Posts

ಮಕ್ಕಳ ಗೀತೆ -49

Image
  ಬೆಳಕು ದೀಪ  ನೀನು ತಾನೇ ಸಣ್ಣ ದೀಪ  ನೋಡಿ ಅಯ್ಯೋ ಪಾಪ  ಒಂಟಿ ಕಣ್ಣಲ್ಲಿ ಅಳುವೆ  ಜಗವ ಬೆಳಗುತಿರುವೆ  ನಿನ್ನ ಕಂಡು ಭಯ ಕತ್ತಲೆಗೆ  ಬೆಳಕು ಕೊಟ್ಟು ನೀ ಸುಟ್ಟಿರುವೆ  ಸತ್ಯಶಕ್ತಿ ನಿನ್ನಯ ರೂಪ  ದಿವ್ಯತೆಗೆ ನೀನೆ ಸ್ವರೂಪ  ಕತ್ತಲೆ ಎಂಬ ಮುಳ್ಳು ಕಳೆದು  ಬೆಳಕು ಎಂಬ ನದಿ ಹರಿದು  ಕಪಟ ಮೋಸ ಮಾಯವಾಯಿತು  ಸತ್ಯಕ್ಕೆ ಬೆಳಕು ದಾರಿಯಾಯಿತು  ಧರ್ಮಕ್ಕಾಗಿ ನಿನ್ನ ಜನನ  ಅಧರ್ಮವು ನಿನ್ನಿಂದ ಮರಣ  ಭವ್ಯ ನಾಡು ಬೆಳಗು ನೀನು  ಅನಂತ ಚೇತನವಾಗು ನೀನು **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -48

Image
  ನಿನ್ನವರಾರು ಇಲ್ಲಿ  ಒಲವಿನ ಗಿಣಿಯೇ ಹೇಳು ಕಣಿಯ  ನಿನ್ನವರಾರು ಇಲ್ಲಿ  ಬದುಕಲ್ಲಿ ಬೆರೆತು ಸೂರ್ಯಕಾಂತಿಯ  ತಿನ್ನುತ ಕೂತೆ ಅಲ್ಲಿ  ಚಿಲಿಪಿಲಿ ಹಕ್ಕಿಯೇ ಹಾರುವ ಹಕ್ಕಿಯೇ  ನಿನ್ನವರಾರು ಇಲ್ಲಿ  ಮರದ ಕೊಂಬೆಯ ಮೇಲೆ ಕೂತು  ಹುಡುಕಿದೆ ನನ್ನವರನ್ನು ಇಲ್ಲಿ  ಕರಿಯ ಕಾಗೆಯೆ ಕೂಗುವ ಕಾಗೆ ಯೇ ನಿನ್ನವರಾರು ಇಲ್ಲಿ  ಕರೆಂಟ್ ಕಂಬದಿ ಕೂತು ಕೂಗುತ  ಕಂಡೆ ನನ್ನವರ ಇಲ್ಲಿ  ನಾಗರಹಾವೆ ಬಸು ಬುಸು ಹಾವೇ  ನಿನ್ನವರಾರು ಇಲ್ಲಿ  ಸಿಕ್ಕರೆ ಒಡೆವರು ಅಕ್ಕರೆಯಲ್ಲಿ ಪೂಜಿಸುವರು  ಹೇಗೆ ಹೇಳಲಿ ನನ್ನವರಾರು ಇಲ್ಲಿ  ಹಾರುವ ಹದ್ದೆ ಮೇಲೆ ಏರುವ ಹದ್ದೆ  ನಿನ್ನವರಾರು ಇಲ್ಲಿ  ಮೇಲಿಂದ ಬಂದು ಮೀನನ್ನು ತಿಂದು  ಕೂಗಿಹೆ ನನ್ನವರನು ಇಲ್ಲಿ  ಕಪ್ಪನ ಕರಡಿಯೆ ಬೆಪ್ಪನೆ ಕರಡಿಯೆ  ನಿನ್ನವರಾರು ಇಲ್ಲಿ  ಮನುಷ್ಯನ ಬುರುಡೆ ಬಗೆದಿಹೆ  ಸಾವಲಿ ಕಾಣೆ ನನ್ನವರ ಇಲ್ಲಿ  *********ರಚನೆ*********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮೋಡದ ಮಂಜು- ಕವನ ಸಂಕಲನ

Image
  ಮೋಡದ ಮಂಜು ಕವನ ಸಂಕಲನ  ಲೇಖಕರ ನುಡಿ  ನನ್ನ ಬರವಣಿಗೆಯ ಹಾದಿಯಲ್ಲಿ ಆರನೇ ಕವನ ಸಂಕಲನದ ಪುಸ್ತಕ ಮೋಡದ ಮಂಜು, ಬಾನಲ್ಲಿ ಮೋಡದ ಹವಾಮಾನವಾಗಿ ಮಳೆಯು ಭೂಮಿಗೆ ಬಿದ್ದಂತೆ ಕವನಗಳು ಮೂಡಿಬಂದಿವೆ  ನೀರಿನ ಹನಿ ಆವಿಯಾಗಿ  ಮೋಡವ ಕರೆದು ಕೂಗಿ  ಮೋಡದಿ ಸಿಡಿಲು ಸಿಡಿದು  ಮಿಂಚೊಂದು ಭೂಮಿತಾಗಿ  ಮಳೆ ಹನಿ ಕಣ್ಣೀರಾಗಿ ಭೂಮಿ ತಾಗಿದೆ  ಕಣ್ಣಿಗೆ ಕಾಣದ ಭಾವನೆಗಳಿಗೆ ಬಣ್ಣ ಕೊಟ್ಟು ಅವುಗಳು ಪದಗಳ ರೂಪ ತಾಳಿ ಹೃದಯ ಮಿಡಿದ ಸಾಲುಗಳಿಗೆ ಮನಸ್ಸು ಕುಣಿದಿದೆ. ಭಾರತೀಯ ಕಾವ್ಯಮೀಮಾಂಸೆ ಪ್ರಕಾರ ಕವಿತೆ ಎಂದರೆ ಭಾವನೆಗಳನ್ನು ತರಂಗಿತಗೊಳಿಸಿ ನಮಗೆ ರಸಾನುಭೂತಿಯನ್ನು ಒದಗಿಸುವ ಛಂದೋಬದ್ದ ಅಥವಾ ಲಯಬದ್ಧ ಶಾಬ್ದಿಕ ರಚನೆಯೇ ಕವಿತೆ. ಕಾವ್ಯದ ಸ್ವರೂಪ ಲಕ್ಷಣಗಳು ಕಾಲಘಟ್ಟದಲ್ಲಿ ಬದಲಾಗುತ್ತಾ ಬಂದಿವೆ ಪ್ರಾಚೀನ, ಪ್ರಗತಿಪರ, ನವ್ಯ ಎಂದು ಈ ಕಾಲಮಾನದ ಕಾವ್ಯ ಅಥವಾ ಕವನಗಳನ್ನು ಕವಿಯು ರಚಿಸುವಾಗ ಲಯಬದ್ಧವಾಗಿದೆ ಮತ್ತು ಛಂದಸ್ಸು ಮುಕ್ತವಾಗಿದೆ ಎಂದು ತಿಳಿಯಬಹುದು.  ನಾನು ಕವಿಯಾಗಿ ಈ ಕಾಲಘಟ್ಟಕ್ಕೆ ಸಂಬಂಧಪಟ್ಟ ಕವನಗಳನ್ನು ರಚಿಸಲು ಉತ್ಸಾಹ ತೋರಿದ್ದೇನೆ ಕವನಗಳು ಸಾಲುಗಳಲ್ಲಿ ಪ್ರಾಸಭದ್ಧ ಪದಗಳನ್ನು ಕೊನೆಯಲ್ಲಿ ಉಪಯೋಗಿಸುವುದು ಬಿಡುವುದು ಕವಿಗೆ ಬಿಟ್ಟದ್ದು.  ಇತ್ತೀಚಿನ ಕವನಗಳು ಪ್ರಾಸಕ್ಕೆ ಒತ್ತುಕೊಡದೆ ಬರೆದಿರುವುದನ್ನು ನಾವು ಗಮನಿಸಬಹುದು.  ಕವನ ಬರೆದೆ ಉಪಯೋಗಿಸಿ ಪ್ರಾಸ  ...

ನಿಧಿ- ಚುಟುಕು ಕವನ ಸಂಕಲನ

Image
  ನಿಧಿ   ಚುಟುಕು ಕವನ ಸಂಕಲನ  ಲೇಖಕರ ನುಡಿ ನನ್ನ ಸಾಹಿತ್ಯವು ನಾಲ್ಕು ಸಾಲುಗಳಿಂದ ಹುಟ್ಟಿ ಬೆಳೆದು ಈಗ ಹಲವಾರು ಪುಸ್ತಕಗಳು ಹೊರಬಂದ ನಂತರ. ನಾನು ನಾಲ್ಕು ಸಾಲುಗಳ ಚುಟುಕು ಕವನ ಬರೆಯಲು ಶುರು ಮಾಡಿ, ಸಾಕಷ್ಟು ಕವನಗಳನ್ನು ರಚಿಸಿ ಪುಸ್ತಕವಾಗಿ ಹೊರಹೊಮ್ಮಲು ಸಿದ್ಧವಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ.  ನಾಲ್ಕು ಸಾಲುಗಳ ಚುಟುಕು ಬರೆದೆ  ಓದಿ ಹೇಳುವೆನು ಬನ್ನಿ ಎಂದು ಕರೆದೆ  ಹೃದಯದ ಪದಗಳ ಕೂಡಿಸಿ ತೆರೆದೆ  ಕಣ್ಣ ಹನಿಯ ತಿಳಿಸಿದ ಚುಟುಕುಗಳ ಪರದೆ  ಮನಸ್ಸಿಗೆ ಬಂದ ಪದಗಳ ಜೋಡಿಸಿ ಕಳೆದೆ  ಈ ಚುಟುಕುಗಳು ನನ್ನ ಮನಸ್ಸಿಗೆ ಬಂದು ಪದಗಳ ರೂಪ ತಾಳಿ ಕವನ ಸಂಕಲನವಾಗಿರುವುದು, ಒಂದು ಕಡೆಯಾದರೆ. ಈ ಕವನಗಳಿಗೆ ಸಾಹಿತ್ಯ ವೇದಿಕೆಗಳು ತಯಾರಾಗಿ ಕವನಗಳು ಪೈಪೋಟಿ ಮಾಡುವಾಗ ನಾನು ಬರೆದ ಕವನಗಳನ್ನು ಮುನ್ನೆಲೆಗೆ ತರುವ ಶ್ರಮ ಒಂದೆಡೆಯಾಗಿದೆ. ನನ್ನ ಮಗಳು ನಿಧಿಗಾಗಿ ಈ ಕವನ ಸಂಕಲನಕ್ಕೆ ನಿಧಿ ಎಂದು ಹೆಸರಿಟ್ಟು ಈ ಚುಟುಕು ಕವನ ಸಂಕಲನ ಹೊರತರುವ ಪ್ರಯತ್ನ ಮಾಡುತ್ತಿದ್ದೇನೆ.  ನನ್ನ ಬಾಳಲಿ ಬಂದ ನಿಧಿ  ಬದುಕು ಬೆರಗುಗೊಳಿಸಿದ ವಿಧಿ  ನಿಧಿ ಎಂಬುದು ಸುಂದರ ಸವಿ ನದಿ  ಜೀವನ ಸಾಗಲಿ ನೀ ನನ್ನ ಪ್ರತಿನಿಧಿ  ನನ್ನ ಜೀವನದಲ್ಲಿ ಬಂದ ನಿಧಿ ಮತ್ತು ದೀಪ್ತಿ ಇಬ್ಬರು ಎರಡು ಕಣ್ಣಂತೆ ಆಗಿದ್ದಾರೆ. ಸಾಕಷ್ಟು ಬೇರೆ ಬೇರೆ ಉದ್ಯೋಗಗಳನ್ನು ಮಾಡಿ, ಕೆಲಸಗಳನ್ನು ಸಂ...

ಸಾಹಿತ್ಯ ದೀಪ್ತಿ -ಮಕ್ಕಳ ಗೀತೆ ಸಂಕಲನ

Image
ಸಾಹಿತ್ಯ ದೀಪ್ತಿ  ಮಕ್ಕಳ ಗೀತೆ ಸಂಕಲನ  ಲೇಖಕರ ನುಡಿ  ನನ್ನ ನಾಲ್ಕು ಕವನ ಸಂಕಲನ, ವ್ಯಕ್ತಿತ್ವ ವಿಕಸನ, ವಚನ ಸಂಕಲನದ ಪುಸ್ತಕಗಳನ್ನು ಬೆಳಕಿಗೆ ತಂದ ಮೇಲೆ, ನನ್ನ ಆಸಕ್ತಿಯು ಮಕ್ಕಳ ಗೀತೆಗಳ ಕಡೆ ಸೆಳೆಯಿತು. ಸಣ್ಣ ಮಕ್ಕಳುಗಳು ದೇವರಿಗೆ ಸಮ ಎಂದು ಹೇಳುತ್ತಾರೆ. ಮಕ್ಕಳ ಮನಸ್ಸು ಮುಗ್ಧ ಮನಸ್ಸು, ಪ್ರಪಂಚವನ್ನು ಅರಿಯದ ಮನಸ್ಸು, ಮತ್ತು ಮೋಸ ವಂಚನೆಗಳನ್ನು ತಿಳಿಯದ ಮನಸ್ಸು ಆ ಮಕ್ಕಳನ್ನು ನೋಡುವುದೇ ಚೆಂದ. ನನಗೂ ಒಂದು ಮದುವೆಯಾಗಿ ಸಾಕಷ್ಟು  ನೋವುಗಳ ನಡುವೆ ಒಂದು ಹೆಣ್ಣು ಮಗು ಜನ್ಮ ತಾಳಿತು. ಕೆಲವರು ಗಂಡು ಮಗುವಾಗಿದ್ದರೆ ಚಂದ ಎಂದರು. ನನ್ನ ಅಮ್ಮ ಕೂಡ ಗಂಡು ಮಗುವಾಗಿ ಆಸೆ ಪಟ್ಟರು. ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ ನಾವು ಬಯಸುವುದು ಒಂದು, ಆದರೆ ಆಗುವುದು ಇನ್ನೊಂದು. ನನ್ನ ಮಗಳು ನನ್ನ ಸಾಕಷ್ಟು ನೋವಿನ ತದನಂತರ ಜನ್ಮ ತಾಳಿ ಬಂದವಳು ಅವಳನ್ನು ನಾನು ದೈವದ ಕರುಣೆ ಎಂದು ತಿಳಿದಿದ್ದೇನೆ. ಮಗಳು ಅಮ್ಮನ ಬಳಿ ಮಲಗಿನಿಂದ ಹಿಡಿದು ತೆವಳಿ, ಅಂಬೆಗಾಲಿಟ್ಟು , ನಡೆಯುವವರೆಗೆ ಮಗುವನ್ನು ನೋಡಿ, ಜೀವನವೇ ಸಾಕು ಎಂದು ಅನಿಸಿದವನಿಗೆ ಎಲ್ಲಾ ನೋವು ಮರೆತು ಮಗುವಿನೊಡನೆ ಮಗುವಂತೆ ಆಗಿಬಿಟ್ಟಾಗ ಈ ಪ್ರಪಂಚ ತುಂಬಾ ಸಂತೋಷ ಎನಿಸುತ್ತದೆ.  ಈ ಜೀವನದ ಜಂಜಾಟದಲ್ಲಿ ಎಲ್ಲಾ ಜನರುಗಳ ಹಾಗೂ ಈ ವಿಲಾಸಿ ಬದುಕನ್ನು ಮತ್ತು ನಾನು ಬೆಳೆದು ಬಂದ ಜೀವನವನ್ನು, ದುಡಿಮೆಯಲ್ಲಿ ತೊಡಗಿದಾಗ ನಮ್ಮನ್ನು ಹರಸಿದವರು ಎಷ್ಟೋ ಜನ...

ಪ್ರೇಮೋತ್ಸವ- ಭಾವಗೀತೆ ಸಂಕಲನ

Image
ಭಾವ ಗೀತೆ ಸಂಕಲನ  ಲೇಖಕರ ನುಡಿ   ಪ್ರೇಮೋತ್ಸವ ನಾನು ಕವಿಯಾಗಿ ಕೆಲವು ಪುಸ್ತಕಗಳನ್ನು ಹೊರ ತಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಜಿಲ್ಲಾಧ್ಯಕ್ಷರಾಗಿದ್ದ ಸೂರಿ ಶ್ರೀನಿವಾಸ್ ಅವರು ಆಯೋಜಿಸಿದ್ದ ಕವಿ ಸಮ್ಮೇಳನ, ಖಾಂಡ್ಯದಲ್ಲಿ ನಡೆಯಿತು . ಆ ಸಮ್ಮೇಳನದಲ್ಲಿ ಪಾಲ್ಗೊಂಡು. ಕವಿ ದುಂಡಿರಾಜ್ ಮತ್ತು ಸವಿತಾ ನಾಗಭೂಷಣ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಕವಿಯಾದ ಕಾವೆಂ .ಶ್ರೀನಿವಾಸ್ ಮೂರ್ತಿ ಅವರ ನುಡಿಗಳನ್ನು ಕೇಳಿ ಆನಂದಿಸಿ ಹಾಗೆಯೇ ಕಾವೆಂ ಶ್ರೀನಿವಾಸ್ ಮೂರ್ತಿ ಅವರು ತಿಳಿಸಿದ ಭಾವಗೀತೆಗಳನ್ನು ಹೇಗೆ ರಚಿಸಬಹುದು ಎಂಬ ಬೋಧನೆ ಮತ್ತು ಅವರು ಗೀತೆ ರಚನೆಯ ಬಗ್ಗೆ ಬರೆದಿದ್ದ ಪುಸ್ತಕ ಮತ್ತು ಅವರು ಬರೆದ ಭಾವಗೀತೆಗಳ ಪುಸ್ತಕ ಹಾಗೂ ಆ ಪುಸ್ತಕದ ಹಾಡುಗಳು ಯೂಟ್ಯೂಬಲ್ಲಿ ಬಿಡುಗಡೆಗೊಂಡು ಅವುಗಳನ್ನು ಕೇಳಿ ಸವಿದು ಮತ್ತು ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಕೆ ಎಸ್ ನಿಸಾರ್ ಅಹ್ಮದ್ ಅವರ ಭಾವಗೀತೆ ಪುಸ್ತಕವನ್ನು ಓದಿ ನಾನು ಕೂಡ ಇವೆಲ್ಲಾ ಪುಸ್ತಕಗಳಿಂದ ಉತ್ತೇಜಿತನಾಗಿ ನಾನು ಕೂಡ ಭಾವಗೀತೆಗಳನ್ನು ರಚಿಸಲು ಶುರು ಮಾಡಿ ಸುಮಾರು 72 ಭಾವಗೀತೆಗಳನ್ನು ಬರೆದಿದ್ದೇನೆ ಆ ಗೀತೆಗಳನ್ನು ಹಾಡಲು ಮತ್ತು ಸಂಗೀತ ಸಂಯೋಜನೆ ಮಾಡಲು ಯಾರನ್ನು ಸಂಪರ್ಕಿಸುವುದು ಎಂದು ತಿಳಿಯದಾಗಿ ನನ್ನ ಗೆಳೆಯರ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟವರನ್ನು ನಾನು ಬರೆದ ಗೀತೆಗಳನ್ನು ಓದಲು ಕೇಳಿಕೊಂಡು ಆ ಗೀತೆಗಳು ಭಾವಗೀ...

ಮಕ್ಕಳ ಗೀತೆ -47

Image
  🌹ಊರು ಮಾರಮ್ಮ 🌹 ಮಾರಮ್ಮ ಬಂದವಳೇ  ಊರು ಮಾರಮ್ಮ ಬಂದವಳೇ  ಕಾಸಿನ ಅಗಲ ಕುಂಕುಮವಿಟ್ಟು  ಹಸಿರು ಸೀರೆ ತೊಟ್ಟು ನಿಂತವಳೇ  ಈ ಬಾರೋ ಸಾಹುಕಾರ  ನಿನ್ನ ಮನೆಯಲ್ಲಿ ಶುಭ ಶಕುನವಿದೆ  ಎಂದೆನುತ ಚಾಟಿಯ ಸುತ್ತಿ ಮೈ ಮೇಲೆ  ಒಡೆದು ಕೊಂಡವಳೆ  ಹಾಕಿರಿ ಅಣ್ಣ ಅಕ್ಕ ಕಾಣಿಕೆಯ  ನಿಮ್ಮ ಊರಲ್ಲಿ ಪರಶಿವನ  ದೈವದ ಅನುಗ್ರಹವಿದೆ ದೈವದ ಬಲವು ತೋರಿದೆ ಒಲವು  ಅಕ್ಕ ತಂಗಿ ಬನ್ರವ್ವ ಮಾರಮ್ಮ ಬಂದವಳೇ  ಕೈಯಿಂದ ದುಡ್ಡಾಕಿ ಇಲ್ಲ ದವಸಾ ಧಾನ್ಯ  ಮಾರಮ್ಮನಿಗೆ ನೀಡಿರವ್ವ  ನಿಮ್ಮ ಬಾಳು ಬೆಳಗಲಿ ಅಣ್ಣ ಅಕ್ಕ ತಂಗಿ ತಮ್ಮ  ಬನ್ರವ್ವ ಮಾರಮ್ಮ ಬಂದವಳೇ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ