Posts

ಚುಟುಕು ಕವನ-68

Image
  ದೇಶಭಕ್ತಿ   ಬನ್ನಿ ಎಲ್ಲರೂ ಒಟ್ಟಿಗೆ ದೇಶಭಕ್ತರಾಗೋಣ  ನಮ್ಮ ದೇಶವ ಭವ್ಯ ನಾಡು ಮಾಡೋಣ  ದೇಶದ ಏಳಿಗೆಗೆ ಹಗಲು ರಾತ್ರಿ ದುಡಿಯೋಣ  ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರೋಣ  ಸಂಘ   ನಾಡು ನುಡಿಯ ಬೆಳಗಲು ಕಟ್ಟಬೇಕು ಸಂಘ  ಮೋಸ ಅನ್ಯಾಯಗಳನ್ನು ಕಿತ್ತು ಹಾಕು ರಂಗ  ಸತ್ಯ ಅಹಿಂಸೆಯ ಮಾಡಬೇಡ ಮಾನಭಂಗ  ಸೂರ್ಯ ಚಂದ್ರರ ಸಾಯಿಸುವರು ಯಾರು ಗಂಗ  ಸಾವರ್ಕರ್   ಸಾವರ್ಕರ್ ಆರ್ ಎಸ್ ಎಸ್ ಸಂಘದ ಧೀರ  ನಾಡು ನುಡಿಯ ಕಟ್ಟಿದ ಮಹಾನ್ ಶೂರ ಭವ್ಯ ಭಾರತದ ಕನಸಿನ ಕಣ್ಮಣಿ ಕುವರ  ಇಂದು ಅವರ ಸಾಧನೆ ಜಗದಲ್ಲೆಡೆ ಅಮರ **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -67

Image
  ರಾಷ್ಟ್ರ   ನಮ್ಮ ರಾಷ್ಟ್ರ ಭಾರತ  ನಾವೆಲ್ಲ ಒಂದೇ ಎನ್ನುತ್ತಾ  ಜಾತಿ ಭೇದ ಮರೆಯುತ  ಸಾಗೋಣ ನಾವು ಹಿಂದೂ ಧರ್ಮ ಸಾರುತ ಸಾಮರಸ್ಯ   ಬದುಕೋಣ ಬಾಳಲಿ ಸಾಮರಸ್ಯದಿ ನಾವು  ಕಿತ್ತಾಡದಿರೋಣ ಹಾವು ಮುಂಗುಸಿಯಂತೆ ನಾವು ಬಾಳೋಣ ದ್ವೇಷ ಅಸೂಯೆ ಮರೆತು ನಾವು  ಬನ್ನಿ ಎಲ್ಲ ಒಂದೆ ಎನ್ನುತ ಬದುಕೋಣ ನಾವು  ಸ್ವಾತಂತ್ರ್ಯ   ಬಂತು ನಮಗೆ ಬ್ರಿಟಿಷರಿಂದ  ಸ್ವಾತಂತ್ರ ಬಾಳು ಆಗದೆ ಉಳಿಯಿತು ಅತಂತ್ರ  ಬಿಟ್ಟು ಹೋಯಿತು ಬಾಳಲಿ ಪರತಂತ್ರ  ಜೀವ ಕಸಿಯಿತು  ಮೋಸದ ಕುತಂತ್ರ

ಚುಟುಕು ಕವನ-66

Image
  ಧರ್ಮ   ಮನುಜ ನೀನು ಕೊಲ್ಲಬೇಡ ಧರ್ಮ  ಸುಟ್ಟುಬಿಡು ನಿನ್ನ ದ್ವೇಷದ ಕರ್ಮ  ವಿಧಿ ಆಟ ಯಾರಿಗೂ ತಿಳಿಯದ ಮರ್ಮ  ಕೊಳೆತು ನಾರುವುದು ನಿನ್ನ ಮಾಂಸದ ಚರ್ಮ  ತತ್ವ   ಪ್ರೀತಿ ಪ್ರೇಮ ಸಾರಿದ ಜೀವನದ ಬಾಳು ತತ್ವ  ಮರೆಯಬೇಡ ಮನುಜ ನೀ ನಮ್ಮ ಮಾನವತ್ವ  ಮೆರೆದು ಬಾಳಬೇಡ ಬದುಕಲ್ಲಿ ಮನುಜ ಪತ್ವ  ಮನಸ್ಸು ಸಂಚಲನ ಜೀವನ ನಡೆಯಲಿ ದಿತ್ವ ಹಿಂದುತ್ವ   ಮಾನವನ ನೀನು ಹುಡುಕು ಸಿಂಧುತ್ವ  ಮನ ಮನೆಯಲ್ಲಿ ಬೆಳಗಲಿ ಹಿಂದುತ್ವ  ನಾವೆಲ್ಲರೂ ಒಂದೇ ಎನ್ನುವುದು ಬಂದುತ್ವ  ಸಮಾನತೆಯಲ್ಲಿ ಸಾಗೋಣ ಅದೇ ಮಾನವತ್ವ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -65

Image
  ಗಣೇಶ   ನಮ್ಮೂರಿಗೆ ಬಂದ ಮುದ್ದು ಗಣೇಶ  ಆರತಿ ಎತ್ತಿ ಇವನಿಗೆ ಶಿವನೇ ಪ್ರಾಣೇಶ  ಯಾರು ಹೆತ್ತರು ಇವನ ಹೇಳು ಪರಮೇಶ  ಸೊಂಡಿಲ ಗಣಪನಿಗೆ ನಮಿಸು ನೀ ಈಶ  ಚಂಡೆ   ಚಂಡೆ ಮದ್ದಳೆ ಬಡಿದು ಗಣಪನ ಸ್ವಾಗತಿಸು  ಪೂಜೆ ಪುರಸ್ಕಾರ ಮಾಡಿ ನೀ ನಮಿಸು  ಭಕ್ತಿಯಲ್ಲಿ ಬೇಡಿ ಗಣಪನ ಪೂಜಿಸು  ಮೋಸ ವಂಚನೆಯ ಬಾಳಲ್ಲಿ ನೀ ತ್ಯಜಿಸು  ಹುಲಿ ಕುಣಿತ   ದಾರಿಯಲ್ಲಿ ನೋಡಿದೆ ನಾವು ಹುಲಿ ಕುಣಿತ  ವೇಷ ತೊಟ್ಟಿರುವ ಮೋಸದ ಬಲು ಮೆರೆತ  ಬೆಂಕಿ ಹಚ್ಚಿ ಸುಟ್ಟರು ನ್ಯಾಯದ ಆ ಗಣಿತ ವಿಕೃತಿಯಲಿ ಹೇಗೆ ನಾ ಬಾಳಲಿ ಸಹಿಸುತ

ಚುಟುಕು ಕವನ

Image
  ಇಷ್ಟ   ನಲ್ಲೆ ನೀನು ಅಂದ್ರೆ ನನಗೆ ಇಷ್ಟ  ನಿನ್ನ ಸಿಟ್ಟು ನನಗೆ ಬಹಳ ಕಷ್ಟ  ನೀನಿಲ್ಲದಿದ್ದರೆ ಬದುಕಲ್ಲಿ ನಷ್ಟ  ನೀನೇ ನನ್ನ ಜೀವ ಇದು ಸ್ಪಷ್ಟ  ದೂರ   ಗೆಳತಿ ನಿನ್ನ ನೆನಪು ದೂರ  ಜೀವನ ಏಕೋ  ಬಲು ಬಾರ  ಬದುಕು ಪಯಣ ನೋವಿನ ತೀರ  ಜೀವನ ಬೇಸರ ತಂದಿದೆ ಕುಡಿ   ನೀರ ರಜೆ   ನನಗೆ ಇಂದು ಶಾಲೆಗೆ ರಜೆ  ಆಟ ಆಡೋಣ ಬಾ ಮಜೆ  ಮತ್ತೆ ನಾಳೆ ಶಾಲೆ ಎಂಬ ಸಜೆ  ಬದುಕು ಉಬ್ಬರ ತಿನ್ನು ಬಜೆ  ನೀನು   ಕಣ್ಣಲ್ಲಿ ಕಣ್ಣಿಟ್ಟು ನೋಡು ಬಾ ನೀನು  ಕಾದು ಕೂತಿರುವೆ ನಿನಗಾಗಿ ನಾನು  ನೀನು ನಕ್ಕರೆ ಅದೇ ಹಾಲು ಜೇನು  ನೀನಿಲ್ಲದಿದ್ದರೆ ಭೂಮಿಗೆ ಬಿದ್ದಂತೆ ಭಾನು

ಚುಟುಕು ಕವನ

Image
  ಮಾತಾಡು   ಮೌನ ಮುರಿದು ನೀನು ಒಮ್ಮೆ ಮಾತಾಡು  ಜೀವನ ಏಳು ಬೀಳು, ಒಮ್ಮೆ ಸವಿದು ನೋಡು  ಪ್ರೀತಿಯು ಹರಿವ  ನೀರಿನಂತೆ ಒಮ್ಮೆ ಕುಡಿದು ಬಿಡು  ನೋವು ಬರಡು ನೆಲದಂತೆ ಒಮ್ಮೆ ಅತ್ತುಬಿಡು  ಕುಣಿದಾಡು   ನಲ್ಲೆ ನೀನು ಮನಸಾರೆ ಕುಣಿದಾಡು  ಒಲವ ತೂಗುಯ್ಯಾಲೆಯಲ್ಲಿ ಜೋತಾಡು  ಕಷ್ಟಸುಖದಲ್ಲಿ ಬಿದ್ದು ಒದ್ದಾಡು  ಜೀವನದ ಚಿಂತೆಯ ಮರೆತು ಬಿಡು ಹೂದೋಟ   ನಮ್ಮ ಮನೆಯಲ್ಲೊಂದು ಹೂದೋಟ  ಹಕ್ಕಿ ಪಕ್ಷಿಗಳ ಪ್ರೀತಿಯ ಹಾರಾಟ  ಹಸು ಕರುಗಳ ಪ್ರೀತಿ ನುಗ್ಗಾಟ  ನಾಯಿ ಮರಿಗಳ  ಹಸಿದ ರಂಪಾಟ  ಮನಸಾರೆ   ಹುಡುಗಿ ಪ್ರೀತಿಸುವೆ ನಿನ್ನ ಮನಸಾರೆ  ನನ್ನ ಬದುಕು ದಾರಿಯಲ್ಲಿ ಕನಸಾರೆ  ಕಷ್ಟ ಸುಖಗಳ ಮರೆತು ಪ್ರೀತಿ ಸಾರೇ  ಜೀವನದ ದೋಣಿಯಲ್ಲಿ ಸಾಗು ಹುಷಾರೆ  ********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮಕ್ಕಳ ಗೀತೆ -49

Image
  ಬೆಳಕು ದೀಪ  ನೀನು ತಾನೇ ಸಣ್ಣ ದೀಪ  ನೋಡಿ ಅಯ್ಯೋ ಪಾಪ  ಒಂಟಿ ಕಣ್ಣಲ್ಲಿ ಅಳುವೆ  ಜಗವ ಬೆಳಗುತಿರುವೆ  ನಿನ್ನ ಕಂಡು ಭಯ ಕತ್ತಲೆಗೆ  ಬೆಳಕು ಕೊಟ್ಟು ನೀ ಸುಟ್ಟಿರುವೆ  ಸತ್ಯಶಕ್ತಿ ನಿನ್ನಯ ರೂಪ  ದಿವ್ಯತೆಗೆ ನೀನೆ ಸ್ವರೂಪ  ಕತ್ತಲೆ ಎಂಬ ಮುಳ್ಳು ಕಳೆದು  ಬೆಳಕು ಎಂಬ ನದಿ ಹರಿದು  ಕಪಟ ಮೋಸ ಮಾಯವಾಯಿತು  ಸತ್ಯಕ್ಕೆ ಬೆಳಕು ದಾರಿಯಾಯಿತು  ಧರ್ಮಕ್ಕಾಗಿ ನಿನ್ನ ಜನನ  ಅಧರ್ಮವು ನಿನ್ನಿಂದ ಮರಣ  ಭವ್ಯ ನಾಡು ಬೆಳಗು ನೀನು  ಅನಂತ ಚೇತನವಾಗು ನೀನು **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ