Posts

ಚುಟುಕು ಕವನ -25

Image
🌹🌹ಸೂರ್ಯ 🌹🌹 ನೋಡು ನೋಡು ಕೆಂಪನೆ ಸೂರ್ಯ ಸುಡಿತಿಹ ಬೆಂಕಿಯ ಸೆಲೆಯಂತೆ ಕ್ರೌರ್ಯ ನೀಲಿ ಆಗಸದಿ ದುಂಡು ಬೆಳಕಿನ ಶೌರ್ಯ ಇಬ್ಬನಿ ಹನಿಯೊಂದು ಕೆಣಕುವ ದೈರ್ಯ 🌹🌹 ಚಂದ್ರ 🌹🌹 ನೋಡು ಅಲ್ಲಿ ರಾತ್ರಿಯ ಬೆಳ್ಳನೆ ಚಂದ್ರ ಮೈತುಂಬಾ ಕಾಣುತಿದೆ ಕಪ್ಪನೆ ರಂದ್ರ ನೋಡುತ ಹೊರಟರೆ ಜೋತೆ ನಡೆವ ಇಂದ್ರ ಚಂದ್ರ ನೀನು ದುಂಡನೆ ಹೊಳಪಿನ ಸಾಂದ್ರ 🌹🌹ನಕ್ಷತ್ರ🌹🌹 ಆಕಾಶದಿ ಹಕ್ಕಿಗಳೆ ನೋಡಿ ನಕ್ಷತ್ರ ಬಿಳಿ ಬೆಳಕಿನ ಚುಕ್ಕಿಗಳಂತು ಬಲು ವಿಚಿತ್ರ ಬಿಡಿಸಲು ಹೊರಟಳು ಮಗಳು ಚಿತ್ರ ಚಿತ್ರವು ಹೇಳಿತು ಕಣ್ಣ ಕಂಬನಿ ಪತ್ರ *********ರಚನೆ*********** ಡಾ ಚಂದ್ರಶೇಖರ್. ಸಿ. ಹೆಚ್

ಕನಸುಗಳ ಪಿಸು ಮಾತು

Image
 Please subscribe my YouTube channel ನನ್ನ ಯು ಟ್ಯೂಬ್ ಚಾನಲ್  ಕನಸುಗಳ ಪಿಸು ಮಾತು Subscribe. ಮಾಡಿ 

ಪ್ರೇಮಯಾನ

Image
ಆಸೆಗಳ ಪಯಣಕೆ ಜೋತು ಬೀಳುವ ಅಲೆಮಾರಿಯು ನಾ ಕಾಣದ ಕನಸ್ಸಿಗೇ ನೋವು ಪಡುವ ಮೂಖ ಪ್ರೇಮಿ ನಾ ನಿನ್ನ ನೆನಪಲಿ ಕಾಲ ದೂಡುವ ಪ್ರೇಮಾ ಕೈದಿ ನಾ ಕಣ್ಣಾ ನೋಟಕೆ ಸೋತು ತಿರುಗಿದ ನಿನ್ನ ನಲ್ಲ ನಾ ಈ ಒಂಟಿಯಾನಾದೀ ಬದುಕೂ ಸವೆಸುವ ಮೌನದ ಮಾತು ನಾ ಕಣ್ಣಾ ನೋಟಕೆ  ಕರಗಿ ಹೋಗುವ  ಹನಿಯ ಮಂಜು ನಾ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆ ಚ್

🌹ಭಾವ ಗೀತೆ -71🌹

Image
🌹 ಅರಳಿತೆ ಯೌವ್ವನ 🌹 ಎಲ್ಲಿ ಹುಡುಕಲಿ ನಾ ಯೌವ್ವನ  ಹದಿಹರೇಯದಿ ದುಃಖ ದುಮ್ಮಾನ ಆಸೆಗಳ ಮಸಣದಿ ಬೆಂದು ಬರಡಾಗಿದೆ ಬದುಕು ನೊಂದು. //ಪಲ್ಲವಿ// ಕನಸುಗಳ ಸಂತೆಯಲ್ಲಿ ಸವಿ ನಿದ್ದೆ ನೆನಪುಗಳ ಚಿಂತೆಯಲ್ಲಿ ನಾ ಬಿದ್ದೆ ವಯಸ್ಸಿನ ತಳಮಳದಿ ಮೈ ಒದ್ದೆ ಹುಚ್ಚು ಮನಸ್ಸಿನ ಸಿಹಿ ಮುದ್ದೆ ಬೆಳಕಿನ ಕಿರಣದಿ ದೇಹ ಹೊಳಪು ಮಣ್ಣಿನ ಮಡಿಲಲ್ಲಿ ಮಾಗದ ಉರುಪು ಪುಸ್ತಕದ ಜ್ಞಾನ ಏಕೋ ನುಣುಪು ದೇವರೇ ಬರೆದಿಟ್ಟ ಶಿಕ್ಷೆಯ ಮುಡಿಪು ಮಾಡುವ ಕೆಲಸದಿ ಮನಸ್ಸಿಲ್ಲ ಶಾಲೆಯಲ್ಲಿ ಗೆಳತಿಯದೆ ಕನಸೆಲ್ಲ ಮನೆಯಲ್ಲಿ ಅಪ್ಪ ಅಮ್ಮ ಬೇಕಿಲ್ಲ ಯೌವ್ವನದ ಬಯಕೆಗೆ ಕೊನೆಯಿಲ್ಲ ಕಾಡಿದೆ ಇವರ ನೋಡಿ ದೆವ್ವಕ್ಕೂ ಭಯ ದೇವರು ಸೋತು ಹೋದ ನೋಡಿ ಇವರ ಲಯ ಚಂದ್ರನು ನಾಚುವನು ನೋಡಿ ಇವರ ನಯ ಮಾತಿನಲ್ಲಿ ವಯಸ್ಸು ಕಾಣದಂತೆ ಮಾಯ ********ರಚನೆ**********  ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ-70

Image
  🌹 ಮುಟ್ಟ ಬೇಡವೋ ಮನುಜ🌹 ಮುಟ್ಟಬಿಡುವೊ ಮನುಜ ನೀ ನನ್ನ ತಟ್ಟಿದರೆ ಸಿಗುವುದು ನಿನಗೆ ಚಿನ್ನ ಮುಟ್ಟಿ ತಟ್ಟುವ ಆಟ ಬಲು ಚೆನ್ನ ಉಸಿರುಗಟ್ಟಿತು ನನ್ನ ಜೀವ ರನ್ನ. //ಪಲ್ಲವಿ// ಇಟ್ಟಿಗಾಗಿ ಬೆವರು ಸುರಿಸುವವರು ಬುದ್ಧಿ ಬಂದ ಮೇಲೆ ಮೆಟ್ಟಿ ಕುಂತವರು ಬುದ್ಧಿಯಿಂದ ಇಟ್ಟು ಉಂಡು ಹಸಿದ ಹೊಟ್ಟೆಯ ಒದ್ದು ನಿಂತವರು ಮಾತಲ್ಲಿ ಮನೆಯ ಕಟ್ಟುವವರು ಅಕ್ಷರದಲ್ಲಿ ಆಕಾಶ ಆಳುವವರು ಮಾತಿನ ಅಕ್ಷರದಿಂದ ಹಕ್ಕು ಕಸಿದವರು ಖಾಲಿ ತಟ್ಟೆಯ ನೋಡಿ ಬಿಕ್ಕಿ ಅತ್ತವರು ಮೇಲು ಕೀಳು ಎಂಬ ಭಾವ ಜಗದಲ್ಲಿ ಬಡವ ಬಲ್ಲಿದನೆಂಬ ಒಡಕು ಮನದಲ್ಲಿ ಈ ಸುಳ್ಳು ಭಾವದ ಬದುಕ ಸಂತೆಯಲ್ಲಿ ಸತ್ಯಕ್ಕೆ ನಿಜಕ್ಕೂ ಸಾವು ಕೊನೆಯಿಲ್ಲಿ ಇದ್ದವರು ದಾನ ಧರ್ಮದ ಗತ್ತು ಹಸಿದವರ ಹೊಟ್ಟೆಗೆ ತುತ್ತಿನ ಕುತ್ತು ಆದರೂ ನಮ್ಮ ದೇಶ ಮಹಾನ್ ಅಹಂಕಾರದ ಮದವೇರಿದ ಜನಕೆ ಸಮಾನ್ *********ರಚನೆ*********  ಡಾ. ಚಂದ್ರಶೇಖರ್ ಸಿ ಹೆಚ್

ಭಾವಗೀತೆ -69

Image
  🌹 ನರ ಮಾನವ🌹 ನರ ಮಾನವ ದೈವ ಕಾಣ ಹೊರಟ ದೈವನಾಗಲಿಲ್ಲ  ದಾನಮಾಡ ಹೊರಟ  ದೇವನಾದನಲ್ಲ //ಪಲ್ಲವಿ// ಮನುಷ್ಯತ್ವ ಒಂಚೂರು ಇಲ್ಲ ಮನುಜನಾದನಲ್ಲ ಯುದ್ಧ ಮಾಡಲಿಲ್ಲ ಕತ್ತಿ ಗುರಾಣಿ ಹಿಡಿದನಲ್ಲ ದ್ವೇಷ ಅಸೂಯೆ ಮರೆತು ನಡೆದ ಶತ್ರು ಕಾಣಲಿಲ್ಲ ಪುಸ್ತಕಗಳ ಓದಲಿಲ್ಲ ಜ್ಞಾನ ಉಟ್ಟಿತಲ್ಲ ಬೋಧಿವೃಕ್ಷದ ಕೆಳಗೆ ಕುಳಿತ ಜ್ಞಾನೋದಯವಾಯಿತಲ್ಲ ಊರೂರು ಸುತ್ತಿ ಬಂದ ತಿಳಿದ ಯಾರೂ ನನ್ನವರಲ್ಲ ವಿದ್ಯೆಯನ್ನು ಮರೆತ ಅಕ್ಷರದ ಬೆಳಕು ಮೂಡಲಿಲ್ಲ ಪ್ರಕೃತಿಯೊಡನೆ ಬೆರೆತ ಆದರು ದೈವ ಕಾಣಲಿಲ್ಲ ಮಾನವೀಯತೆ ತಿಳಿಯ ಹೋಗಿ ಮೌಲ್ಯ ಸತ್ತಿತ್ತಲ್ಲ ಮಾತು ಮೌನಿಯಾದ ಜ್ಞಾನದ ಚಿಲುಮೆ ಹುಟ್ಟಿತಲ್ಲ ********ರಚನೆ ********* ಡಾ. ಚಂದ್ರಶೇಖರ್ ಸಿ.ಹೆಚ್

ಭಾವಗೀತೆ-68

Image
  🌹 ಪ್ರಕೃತಿ ಮಾತೆ🌹 ಪ್ರಕೃತಿಯ ಮಾತೆ ಒಮ್ಮೆ ನಕ್ಕರೆ ಹಸಿರು ತುಂಬಿ ಪೈರಿನ ಸಕ್ಕರೆ ಪ್ರಕೃತಿ ಮಾತೆ ಒಮ್ಮೆ ಮುನಿದರೆ ಸಕಲ ಜೀವಿಗಳ ಸುತ್ತುವ ಬಂಧು ನೆರೆ // ಪಲ್ಲವಿ// ಇರಲಿ ತಾಯಿ ಸ್ವಲ್ಪ ಕೊಂಚ ಕರುಣೆ ನಾವು ನಿನ್ನ ಮಕ್ಕಳು ತಾಯಿ ನೀನು ತಾನೆ ನಮ್ಮ ಸಾಕಿ ಸಲಹುವಳು ನೋವಾಗದಂತೆ ನಮ್ಮ ಕಾಯುವವಳು ನರರು ಮೆರೆವರು ನಿನ್ನ ಮೇಲೆ ಕ್ರೌರ್ಯ ನೀನು ಮುನೀದರೆ ತೋರುವೇ ಸುನಾಮಿ ಶೌರ್ಯ ಆಸೆಪಟ್ಟು ನಾವು ಹಿಡಿದೆವು ಕೊಡಲಿ ದುರಾಸೆ ನಮ್ಮ ಕಿತ್ತು ತಿನ್ನದಿರಲಿ ಪ್ರಕೃತಿಯ ಮಾತೆ ತುಂಬಿಸುವಳು ಹೊಟ್ಟೆ ಹೆಚ್ಚು ಎಗರಿದರೆ ಕಾಯಂ ತಾನೆ ತಣ್ಣೀರ ಬಟ್ಟೆ ನಿನ್ನ ಮುಂದೆ ಎಂದು ಮರುಗಬೇಕು ನಾವು ಇಲ್ಲದಿದ್ರೆ ನಮಗೆ ನಿಜವು ತಾನೆ ಸಾವು ಬೆಟ್ಟಗುಡ್ಡ ಕಡಿದು ಫೈರು ಬೆಳೆದಿಹೇವು ನೆರೆಬಂದು ಬೆಳೆದ ಪೈರಾ ಕಳೆದಿಹೇವು ಪ್ರಕೃತಿಯೇ ನಮ್ಮ ಪ್ರೀತಿಯ ದೈವ ಪ್ರಕೃತಿಯೇ ನಮ್ಮ ಭಾವದಲ್ಲಿ ಜೀವ ********ರಚನೆ ******** ಡಾ.ಚಂದ್ರಶೇಖರ್ ಸಿ ಹೆಚ್