Posts

ಶಿಶು ಗೀತೆ

Image
  ಚಂದಿರನ ತೋರುವೆ  ಅಂಗಳದ ಆ ಬನದಲ್ಲಿ ತಿಂಗಳ ಹುಣ್ಣಿಮೆ ಬೆಳಕಲ್ಲಿ  ಚಂದಿರನಾ ತೊರುವೆ ಬಾರೆ ನನ್ನ ಕಂದ  ನಿನ್ನ ಮೊಗದ ಚೆಲುವಿಗೆ  ಚಂದಿರನು ನಗುವನು  ನೋಡಿ ನಿನ್ನ ಅಂದ  ಪುಟ್ಟ ಪುಟ್ಟ ಹೆಜ್ಜೆ ಇಟ್ಟು  ಹಂಸದಂತೆ ನೀ ಬರಲು  ಭೂತಾಯಿ ಹಸಿರಲಿ ನಕ್ಕಾಳು  ತುಂಟ ನಗುವ  ಬೀರಿ  ನೋಟ ನಿನ್ನ  ಸೆಳೆಯಲು ಕತ್ತಲ ರಾತ್ರಿ ದೂರ ಸರಿದಾಳು  ಮೂತಿ ಮೇಲೆ ಸಿಟ್ಟು ಕೆನ್ನೆಯಲ್ಲಿ ಕೋಪ  ಹೇ..ಹೆ..ಎಂದು ನೀ ಚೀರಲು  ಉಲ್ಕೆ ಉರಿದು ಬಿದ್ದಾವು  ಮೆಲ್ಲನೆ ನೀ ಬಳಿ ಬಂದು ಅಮ್ಮ ಅಮ್ಮ ಎನ್ನಲು  ನಕ್ಷತ್ರ ನೋಡಿ ನಿನ್ನ ನಕ್ಕಾವು  ಕುಡಿ ನೋಟ ಒಮ್ಮೆ ಬೀರಿ  ಅಪ್ಪ ಅಪ್ಪ  ಎಂದು ಕೂಗಲು  ಬಿಳಿಯ ಮೋಡ ನೀಲಿಯಾದವು ಅಂಗಳದ ಆ ಬನದಲ್ಲಿ ತಿಂಗಳ ಹುಣ್ಣಿಮೆ ಬೆಳಕಲ್ಲಿ  ಚಂದಿರನಾ ತೊರುವೆ ಬಾರೆ ನನ್ನ ಕಂದ  ನಿನ್ನ ಮೊಗದ ಚೆಲುವಿಗೆ  ಚಂದಿರನು ನಗುವನು  ನೋಡಿ ನಿನ್ನ ಅಂದ  *********ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಕವಿತೆ

Image
  ಮನದ ಒಳಗೆ ನೂರು ಕವಿತೆ ಕುಕ್ಕೀತೇನು  ಹೊರಗೆ ಬಂದು ದುಃಖ ಏಕೋ ಉಕ್ಕೀತೇನು  ಕಂಡ ಕನಸು ಮಸಣದ ಊರ ಸೇರಿತೇನು  ಆಸೆ ಹೊತ್ತ ಮನವು ಚಿತೇಲಿ ಬೇಯಿತೇನು  ಪದಗಳಿಗೆ ಸಿಗದ ಸುಂದರದ ಮುದ್ದು ಕವಿತೆ ಪದಗಳಿಗೆ ಜೊತು ಬಿದ್ದ ನುಚ್ಚು ನೂರು ಕವಿತೆ ಯಾರೋ ಕೇಳಿ ನಕ್ಕಂತೆ ನನ್ನ ಮನದ ಕವಿತೆ ಹಾಳು ಬಾವಿಯಲ್ಲಿ ನೀರು ಹುಡುಕೋ ಕವಿತೆ  ನೆನಪುಗಳ ಸಾಗರದಿ ಮನೆಯ ಮಾಡಿ ಕಾಣದ ಊರಿನಲ್ಲಿ ಕನಸ ಕೆದರಿ ನೋಡಿ ಕನಸು ನನಸು ಆಗಲಿಲ್ಲ ಯಾವ ರೂಡಿ  ಎದೆಯಲಿ ಬೀರಿದ ಕವಿತೆಯ ಪ್ರೀತಿ ಮೋಡಿ  ಬದುಕ ಹೊತ್ತ ದಾರಿಯಲಿ ಅರಳಲಿಲ್ಲ ಕವಿತೆ  ಕೆಂಡದೋಕುಳಿಯಲಿ ಕೆಂಪಾಗಿ ಬೆಂದ ಕವಿತೆ ಬೂದಿಯಾದರುನು ನೋವು ತೋರದ ಕವಿತೆ ಗೊಬ್ಬರದಲ್ಲಿ ನಕ್ಕು ಹಸಿರು ಮೂಡಿಸಿದ ಕವಿತೆ  **********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನೆನಪು

Image
  ನೂರು ನೆನಪು ಮೂಡಿದೆ ಮನದ ಕಡಲಲಿ  ಹೃದಯ ಏಕೋ ಬಡಿದಿದೆ ಜೀವದ ಹಡಗಲಿ  ಕಾಣೆ ನಾನು ಕನಸ ಒಂದೂ ಎದೆಯ ಗೂಡಲಿ  ನೋವು ಬಂದು ತಾಗಿದೆ ಮನಸ್ಸ ಮಡಿಲಲಿ ದಾರಿ ನೂರು ಕಾಣುತ್ತಿದೆ ಎತ್ತ ಹೇಗೆ ಸಾಗಲಿ  ಗುರಿಯ ನಾನು ಮುಟ್ಟುವೆನೆ ಯಾರ ಕೇಳಲಿ  ಕಾಲವೊಂದು ಓಡುತಿದೆ ನೆನಪುಗಳ ಬಿಟ್ಟಿ  ನೆನಪು ಮನಸ್ಸ ಕೇದಕುತಿದೆ ನನ್ನ ನಗುವ ಸುಟ್ಟಿ  ಯಾರಿಗೆ ಹೇಳಲಿ ನೆತ್ತರಿನ ನೋವನು ಬದುಕು ಕಲಿಸುತ್ತಿದೆ  ಪಾಠ ಬಿತ್ತಿ ಪೈರನು  ಬಾಳ ಬಂಡಿಯಲಿ ಹಚ್ಚ ಹಸಿರು ತುಂಬದೇ  ಎತ್ತ ನೋಡಿದರೂ ಜೀವ ಬೆಂಕಿ ಸುಡುತ್ತಿದೆ  ಕಣ್ಣ ನೀರು ಬತ್ತಿದೆ  ಬೆಳಕ ಜಾಡಲಿ  ಮುಖುವು ಸುಕ್ಕು ಗಟ್ಟಿದೆ ಬಿಸಿಲ ಜಳದಲಿ  ಹೊಳಪು ಈಗ ಎಲ್ಲಿದೆ ಬಾಳ ಬೆಳಕಲಿ ಕಪ್ಪು ಈಗ ತುಂಬಿದೆ ನೋವ ಬದುಕಲಿ **********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್

ನೆಮ್ಮದಿ ಎಲ್ಲಿದೆ

Image
  ನೆಮ್ಮದಿಯ ಹುಡುಕುತ ಮನವು ಕೂತಿರಲು ಒಲವಿನಲಿ ನೊಂದು ಬೇಯುತ ಕನಸು ಅರಳಿರಲು ಚೆಲುವೊಂದು ಏಕೋ ಏನೋ ಕೂಗಿ ಕರೆದಿರಲು ಹಗಲುಗಳು ಕತ್ತಲೆಯಾಗಿ ಭೂಮಿ ಅಳುತಿರಲು  ನೊವೊಂದು ಬಳಿ ಬಂದು ಹೃದಯವ ಕೊಲ್ಲುತ್ತಿದೆ  ಕಣ್ಣಿರಲಿ ಮುಳುಗಿದ ಬದುಕು ದಾರಿ ತಪ್ಪುತ್ತಿದೆ ಎಲ್ಲಿ ನೋಡಿದರು ವೇದನೆಯ ನರಳಾಟ  ಕನಸುಗಳ ಕಿತ್ತ ಮಗುವಿನ ಕಂಬನಿ ಗೋಳಾಟ  ಅಕ್ಕರೆ ಇಲ್ಲದ ಜೀವನ ಸೊಕ್ಕಿದೆ ಪಯಣದಲ್ಲಿ  ಬಾಳಿನಲಿ ಸಕ್ಕರೆ ಕಾಣುವುದು ಎಂದು ಕೊನೆಗಿಲ್ಲಿ ನೂರೆಂಟು ಎಡರು ತೊಡರು ಹಾಗೆ ನಮಗಿಲ್ಲಿ ಬಾಳ ಬಂಡಿಯ ಎಳೆಯಲು ಹೊರಟವಗೆ ಸಾವಿಲ್ಲಿ  ಎಲ್ಲಿ ನೋಡಿದರೂ ನೆತ್ತರ ಹೊಳೆ ಹರಿಯುತಿದೆ  ದಾಟಲು ಹೋದವಗೆ  ಬಂದು ಜೀವ ಹಿಂಡುತಿದೆ ಬದುಕಿನಲ್ಲಿ ಈಗ ಏಕೋ ಉಸಿರು ಸಿಕ್ಕಂತೆ  ಬೊಂಬೆ ಆಡಿಸುವವನು ನಮ್ಮ ನೋಡಿ ನಕ್ಕಂತೆ **********ರಚನೆ********** ಡಾ. ಚಂದ್ರಶೇಖರ್. ಸಿ.ಹೆ ಚ್

ಮನದ ಕವಿತೆ

Image
  ಮನದ ಒಳಗೆ ನೋವಿನ ಕವಿತೆ  ಹೊರಗೆ ಬರಲು ಅಳುತಾ ಚಿಂತೆ ಸಾವಿನ  ಬದುಕ ಅಂತೆ ಕಂತೆ  ಮಾಗಿದ ಘಾಯವು ಪ್ರೀತಿ ತಂತೆ  ಉತ್ತರ ಹುಡುಕಲು ನೂರು ಯೋಚನೆ ಬದುಕಿನ ಪಯಣ ಸುಡುತಿದೆ ಸುಮ್ಮನೆ  ಮರಣವು ಬಂದರೆ ಜೀವನ ತಣ್ಣನೇ  ಮಾಗಿದ ಬದುಕು ನೂಕು ನೀ ಕಾಲವನೆ  ನೆನಪುಗಳು ನೂರು ಜೀವ ಹಿಂಡಿದೆ  ಬಯಕೆಗಳು ಬಂದು ನೆತ್ತರು ಹೀರಿದೆ  ಮನವು ಏಕೋ ಕಣ್ಣ ಹನಿ ತಂದಿದೆ ಆಗಸದ ಸೂರು ಹನಿಯ ನೂಕಿದೆ ಓಡಿದೆ ಪಯಣ ದಾರಿ ಕಾಣದೆ ಬರಡು ಜೀವ ಬದುಕಾ ಕುಡಿದಿದೆ ಗುರಿಯು ಇಲ್ಲದ ದಾರಿ ಮುಂದಿದೆ  ಮುಟ್ಟುವೇನೆ  ಒಲವ  ತೀರಾ ಎಂದಿದೆ  ************ರಚನೆ*******       ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ-64

Image
             🌹ರಜಾ 🌹 ಮೂಡದ ಆಸೆಗಳಿಗೆ ಕಣ್ಣೀರ ರಜಾ ಬದುಕಿನ ಭಾವನೆಗಳಿಗೆ ನಗುವೆ ಸಜಾ ಬಾಳಿನ ಒಲವಿಗೆ ಖುಷಿಯ ಕ್ಷಣ ಮಜಾ  ನೋವಿನ ವ್ಯಥೆಗೆ ಕಂಬನಿ ಮಿಡಿತ ನಿಜಾ                🌹ಆಸೆ 🌹 ನೂರು ಆಸೆ ತಂದೆ ಪ್ರೀತಿಯ ಒಲವೇ ನನ್ನೇ ನಾನು ಗೆದ್ದಂತ ಏನೋ ಗೆಲುವೇ  ಕಾಣದ ದೇವರು ನನ್ನ ಕೈಯ ಇಡಿದಂತೆ  ಮರೆಯಾಯಿತು ಈಗ ಎಲ್ಲಾ ಚಿಂತೆ               🌹 ಸೋಲು 🌹 ಸೋಲು ಗೆಲುವು ಬಾಳಲಿ ಸಹಜ ಅರಿತು ಬಾಳು ನೀನು ಮನುಜ ಬಿದ್ದರೆ ಎಲ್ಲಾ ಮುಗಿದು ಹೋಯಿತೇ  ಬೀಳದೆ ಹೋದರೆ ಎಲ್ಲಾ ಹಾಯಿತೇ  **†****ರಚನೆ********** ಡಾ. ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ-62

Image
        🌹 ಗುಟ್ಟು 🌹 ಜೀವನ ಎಂಬುದು ಯಾರಿಗು ತಿಳಿಯದ ಗುಟ್ಟು ಬದುಕು ನೋವು ನಲಿವೆಂಬ ಮಾಯದ ಕಟ್ಟು ಕಾಲವು ಮಾಡುವುದು ಪ್ರತಿಕ್ಷಣವ ರಟ್ಟು ಬಾಳಿ ಬದುಕಿ  ಪ್ರೀತಿ ಸ್ನೇಹದ ಬಾಗಿಲು ತಟ್ಟು    🌹 ಕವಿತೆ 🌹 ನೂರು ಸುಂದರ ಕವಿತೆ ನಿನಗಾಗಿ ಬರೆದೆ ವನಿತೆ ಸಾಲು ಹೇಳಿವೆ ರಕ್ತ ಚರಿತೆ  ನನ್ನನು ನಾನು ಅರಿತೆ ಬದುಕನ್ನು ಏಕೋ ಅರಿಯದೆ ಮರೆತೇ     🌹ಮುಲಾಮು 🌹 ಮನಸ್ಸಿನ ಘಾಯಕೆ ಇಲ್ಲ ಮುಲಾಮು ಚಿಂತೆ ಎಂಬ ಚಿತೆಯೇ ನಿನಗೆ ಸಲಾಮು ಕಣ್ಣೀರಿನ ರಭಸಕ್ಕೆ ಮಾದಿದೆ ಗಾಯ ಕಣ್ಣ ರೆಪ್ಪೆಗೆ ನೊವಿನ ಛಾಯಾ *********ರಚನೆ********* ಡಾ.ಚಂದ್ರಶೇಖರ್. ಸಿ. ಹೆಚ್