Posts

ದೇಹವೆಂಬ ದೇಗುಲ

Image
  ದೇಹದೊಳಗೆ ಮನವು ಏಕೋ ಮಸಣವಾಗಿದೆ  ಚಿಗುರಿದ ಆಸೆಗಳು ಕೊಳೆತು ಘಾಸಿಯಾಗಿದೆ ಅರಳಿದ ಬಯಕೆಗಳು ಏಕೋ ನೆತ್ತರು ಕುಡಿದಿದೆ  ಮಾತು ಬರದೆ ಮನವು ನೊಂದು ಮೌನವಾಗಿದೆ  ಎದೆಯ ಬಡಿತ ಹೆದರಿ ಹೆದರಿ ಬಡಿದಿದೆ  ರಕ್ತವೇಕೋ ನರಗಳಲ್ಲಿ ಬಿರುಸಿನಿಂದ ಓಡಿದೆ  ನೋವಿನಿಂದ ಮೂಳೆಗಳು  ಸವೆದು ಹೋಗಿದೆ  ಕೊಬ್ಬಿದ ಮಾಂಸಖಂಡ ಮುದುಡಿ ನಿಂತಿದೆ  ಚರ್ಮವೆಲ್ಲ ಸುಕ್ಕುಗಟ್ಟಿ ವಯಸ್ಸು ಏಕೋ ಕರೆದಿದೆ  ಕಣ್ಣು ಹೇಗೋ ಮೌನವಾಗಿ ಮೂಕ ಕತೆ ಹೇಳಿದೆ  ನಾಲಿಗೆಯು ಹೆದರಿ ತೋಡರಿ ಮೌನದಿಂದ ತುಂಬಿದೆ ತುಟಿಗಳೇಕೋ ಬತ್ತಿ ಬರಡು ಭೂಮಿಯಾಗಿದೆ  ಶ್ವಾಸದಲ್ಲಿ ಗಾಳಿ ಸುಮ್ಮನೆ ಸಿಲುಕಿ ನುಸುಳಿದೆ  ದೇಹವೆಲ್ಲ ನಲುಗಿ-ನಲುಗಿ ನರಳಿ ನರಳಿ ನಿಂತಿದೆ  ಕೈಕಾಲು ಎರಡು ಕೂಡ ದೇವರನ್ನು ಕರೆದಿದೆ  ದೇಹವೆಲ್ಲ ಚದುರಿ ಆರು ಮುರಡಿ ಗುಂಡಿ ಬೇಡಿದೆ  ಬ್ರಹ್ಮ ಹಣೆಬರಹ ಬರೆದನೆ ಏಕೆ ಹೀಗೆ  ವಿಧಿಯ ಆಟವನ್ನು ಮಟ್ಟ ಹಾಕುವುದೇಗೆ ಕಟ್ಟಬೇಕೆ ಇಲ್ಲಿ ನಾವು ಬಿದಿರು ಚಟ್ಟವ  ಹೊರಡಬೇಕೆ ಇಲ್ಲಿಂದ ನಾವು ನೆನೆದು ದೈವವ *********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಓ ಮಲ್ಲಿಗೆ

Image
  ಊರ ಹೇರಿ ಹೂವ ಬನದಾಗ  ಮಲ್ಲಿಗೆ ಒಂದು ನಗುತ್ತಿತ್ತು ಹಸಿರೆಲೆಯ ತುಂಬಾ ಅರಳಿ ಘಮ್ಮ  ಎಂದು ಸುವಾಸನೆ ಬೀರಿತ್ತು  ಬಿಳಿಯ ಬಣ್ಣದ ಮಲ್ಲಿಗೆ ಎಲ್ಲಾರ  ಮನವ  ಸೆಳೆದಿತ್ತು ಗಲ್ಲಿಗೆ  ದುಂಬಿಯು ದಾರೀಲಿ ಬರುತ ಕಣ್ಣ  ಅಂಚಲಿ ಸಂಚು ಮಾಡಿತ್ತು  ಅರ್ಪಿಸಿದರೆ ದೇವರ ಮೈಮೇಲೆ  ನಗು ನಗುತ ಬಾಳತೀನಿ  ಘಮ್ಮನೆ ನೀರೆಯ ಜಡೆ  ಏರಿ ಕುಳಿತು ಬೀಗತ್ನಿ  ಅರಳಿದರೆ ಜನನ  ಬಾಡಿದರೆ ಮರಣ  ಮುಡಿದರೆ ನಗುತಿನಿ  ಬಾಡಿದಾರೆ ಅಳುತೀನಿ  ಮೊದಲ ರಾತ್ರಿ ಮುಡಿಯೇರಿ  ಹಾಸಿಗೆಯಲ್ಲಿ ಕೊನೆಸೇರಿ ಕೆರಳಿದ ಹೃದಯದಿ ಕನಸಿನ  ಅಲೆಯೊಂದು ಮೂಡಿತ್ತು  ಬದುಕಲ್ಲಿ ತಣ್ಣನೆಯ ಗಾಳಿಯ  ಘಮ ಬೀರಿತು ಮುಖದಲ್ಲಿ ಮಂದಹಾಸ  ಜೀವನದಿ ಹೊಸ ಹರ್ಷ ತಂದಿತು  ಕಂಗಳಲಿ ಕುಡಿನೋಟ  ಚೆಂದದ ಮೈಮಾಟ  ಅರಳಿದ ಮನಸೋ  ಚೆಲುವಾದ ನನಸೋ  ಬಾಳೊಂದು ಬಂಗಾರ   ಬಣ್ಣದ ಕಾಮನಬಿಲ್ಲ ಸಂಚಾರ  ಮೈಲಿಗೆ ಮನಕೇನು  ಅರಳಿದ ತನು ನೀನು ***********ರಚನೆ*********  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ಮೂಕ ವೇದನೆ

Image
  ಮನಸಿನೊಳಗೆ ಅವಿತು ಕೂತ ಮೂಕ ಕನಸಿದು  ಹೃದಯ ಘಾಸಿ ಮಾಡಿ ರಕ್ತ ಸುರಿಸಿದ ನೋವ ಮಾತಿದು ಮೂರು ದಿನದ ಬದುಕಲಿ ಏಕೋ ನೊಂದ ಕೂಗಿದು  ಯಾರನ್ನು ಹೊಣೆ ಮಾಡಲಿ ಹಾಳು ಹಣೆಬರಹದ ನೋವಿದು  ದೇಹದ ಒಳಗೆ ಕಂಪಿಸಿ ಮೌನದೀ ಮೂಕ ಮಾತನಾಡಿವೆ ಆಸೆ ಕೆರಳಿಸೋ ಕಣ್ಣುಗಳು ಚೂರಿ ಇಡಿದು ಕಾದು ಕುಂತಿವೆ ತುಟಿಗಳೆರಡು ಕೆಂಡದಿ ನೊಂದು ಬೆಂದು ರಕ್ತ ಕಾರಿವೆ  ಕೆನ್ನೆಗಳು ಚದುರಿ ಅದುರಿ ಬೆದರಿ ಸುಕ್ಕು ಕಟ್ಟಿವೆ  ವಯಸ್ಸು ಹಸಿಬಿಸಿ ಪ್ರಣಯದ ಬಯಕೆ ತೋರಿ ನಗುತಿದೆ  ಮೂಡಿದ ಮಲ್ಲಿಗೆ ಬಾಡಿ ಸುಗಂಧ ಕೊಳೆತು ನಾರಿದೆ  ಹುಚ್ಚುಕೊಡಿ ಮನಸು ಕುಣಿದು ಮಸಣವಾಗಿ ನಿಂತಿದೆ ಬಯಕೆಗಳು ಬಾಯಾರಿ ಬೆವೆತು ಮೈ ಮುದ್ದೆಯಾಗಿದೆ  ಯಾರು ಬರೆದ ಕತೆಗೆ ಇನ್ನ ಯಾರೋ ನಾಯಕ  ಆಡಿಸುವವನ ಸೂತ್ರದಲ್ಲಿ ಆಡೋ ಆಟವೇ ಸೂತಕ  ಕರುಣೆ ಇಲ್ಲದ ವಿಧಿಯ ನಡೆಗೆ ಕೊಡಲಿ ಪೆಟ್ಟು ಬಿದ್ದಿದೆ  ಹಣೆಬರಹ ಬರೆದ ಬ್ರಹ್ಮನ ವಿಧಿಯು ಶಪಿಸಿ ಕುಂತಿದೆ  ************ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನಮ್ಮ ರೈತನು

Image
  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಬೆವರ ಹನಿಯು ಬಿದ್ದರೇನೆ ರೈತ ಎನುವುದು  ನೇಗಿಲನ್ನು ಇಡಿದರೇನೆ ಹುಳುಮೆ ನಗುವುದು ಬೀಜ ಬಿತ್ತಿ ಪೈರು ಹುಟ್ಟಿ ತೇನೆಯು ಕುಣಿವುದು  ಕೊಯ್ದ ಪೈರು ಪಸಲು ಆದ್ರೆ ರೈತ ಗೆಲುವುದು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಜಗಕೆ ಅನ್ನ ನೀಡೋ ದಣಿಯು ತಾನೆ ನಮ್ಮ ರೈತನು ಜೀವ ತೈದೂ ಸಾಲ ಮಾಡಿ ನೇಣಿಗೆ ಸತ್ತನು ಹಸಿರು ಬೆಳೆದು ಕೆಸರು ತುಳಿದು ಬದುಕಿ ಬಿಟ್ಟನು  ಗೋವು ಸಾಕಿ ಸಗಣಿ ಎತ್ತಿ ಪೈರಿಗೆ ಇಟ್ಟನು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ನೋಡಿದರೆ ಕೊಳಕು ಬಟ್ಟೆ ತೊಟ್ಟು ನಡೆದನು ಮೈಮೇಲೆ ಹಸಿರು ಹುಲ್ಲು ತಂದು ಎತ್ತಿಗೆ ಇಟ್ಟನು ಮುದ್ದೆ ರೊಟ್ಟಿ ತಿಂದು ಗಟ್ಟಿ ನಮ್ಮ ರೈತನು ಬರಡು ಭೂಮಿಯಲ್ಲಿ ಚಿನ್ನ ತೆಗೆದನು ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಗೋಳಿನ ಬದುಕು ಕಂಡು ನಿಟ್ಟುಸಿರು ಬಿಟ್ಟನು ಸಾಲಕಾಗಿ ಬ್ಯಾಂಕಿಗೆ ಮನೆಯ ಒತ್ತೆ ಇಟ್ಟನು  ಬೆಳೆಗೆ ಬೆಂಬಲ ಬೆಲೆ ಸಿಗದೆ ದಾರಿಗೆ ಸುರಿದನು ಏಳು ಬೀಳು ಜೀವನ ಕಂಡು ಬಾಳಲಿ ಸೋತನು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ನಮ್ಮ ಆಸ್ತಿ ನಾವು ತಿನ್ನುವ ಅಹಾರ ನಮ್ಮ ರೈತನು ನಾಡಿಗಾಗಿ ಜೀವ ಒತ್ತೆ ಇಟ್ಟ ಬಾಳಿದ ನಮ್ಮ ರೈತನು  ಭಾಷೆ ಬೇದ ಜಾತಿ ಬೇದ ಮರೆತ ವೀರ ರೈತನು ಮೋಸ ಕ...

ಹೊಸವರ್ಷ 2026

Image
  ಹೊಸವರ್ಷ ಬಂತು ಮನದಿ ಹೊಸ ಹರುಷ ತಂತು ನಭದಿ ಹಸಿರು ಉಸಿರಾಗಿ ಕುಣಿದಿದೆ ಹೆಸರು ಎಲ್ಲೆಡೆಯು ಹರಡಿದೆ  ಹೊಸದು ಹೆಸರಲಿ ಸಂಭ್ರಮ  ಪ್ರೀತಿಯ ಬಾಳಲಿ ಅನುಪಮ  ನೂರೆಂಟು  ಬಣ್ಣದ ಕನಸು  ಆಚರಸಿಲು ಸಿದ್ದ ಹೊಸ ತಿನಿಸು ಹಳೆಯ ವರ್ಷದ ಮೇಲೆ ಮುನಿಸು  ಹೊಸ ವರ್ಷಕ್ಕೆ ಹೊಸದಿರಿಸು  ತಂತು ಬಾಳಲಿ ಹೊಸ ಉಲ್ಲಾಸ  ಕಾಯಕದಿ ಕಾಣು ನೀ ಕೈಲಾಸ ಯೋಜನೆಗಳ ಬಂಡಿಯ ಸಾಲು ಬದುಕು ಕಷ್ಟ ಸುಖದ ನೂಲು  ಜೀವನ ಹೊಸ ಬಗೆ ಗೋಳು  ಸಾಗದಿದ್ದಾರೆ ಎಲ್ಲಾ ಹಾಳು  ತಿಳಿದು ನೀ ನೆಡೆ ಮನುಜ ಸೋಲು ಗೆಲುವು ಸಹಜ ಬಿದ್ದರೆ ನೀನು ಕುಗ್ಗಬೇಡ  ಎದ್ದರೆ ಎಲ್ಲಾ ಮರೆಯಬೇಡ  ಸಾಗು ನೀ ಭಕ್ತಿಯ ಹಾದಿಯಲಿ  ಬಜಿಸು ನೀ ದೈವದ ನಾಮದಲಿ  ಬದುಕು ದೇವರ ಕರುಣೆಯಲಿ ಪ್ರೀತಿ ತುಂಬಲಿ ಮನೆ  ಮನದಲಿ  ಹೊಸವರ್ಷ ಬಂತು ಮನದಿ ಹೊಸ ಹರುಷ ತಂತು ನಭದಿ ಹಸಿರು ಉಸಿರಾಗಿ ಕುಣಿದಿದೆ ಹೆಸರು ಎಲ್ಲೆಡೆಯು ಹರಡಿದೆ  **********ರಚನೆ*********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನನ್ನ ಕವಿತೆ

Image
  ಮನದ ಒಳಗೇ ಮೂಡಿದ ಕವಿತೆ ಒಮ್ಮೆ ಕೂಗಿ ಕರೆದಿದೆ ಅಂದ ಚೆಂದ ತೂಗಿ ನಲಿದು ಮುಗುಳ್ನಗೆಯ ಬೀರಿದೆ  ವರ್ಣಿಸಲು ಪದಗಳಿಲ್ಲ ಕವಿತೆ ಅಂದ ಚೆಂದವ ಬಣ್ಣ ಬಳಿದು ನೋಡುತ್ತಿದ್ದರೆ ಸೂಸುತಿದೆ ಗಂಧವ  ನೋವು ಹೊತ್ತು ತರಲು  ಜೀವ ನೀನು ತುಂಬಿದೆ  ಖುಷಿಯೂ ನನ್ನಲಿ ಬರಲು ಕಾಲವೆಕೋ ಮಾಗಿದೆ ಸೋಲು ಎಂಬ ಬೇಸರ ನನ್ನಲೆಕೋ ಮೂಡಿದೆ ಗೆದ್ದು ನಾನು ಬೀಗಲು ಪ್ರಶಸ್ತಿ ನನಗೆ ಬೇಕಿದೆ ನನ್ನ ನೆನಪು ನಿಮಗೆ ಬಿಡದೆ ಕಾಡಿ ಬಿಡುವುದೇ ಸಾಲುಗಳಲಿ ಮಾತು ಏಕೋ ಮೌನವಾಗಿದೆ ಹೇಳಲು ಹೊರಟ ನೋವು ಕಣ್ಣೀರು ಹಾಕಿದೆ  ಮನಕೆ ತಗುಲಿದ ಮಾತು ನೂರು ಕಥೆ ಹೇಳಿದೆ ಬರೆಯ ಹೊರಟ ಕವಿತೆ ಹೂವಿನಂತೆ ಅರಳಿದೆ ಕಾದು ಕೂತ ಜೇನು ನೊಣ ಸವಿಯ ತಾನೆ ಸವಿದಿದೆ ಬರೆದ ಪದಗಳು ಕಾಲಿಯಾಗಿ ಕವಿತೆ ಮೂಕವಾಗಿದೆ  ಓದಿ ಒಮ್ಮೆ ನನ್ನ ಕಥೆಯ ಎಂದು ಕವಿತೆ ಕೂಗಿ ಕರೆದಿದೆ  **********ರಚನೆ**********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನೋವು ತುಂಬಿ

Image
  ಭಾವದೊಳಗೆ ನೋವು ತುಂಬಿ  ಮನಸ್ಸು ಅಳುವುದೇ  ದೇಹದೊಳಗೆ ವಯಸ್ಸು ನಂಬಿ  ಕನಸು ಕುಣಿವುದೆ  ಗೆದ್ದ ಖುಷಿಯು ಕಣ್ಣೀರಾಗಿ ಆನಂದ  ಭಾಷ್ಪ ಸುರಿವುದೇ  ನಗುವ ಚಿಲುಮೆ ಮುಖದಿ ಅರಳಿ  ಭಾವ ಮಿಡಿವುದೇ  ಏಳು ಬೀಳು ಜೀವನದಿ ಉಂಟು  ಸೋಲು ಅಳುವುದೇ  ಗೆದ್ದ ಖುಷಿಯಲ್ಲಿ ದೇಹ ಕುಣಿದು  ಗೆಲುವು ನಗುವುದೇ  ಬಾಳ ಪಯಣ ಜೋಡಿ ನಂಬಿ  ದೂರ ನಡೆವುದೇ  ಬಾಳ ನೋಗವು ಮುರಿದು ಬಿದ್ದು  ಬಂಡಿ ಅಳುವುದೇ  ಸಾಗಬೇಕು ನಾವು ಎಲ್ಲ ಸಹಿಸಿ  ದೂರ ತೀರಕೆ  ಈಜ ಬೇಕು ನಾವು ಎಲ್ಲಾ ಸಹಿಸಿ  ಬಾಳ ದಡಕ್ಕೆ  ನೂಕಬೇಕು ನಾವು ಇಲ್ಲಿ ಬದುಕ  ದೋಣಿಯ ಸವೆಸಬೇಕು ಕಾಲವನ್ನು ನಡೆಸುತ   ಸಿಹಿ ಬಾಳ್ವೆಯ **********ರಚನೆ*******  ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ