ವಚನಗಳು -19




ವಿಧಿಯಾಟ ಬಲ್ಲವರು ಯಾರು

ಹಣೆಬರಹ ತಿದ್ದುವರು ಯಾರು

ಸಾವಿನಿಂದ ಅವಿತು ಕುಳಿತರೆ

ಬಿಟ್ಟೋಗುವುದೇ ವಿಧಿ ಲಿಖಿತ ಸಾವು

ಇದ್ದಷ್ಟು ದಿನ ಶಿವ ಮೆಚ್ಚುವ ಕಾಯಕ ಮಾಡು ನಮ್ಮ ಬಸವ ವಣ್ಣ


ದುಚ್ಚಟಾಗಳ ಬಿಟ್ಟೋಡೆ

ನಾನು ಒಳ್ಳೆಯವನೆಂದು ನಂಬಿಸಿಡೋದೇ

ಮುತ್ತಿನಂತ ಮಾತು ಹಾಡಿದೊಡೆ

ಸೂಳೇ ಗರತಿ ಅದೂಡೆ 

ಕಳ್ಳ ಕಳ್ಳನೇ ಅಲ್ಲವೇ ನಮ್ಮ ಬಸವಣ್ಣ


ಆಸೆ ಆಮಿಷವೋಡ್ಡಿ

ಶುದ್ಧ ಮನಸ್ಸನ್ನು ನಾಶ ಮಾಡಿ

ಸಂಶಯವ ಹುಟ್ಟಿಸಿ ಸಂಬಂಧ ಹಾಳು ಮಾಡಿ

ಶುದ್ಧನಂತೆ ನಾಟಕಬೇಡ ಮರುಳೆ.. ನಮ್ಮ ಬಸವಣ್ಣ


******ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್ 



Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa