Posts

ಮಕ್ಕಳ ಗೀತೆ -50

Image
ನೆಗೆದು ನೆಗದು ಜಿಗಿದು ಜಿಗಿದು  ಓಡುತಿರುವೆ ಏಕೆ ಕಂದಮ್ಮ  ಗುಡಿಯಲ್ಲಿ ಗಣಪ ಕಾಯುತಿಹನು  ಬಾರೆ ಹೋಗೋಣ ಚಿನ್ನಮ್ಮ  ನೀರಲ್ಲಿ ಬೆಳಕು ಚುಮ್ಮುತಿಹುದು  ಬಣ್ಣ ಬಣ್ಣದ ನೀರು ಸುರಿಯುತಿಹುದು  ನೋಡಲು ಚಂದ ಬಾರಮ್ಮ  ಕುಣಿದು ಕುಣಿದು ಆಡು ಬಾರೆ ಕಂದಮ್ಮ  ಗಣಪನ ಪೂಜೆ ಮುಗಿದಿಹುದು  ಪಲ್ಲಾರವೆಲ್ಲ  ಅಂಚಿಹುದು  ತಿನ್ನುವ ಬಾರೆ ಚಿನ್ನಮ್ಮ  ಜಗಿದು  ತಿನ್ನು ಕಂದಮ್ಮ  ಭಾರೆ ಮನೆಗೆ ಹೋಗೋಣ  ಮುದ್ದು ನಗುವಿನ ಕಂದಮ್ಮ  ಮತ್ತೆ ನಾಳೆ ಬರೋಣ  ಗಣಪನ ಪೂಜೆ ಮಾಡೋಣ **********ರಚನೆ**********  ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ

ಪಯಣ ಸೋತಿದೆ

Image
  ನೋವು ಏಕೋ ಭಾರವಾಗಿ  ಮನಸು ಮೌನವಾಗಿದೆ  ಹೃದಯವೇಕೋ ಬಡಿದು ಬಡಿದು  ಕಣ್ಣ ನೀರು ಅಳುತಿದೆ  ಪಯಣದಲ್ಲಿ ಯಾರಿಗೆ ಯಾರೋ  ದಾರಿ ದೂರವಾಗಿದೆ  ನಡುವೆ ಬಂದ ಎಡರು ತೊಡರು ದಾರಿ ದೂಡುವಂತಿದೆ ಕಾಣದ ಊರ ನೆನೆದು ನೆನೆದು  ಕಾಲ ಏಕೋ ಸೋತಿದೆ  ಎದೆಯ ಗಾಯ ಜಿನುಗಿ ಜಿನುಗಿ  ದೀಪ ಒಂದು ಉರಿದಿದೆ  ಸತ್ತ ಮೇಲೆ ಒತ್ತಿದ ಹಣತೆ  ಯಾರಿಗಾಗಿ ಬೆಳಕು ನೀಡಿದೆ ಮಳೆ ಇಲ್ಲದೆ ಬಿತ್ತಿದ ಬೀಜ  ಮಣ್ಣಿನಲ್ಲಿ ಮಣ್ಣಾಗಿದೆ ಮೂರು ದಿನದ ಬಣ್ಣದ ಬದುಕು ಯಾರಿಗಾಗಿ ಕಾಲ ಕೇಳಿದೆ  ನಿನ್ನ ನೀನು ಅರಿತು ಕಲಿತು  ಮಾಯವಾಗು ಎಂದಿದೆ ***********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ-75

Image
  ಸರಳ   ಜೀವನವೆಂಬುದು ತಿಳಿ ನೀ ಬಲು ಸರಳ  ಕಷ್ಟ ಸುಖ ಅರಿತು ಬಾಳು ನೀ ಮರುಳ  ಬದುಕು ಏಳು ಬೀಳು ತಿಳಿ ನೀನು ದುರುಳ  ಬದುಕನ್ನು ಸವಿದವರು ಏಕೋ ಅತಿ ವಿರಳ  ಜನತೆ   ಜೀವನದ ಹಂಗು ತೊರೆದು ಜೀವಿಸುವ ಜನತೆ  ಬಾಳ ಪಯಣ ಬಲು ಕಷ್ಟ ಬಾಳು ಘನತೆ  ಬಿದ್ದವರು ಎಳುವರು ತಿಳಿದು ನಡೆ ನಿನ್ನಂತೆ ತಗ್ಗಿ ಬಗ್ಗಿ ನಡೆಯುವುದು ಬಲು ವಿನಯತೆ  ಜನನ   ಬಾಳಿನಲ್ಲಿ ಬರುವುದು ಒಮ್ಮೆ ಜನನ  ಸತ್ತ ಮೇಲೆ ಆಗುವುದು ನಿನ್ನ ಮರಣ  ಮೂರು ದಿನದ ಈ ಬಾಳು ಒಂದು ಪಯಣ  ಬದುಕಿನಲ್ಲಿ ಬಾಳು ನೀನು ಓ ತರುಣ ************ರಚನೆ************** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -74

Image
  ಕುಂಭಮೇಳ ನಡೆಯಿತು ನಮ್ಮ ದೇಶದಿ ಕುಂಭಮೇಳ  ಸಾಧು ಸಂತ ಅಘೋರಿಗಳ ಜನ ಮೇಳ  ಗಂಗಾ ನದಿಯಲ್ಲಿ ಪುಣ್ಯದ ಸ್ನಾನ  ಪಾಪು ಮರೆಯಾಯಿತು ಗಂಗಾ ಸ್ಥಾನ  ದತ್ತಪೀಠ   ಬಾಬು ಬುಡನ್ ಗಿರಿಯ ದತ್ತಪೀಠ  ಹಿಂದೂ ಮುಸಲ್ಮಾನರ ಧಾರ್ಮಿಕ ಕೂಟ  ಧರಿಸಿದರು ಧರ್ಮದ ಮಾಲೆಯನ್ನು ಸ್ಮರಿಸಿದರು ದೈವ ಸನ್ನಿಧಿಯನ್ನು  ಗಿರಿ   ನೆಲೆಸಿವೆ ನಮ್ಮಲ್ಲಿ ಹಲವು ಗಿರಿ  ಪುಣ್ಯದ ನೆಲವಂತೆ ಕಲ್ಲತ್ತಿಗಿರಿ  ಧರ್ಮದ ನೆಲೆ ಬಾಬು ಬುಡನ್ ಗಿರಿ  ಹೊಯ್ಸಳರ ದೈವವಂತೆ ಶಕುನಗಿರಿ ***********ರಚನೆ************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -73

Image
  ಸೂರ್ಯ   ಸೂರ್ಯನು ಮೂಡಿಸಿದನು ಬಾಳಲಿ ಬೆಳಕು  ತೊಲಗಿಸಿದನು ಬದುಕಿನ ಚಿಂತೆ ಕೊಳಕು  ಬೆರೆಸಿದನು ಪ್ರೀತಿ ಮಮತೆಯ ಹೊಳಪು  ಬೆಳೆಸಿದನು ನವ ಉಲ್ಲಾಸದ ಉರುಪು ದೈವ   ಬಾಳನು ಬೆಳಗಿಸಿದ ಪ್ರೀತಿ ಹಣತೆ ದೈವ  ಉಲ್ಲಾಸದ ಚಿಲುಮೆಯ ನಾಡು ಭವ್ಯ  ಮನೆಮನ ಬೆಳಗಲಿ ಶಾಂತಿಯ ನೋಟ  ಅರಳಲಿ ಬಾಳಲಿ ನಮ್ಮಯ ಕನಸಿನ ಓಟ  ಅಯೋಧ್ಯ   ಅಯೋಧ್ಯೆಯಲ್ಲಿ ರಾಮನಿಗೆ ಮಂದಿರ  ಮೂಡಿದ ಜೀವನದಿ ಹುಣ್ಣಿಮೆ ಚಂದಿರ  ಹೊಸತನ ಅರಳಲಿ ಚುಮ್ಮುತ ಪ್ರೇಮ  ನೋವು ನಲಿವು ಎಲ್ಲಾ ನೀನೇ ರಾಮ *************ರಚನೆ************   ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಚುಟುಕು ಕವನ -72

Image
ಹನುಮಂತ   ಕಾಯೋ ನೀನು ಹನುಮಂತ  ನೀನೆ ನಮ್ಮಯ  ಧೀಮಂತ  ಸಾಗಿಸು ನಮ್ಮನ್ನು ಸರಿ ದಾರಿಯಲಿ  ಕಾಪಾಡು ಈ ನೋವಿನ ಬದುಕಿನಲ್ಲಿ  ಶಕ್ತಿ   ಗುರುವೇ ನೀನು ತಾನೆ ಶಕ್ತಿ  ಗುರುವೇ ನಿನಗೆ ನಮ್ಮ ಭಕ್ತಿ  ನಿನ್ನಿಂದ ನಮಗೆ ಪಾಪದಿ ಮುಕ್ತಿ  ಕೊಡು ನೀನು ನಮಗೆ ಯುಕ್ತಿ  ಗುರು   ಬೇಡಿದ ನಿನ್ನ ನಮ್ಮ ಗುರುವೇ  ಕೊಡು ನೀನು ಬದುಕುವ ವರವೇ  ಏಕೆ ನಿನಗೆ ಸೇಡಿನ ಛಲವೇ   ನೀನು ತಾನೇ ಬಾಳಿನ ಗೆಲುವು  *************ರಚನೆ*************  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಚುಟುಕು ಕವನ -71

Image
  ಧರ್ಮಸ್ಥಳ ಧರ್ಮಸ್ಥಳದಲ್ಲಿ  ಸುಮ್ಮನೆ ಬುರುಡೆ ಬಂತು  ಟಿವಿ ತುಂಬಾ ಜನರಿಗೆ ಕುತೂಹಲ ತಂತು ಧರ್ಮ ಅಧರ್ಮಗಳ ಮುಂದಿನ ಲೆಕ್ಕಾಚಾರ  ಮಂಜುನಾಥನಿಗೆ ಇವರು ಮಾಡುವ ಅಪಚಾರ  ಚಿಂತನೆ   ಎಲ್ಲಿ ನೋಡಿದರೂ ಬುದ್ಧಿಜೀವಿಗಳ ಚಿಂತನೆ  ಲೆಕ್ಕಕ್ಕೆ ಬಾರದ ಮಾತುಗಳ ಮಂತನೆ  ನ್ಯಾಯ ನೀತಿಗಳ ಸುಮ್ಮನೆ ಬೋಧನೆ  ಆಚರಿಸದ ಪೊಳ್ಳುಬರವಸೆಗಳ ರೋಧನೆ  ಕುಟುಂಬ   ಎಲ್ಲಿ ಕಾಣೆಯಾಗಿದೆ ತುಂಬು ಕುಟುಂಬಗಳು  ಟಿವಿಯಲ್ಲಿ ಕಾಣುತ್ತಿವೆ ವಸುದೈವ ಕುಟುಂಬಗಳು  ಮನೆಗಳು ಉರಿದಿವೆ ಹಣದ ವ್ಯಾಮೋಹದಲ್ಲಿ  ಸಂಸಾರಗಳು ಬೀದಿಗೆ ಬಂದಿವೆ ಹಿರಿಯರ ನೋವಿನಲ್ಲಿ