Posts

ಬದುಕ ರೈಲು

Image
  ಹಳಿ ಮೇಲೆ ರೈಲೊಂದು ಓಡುತಿತ್ತು  ಚುಕು ಬುಕು ಶಬ್ಧವ ಮಾಡುತಿತ್ತು ಮುಗಿಯದ ದಾರಿ ಸವೆಯದ ಗಾಲಿ  ಗಾಳಿಯ ಸೀಳಿ ಮುಂದೆ ಸಾಗುತಿತ್ತು  ಪಯಾಣಿಕರು ನೂರಾರು ಸುತ್ತುತ್ತ ಊರೂರು  ಮುಂದೆ ಬರುವ ಸ್ಟಾಪ್ ಅಲ್ಲಿ ಇಳಿಯಿತಿತ್ತು  ನಮ್ಮೂರು ಬಂತು ನಿಮ್ಮೂರು ಎಲ್ಲಿ ಎನ್ನುತ್ತಿತ್ತು  ಎತ್ತ ನೋಡಿದರೂ ಜನರು ನಮ್ಮವರನ್ನು ಕೇಳುತ್ತಿತ್ತು      ನೂರೆಂಟು ನೋವಲ್ಲಿ ಮನಗಳು ಮಿಡಿಯುತ್ತಿತ್ತು  ದೇವರನು ನೆನೆಯುತ್ತಾ ನಿಟ್ಟುಸಿರ ಬಿಡುತ್ತಿತ್ತು  ಕಾಣದ ಗೆಲುವು ಸೋಲು ಏಕೋ ಒಲವು  ಹಳಿ ತಪ್ಪಿದ ಬದುಕು ಕೂಗಿ ಅಳುತ್ತಿತ್ತು ದಿಕ್ಕು ತಪ್ಪಿಸಿದೆ ವಿಧಿಯ ಶಪಿಸಿತಿತ್ತು  ಕಾಶಿಗೆ ಹೊರಟಿಹೆವು ಶಿವನ ಕಾಣಲು ಜೀವನಕೆ ಮುಕ್ತಿಯು ಸಿಗುವುದೇ ಕೇಳುತ್ತಿತ್ತು ಸಾಕು ಈ ಜೀವನ ತಂದ ಸಿಹಿ ಒಲವು ಎದೆಯೊಡ್ಡಿ ಜೀವನ ಸೋತು ಗೆದ್ದ ಚಲವು ಯಾರ್ಯಾರು ಬರುವಿರಿ ಪರಶಿವನ ಪಾದಕೆ  ಸಂತೋಷ ತುಂಬಿದ ಭಕ್ತಿಯ ಗುಡಿಗೆ  ದ್ವೇಷ ಅಸೂಯೆ ಇಲ್ಲದ ದೂರದ ಜಗಕೆ ಸೋಲು ಗೆಲುವ ಇಲ್ಲದ ಸೂರಿನೆಡೆಗೆ ಹಳಿ ಮೇಲೆ ರೈಲೊಂದು ಓಡುತಿತ್ತು  ಚುಕು ಬುಕು ಶಬ್ಧವ ಮಾಡುತಿತ್ತು ಮುಗಿಯದ ದಾರಿ ಸವೆಯದ ಗಾಲಿ  ಗಾಳಿಯ ಸೀಳಿ ಮುಂದೆ ಸಾಗುತಿತ್ತು  ************ರಚನೆ******** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

1. .ಮೆದುಳಿನ ರಾಸಾಯನಿಕಗಳು ನಮ್ಮಲ್ಲಿ ಸಂತೋಷ ಹಾಗೂ ದುಃಖವನ್ನು ಉಂಟು ಮಾಡುತ್ತವೆಯೇ???

Image
  ದಿನನಿತ್ಯವು ಕೆಲವು ಭಾವನೆಗಳನ್ನು ನಾವು ಅನುಭವಿಸುತ್ತೇವೆ. ಆ ಭಾವನೆಗಳು ನಮ್ಮನ್ನು ಚಿಂತಿತರನ್ನಾಗಿ ಮಾಡುತ್ತವೆ. ಆ ಭಾವನೆಗಳಂತೆ ನಾವು ವರ್ತಿಸುತ್ತೇವೆ, ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಸಣ್ಣ ಸಣ್ಣ ರಾಸಾಯನಿಕಗಳನ್ನು ನರ ಪ್ರೇಕ್ಷಕ ಎಂದು ಹೇಳುತ್ತೇವೆ. ನರಪ್ರೇಕ್ಷಕಗಳು ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತವೆ.  ನಮ್ಮ ದೇಹವು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಈ ಜೀವಕೋಶಗಳು ಒಂದಕ್ಕೊಂದು ಸಂಪರ್ಕದಲ್ಲಿ ಇರುತ್ತವೆ.. ಅವುಗಳು ಮಾಹಿತಿಯನ್ನು  ಸಂಜ್ಞೆಗಳ  ಮೂಲಕ ಮೆದುಳಿಗೆ ಅಲ್ಲಿಂದ ನಮ್ಮ ದೇಹಕ್ಕೆ ರವಾನಿಸುತ್ತವೆ. ಇದರಿಂದ ನಮ್ಮ ಭಾವನೆಗಳು ಬದಲಾಗುತ್ತವೆ. ಜೀವಕೋಶಗಳು ಜನರ ಮಾನಸಿಕ ಆರೋಗ್ಯವನ್ನು ತಿಳಿಯಲು ಸಹಕರಿಸುತ್ತವೆ. ನಮ್ಮ ದೇಹವು ನರ ಕೋಶಗಳಿಂದ ತಯಾರಾಗಿದೆ . ನರಕೋಶಗಳನ್ನು ನ್ಯೂರಾನ್ ಎಂದು ಕರೆಯುತ್ತೇವೆ. ಈ ನರ ಕೋಶಗಳು ನಮ್ಮ ಹೊರ ಜಗತ್ತನ್ನು ಹಾಗೂ ನಮ್ಮ ದೇಹದ ಚಲನವಲನಗಳನ್ನು ನಿಯಂತ್ರಿಸುತ್ತವೆ. ಈ ನರ ಕೋಶಗಳು ರಾಸಾಯನಿಕ ವಸ್ತುಗಳಿಂದ ಮಾಡಲಾಗಿರುತ್ತದೆ. ಇವುಗಳನ್ನು ನಾವು ನರ ಪ್ರೇಕ್ಷಕ ಅಂದರೆ ಇಂಗ್ಲೀಷ್ ನಲ್ಲಿ ನ್ಯೂರೋ ಟ್ರಾನ್ಸ್ಮಿಟರ್ ಎಂದು ಹೇಳಲಾಗುತ್ತದೆ.  ಈ ನರಪ್ರೇಕ್ಷಕಗಳು ನಮ್ಮಲ್ಲಿನ ಭಾವನೆಗಳಾದ ನಕಾರಾತ್ಮಕ ಮತ್ತು ಸಕಾರಾತ್ಮಕ ಭಾವನೆಗಳನ್ನು ನರಪ್ರೇಕ್ಷಕಗಳಾದ ಡೋಪಮೈನ್, ಸೆರಾಟೋನಿನ್ ಮತ್ತು. ನಾರ್ ಎಪಿನೆಫ್ರೀನ್. ಗಾಬೆಾಅಮೈನೋಬ್ಯೂಟಿರಿಕ್ಆ್ಯಸಿಡ್, ...

ಮಕ್ಕಳ ಗೀತೆ -33

Image
  🌹ಅಳಿಲೇ ಅಳಿಲೇ 🌹 ಅಳಿಲೆ ಅಳಿಲೆ  ಮುದ್ದಿನ ಅಳಿಲೆ  ಮರವನ್ನು ಏರುವ  ನೆಗೆದು ಬಾ ಅಳಿಲೆ  ಮರದ ಮೇಲೆ  ಎಳನೀರು ಆಯಿತೆ  ಕುಡಿದು ಬುರುಡೆ  ಬಿಟ್ಟು ಬಾ ಮರದಿ  ಮಾವಿನ ಮರದಿ  ಗಿಣಿ ಮಾವು ಆಯಿತೆ   ಅರ್ಧ ತಿಂದು ಎಂಜಲು  ಮಾಡಿ ಬಾ ಅಳಿಲೆ  ದಾರಿಯಲ್ಲಿ ನಾನು  ಸೈಕಲ್ ಏರಿ ಬಂದೆ  ದಾರಿಗೆ ಅಡ್ಡ ಬಂದು  ನೀ ನೋವನು ತಿಂದೆ  ಬೇಲಿಯ ಸಾಲಲಿ  ನೀ ಇರುವುದ ನೋಡಿ  ಬಲೆಯ ಬೀಸಿಹರು ನಿನ್ನನು ಹಿಡಿದು ಕೊಂದಿಹರು  ಅಳಿಲೆ ಅಳಿಲೆ  ಮುದ್ದಿನ ಅಳಿಲೇ  ಬಾರೆ ಬಳಿಗೆ ಬೇಗ  ಚಿವ್ ಚಿವ ತಾನೇ ನಿನ್ನ ರಾಗ  ***********ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಸಂತೋಷವಾಗಿರಲು ಪ್ರಯತ್ನಿಸೋಣ

Image
ಸಂತೋಷ ಎಂದರೇನು??? ನಾವು ಗೆಳೆಯರು , ಮನೆಯವರು ಮತ್ತು ಸಂಬಂಧಿಕರ ಬಳಿ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ ಅವರು ನಾವು ಎಲ್ಲರೂ ಸಂತೋಷದಿಂದಿದ್ದೇವೆ ಅಥವಾ ಸಮಸ್ಯೆ ಇದ್ದಲ್ಲಿ ನಾವು ದುಃಖದಿಂದ ಇದ್ದೇವೆ ಎಂದು ಹೇಳಬಹುದು. ಹಾಗಿದ್ದರೆ ಸಂತೋಷ ಎಂದರೆ ನಮ್ಮ ಮನಸ್ಸು ಉಲ್ಲಾಸದಿಂದ ಉತ್ಸಾಹದಿಂದ ದೇಹವು ಯಾವುದೇ ಅನಾರೋಗ್ಯವಿಲ್ಲದೆ ಶಕ್ತಿಯುತವಾಗಿ ಕೂಡಿರುವುದು ಎಂದು ತಿಳಿಯಬಹುದು ಮತ್ತು ನಾವು ಅಂದುಕೊಂಡ ಎಲ್ಲಾ ಕೆಲಸಗಳು ಕೈಗೂಡಿ ಎಲ್ಲವೂ ಗೆಲುವಿನಿಂದ ಕೂಡಿದ್ದರೆ ಅದನ್ನು ಸಂತೋಷ ಅನ್ನಬಹುದು. ಅದೇ ದುಃಖ ಎಂದರೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ರೋಗರುಜಿನಗಳಿಂದ  ಬಳಲುತ್ತಿರುವುದು ಎಂದು ತಿಳಿಯಬಹುದು ಮತ್ತು ನಾವು ಮಾಡುವ ಕೆಲಸಗಳಲ್ಲಿ ಸರಿಯಾದ ರೀತಿ ಗೆಲುವು ಸಿಗದಿದ್ದಲ್ಲಿ ನಮ್ಮ ಮಾನಸಿಕ ಭಾವನೆಗಳು ಸಿಟ್ಟು, ಕೋಪ, ನಿರುತ್ಸಾಹ ಮತ್ತು ದುಃಖದಿಂದ ಕೂಡಿರುವುದು ಎಂದು ತಿಳಿಯಬಹುದು. ಇದೇ ರೀತಿ ನಮ್ಮ ದೈನಂದಿನ ಸಂತೋಷಗಳು ನಮ್ಮ ಭಾವನೆಗಳ ಮೇಲೆ ನಿಂತಿರುತ್ತವೆ. ನಮ್ಮ ಭಾವನೆಗಳು ಎರಡು ವಿಧದಲ್ಲಿ ನಾವು ತಿಳಿಯಬಹುದು.  1. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು.  2. ನಕಾರಾತ್ಮಕ ಭಾವನೆಗಳು.  ಈ ಭಾವನೆಗಳು ಮನುಷ್ಯನಲ್ಲಿ ಬಂದಾಗ ಮನುಷ್ಯನ ಮನಸ್ಸು ತನ್ನಷ್ಟಕ್ಕೆ ತಕ್ಕಂತೆ ಮಾತನಾಡಲು ಶುರುಮಾಡುತ್ತದೆ. ಅಂದರೆ ಮನಸ್ಸು ಚಂಚಲವಾಗುತ್ತದೆ ಹಾಗೂ ಭಾವನೆಗಳು ನಮ್ಮ ಮೆದುಳಿನ ಮೇಲೆ ಮತ್ತು ದೇಹದ ಮೇಲೆ ಪರಿಣಾಮ ಬೀರ...

ಮಕ್ಕಳ ಗೀತೆ -32

Image
  🌹ಓ ಗಡಿಯಾರವೇ 🌹 ಓ ಗಡಿಯಾರವೇ ಓ ಗಡಿಯಾರವೇ  ನಿಂತಲ್ಲೇ ಒಮ್ಮೆ ನಿಂತು ಬಿಡು  ಸಾಧ್ಯವಾದರೆ ಸೂರ್ಯ ಚಂದ್ರರನ್ನು  ಒಮ್ಮೆ ಮುಚ್ಚಿ ಬಿಡು  ಏಕೆ ಓಡುತ್ತಿರುವೆ ಇಪ್ಪತ್ನಾಲ್ಕು ಗಂಟೆ  ಯಾರು ತಿಳಿಯರು ನಮಗೆ ಏಕೆ ಅಷ್ಟೇ ಗಂಟೆ   ಓಡುತ್ತಿರುವ ಜಗದಲ್ಲಿ ತಡೆಯುವವರಾರು  ಗಡಿಯಾರದ ಗಂಟೆಯನ್ನ  ಸಮಯ ಮುಗಿದ ಮೇಲೆ ಮತ್ತೆ ಬರುವ ನಿನ್ನ  ಬೆಳಕು ಕತ್ತಲೆ ಎಲ್ಲವೂ ಸರಿ ಸಮವೆ ನಿನಗೆ  ಸಮಯದಿ ದುಡಿಯದಿದ್ದರೆ ಕೂಳು ಸಿಗದು ನನಗೆ  ಹಗಲು ಸರಿದು ಇರುಳು ಬಂದು ಹೊರಡುವೆ ನೀನು ಕೊನೆಗೆ  ನಿನ್ನನೆ ನಂಬಿ ನಡೆಯುತ್ತಿಹುದು ಈ ಜಗವು  ನೀ ಇರದೇ ಇದ್ದರೆ ಸುಮ್ಮನೆ ಕುಣಿಯದು ಮನವು  ಪ್ರತಿ ಗಂಟೆಯೂ ನಿನ್ನಯ ಲೆಕ್ಕ ಅದುವೇ ಸಮಯ ಪಕ್ಕ  ರಾತ್ರಿ ಮುಳುಗಿ ಹಗಲು ಸರಿದು ಮಾಡಿತು ಲೆಕ್ಕ ಚುಕ್ಕ  **********ರಚನೆ********* ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಮಕ್ಕಳ ಗೀತೆ -29

Image
  🌹ಪುಟಾಣಿ ಮಕ್ಕಳು 🌹 ಪುಟಾಣಿ ಮಕ್ಕಳು ಹೊರಟರು  ಆಕಾಶದಿ  ಕತ್ತಲ ರಾತ್ರಿಯಲಿ  ನೀಲಿಯ ಚಪ್ಪರ ಮೋಡದ  ಬಾನಿನ ಮನೆಯಲ್ಲಿ ಚಂದ್ರನ ಬೆಳಕಲ್ಲಿ ಆಗಸವು ನಗುತಾ ಮಿನುಗುತಿದೆ  ಗುಡಗಜ್ಜ ಬಂದ ಗುಡುಗುಡು  ಶಬ್ದವ ತಂದ ಮೋಡದ ಡಿಕ್ಕಿ ಮಿಂಚು  ಸಿಡಿಯಿತು ಹೊಕ್ಕಿ  ಬಾನಿನ ಮನೆಯು ಚದುರಿ  ಹೋಯಿತು ಕುಕ್ಕಿ  ಮಳೆಯು ಬಂತು, ನೀರನ್ನು ತಂತು  ಆಗಸವೆಂಬ ಬಾನಿಂದ ಮಕ್ಕಳು ಬೆದರಿ ನೀರಿಗೆ ಹೆದರಿ  ಹೊರಟವು ಅಲ್ಲಿಂದ  ನೀಲಿಯ ಚಪ್ಪರ ಸೋರಿ  ಮಕ್ಕಳು ಒದ್ದೆ  ಹಿಡಿಯುವರು ಇಲ್ಲ ಮಕ್ಕಳಿಗೆ  ಛತ್ರಿಯನ್ನು  ಚಂದ್ರನು ಸರಿದನು ನಕ್ಷತ್ರ  ಮುಳುಗಿದವು ಇರುಳಿನಲ್ಲಿ  ಜಡಿ ಜಡಿ ಮಳೆ ಸುರಿಯುತ್ತಿದೆ  ಬಿಡದೆ ಮೋಡದಲಿ  ಮಕ್ಕಳ ಮುಳುಗಿಸಿ ಚಪ್ಪರದ   ತೆಪ್ಪವು ತೇಲಿತು ನೀರಿಂದ  ಪುಟಾಣಿ ಮಕ್ಕಳು ಉಳಿಯಲಿಲ್ಲ  ನೀರಿನ ಸಾವಿಂದ ಅತ್ತು ಕರೆದರೂ ಕೇಳಲು  ಇಲ್ಲಿ ಯಾರಿಲ್ಲ  ಆಕಾಶದ ನೀಲಿಯ ಚಪ್ಪರಕೆ  ಏಕೋ ಸಾವಿಲ್ಲ  ***********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ 

ಮಕ್ಕಳ ಗೀತೆ -31

Image
  🌹 *ಬನ್ನಿ ಶಾಲೆಗೆ ಹೋಗೋಣ* 🌹 ಬನ್ನಿ ಗೆಳೆಯರೇ ನಾವು  ಶಾಲೆಗೆ ಹೋಗೋಣ  ಕಣ್ಣಾ ಮುಚ್ಚೆ ಗಾಡೆ  ಗೂಡೆ ಆಡೋಣ  ಮೇಷ್ಟ್ರು ಬರುವ ಒಳಗೆ  ಶಾಲೆ ಸ್ವಚ್ಛ ಮಾಡೋಣ  ಹತ್ತು  ಗಂಟೆಗೆ ಕನ್ನಡ  ಗೀತೆ ಹಾಡೋಣ  ಗುರುಗಳು ಹೇಳಿಕೊಟ್ಟ  ಪಾಠವ ಕಲಿಯೋಣ  ಕಲಿಯದೆ ಹೋದರೆ ಮೇಷ್ಟ್ರು  ಕೈಯಲ್ಲಿ ಒದೆ ತಿನ್ನೋಣ ನಮ್ಮ ಶಾಲೆಯಲ್ಲಿ ಶಾರದ  ಪೂಜೆ ಮಾಡ್ತಾರೆ ಬೋರ್ಡಿಗೆ ಹಸಿರು ಕರಿಮಸಿ  ಬಳಿದು ಅಕ್ಷರ ಬರಿತಾರೆ  ಕನ್ನಡದ ಶಾಲೆಯೆಂದು  ತಿರಸ್ಕರಿಸ ಬೇಡಿರಿ  ಇಂಗ್ಲಿಷ್ ಮೀಡಿಯಂ ಇದೆ  ಬಂದು ಶಾಲೆಗೆ ಸೇರಿರಿ  ಸುಂದರ ಪ್ರಕೃತಿಯ ಪರಿಸರ  ಶಾಲೆ ಮಾಡೋಣ  ಶಾಲೆಯ ಸುತ್ತಮುತ್ತ ಗಿಡ  ಮರಗಳ ವನ ಬೆಳೆಸೋಣ  ಹಳ್ಳಿಯ ಮಕ್ಕಳು ಎಲ್ಲಾ  ಖಾಸಗಿ ಶಾಲೆಯ ಸೇರಿಹರು ನಮ್ಮ ಶಾಲೆಯ ಸೂರನು ಸೋರುವಂತೆ ಮಾಡಿಹರು  ವಿದ್ಯೆಯನು ದುಡ್ಡು ಕೊಟ್ಟು  ಕಷ್ಟಪಟ್ಟು ಕಲಿಯುತ್ತಿಹರು ಉಚಿತ ಶಿಕ್ಷಣವನ್ನು ತೊರೆದು  ಬಿಟ್ಟು ದೂರ ನಿಂತಿಹರು  ಶ್ರೀಮಂತರ ಎಲ್ಲರೂ ಸೇರಿ  ಹಳ್ಳಿಯ ಶಾಲೆ ಮುಚ್ಚಿಹರು ಬಡವರ ತಂದೆ ತಾಯಿಗೆ  ನೋವನ್ನು ತಂದಿಹರು  ಮುಚ್ಚಬೇಡಿರಿ ನಮ್ಮ ಊರಿನ  ಕನ್ನಡ ಶಾಲೆಯನ್ನು ಮುಚ್ಚಿ ನಡೆದರೆ ನೀವು  ಮುಂದೆ ತಿನ್ನಬೇಕು ಮಣ್ಣನು ***********ರಚನೆ*********  ...