Posts

ಕಣ್ಣೀರ ಹನಿ*

Image
  ಎದೆಗೋಡೆದ ದುಃಖದ ಮಾತೊಂದು ಮನದಲ್ಲಿ ಸತ್ತಿತ್ತು  ಕಣ್ಣೀರು ಹನಿಯಾಗಿ ತಿಳಿ ನೀಲಿ ಕಡಲೊಳಗೆ ಸೇರಿತ್ತು ದುಃಖವು ಜಿನುಗಿ ಜಿನುಗಿ ಒಡಲೊಳಗೆ ಬೆಂದಿತ್ತು  ಮೂಕ ವೇದನೆಯು ಮನೆಯನ್ನು ಸುಟ್ಟು ತಿಂದಿತ್ತು ಯಾರೋ ಚೆಲ್ಲಿದ ಬಣ್ಣ ಕಾಮನಬಿಲ್ಲಾಗಿ ಮೂಡಿತ್ತು  ಬಿಸಿಲಲ್ಲಿ ಸುರಿದ ಮಳೆ ಇಳೆಗೆ ನೀರನ್ನು ಹೋದಿಸಿತ್ತು  ಭೂಮಿಯು ಕಾವಾಗಿ ಸುಡುತಾ ನೆಲವೆಲ್ಲ ಬಿರಿದಿತ್ತು ಹಸಿರಲ್ಲಿ ಕೆಂಪು ಹೂವೊಂದು ಮಸಣವ ಸೇರಿತ್ತು  ಈ ಲೋಕವು ನೂರೆಂಟು ಸುಳ್ಳುಪಳ್ಳುಗಳ ಸಂತೆ ಸತ್ಯಕ್ಕೆ ಕೊಡಲಿ ಪೆಟ್ಟು ಅಧರ್ಮದ ನೆಲೆಯ ಕಂತೆ  ಮೋಸ ತುಂಬಿದ ಮನುಜನಿಗೆ ನ್ಯಾಯವೆಂಬ ಚಿಂತೆ  ಯಾರಿಗೆ ನೀಡುವನು ವರವ ದೇವರು ನಿಂತೆ ಸುಡುಗಾಡಿನಲ್ಲಿ ಸಿಗುವುದೆ ಸಂತೋಷದ ಚಿಲುಮೆ  ದೇಹ ತೋರೆದ ಮನುಜನಿಗೆ ಈ ನ್ಯಾಯವೇ ಒಲುಮೆ  ಪರಲೋಕ ಸೇರಿತು ಆತ್ಮ ಮಸಣದಲ್ಲಿ ಇದೇ ಪ್ರೇತಾತ್ಮ  ಕಾಯುವವರು ಯಾರು ಬಿಟ್ಟು ಹೋದ ಜೋಳಿಗೆಯನ್ನ ಬ್ರಹ್ಮನ ಮೂರಕ್ಷರದ ಬರಹ ತಿದ್ದಲು ಆಗಲಿಲ್ಲ  ವಿಧೀ  ಎಂಬ ಬಲು ಕಪಟ ಯಾರನ್ನು ಬಿಡಲಿಲ್ಲ  ಆರು ಮೂರಡಿಯ ಮಂಟಪವೆ ನೆಲೆಯಾಯಿತಲ್ಲ  ಎಳು ಬಿಳಿನ ಜೀವನ ಕೊನೆಗೂ ಕೊನೆಯಾಯ್ತಲ್ಲ  ***********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಸಾಯಬೇಡ ಮನವೇ

Image
  ಚಿಂತೆಯೆಂಬ ಚಿತೆಯಲ್ಲಿ ಬೇಯಬೇಡ ಮನವೇ ನಕ್ಕು ನೀ ಒಮ್ಮೆ ತಿಳಿಯಾಗು  ಆಸೆಗಳ ಸಂತೆಯಲ್ಲಿ ಸಾಯಬೇಡ ಮನವೇ ನಿಟ್ಟುಸಿರು ಬಿಟ್ಟು ನೀ ಒಮ್ಮೆ ಗೆಲುವಾಗು//ಪಲ್ಲವಿ// ಕನಸುಗಳ ಮರುಭೂಮಿಯಲ್ಲಿ ಸಿಗುವುದಾದರೂ ಏನು  ಸಮುದ್ರದ ನೀರು ಕುಡಿದರೆ ರುಚಿಸುವುದೇನು ಯಾರ ಪಾಪದ ಕರ್ಮ ಯಾರೋ ಮೂಡಿಗೋ  ಯಾರೋ ಬೇವರ ಹನಿಯು ಯಾರೋ ಮನೆಗೋ  ಜೀವನದಿ ಒಳಿತು ಮಾಡಿದರೆ ಸಿಗುವುದೇ ಸ್ವರ್ಗ  ಯಾರೋ ಪಾಪಕೆ ಇನ್ನ ಯಾರಿಗೂ ನರಕ ಆಡಿ ಆಡಿ ಮನವು ನೋಂದೇಾಯ್ತು  ಬೇಡಿ ಬೇಡಿ ತನುವು ಸುಸ್ತಾಯ್ತೋ ಯಾವ ಹೊಲದ ಹೂವು ಯಾವ ದೇವರಿಗೂ  ಯಾರ ಮಲ್ಲಿಗೆ ಯಾರೋ ಮುಡಿಯಲಿ  ಯಾರ ಕನಸಿನ ದೀಪ ಎಲ್ಲೋ  ಬೆಳಗಿತು ಏಕೋ  ಯಾರ ನೋವಿನ ಶಾಪ ಯಾರಿಗೋ ತಗುಲಿತು ಏಕೋ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮನವ ಕಲಕಿದೆ

Image
  ತಿಳಿ ಮನವ ಕಲಕಿ ರಾಡಿ ಮಾಡಿದ ಒಲವೇ ಈ ಬದುಕಿಗೆ ನೀನೆ ತಾನೆ ಗೆಲುವೆ ಕಣ್ಣೀರು ನನ್ನಯ ಬಾಳಲಿ ತುಂಬಿ ಸೋತೆ ನಾನು ಈ ಒಲವ ನಂಬಿ// ಪಲ್ಲವಿ// ಜೀವನವಾಯ್ತು ಗೋಳಿನ ನರಕ ಯಾರು ನೀಡಬೇಕು ಪ್ರೀತಿಯ ಸರಕ  ಯೌವ್ವನದ ಬಯಕೆಗೆ ತಣ್ಣೀರು ಬಿಟ್ಟೆ ಆಸೆಯ ಜಾಡಲಿ ಹೊಡೆದಿದೆ ಬಾಳ ಕಟ್ಟೆ  ರುಚಿಯೇ ಇಲ್ಲ ಜೀವನದ ಊಟ ಕಲಿತರು ಕೂಡ ಮರೆತ  ಪಾಠ  ಜೀವನ ಏಳು ಬಿಳಿನ ಆಟ ಕಲಿತು ಒಡಬೇಕು ನಾವು ಓಟ ಸೋಲಲಿ ಕಲಿಯುವುದು ಬೇಕಾದಷ್ಟು ನೊವಲಿ ತಿಳಿಯುವುದು ತಿಳಿದಷ್ಟು ಬಾಳ ಪಯಣ ಬೇಸರ ತಂದಿದೆ ಬದುಕು ಏಕೋ ಕುಂಟುತ್ತ ನಡೆದಿದೆ ***********ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಬರಲಿಲ್ಲ ನನ್ನವ

Image
  ಮನದ ಮಡಿಲಲಿ ಜೋಗುಳ ಹಾಡಿದ್ದೇ ನನ್ನಯ ಮನಸನ್ನು ಅವನಿಗೆ ನೀಡಿದ್ದೆ ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ  ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ  ನೋಡಿಯೂ ನೋಡದೆ ಹೋದ ನನ್ನವ//ಪಲ್ಲವಿ// ಯಾರನ್ನು ಕೇಳಲಿ ಸೆರಗನು ಹೊಡ್ಡಿ  ಯಾರಿಗೆ ನೀಡಲಿ ಪ್ರೀತಿಯ ಬಡ್ಡಿ ಹೃದಯದಿ ಅರಮನೆ ಅವನಿಂದ ಚೂರಾಯ್ತು  ಕನಸಿನ ಗೋಪುರ ನುಚ್ಚು ನೂರಾಯ್ತು  ಯಾರನ್ನು ಕೇಳಲಿ ನನ್ನವ ಎಲ್ಲೆಂದು  ಕಾಲಲಿ ಸುತ್ತಿ ಮನೆ ದೇವರಿಗೆ ಬಂದಿದ್ದೆ  ಕೈಯ ಮೇಲೆ ಬೆಂಕಿಯ ಕರ್ಪೂರ ಹಚ್ಚಿದೆ  ಮಡಿಯಲ್ಲಿ ಬಂದು ಊರುಳು ಸೇವೆ ಮಾಡಿದ್ದೆ ಹಣ್ಣು ಕಾಯಿ ಪಲ್ಲಾರ ನೈವೇದ್ಯ ಮಾಡಿದ್ದೆ ಕರೆದು ತಾ ದೇವರೆ ನನ್ನವನ ಎಂದಿದೆ  ಬಯಕೆಗಳು ಬತ್ತಿ  ಬರಡಾಯ್ತು  ಆಸೆಗಳು ನಡು ನೀರಲ್ಲಿ ಮುಳುಗಾಯ್ತು ಕಾದು ಕಾದು ಕೂದಲು ನೆರಗಾಯ್ತು  ಕೆನ್ನೆಯ ಚರ್ಮ ಕುಂತಲ್ಲೇ ಸೂಕ್ಕಾಯ್ತು  ಹೊರಟು ಹೋದವ  ನನ್ನವ ಬರಲಿಲ್ಲ  ಸಾಯುವ ಮುಂಚೆನೆ ಗುಂಡಿ ತೊಡ್ಡಿದ್ದೆ  ದಿನವನ್ನು ಅವನ ನೆನಪಲ್ಲಿ ನೂಕಿದ್ದೆ  ಹಣೆಬರಹ ಗೀಚಿದ ಬ್ರಹ್ಮನ  ಶಪಿಸಿದ್ದೆ  ಪ್ರೀತಿಯ ಕೂಡಿಟ್ಟು ಕಣ್ಣನ್ನು ಮುಚ್ಚಿದೆ ಕೊನೆಗೂ ಬರಲಿಲ್ಲ ಕಾದರು ನನ್ನವ  ಮನದ ಮಡಿಲಲಿ ಜೋಗುಳ ಹಾಡಿದ್ದೇ ನನ್ನಯ ಮನಸನ್ನು ಅವನಿಗೆ ನೀಡಿದ್ದೆ ಪ್ರೀತಿಯ ಅಂಬಾರಿ ಕೊಂಡು ಬಂದಿದ್ದೆ ಏಳು ಹೆಜ್ಜೆ ಇಡಲು ನನ್ನವನ ಕರೆದಿದ್ದೆ  ನ...

ಮಕ್ಕಳ ಗೀತೆ -56

Image
  ಆಟ ಆಡೋಣ ಕಂದ ನಿನ್ನ ನೋಡಲು ಕಣ್ಣು ಸಾಲದು  ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ  ನಿನ್ನ ಮೊಗವ ನೋಡಿ ಚಂದಿರ ಕರೆದಿದೆ  ನೀನು ಕಣ್ಣೀರಿಡಲು ಮಳೆಯೂ ಬಂದಿದೆ  ನೀನು ಸ್ನಾನ ಮಾಡಲು ಜರಿಯು ಹರಿದಿದೆ  ನೀನು ಬಟ್ಟೆ ತೊಡಲು ಹತ್ತಿ ಬಟ್ಟೆಯಾಗಿದೆ  ನೀನು ಹಾಲನ್ನು ಕುಡಿಯಲು ಹಸುವು ಹಾಲು ಕೊಟ್ಟಿದೆ ನೀನು ಹೆಜ್ಜೆ ಇಡಲು ಗೆಜ್ಜೆಯು ಸದ್ದು ಕುಣಿದಿದೆ  ನೀನು ಆಟ ಆಡಲು ನೀಲಿ ಬಾನು ಕರೆದಿದೆ  ನೀನು ನಗುಲು ಸೂರ್ಯ ಬೆಳಕನು ನೀಡಿದೆ ನೀನು ಬಂದು ಮಲಗಲು ತೊಟ್ಟಿಲು ತೂಗಿದೆ  ಬಾರೆ ಕಂದ ನಾವು ದೇವರ ಪೂಜೆ ಮಾಡೋಣ  ಹೂವು ಹಾರ ಹಾಕಿ ದೇವರಿಗೆ ನಮಿಸೋಣ  ಕರ್ಪೂರ ದೀಪ ಹಚ್ಚಿ ಮಂಗಳಾರತಿ ಮಾಡೋಣ  ಸಾಮ್ರಾಣಿ ಹಚ್ಚಿ ಧೂಪವಾ ಬೆಳಗೋಣ  ಕಂದ ನಿನ್ನ ನೋಡಲು ಕಣ್ಣು ಸಾಲದು  ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ  ನಿನ್ನ ಮೊಗವ ನೋಡಿ ಚಂದಿರ ಕರೆದಿದೆ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಖಾಲಿ ಪುಟದ ಹಾಳೆ

Image
  ಈ ಬಾಳು ಒಂದು ಖಾಲಿ ಪುಟದ ಹಾಳೆ  ಗೀಚಬೇಕು ನಾವು ಕಲಿತು ಕಷ್ಟ ಸುಖದ ಶಾಲೆ  ದಿನವ ದೂಕಬೇಕು ಕಲಿತು ಎಲ್ಲಾ ನಾಳೆ ಕಲಿಯದಿದ್ದರೆ ಇಲ್ಲಿ ನಾಳೆ ಎಂಬುದು ಗೋಳೇ //ಪಲ್ಲವಿ// ಬಾಳ ಬಂಡಿಯಲ್ಲಿ ಸಾಗಬೇಕು ನಾವು ಚಕ್ರ ಮುರಿದು ಬಿದ್ರೆ ಬಂಡಿಗೆ ಬಂತು ಸಾವು ಬಾಳ ನೋಗವ ಹೊತ್ತು ಸಾಗು ನೀ ಮುಂದೆ  ಓದೆಯದಿರಲಿ ನಿನಗೆ ನೋವುಗಳು ಹಿಂದೆ ಮೂರು ದಿನದ ಬದುಕು ನಗುತಾ ನೀ ಬಾಳು ಗಂಡ ಗುಂಡಿ ರಥದ ತೇರು ಎಳೆಯದಿದ್ರೆ ಒಳು  ಯಾಕೆ ಬೇಕು ನಮಗೆ ಜಿದ್ದಿನ ದ್ವೇಷ  ಹಾಕಬೇಕೆ ನಾವು ನೀತಿಗೆಟ್ಟ  ವೇಷ  ಜಾತಿ ವೈಶ್ಯಮ್ಯಕೆ ಹೊತ್ತಿ ಊರಿದಿದೆ ಊರು ಅನ್ಯಾಯಾದ ಸಿಡಿಲ ಮಳೆಗೆ ಸೋರಿದೆ ಸೂರು ಒಪ್ಪತ್ತಿನ ಊಟಕ್ಕೆ ಯಾರು  ತಾನೆ ಆಸರೆ  ಗುಲಾಮಗಿರಿಗೆ ಇಲ್ಲಿ ನಮ್ಮ ಬಾಳು ಕೈಸೇರೆ ಹರಿದ ಬಟ್ಟೆ ತೋರಿದೆ ಇಲ್ಲಿಯ ಬಡತನ  ಕೆಲಸ ಒಂದೇ ಇಲ್ಲಿ ನಮ್ಮಯ ಸಿರಿತನ  ಹಿಟ್ಟಿಗಾಗಿ ಇಲ್ಲಿ ಜೀವನವಾಯ್ತು ನರಕ ಸತ್ತ ಮೇಲೆ  ಸಿಗುವುದೇ ನಮಗೇ ಸ್ವರ್ಗ  ಪಾಪಪುಣ್ಯ ಲೆಕ್ಕ ಇಟ್ಟವರಾರು ಹೇಳು  ಅಧರ್ಮವನ್ನು ಮೆಟ್ಟಿ ನಿಲುವುದೇ ಬಾಳು  ಮೋಸದಿಂದ ಇಲ್ಲಿ ಕಟ್ಟಿದೆ ಉಸಿರ ಶ್ವಾಸ  ಹೇಗೆ ಬೀರಲಿ ನಾನು ನಗುವ ಮಂದಹಾಸ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮರೆತು ಬಿಡು ಗೋಳು

Image
  ಹುಟ್ಟು ನಿನ್ನದಲ್ಲ ಸಾವು  ನಿನಗೆ ಗೊತ್ತಿಲ್ಲ  ಹುಟ್ಟು ಸಾವು ನಡುವೆ ಬದುಕ  ಪಡೆದೆಯಲ್ಲ  ಸಾಗಬೇಕು ನೀನು ನಿನ್ನ ನೀನು ಅರಿತು  ಕನಸು ಕಾಣಬೇಕು ದುಃಖವನ್ನು ಮರೆತು  ಮೂರು ದಿನದ ಬಾಳು  ಮರೆತು ಬಿಡು ಗೋಳು//ಪಲ್ಲವಿ// ನಾಳೆ ಎಂಬ ನಿಜವ  ಅರಿತು ಬಾಳು ಮನುಜ  ಸೋಲು, ಗೆಲುವು ಎಲ್ಲ  ಈ ಬದುಕಿನಲ್ಲಿ ಸಹಜ  ಹಣದ ಆಸೆಗಾಗಿ ಮೋಸ ಮಾಡಬೇಡ  ಹೆಣ್ಣ ಆಸೆಗಾಗಿ ನಿನ್ನನ್ನು ನಿ ಮರೆಯಬೇಡ  ಮಣ್ಣು ಒಂದು ಮೋಹದ ಮಾಯೆ ನೋಡ  ಹೆಣ್ಣು, ಹೊನ್ನು, ಮಣ್ಣಿಗಾಗಿ ಇಲ್ಲಿ ಯುದ್ಧ ನೋಡ ದುಃಖದಿಂದ ನೀನು ಕಣ್ಣೀರು ಹಾಕಬೇಡ  ಸಂತಸದಿಂದ ನೀನು ಜಗ್ಗಿ ಮೆರೆಯಬೇಡ  ಈ ಆಸೆಯು ಒಂದು ನೀರ ಸುಳಿಯು ನೋಡ  ಬಿದ್ದು ಬಿಟ್ಟು ನೀನು ಸುತ್ತಿ ಸಾಯಬೇಡ  ನಾಳೆಗಾಗಿ ನಿನ್ನಲ್ಲಿ ಭರವಸೆಯೂ ಇರಲಿ  ಇಂದಿಗಾಗಿ ನಿನ್ನಲ್ಲಿ ಸ್ವಲ್ಪ ಮರುಕ ಇರಲಿ  ನೆನ್ನೆ ನಾಳೆಗಳ ಮಧ್ಯೆ ಇಂದು ನಗುತ ಇರಲಿ  ನಾಳೆ ಚಿಂತೆಯಿಂದ ಈ ಬದುಕು ಸಾಯದಿರಲಿ  ನಮ್ಮ ಆಳಿದವರು ಇಂದು ನೆನಪು ಮಾತ್ರ  ಒಳಿತು ಅರಿತು ನಡೆವುದೇ ನಮ್ಮ ಬಾಳಸೂತ್ರ  ಬದುಕು ಒಂದು ಹಾರುವ ಗಾಳಿಪಟ  ಬಿರುಗಾಳಿಗೆ ಸಿಕ್ಕರೆ ಜೀವನ ಧೂಳಿಪಟ  ನಾನು ನನ್ನದು ಶಾಶ್ವತ ಅಲ್ಲ ತಮ್ಮ  ನಾವು ನಮ್ಮದು ಬಾಳು ತಿಳಿ ನೀ ತಿಮ್ಮ  ಯಾರಿಗೆ ಯಾರು ಇಲ್ಲ ಅರಿತು ನಡೆ ಡುಮ್ಮ...