🌹 ಕನ್ನಡವೇ ನಮ್ಮಮ್ಮ🌹 ಕನ್ನಡಮ್ಮನ ಕರುಳಿನ ಓ ಮುದ್ದಿನ ಕುಡಿ ಕನ್ನಡ ಮಾತಾಡುವ ಮುದ್ದು ಗಿಳಿಯಾಗಲಿ ನುಡಿ. //ಪಲ್ಲವಿ// ಬಸವಣ್ಣ ಸರ್ವಜ್ಞ ಅಕ್ಕಮಹಾದೇವಿ ವಚನಗಳು ಮನೆ ಬೆಳಗುತಾ ಅಜ್ಞಾನದ ಅಂಧಕಾರವಾ ತೊಳೆಯುತ ಹಚ್ಚಿವೆ ನಮ್ಮ ಮನದ ಹಣತೆ ಚಾಲುಕ್ಯ ಹೊಯ್ಸಳ ಕದಂಬ ರಾಜರುಗಳು ಆಳಿದರು ನಮ್ಮನ್ನು ನಾಲ್ವಡಿ ಕೃಷ್ಣರಾಜರು ಕಟ್ಟಿದರು ಕನ್ನಂಬಾಡಿಯನ್ನು ಜಗದಲ್ಲೆಡೆ ಕುಣಿಯಲಿ ನಲಿಯಲಿ ನಮ್ಮಯ ಕನ್ನಡ ನುಡಿಯು ಸಾಗುವ ನೋವು ಉಳಿಸುತ ಬೆಳೆಸಿದ ಸಿಹಿ ಕನ್ನಡ ಭಾಷೆಯು *******ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್
ಸಹ್ಯಾದ್ರಿ ನಿಸರ್ಗ ಕಂಡು ಕುಣಿದಿದೆ ಇಂದು ಮನವು ಜೋಗದ ನದಿ ಜಿಗಿತ ಕಂಡು ಅರಳಿದೆ ಇಂದು ತನುವು ಹಸಿರು ಹರಿದ್ವರ್ಣ ಗಂಧದ ಗುಡಿ ಸಹಬಾಳ್ವೆಯ ನಿತ್ಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಶಿಲ್ಪಗಳ ಇತಿಹಾಸ ಕಂಡು ಶೃಂಗೇರಿಯ ಶಾರದೆಗೆ ನಮಿಸಿ ದೈವಗಳ ನಾಡು ನುಡಿ ಕನ್ನಡದ ಸವಿಯ ನುಡಿ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... ಜಾತಿ ನೀತಿಗಳ ಮೆಟ್ಟಿ ಹಿರಿಮೆ ಗರಿಮೆ ಕುಲವ ತಟ್ಟಿ ಲೋಕವೆಂಬ ಬೆಳಕಿನಲ್ಲಿ ಬದುಕು ಆಸೆ ಹಸಿರಿನಂತೆ ಚಿಗುರಿದೆ ಪ್ರಣಯವೆಂಬ ಜೀವನದಲ್ಲಿ ಹೃದಯ ನಕ್ಕು ನಲಿದಿದೆ ಪ್ರೇಮೋತ್ಸವ ಪ್ರಕೃತಿ ಪ್ರೇಮೋತ್ಸವ ಮತ್ತೆ ಪ್ರೇಮೋತ್ಸವ......... *********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್
🌹ತಾಯಿ🌹 ಹೆತ್ತವಳು ಹೊತ್ತವಳು ತಾಯಿ ಅಲ್ಲವೇ ಸಾಕಿ ಸಲುಹಿದವಳು ತಾಯಿ ಅಲ್ಲವೇ ಕರುಣೆಯ ಸಿಂದು ಬಂದು ತಾಯಿ ಅಲ್ಲವೇ ಜೀವಕೆ ಜೀವ ತೇಯ್ದವಳು ತಾಯಿ ಅಲ್ಲವೇ ನೋವಲು ನೀನು ಖುಷಿಯನ್ನು ಕೊಟ್ಟೆ ಹರಿದ ಬದುಕನ್ನು ನೀ ಜೋಡಿಸಿ ಬಿಟ್ಟೆ ತುಂಬಿದೆ ನೀನು ಅನ್ನದಿ ಖಾಲಿಯ ತಟ್ಟೆ ಪಾವನವಾಯಿತು ಈ ಹಸಿದ ಹೊಟ್ಟೆ ತಾಯಿ ಎನ್ನುವ ಪದವೇ ಅಮೃತ ನೀನು ನಮ್ಮ ಬೆಳಸಿದ ರೀತಿ ಅದ್ಬುತ ಬದುಕನ್ನು ಕಳೆವೆವು ನಾವು ನಿನ್ನ ನೆನೆಯುತ ಉಸಿರು ಮತ್ತು ಹೆಸರು ನಿನ್ನದೇ ಈ ಜೀವಿತ ***********ರಚನೆ*************** ಡಾ.ಚಂದ್ರಶೇಖರ್ ಸಿ. ಹೆಚ್
Comments
Post a Comment