ಜ್ವಾಲೆ ಸುಡುತ್ತಿದೆ
ಎದೆಯ ಒಳಗೆ ಬೆಂಕಿ ಹತ್ತಿದೆ
ವಿಷದ ಜ್ವಾಲೆಯು ಸುಡುತ್ತಿದೆ
ಮಳೆಯ ನೀರು, ಮೈಯಿಗೆ ಬಿದ್ದರೆ
ಕಣ್ಣ ನೀರು ನಿಂತು ಬಿಡುವುದೇ
ಹರಿವ ನದಿಯು ಕಟ್ಟೇ ಹೊಡೆದು
ಹಸಿರು ಪೈರಿನ ಬಸಿರ ತೆಗೆವುದೇ
ಯಾರು ಬಲ್ಲರೂ ವಿಧಿಯಾಟ
ಮೂರು ದಿನದ ಈ ಬದುಕ ದಾರಿಯಲ್ಲಿ
ವಿಷದ ಕಿಡಿಯಲಿ ಬೆಂಕಿ ಉರಿದಿದೆ
ದ್ವೇಷವೆಕೋ ನೆತ್ತರು ಬೇಡಿದೆ
ಮೂರು ದಿನದ ಈ ಬದುಕಲಿ
ಯಾರಿಗಿಲ್ಲ ಯಾರು ಜೊತೆಯಲ್ಲಿ
ಯಾರು ಹೆತ್ತರು ಎಷ್ಟು ಅತ್ತರು ಬಾಳಲಿ
ಮೂರಡಿ ಆರಡಿ ಗುಂಡಿ ಸಿಗುವುದು ಇಲ್ಲಿ
ಮನುಜ ನಿನ್ನ ಅಟ್ಟಹಾಸಕ್ಕೆ ಕೊನೆಯೆಲ್ಲಿ
ದೈವ ಏಕೋ ನೋಡಿ ನಗುತಿಹನು ಕೊನೆಯಲಿ
************ರಚನೆ*************
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment