಸಂಗೀತದ ಸೊಬಗು ಜನಪದ ಗೀತೆಯು ಜನಗಳ ಬಾಯಿಯಲಿ ಹೊಸ ಕವಿಗಳು ಕನ್ನಡದಿ ಉದಯಿಸಿ ಕುಣಿಯದೆ ಜೀವನ ಕನ್ನಡಮ್ಮನ ನೆರಳಿನಲಿ ***********ರಚನೆ******* ಡಾ.ಚಂದ್ರಶೇಖರ್ ಸಿ.ಹೆಚ್

ಭಾವಗೀತೆ -51

Image
   🌹 ಕನ್ನಡವೇ ನಮ್ಮಮ್ಮ🌹 ಕನ್ನಡಮ್ಮನ ಕರುಳಿನ  ಓ ಮುದ್ದಿನ ಕುಡಿ ಕನ್ನಡ ಮಾತಾಡುವ ಮುದ್ದು ಗಿಳಿಯಾಗಲಿ ನುಡಿ. //ಪಲ್ಲವಿ// ಬಸವಣ್ಣ ಸರ್ವಜ್ಞ ಅಕ್ಕಮಹಾದೇವಿ ವಚನಗಳು ಮನೆ ಬೆಳಗುತಾ  ಅಜ್ಞಾನದ ಅಂಧಕಾರವಾ ತೊಳೆಯುತ ಹಚ್ಚಿವೆ ನಮ್ಮ ಮನದ ಹಣತೆ ಚಾಲುಕ್ಯ ಹೊಯ್ಸಳ ಕದಂಬ ರಾಜರುಗಳು ಆಳಿದರು ನಮ್ಮನ್ನು ನಾಲ್ವಡಿ ಕೃಷ್ಣರಾಜರು ಕಟ್ಟಿದರು ಕನ್ನಂಬಾಡಿಯನ್ನು ಜಗದಲ್ಲೆಡೆ ಕುಣಿಯಲಿ ನಲಿಯಲಿ ನಮ್ಮಯ ಕನ್ನಡ ನುಡಿಯು ಸಾಗುವ ನೋವು ಉಳಿಸುತ ಬೆಳೆಸಿದ ಸಿಹಿ ಕನ್ನಡ ಭಾಷೆಯು *******ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ- 50

Image
    🌹 ಕಂಗೊಳಿಸುವ ನೈದಿಲೆ🌹 ಮಾಮರ ಚಿಗುರದೆ ಕೂಗಿತೆಗೆ ಕೋಗಿಲೆ ಕೆಸರಿನಲ್ಲಿ ಕಂಗೊಳಿಸಿ ನಕ್ಕಿದೆ ಸುಂದರ ನೈದಿಲೆ. //ಪಲ್ಲವಿ// ಕೊಲ್ಲುವ ಭಯ ತಾಕಿದಾಗ ಓಡುತಿಹುದು ಜಿಂಕೆಯು ಮರದಿಂದ ಮರಕೆ ಜಿಗಿಯುತಿಹುದು ಮಂಗವು ರೆಕ್ಕೆ ಮುರಿದ ಹಕ್ಕಿ ಹೇಗೆ ಮುಗಿಲಿಗೆ ಹಾರಿತು ಮಳೆಯು ಹನೀ ಮುತ್ತಿಕ್ಕದೆ ಹಸಿರು ಎಲ್ಲಿ ಚಿಗುರಿತು ಗೊಮ್ಮಟ ಹಾಗೂ ಗುಮ್ಮಟವ ನೋಡಿ ಶಾಂತಿ ಆಯ್ತು ಮನವು ರಾಜರುಗಳು ಕಡು ಚರಿತ್ರೆ ಕೇಳಿ ಸಿಡಿಯಿತೆಕೆ ತನವು  ಕವಿತೆ  ನನ್ನ ಸೆಳೆದಾಗ ಹೃದಯ ಹಾಡು ಹಾಡಿದೆ ಕವಿತೆ ಬರೆದ ಕವಿಯನ್ನು   ಮನವು ತುಂಬಾ ಹೊಗಳಿದೆ *********ರಚನೆ ******** ಡಾ. ಚಂದ್ರಶೇಖರ್ ಸಿ. ಹೆ ಚ್