ಸಂತೋಷ ಎಂದರೇನು??? ನಾವು ಗೆಳೆಯರು , ಮನೆಯವರು ಮತ್ತು ಸಂಬಂಧಿಕರ ಬಳಿ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ ಅವರು ನಾವು ಎಲ್ಲರೂ ಸಂತೋಷದಿಂದಿದ್ದೇವೆ ಅಥವಾ ಸಮಸ್ಯೆ ಇದ್ದಲ್ಲಿ ನಾವು ದುಃಖದಿಂದ ಇದ್ದೇವೆ ಎಂದು ಹೇಳಬಹುದು. ಹಾಗಿದ್ದರೆ ಸಂತೋಷ ಎಂದರೆ ನಮ್ಮ ಮನಸ್ಸು ಉಲ್ಲಾಸದಿಂದ ಉತ್ಸಾಹದಿಂದ ದೇಹವು ಯಾವುದೇ ಅನಾರೋಗ್ಯವಿಲ್ಲದೆ ಶಕ್ತಿಯುತವಾಗಿ ಕೂಡಿರುವುದು ಎಂದು ತಿಳಿಯಬಹುದು ಮತ್ತು ನಾವು ಅಂದುಕೊಂಡ ಎಲ್ಲಾ ಕೆಲಸಗಳು ಕೈಗೂಡಿ ಎಲ್ಲವೂ ಗೆಲುವಿನಿಂದ ಕೂಡಿದ್ದರೆ ಅದನ್ನು ಸಂತೋಷ ಅನ್ನಬಹುದು. ಅದೇ ದುಃಖ ಎಂದರೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ರೋಗರುಜಿನಗಳಿಂದ ಬಳಲುತ್ತಿರುವುದು ಎಂದು ತಿಳಿಯಬಹುದು ಮತ್ತು ನಾವು ಮಾಡುವ ಕೆಲಸಗಳಲ್ಲಿ ಸರಿಯಾದ ರೀತಿ ಗೆಲುವು ಸಿಗದಿದ್ದಲ್ಲಿ ನಮ್ಮ ಮಾನಸಿಕ ಭಾವನೆಗಳು ಸಿಟ್ಟು, ಕೋಪ, ನಿರುತ್ಸಾಹ ಮತ್ತು ದುಃಖದಿಂದ ಕೂಡಿರುವುದು ಎಂದು ತಿಳಿಯಬಹುದು. ಇದೇ ರೀತಿ ನಮ್ಮ ದೈನಂದಿನ ಸಂತೋಷಗಳು ನಮ್ಮ ಭಾವನೆಗಳ ಮೇಲೆ ನಿಂತಿರುತ್ತವೆ. ನಮ್ಮ ಭಾವನೆಗಳು ಎರಡು ವಿಧದಲ್ಲಿ ನಾವು ತಿಳಿಯಬಹುದು. 1. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು. 2. ನಕಾರಾತ್ಮಕ ಭಾವನೆಗಳು. ಈ ಭಾವನೆಗಳು ಮನುಷ್ಯನಲ್ಲಿ ಬಂದಾಗ ಮನುಷ್ಯನ ಮನಸ್ಸು ತನ್ನಷ್ಟಕ್ಕೆ ತಕ್ಕಂತೆ ಮಾತನಾಡಲು ಶುರುಮಾಡುತ್ತದೆ. ಅಂದರೆ ಮನಸ್ಸು ಚಂಚಲವಾಗುತ್ತದೆ ಹಾಗೂ ಭಾವನೆಗಳು ನಮ್ಮ ಮೆದುಳಿನ ಮೇಲೆ ಮತ್ತು ದೇಹದ ಮೇಲೆ ಪರಿಣಾಮ ಬೀರ...
ಭಾವ ಗೀತೆ ಸಂಕಲನ ಲೇಖಕರ ನುಡಿ ಪ್ರೇಮೋತ್ಸವ ನಾನು ಕವಿಯಾಗಿ ಕೆಲವು ಪುಸ್ತಕಗಳನ್ನು ಹೊರ ತಂದು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆದ್ದು ಜಿಲ್ಲಾಧ್ಯಕ್ಷರಾಗಿದ್ದ ಸೂರಿ ಶ್ರೀನಿವಾಸ್ ಅವರು ಆಯೋಜಿಸಿದ್ದ ಕವಿ ಸಮ್ಮೇಳನ, ಖಾಂಡ್ಯದಲ್ಲಿ ನಡೆಯಿತು . ಆ ಸಮ್ಮೇಳನದಲ್ಲಿ ಪಾಲ್ಗೊಂಡು. ಕವಿ ದುಂಡಿರಾಜ್ ಮತ್ತು ಸವಿತಾ ನಾಗಭೂಷಣ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಕವಿಯಾದ ಕಾವೆಂ .ಶ್ರೀನಿವಾಸ್ ಮೂರ್ತಿ ಅವರ ನುಡಿಗಳನ್ನು ಕೇಳಿ ಆನಂದಿಸಿ ಹಾಗೆಯೇ ಕಾವೆಂ ಶ್ರೀನಿವಾಸ್ ಮೂರ್ತಿ ಅವರು ತಿಳಿಸಿದ ಭಾವಗೀತೆಗಳನ್ನು ಹೇಗೆ ರಚಿಸಬಹುದು ಎಂಬ ಬೋಧನೆ ಮತ್ತು ಅವರು ಗೀತೆ ರಚನೆಯ ಬಗ್ಗೆ ಬರೆದಿದ್ದ ಪುಸ್ತಕ ಮತ್ತು ಅವರು ಬರೆದ ಭಾವಗೀತೆಗಳ ಪುಸ್ತಕ ಹಾಗೂ ಆ ಪುಸ್ತಕದ ಹಾಡುಗಳು ಯೂಟ್ಯೂಬಲ್ಲಿ ಬಿಡುಗಡೆಗೊಂಡು ಅವುಗಳನ್ನು ಕೇಳಿ ಸವಿದು ಮತ್ತು ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಕೆ ಎಸ್ ನಿಸಾರ್ ಅಹ್ಮದ್ ಅವರ ಭಾವಗೀತೆ ಪುಸ್ತಕವನ್ನು ಓದಿ ನಾನು ಕೂಡ ಇವೆಲ್ಲಾ ಪುಸ್ತಕಗಳಿಂದ ಉತ್ತೇಜಿತನಾಗಿ ನಾನು ಕೂಡ ಭಾವಗೀತೆಗಳನ್ನು ರಚಿಸಲು ಶುರು ಮಾಡಿ ಸುಮಾರು 72 ಭಾವಗೀತೆಗಳನ್ನು ಬರೆದಿದ್ದೇನೆ ಆ ಗೀತೆಗಳನ್ನು ಹಾಡಲು ಮತ್ತು ಸಂಗೀತ ಸಂಯೋಜನೆ ಮಾಡಲು ಯಾರನ್ನು ಸಂಪರ್ಕಿಸುವುದು ಎಂದು ತಿಳಿಯದಾಗಿ ನನ್ನ ಗೆಳೆಯರ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟವರನ್ನು ನಾನು ಬರೆದ ಗೀತೆಗಳನ್ನು ಓದಲು ಕೇಳಿಕೊಂಡು ಆ ಗೀತೆಗಳು ಭಾವಗೀ...
ಲೇಖಕರ ನುಡಿ ವ್ಯಕ್ತಿತ್ವ ವಿಕಸನ ನಾನು ಸಸ್ಯಹಾರಿಯಾಗಿ ಹುಟ್ಟಿ ನನ್ನ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಇದೆ ಎಂದು ತಿಳಿದು ನಾನು ಚಿಕ್ಕವನಿದ್ದಾಗ ಕೋಳಿ ಮೊಟ್ಟೆಯನ್ನು ಸೇವಿಸಿ ಮತ್ತು ನನ್ನ ಶಿಕ್ಷಣಕ್ಕಾಗಿ ನಗರದಲ್ಲಿ ವಾಸಿಸಿ ಆಹಾರವನ್ನು ನಾನೇ ಸಿದ್ಧಪಡಿಸಿ ತಿನ್ನಲು ತಯಾರಾದಾಗ ರಾತ್ರಿಯ ವೇಳೆ ಸಾಂಬಾರನ್ನು ಹೋಟೆಲ್ಗಳಲ್ಲಿ ತಂದು ತಿನ್ನುವಾಗ ಒಮ್ಮೊಮ್ಮೆ ವಾಕರಿಕೆ ಬಂದಂತಾದರೂ ಅದನ್ನೇ ತಿಂದು ಅರ್ಧ ರಾತ್ರಿಯಲ್ಲಿ ಹೊಟ್ಟೆ ಹಸಿದು ಮಲಗುವಾಗ ಆದ ಪೋಷ್ಟಕಾಂಶದ ತೊಂದರೆ. ಊಟ ಮಾಡುವ ಆಹಾರದಲ್ಲಿ ರಾಸಾಯನಿಕ ಮಿಶ್ರಿತ ಆಹಾರದಿಂದ ನಾನು ಪಿ.ಎಚ್.ಡಿ ಮಾಡುವ ಸಂದರ್ಭದಲ್ಲಿ ನನ್ನನ್ನು ಮಾನಸಿಕ ತಜ್ಞರ ಬಳಿ ಸೇರುವಂತೆ ಮಾಡಿದ ನನ್ನ ಗೆಳೆಯರು ಮತ್ತು ನನ್ನ ಶಿಕ್ಷಕರು ಅಂದಿನಿಂದಲೂ ಇದುವರೆಗೆ ರಾಸಾಯನಿಕ ಯುಕ್ತ ಆಹಾರಗಳನ್ನು ತಿಂದು ದೇಹದಲ್ಲಿ ಅನಾರೋಗ್ಯ ಕಾಡಿ ಬಳಲಿ ಸುಮಾರು 20 ವರ್ಷಗಳು ಕಳೆದು ನನ್ನ ಸ್ಕೀಜೋಫ್ರೇಣೀಯ ಖಾಯಿಲೆಗೆ ಮತ್ತು ನಿದ್ರಾಹೀನತೆಗೆ ಔಷಧಿಯನ್ನು ಪಡೆದು ಗುಳಿಗೆ ನುಂಗುತ್ತಿರುವಾಗ, ನನ್ನ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡಾಗ, ನನ್ನ ಊಟದ ಆಹಾರಗಳಲ್ಲಿ ಇತ್ತೀಚಿಗೆ ಉತ್ತಮ ಪೋಷಕಾಂಶ ದೊರಕುತ್ತಿದೆ. ನಾನು ತಿನ್ನುವ...
Comments
Post a Comment