Posts

ದಾಸಗ್ರಿವ

Image
  ಬರೆಯದೇ ಕರಗಿದ ಕಥೆಗೆ  ಆಯುಧ ಪೂಜೆಯ ನೆನಪು ರಾಮನು ಪಟ್ಟ ವ್ಯಥೆಯ  ಕಾಡಿದೆ ಕಾಡಿನ ನೆನಪು ಸೀತೆಯ ಕನಸಿಗೆ ರಾವಣ  ಅದನೆ ಸುಮ್ಮನೇ ಬಿರುಕು ಆಯುಧ ಪೂಜೆಯ ದಿನವೂ  ಸುಡುವರು ರಾವಣನ ತಲೆಯ ನರ ರಾಕ್ಷಸರು ಇಲ್ಲಿ ಹಾಕಿಹರು ಸುಂದರ ಪ್ರೀತಿಯು ಬಲೆಯ ದಿನವೂ ನಡೆವ ರಾಮಾಯಣ ಕೇಳುವರು ಯಾರು ಇಲ್ಲಿ ಸುಡುವ ಪ್ರೀತಿಯ ಬೆಂಕಿಯ ಬಲೆಗೆ  ಸುಟ್ಟಿಹರು ಅಮಾಯಕರು ತಮ್ಮ ಉಸಿರನು ಚೆಲ್ಲಿ ಬರೆಯುವೇನೆ ನಾನು ಕಥೆಯ ಹೇಳುವೇನೆ ಪ್ರೀತಿಯ ಒಲವ ಸಹಿಯ *********ರಚನೆ******* ಡಾ. ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ-33

Image
           🌹ನಗು🌹 ನಗುವಿನ ಮೊಗದ ಅಪ್ಸರೆಯೆ ನೋಟದಿ ಕಾಡಿದ ಸುಂದರಿಯೆ ಬಿಡದೆ ಕಾಡುವ ಮೋಹಿನಿಯೇ ಪ್ರೀತಿಯಾ ನನ್ನಾ ಕಿನ್ನರಿಯೇ       🌹 ಮುಗುಳ್ನಗೆ 🌹 ಬಾನಲ್ಲಿ ಚಂದ್ರ ಮುಗುಳ  ನಗುತಿದೆ  ನಕ್ಷತ್ರಗಳು ನಾಚಿ ಮೀನುಗುತಿದೆ      ಹಾರಾಡುವ ಹಕ್ಕಿಯೊಂದು ಕೂಗಿದೆ ಚಂದ್ರನಿಗೆ ಮುತ್ತಿಡಲೆ ನಾ ಏನುತಿದೆ  🌹 ಮಂದಹಾಸ 🌹 ಚೆಲುವೆ ನಿನ್ನ ಮೊಗದಿ ಮಂದಹಾಸ ಕವಿಯು ಕೂಡ ಅರಿಯಾದದ ಪದದ ಪ್ರಾಸ ನಿನ್ನ ನೋಡಿ ನಕ್ಕನಂತೆ ಕಾಳಿದಾಸ ಆಷಾಢ ಮುಗಿದು ಬಂತಂತೆ ಶ್ರಾವಣಮಾಸ *********ರಚನೆ******** ಡಾ. ಚಂದ್ರಶೇಖರ್ ಸಿ ಹೆಚ್

ಚುಟುಕು ಕವನ-28

Image
      🌹 ಪತಿ 🌹 ಗಂಡ ಹೆಂಡಿರ ಕರೆವುದು ಸತಿಪತಿ ಸಂಸಾರದಲ್ಲಿ ಮಾಡಿದರು ಯಾರೋ ಕಿತಾಪತಿ ಗಲಾಟೆ ಶುರು ಜೀವನ ಅದೋ ಗತಿ ಬಾಳಿನ ಬದುಕು ಈಗ ಆಗೈತಿ ತಿಥಿ           🌹ನಲ್ಲ🌹 ನನ್ನ ಪ್ರೀತಿಯ ನಲ್ಲ ಬಳಿ ಬಂದ ಮೆಲ್ಲಾ ಇಡಿದುಕೊಂಡ ಗಲ್ಲ ತಿಂದ ಆಗೆ ಆಯ್ತು ಬೇವು ಬೆಲ್ಲ            🌹 ಸಖ 🌹 ನನ್ನ ನಲುಮೆಯ ಸಖ ಬಳಿ ಬಂದ್ರೆ ಏಕೋ ಪುಕ ಪ್ರೀತಿ ಒಂಥರಾ ಲಕ ಲಕ ಇವನ ನೋಡಿ ನಾನು ಮಿಕಾ    *********ರಚನೆ******** ಡಾ.ಚಂದ್ರಶೇಖರ್ ಸಿ. ಹೆಚ್ 

ಚುಟುಕು ಕವನ-26

Image
  🌹ವೋಟು🌹 ನೋಡಲೇ ತಮ್ಮ ಬಂತು ಎಲೆಕ್ಷನ್ ರಾಜಕರಣಿನಾ ಮಾಡಬೇಕು ಸೆಲೆಕ್ಷನ್ ಕ್ಯಾಂಡಿಡೇಟ್ ಮೇಲೆ ಹೆಣ್ಣೇಯ್ಕಳ ಅಫೆಕ್ಷನ್ ಕೊನೆಗೂ ನಮ್ಮವ ಮಾಡದ ನಾಮಿನೇಷನ್ ಗೆದ್ರೆ ಹೀರೋ ಸೋತ್ರೆ ಜೀರೋ ಸೆಲೆಬ್ರೇಷನ್ 🌹ನೋಟು🌹 ನಾವು ಮಾಡಬೇಕು ವೋಟು ಕೊಡು ನೀನು ನಂಗೆ ನೋಟು ಗುದ್ದುತಿವಿ ನಿನ್ನ ಚಿನ್ನೇಹೆಗೆ ವೋಟು  ಗೆದ್ರೇ ನಾವು ನಿಮ್ಗೆ ಪ್ಲಾಟು 🌹ಪಾರ್ಟಿ🌹 ಎಲೆಕ್ಷನ್ ಬಂದ್ರೆ ಎಣ್ಣೆ ಪಾರ್ಟಿ ಕ್ಯಾನ್ವಾಸ್ ನೆಪದಲ್ಲಿ ಒಂದೂ ನೈಂಟಿ ವೋಟು ಹಾಕಬೇಕು ನಮ್ ಪಾರ್ಟಿಗೆ ದುಡ್ಡು ಕೊಡುತ್ತಿವಿ ನಿಮ್ ಜೋಬಿಗೆ  **********ರಚನೆ******** ಡಾ. ಚಂದ್ರಶೇಖರ್ ಸಿ. ಹೆಚ್

ನಮ್ಮತನವ ಮೆರೆಯುವೆ

Image
  ಏ ಮನುಜ ನೀನು ಮೌಢ್ಯದಿಂದ ಎದ್ದು ಬಾ ಮೂಡನಂಬಿಕೆಗಳನ್ನು ಬದುಕಲ್ಲಿ ಕಿತ್ತು ಬಾ ಹಳೆಯ ಒಳಿತು ಉಳಿಸಿ ಹೊಸತು ಬೆಳಸು ಬಾ ಮನ ಮನೆಗೆ ಜ್ಞಾನ ತುಂಬಿ ರಾಷ್ಟ್ರದ ಹಣತೆ ಬೆಳಗು ಬಾ ಸ್ವಚ್ಛ ಸಮಾಜದ ಬದುಕಿನ ಜೀವ ನೀನು ಸಮಾಜದ ಒಳಿತಿಗಾಗಿ ಬಾಳಿ ಬದುಕು ನೀನು ಕಷ್ಟಗಳನ್ನು ನಿರ್ವಹಿಸಿ ಕಾನೂನುಗಳ ಗೌರವಿಸು ನೀನು ಮೋಸವನ್ನು ತೊಡೆದು ಹಾಕಿ ಒಳಿತನ್ನು ಉಳಿಸು ನೀನು ಜಾತಿಗಳ ಬೇರು ಬಿಟ್ಟು ನೀತಿ ನಿಯಮ ಮರೆತಿವೆ ಮೇಲು-ಕೀಳು ಭಾವಗಳು ಬದುಕನ್ನು ಕೊಂದಿವೆ ನಾನು ಎಂಬ ಅಹಂಕಾರ ಮರೆತು ನಾವು ಎಂದು ಎನ್ನುವೆ ಸರ್ವರಿಗೂ ಸಮಪಾಲು ಸಹಬಾಳ್ವೆ ಎಂದು ನೀನು ತೋರುವೇ ನೆಲ, ಜಲ,ಗಾಳಿಯನ್ನು ಮಲಿನ ಮಾಡಿ ಪರಿಸರವ ಕೊಂದಿಹೆ ದಿನವೂ ಆಚರಣೆಗಳ ಮೂಲಕ ನಾಟಕ ಮಾಡಿಹೆ ಮಲಿನವಾದ ಪ್ರಕೃತಿ ತೋರುತ್ತಿದೆ ನಿನಗೆ ವಿಕೃತಿ ಪರಿಸರವ ಸ್ವಚ್ಛ ಮಾಡಿ ತೋರು ಸಂರಕ್ಷಿಸುವ ಸುಕೃತಿ ನೂರು ಭಾಷೆ ಆಚಾರ ವಿಚಾರಗಳು ನಮ್ಮ ನಡೆಯ ಸಾರಿವೆ ಹಬ್ಬ ಹರಿ ದಿನಗಳು ನಮ್ಮ ಸಂಸ್ಕೃತಿಯ ತೋರಿವೆ ಆಹಾರಗಳ ವೈವಿಧ್ಯತೆ ನಮ್ಮ ಬೇರೆ ಮಾಡಿವೆ ಎಲ್ಲವನ್ನು ಸಹಿಸಿ ಬೆಳೆಸಿ ಎಂದು ನಮ್ಮತನವ ಮೆರೆಯುವೆ **********ರಚನೆ**********  ಡಾ. ಚಂದ್ರಶೇಖರ್ .ಸಿ.ಹೆಚ್

ಯಾರನ್ನು ಮಾಡಲಿ ಹೊಣೆ

Image
ಬದುಕ ಬವಣೆ   ನೋವ ಹೊತ್ತು ನಮ್ಮ ದಾರಿ ಸಾಗಿದೆ ಮನಸ್ಸಿನೊಳಗೆ ಬಿತ್ತಿದ ಆಸೆಗಳ ಹೊತ್ತ ಜೀವ ಏಕೋ ಅಳುತ್ತಿದೆ ನಾನು ಯಾರನ್ನ ಮಾಡಲಿ  ಹೊಣೆ ಹಣೆ ಬರಹಕ್ಕೆ ವಿಧಿಯೆ ಹಣೆ ಬದುಕ ಬಂಡಿ ನೂಕ ಬೇಕು ಕಷ್ಟ ಸುಖಗಳ ಪ್ರೀತಿ ಸಾಕು ಜಾತಿಗಳ ಬೇರಿನ ನೂಕು ನುಗ್ಗಲು ಕಾಲವೆಂಬ ಮಾಯೆ ಮುರಿದಿದೆ ಮಗ್ಗಲು ನಾವು ಯಾರು ಹೇಳಿ ಇಲ್ಲಿ ಕುಗ್ಗಲು ಏಕೆ ಬೀಳಬೇಕು ಬಂಡಿ ಜಗ್ಗಲು ಪಯಣ ಒಂದು ಅನುಭವದ ರಾಶಿ ಗುರುವೇ ನೀನು ಸಾಗು ನೆನೆದು ಕಾಶಿ ಕಾಣದ ದಾರಿಯಲ್ಲಿ ನಮ್ಮ ನಡುಗೆ ಸಹಬಾಳ್ವೆ ಜೀವನದ ಸವಿ ಉಡುಗೆ ಸಾಗಿಸೋಣ ನಮ್ಮ ಬದುಕನು ಶಪಿಸುತ್ತಾ ಕಾಣದ  ವಿಧಿಯನ್ನು ಜೀವನದ ದಾರಿ  ಮೂರು  ದಿನ ನಗುತ ಇರಲಿ ನಮ್ಮ ತನು ಮನ **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ದೇವರ ನಾಡು

Image
  ದೇವರ ನಾಡಿನಲ್ಲಿ ಮನಕುಲುಕುವ ಕಥೆ ಭೂಮಿಯೇ ಜರುಗಿದ ನೋವಿನ ವ್ಯಥೆ ಹರಿಯಿತೆ ನೀರು ಕೊಚ್ಚಿದರೆ ಜನರು ನೆತ್ತರು ನೋಡಿ ಜನ ಬೆಚ್ಚಿತೆ ಮನ ಮಣ್ಣಿನಲ್ಲಿ ಮರಣಮೃದಂಗ  ಸಾವು ನೋವಿಗೆ ದೇವರೆ ದಂಗಾ  ಹರಿಯಿತು ನೆತ್ತರು ನದಿಯಂತೆ ಸೂರುಗಳು ತೇಲಿದವು ಮರದಂತೆ ದೇವರೆ ನಿನಗೆ ಕರುಣೆಯೇ ಇಲ್ಲವೇ ಇಂಥ ಸಾವು ನೋವು ತರವೇ ಊರಿಗೆ ಊರೇ ಇಲ್ಲಿ ಸ್ಮಶಾನ ಎಲ್ಲೆಡೆಯೂ ಸೂತಕದ ಮೌನ  ಏಕಿಷ್ಟು ಕೋಪ ಈ ಪ್ರಕೃತಿಗೆ ಮನುಷ್ಯನು ಮಾಡಿದ ವಿಕೃತಿಗೆ ಕಟ್ಟಲೆ ಬೇಕು ಬೆಲೆ ಮಾಡಿದ ತಪ್ಪಿಗೆ ನೀರು ಮಣ್ಣು ಸೇರಿಯೇ ನೀಡಿದ ಅಪ್ಪುಗೆ ಎಚ್ಚರ ಎಚ್ಚರ ಮಾನವನೇ ನಿನಗೆ ಪ್ರಕೃತಿಯ ಮಡಿಲಲ್ಲಿ ನಿನ್ನ ಸುಲಿಗೆ ನೀನೆ ತೆರಬೇಕು ಸುಂಕವ ನಾಡಿಗೆ ಸಾವೆ ಉತ್ತರವೂ ನಿನಗೆ ಕೊನೆಗೆ *********ರಚನೆ*********** ಡಾ.ಚಂದ್ರಶೇಖರ್. ಸಿ. ಹೆಚ್