Posts

Showing posts from January, 2026

ಮೂಕ ವೇದನೆ

Image
  ಮನಸಿನೊಳಗೆ ಅವಿತು ಕೂತ ಮೂಕ ಕನಸಿದು  ಹೃದಯ ಘಾಸಿ ಮಾಡಿ ರಕ್ತ ಸುರಿಸಿದ ನೋವ ಮಾತಿದು ಮೂರು ದಿನದ ಬದುಕಲಿ ಏಕೋ ನೊಂದ ಕೂಗಿದು  ಯಾರನ್ನು ಹೊಣೆ ಮಾಡಲಿ ಹಾಳು ಹಣೆಬರಹದ ನೋವಿದು  ದೇಹದ ಒಳಗೆ ಕಂಪಿಸಿ ಮೌನದೀ ಮೂಕ ಮಾತನಾಡಿವೆ ಆಸೆ ಕೆರಳಿಸೋ ಕಣ್ಣುಗಳು ಚೂರಿ ಇಡಿದು ಕಾದು ಕುಂತಿವೆ ತುಟಿಗಳೆರಡು ಕೆಂಡದಿ ನೊಂದು ಬೆಂದು ರಕ್ತ ಕಾರಿವೆ  ಕೆನ್ನೆಗಳು ಚದುರಿ ಅದುರಿ ಬೆದರಿ ಸುಕ್ಕು ಕಟ್ಟಿವೆ  ವಯಸ್ಸು ಹಸಿಬಿಸಿ ಪ್ರಣಯದ ಬಯಕೆ ತೋರಿ ನಗುತಿದೆ  ಮೂಡಿದ ಮಲ್ಲಿಗೆ ಬಾಡಿ ಸುಗಂಧ ಕೊಳೆತು ನಾರಿದೆ  ಹುಚ್ಚುಕೊಡಿ ಮನಸು ಕುಣಿದು ಮಸಣವಾಗಿ ನಿಂತಿದೆ ಬಯಕೆಗಳು ಬಾಯಾರಿ ಬೆವೆತು ಮೈ ಮುದ್ದೆಯಾಗಿದೆ  ಯಾರು ಬರೆದ ಕತೆಗೆ ಇನ್ನ ಯಾರೋ ನಾಯಕ  ಆಡಿಸುವವನ ಸೂತ್ರದಲ್ಲಿ ಆಡೋ ಆಟವೇ ಸೂತಕ  ಕರುಣೆ ಇಲ್ಲದ ವಿಧಿಯ ನಡೆಗೆ ಕೊಡಲಿ ಪೆಟ್ಟು ಬಿದ್ದಿದೆ  ಹಣೆಬರಹ ಬರೆದ ಬ್ರಹ್ಮನ ವಿಧಿಯು ಶಪಿಸಿ ಕುಂತಿದೆ  ************ರಚನೆ********  ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

ನಮ್ಮ ರೈತನು

Image
  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಬೆವರ ಹನಿಯು ಬಿದ್ದರೇನೆ ರೈತ ಎನುವುದು  ನೇಗಿಲನ್ನು ಇಡಿದರೇನೆ ಹುಳುಮೆ ನಗುವುದು ಬೀಜ ಬಿತ್ತಿ ಪೈರು ಹುಟ್ಟಿ ತೇನೆಯು ಕುಣಿವುದು  ಕೊಯ್ದ ಪೈರು ಪಸಲು ಆದ್ರೆ ರೈತ ಗೆಲುವುದು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಜಗಕೆ ಅನ್ನ ನೀಡೋ ದಣಿಯು ತಾನೆ ನಮ್ಮ ರೈತನು ಜೀವ ತೈದೂ ಸಾಲ ಮಾಡಿ ನೇಣಿಗೆ ಸತ್ತನು ಹಸಿರು ಬೆಳೆದು ಕೆಸರು ತುಳಿದು ಬದುಕಿ ಬಿಟ್ಟನು  ಗೋವು ಸಾಕಿ ಸಗಣಿ ಎತ್ತಿ ಪೈರಿಗೆ ಇಟ್ಟನು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ನೋಡಿದರೆ ಕೊಳಕು ಬಟ್ಟೆ ತೊಟ್ಟು ನಡೆದನು ಮೈಮೇಲೆ ಹಸಿರು ಹುಲ್ಲು ತಂದು ಎತ್ತಿಗೆ ಇಟ್ಟನು ಮುದ್ದೆ ರೊಟ್ಟಿ ತಿಂದು ಗಟ್ಟಿ ನಮ್ಮ ರೈತನು ಬರಡು ಭೂಮಿಯಲ್ಲಿ ಚಿನ್ನ ತೆಗೆದನು ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ಗೋಳಿನ ಬದುಕು ಕಂಡು ನಿಟ್ಟುಸಿರು ಬಿಟ್ಟನು ಸಾಲಕಾಗಿ ಬ್ಯಾಂಕಿಗೆ ಮನೆಯ ಒತ್ತೆ ಇಟ್ಟನು  ಬೆಳೆಗೆ ಬೆಂಬಲ ಬೆಲೆ ಸಿಗದೆ ದಾರಿಗೆ ಸುರಿದನು ಏಳು ಬೀಳು ಜೀವನ ಕಂಡು ಬಾಳಲಿ ಸೋತನು  ರೈತನು ರೈತನು ನಮ್ಮ ರೈತನು ರೈತನು ರೈತನು ದೇಶದ ಉಸಿರು ರೈತನು ನಮ್ಮ ಆಸ್ತಿ ನಾವು ತಿನ್ನುವ ಅಹಾರ ನಮ್ಮ ರೈತನು ನಾಡಿಗಾಗಿ ಜೀವ ಒತ್ತೆ ಇಟ್ಟ ಬಾಳಿದ ನಮ್ಮ ರೈತನು  ಭಾಷೆ ಬೇದ ಜಾತಿ ಬೇದ ಮರೆತ ವೀರ ರೈತನು ಮೋಸ ಕ...