Posts

ಧ್ಯಾನದಿಂದ ಮನಸ್ಸಿಗೆ ಶಕ್ತಿ

Image
  ಜೀವನದ ಸಂತೋಷ ಮನುಷ್ಯನ ನಿರಂತರ ಪ್ರಯತ್ನವಾಗಿದೆ, ಮನುಷ್ಯ ಜೀವಿಯು ಯಾವಾಗಲೂ ದುಃಖವನ್ನು ಮರೆತು ಸಂತೋಷವಾಗಿರಲು ಪ್ರಯತ್ನಿಸುತ್ತಾನೆ. ಮನುಷ್ಯ ಒಬ್ಬ ಆಶಾ ಜೀವಿ, ಅವನು ಪಡುವ ಆಸೆಗಳು ಅವನನ್ನು ದುಃಖಕ್ಕೆ ದೂಡಿ ನಿರಾಶನನ್ನಾಗಿ ಮಾಡಿ, ಮನಸ್ಸು ಪ್ರತಿಯೊಬ್ಬ ವ್ಯಕ್ತಿಯನ್ನು ಚಕ್ರವರ್ತಿಯಂತೆ ಆಳಲು ಶುರುಮಾಡುತ್ತದೆ. ಇಂತಹ ಮನಸ್ಸಿನ ಮೇಲೆ ನಾವು ಹಿಡಿತ ಸಾಧಿಸಲು ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಮನಸ್ಸು ಒಂದು ರಹಸ್ಯ ಶಕ್ತಿ, ಅದು ನಮ್ಮನ್ನು ದೇವರಿಂದ ಬೇರ್ಪಡಿಸಿರುತ್ತದೆ, ಮನಸ್ಸು ಒಂದು ಆತ್ಮಶಕ್ತಿ, ಮನಸ್ಸಿನಿಂದ ನಾವು ಬ್ರಹ್ಮನು ಸ್ವರೂಪವನ್ನು ಕಾಣಬಹುದು. ಹೃದಯವೇ ಮನಸ್ಸಿನ ಆಸನವಾಗಿದೆ. ಕುಣಿಯುವ ಕುದುರೆಗೆ ಲಗಾಮು ಹಾಕು ತಿವಿಯುವ ಏತ್ತಿಗೆ ಮೂಗುದಾರ ಹಾಕು ಹೊಲವ ಮೇಯುವ ಆನೆಗೆ ಬೇಲಿ ಹಾಕು ಹುಚ್ಚು ಮನಸನು ಹಿಡಿದಿಡು ಸಾಕು ನಮ್ಮ ಮನಸ್ಸು ಬೇರೊಬ್ಬ ವ್ಯಕ್ತಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತದೆ, ಸ್ನೇಹಿತರು , ಸಂಬಂಧಿಕರು, ಇಷ್ಟಪಟ್ಟ ವಸ್ತುಗಳು ಹಾಗೂ ಇತರ ಮನಸ್ಸುಗಳೊಂದಿಗೆ. ನಾನು ಎಂಬ ಅಹಂಕಾರ ಮನಸ್ಸಿನ ಮರದ ಬೀಜವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಪ್ರಪಂಚ, ಲೋಕ,  ಆಲೋಚನೆ, ಜ್ಞಾನ,  ಮನೋಧರ್ಮ , ಅಭಿರುಚಿ,  ಮನಸ್ಥಿತಿ,  ದೈಹಿಕ ಗುಣಗಳು ಇರುತ್ತವೆ ಇವು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುತ್ತವೆ. ಮನಸ್ಸಿನ ಸೆಳೆತ ಎಂದರೆ ಅತಿಂದ್ರೀಯ ಸೆಳವು ಮನಸ್ಸು ಒಂದು ಅಭ್ಯಾಸಗಳ ...

ಚುಟುಕು ಕವನ-3

Image
  ಬ್ಯಾಂಕಲ್ಲಿ ಸಾಲದ ಮೇಳ ಯಾರು ಕೇಳಬೇಕು ರೈತನ ಗೊಳ  ಮಾಡದೆ ನಾನು ಹಣದ ಸಾಲ ಬೇಳದೈತೆ ಈಗ ಸಾಲದ   ಬಾಲ ದುಡ್ಡಿದ್ರೆ ಇಂದು ಬಾಳು ಕೈಲಾಸ ದುಡ್ಡಿಗಾಗಿ ಮಾಡು ಇಲ್ಲಿ ವನವಾಸ ಸಿಕ್ಕರೆ ದುಡ್ಡು ನೊಡದಂಗೆ ಪರದೇಶ  ಇಲ್ಲದಿದ್ರೆ ಗ್ಯಾರಂಟಿ ಉಪವಾಸ  ಮಳೆ ಇಲ್ಲಾಂದ್ರೆ ಭೂಮಿ ಬರಡು ಹಣ ಇಲ್ಲಾಂದ್ರೆ ಬದುಕು ಕುರುಡು ದುಡ್ಡಿದ್ರೆ ಎಲ್ಲರೂ ನೆಂಟರು ಇಲ್ಲಾಂದ್ರೆ ಸುಮ್ನೆ ಹೋಂಟರು  *******ರಚನೆ******** ಡಾ.ಚಂದ್ರಶೇಖರ್ ಸಿ ಏಚ್

ಚುಟುಕು ಕವನ-2

Image
  ಹುಡುಗಿ ನೀ ನಕ್ಕೆ ನಾ ಹಿಡಿದೆ ಬೊಕ್ಕೆ ನಿಮ್ಮಣ್ಣ ಮುರಿದ ನನ್ನ ಪೋಕ್ಕೆ ಮತ್ತೆ ನೀ ಏಕೆ ನಕ್ಕೆ  ಹೆ ಹುಡುಗಿ ನಿಂಗೆ ಸೊಕ್ಕೇ  ಹುಡುಗಿ ಹೊಡೆದಳು ಕಣ್ಣು ತಿಂದಾಗಯ್ತು ಮಾವಿನ ಹಣ್ಣು ಹುಡುಗಿ ಹಾ ನಿನ್ನ ನೋಟ ಕುಡಿದಾಗೈತೆ ನೀರೆ ಇಲ್ಲದ ಲೋಟ  ಕೊಡಬೇಡ ನನಗೆ ಕಾಟ  ಲುಕ್ಕು ನೊಡಕೆ ಸೂಪರ್ ನಿನ್ನಿಂದೆ ತಿರುಗಿ ನಾ ಪಾಪರ್  ಹೀಗ ಹಾಯ್ತ ಇವಿನಿ ಪೇಪರ್ ಆದ್ರೂ ನಿನ್ನ ಮೇಲೆ ಏಕೋ ಪ್ಯಾರ್ *********ರಚನೆ****** ಡಾ.ಚಂದ್ರಶೇಖರ್ ಸಿ. ಏಚ್

ಚುಟುಕು ಕವನ-1

Image
  ಬಾಯಾರಿದೆ ಬದುಕು ಕುಡಿ ನೀರು ಗುಟುಕು ಜೀವನದ ಬವಣೆ ತಿಂದಂತೆ ನವಣೆ  ಒ ಜೀವನವೇ ಕೇಳು ಯಾರಿಗೆ ಬೇಕು ಗೋಳು ಪ್ರೀತಿ ಒಂದು ರಾಗ ಬೇಡ ನಮಗೆ ರೋಗ ತಿನ್ನಲು ಬೇಕು ಖಾದ್ಯ  ಉದಬೇಕು ವಾದ್ಯ ಹಾಡಲೇಬೇಕು ಪದ್ಯ ಕುಡಿಯಬೇಡಿ ಮದ್ಯ ******ರಚನೆ****** ಡಾ.ಚಂದ್ರಶೇಖರ್ ಸಿ. ಏಚ್

ಯುಗಾದಿ 2023

Image
  ಹೊಸವರ್ಷ ಬಂತು ಬದುಕಿಗೆ  ಹೊಸತು ತಂತು ನವ ಬಾಳಿಗೆ ಮರವು ಚಿಗುರಿ ಹೂವು ಕಾಯಿ ಚಿಗುರಬೇಕು ಬದುಕು ತಾಯಿ ಎಣ್ಣೆ ಸ್ನಾನ ಬಿಸಿ ನೀರ ಜಳಕ ಮಾಡಿ ಹೊಬಿಟ್ಟು ಉಂಡು ತಬ್ಬಿ ಹಾಡಿ ರಾತ್ರಿ ಮೂಡೋ ತುಣುಕು ಚಂದ್ರನ ನೋಡಿ ಬೇವು ಬೆಲ್ಲ ಸವಿದು ಆಶೀರ್ವಾದ ಬೇಡಿ ದೇವರೇ ನೀಡು ಸುಖ ಭಾಗ್ಯ ಬಾಳಿನಲಿ ಬೇಳಕೆ ಅರೋಗ್ಯ ಕಷ್ಟಸುಖವು ಬೇವುಬೆಲ್ಲದಂತೆ ನಿನ್ನ ನೆನೆವ ಭಾಗ್ಯ ಹಣತೆಯಂತೆ ಮಾಮರಗಳು ಚಿಗುರಿ ನಿಂತಿದೆ ಹಣ್ಣುಕಾಯಿ ನಮ್ಮ ಕೂಗಿ ಕರೆದಿದೆ ಪ್ರಕೃತಿಯು ಸೊಬಗು ಕಂಡಿದೆ ಹೊಸತು ಕಂಡ ಮನವು ಧನ್ಯ ಎಂದಿದೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು  ************ರಚನೆ******** ಡಾ.ಚಂದ್ರಶೇಖರ್. ಸಿ .ಏಚ್

ಪ್ರಕೃತಿಯಲ್ಲಿ ಹೆಣ್ಣು

Image
  ನಲಿವಳು ಮೌನದ ತೀರದಲಿ ಅಲೆವಳು ಬರಡು ಭೂಮಿಯಲಿ ಕಾಡುವಳು ಕಣ್ಣ ಅಂಚಿನಲಿ ನಗುವಳು ಕಡಲಿನ ಅಲೆಗಳಲಿ ಮಾತು ಬಾಡಿದ ಹೂವಂತೆ ನಯನ ನಾಚಿದ ಚೆಲುವಂತೆ ಮುಂಗುರುಳು ಕನಸ ಕರೆದಂತೆ ಹೃದಯ ಬಳ್ಳಿಯಲಿ ಬೆರೆತಂತೆ ಕೈ ಇಡಿದು  ಬೇರು ಮಣ್ಣಲಿ ಬೆರೆತು ಜೀವಕೆ ನೀರು ಹನಿಯಂತೆ ಕಲೆತು ಉಳಿದಿತು ಬದುಕು ನೋವ ಮರೆತು ಹಸಿರು ಜೀವದಲಿ ಗಾಳಿ ತುಂಬಿತು ಹೂವು ಬಿಟ್ಟು ಹಣ್ಣಾಗಿ ಮಾಣ್ಣಗುವೆ ಹಸಿವಿನ ಜೀವಕೆ ಅಮೃತವಾಗುವೆ ಬಿಸಿಲಿನ ಬೇಗೆಯಲಿ ನೆರಳಾಗುವೆ ಕಣ್ಣ ಮುಚ್ಚಿ ನೆನೆ ನೀನ್ನಲಿ ನನಾಗುವೆ  ***********ರಚನೆ******** ಡಾ.ಚಂದ್ರಶೇಖರ್ . ಸಿ. ಏಚ್

ವಯಸ್ಸು ಹದಿನೆಂಟು

Image
  ವಯಸ್ಸು ಈಗ ಹದಿನೆಂಟು ಕನಸ್ಸು ಬಂತು ನೂರೆಂಟು ಮನಸು ಮನಸುಗಳ ನಂಟು ಹದಿಹರೆಯವೆ ಇಗೆ ಕಗ್ಗಂಟು ಕಣ್ಣು ಕಣ್ಣಲೆ ಒಳ್ಳೆ ಸಿಹಿ ಮಾತು ಆಸೆ ಒಲವಿಗೆ ಬಿದ್ದಿದೆ ಜೋತು  ಬಿಸಿಪ್ರಾಯ ಹುಕ್ಕುವ ವಯಸ್ಸು ಏಕೋ ಸುಡುತಿದೆ ನನ್ನ ಮನಸ್ಸು  ನಡೆವ ನಡಿಗೆಯೆ ತಂತು ಅಮಲು ಪ್ರೀತಿ ಏಳಲು ಸುಮ್ನೆ ದಿಗಿಲು ನಿನ್ನಯ ಹಿಂದೆ ನಾ ಬಂದೆ ಸೊಗಸಿನ ಸೌಂದರ್ಯಕೆ ಬೆಂದೆ ಹುಡುಗಿ ನೋಡಿ ನಿನ ಬಿಂಕ ನಾನಾದೆ ಒಲವಲಿ ಮಂಕ ನೀನು ಪ್ರೀತಿಯ ರಸಪಾಕ ಸವಿದು ನಾನಾದೆ ಮೂಕ **********ರಚನೆ******** ಡಾ.ಚಂದ್ರಶೇಖರ್. ಸಿ. ಏಚ್