ಸಾಹಿತ್ಯ ದೀಪ್ತಿ ಮಕ್ಕಳ ಗೀತೆ ಸಂಕಲನ ಲೇಖಕರ ನುಡಿ ನನ್ನ ನಾಲ್ಕು ಕವನ ಸಂಕಲನ, ವ್ಯಕ್ತಿತ್ವ ವಿಕಸನ, ವಚನ ಸಂಕಲನದ ಪುಸ್ತಕಗಳನ್ನು ಬೆಳಕಿಗೆ ತಂದ ಮೇಲೆ, ನನ್ನ ಆಸಕ್ತಿಯು ಮಕ್ಕಳ ಗೀತೆಗಳ ಕಡೆ ಸೆಳೆಯಿತು. ಸಣ್ಣ ಮಕ್ಕಳುಗಳು ದೇವರಿಗೆ ಸಮ ಎಂದು ಹೇಳುತ್ತಾರೆ. ಮಕ್ಕಳ ಮನಸ್ಸು ಮುಗ್ಧ ಮನಸ್ಸು, ಪ್ರಪಂಚವನ್ನು ಅರಿಯದ ಮನಸ್ಸು, ಮತ್ತು ಮೋಸ ವಂಚನೆಗಳನ್ನು ತಿಳಿಯದ ಮನಸ್ಸು ಆ ಮಕ್ಕಳನ್ನು ನೋಡುವುದೇ ಚೆಂದ. ನನಗೂ ಒಂದು ಮದುವೆಯಾಗಿ ಸಾಕಷ್ಟು ನೋವುಗಳ ನಡುವೆ ಒಂದು ಹೆಣ್ಣು ಮಗು ಜನ್ಮ ತಾಳಿತು. ಕೆಲವರು ಗಂಡು ಮಗುವಾಗಿದ್ದರೆ ಚಂದ ಎಂದರು. ನನ್ನ ಅಮ್ಮ ಕೂಡ ಗಂಡು ಮಗುವಾಗಿ ಆಸೆ ಪಟ್ಟರು. ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ ನಾವು ಬಯಸುವುದು ಒಂದು, ಆದರೆ ಆಗುವುದು ಇನ್ನೊಂದು. ನನ್ನ ಮಗಳು ನನ್ನ ಸಾಕಷ್ಟು ನೋವಿನ ತದನಂತರ ಜನ್ಮ ತಾಳಿ ಬಂದವಳು ಅವಳನ್ನು ನಾನು ದೈವದ ಕರುಣೆ ಎಂದು ತಿಳಿದಿದ್ದೇನೆ. ಮಗಳು ಅಮ್ಮನ ಬಳಿ ಮಲಗಿನಿಂದ ಹಿಡಿದು ತೆವಳಿ, ಅಂಬೆಗಾಲಿಟ್ಟು , ನಡೆಯುವವರೆಗೆ ಮಗುವನ್ನು ನೋಡಿ, ಜೀವನವೇ ಸಾಕು ಎಂದು ಅನಿಸಿದವನಿಗೆ ಎಲ್ಲಾ ನೋವು ಮರೆತು ಮಗುವಿನೊಡನೆ ಮಗುವಂತೆ ಆಗಿಬಿಟ್ಟಾಗ ಈ ಪ್ರಪಂಚ ತುಂಬಾ ಸಂತೋಷ ಎನಿಸುತ್ತದೆ. ಈ ಜೀವನದ ಜಂಜಾಟದಲ್ಲಿ ಎಲ್ಲಾ ಜನರುಗಳ ಹಾಗೂ ಈ ವಿಲಾಸಿ ಬದುಕನ್ನು ಮತ್ತು ನಾನು ಬೆಳೆದು ಬಂದ ಜೀವನವನ್ನು, ದುಡಿಮೆಯಲ್ಲಿ ತೊಡಗಿದಾಗ ನಮ್ಮನ್ನು ಹರಸಿದವರು ಎಷ್ಟೋ ಜನ...