🌹 ಎದ್ದು ಬಿದ್ದ ಕಂದಮ್ಮ 🌹 ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ ನಿನ್ನ ನೋಟ ಮನವ ಕಲಕಿತು ಹಾಗೆ ಸುಮ್ನೆ ಹೆಜ್ಜೆಯ ಮೇಲೆ ಹೆಜ್ಜೆ ಕುಣಿಯಿತು ನಿನ್ನ ಗೆಜ್ಜೆ ನಿನ್ನ ನಡುಗೆ ನೋಡಿ ಮನಕೆ ಆಯ್ತು ಮೋಡಿ ಎಡವಿ ಬಿದ್ದು ನೀನು ಗಾಯವು ಆಯಿತು ತುಟಿಗೆ ಅಮ್ಮ ಎಂದು ನೀನು ಕೂಗಿ ಕರೆದೆ ಕೊನೆಗೆ ಎಡವೇ ಬಿದ್ದರೂ ಛಲವ ಬಿಡೆ ಮತ್ತೆ ಎದ್ದು ಹಠವ ಮಾಡಿಹೆ ಪ್ರೀತಿಯಲ್ಲಿ ಅಮ್ಮ ಎಂದಿಹೆ ನೋವನ್ನು ನೀನು ಮರೆತು ಓಡಿಹೆ ಕಣ್ಣ ಹನಿಯು ಜಾರಿ ಬಿತ್ತು ಕೆನ್ನೆಯ ಮೇಲೆ ಕರಗಿತು ಮುದ್ದು ಮೊಗವು ನಗುತಲಿತ್ತು ತುಟಿಯ ಮೇಲಿನ ಗಾಯ ಕಾಣುತ್ತಿತ್ತು ಕಂದ ನಿನ್ನಯ ನಗುವು ಕಾಡಿತು ಯಾಕೋ ನನ್ನೆ ನಿನ್ನ ನೋಟ ಮನವ ಕಲಕಿತು ಹಾಗೆ ಸುಮ್ಮನೆ ********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
ಸಂತೋಷ ಎಂದರೇನು??? ನಾವು ಗೆಳೆಯರು , ಮನೆಯವರು ಮತ್ತು ಸಂಬಂಧಿಕರ ಬಳಿ ಯೋಗ ಕ್ಷೇಮವನ್ನು ವಿಚಾರಿಸುತ್ತೇವೆ ಅವರು ನಾವು ಎಲ್ಲರೂ ಸಂತೋಷದಿಂದಿದ್ದೇವೆ ಅಥವಾ ಸಮಸ್ಯೆ ಇದ್ದಲ್ಲಿ ನಾವು ದುಃಖದಿಂದ ಇದ್ದೇವೆ ಎಂದು ಹೇಳಬಹುದು. ಹಾಗಿದ್ದರೆ ಸಂತೋಷ ಎಂದರೆ ನಮ್ಮ ಮನಸ್ಸು ಉಲ್ಲಾಸದಿಂದ ಉತ್ಸಾಹದಿಂದ ದೇಹವು ಯಾವುದೇ ಅನಾರೋಗ್ಯವಿಲ್ಲದೆ ಶಕ್ತಿಯುತವಾಗಿ ಕೂಡಿರುವುದು ಎಂದು ತಿಳಿಯಬಹುದು ಮತ್ತು ನಾವು ಅಂದುಕೊಂಡ ಎಲ್ಲಾ ಕೆಲಸಗಳು ಕೈಗೂಡಿ ಎಲ್ಲವೂ ಗೆಲುವಿನಿಂದ ಕೂಡಿದ್ದರೆ ಅದನ್ನು ಸಂತೋಷ ಅನ್ನಬಹುದು. ಅದೇ ದುಃಖ ಎಂದರೆ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ರೋಗರುಜಿನಗಳಿಂದ ಬಳಲುತ್ತಿರುವುದು ಎಂದು ತಿಳಿಯಬಹುದು ಮತ್ತು ನಾವು ಮಾಡುವ ಕೆಲಸಗಳಲ್ಲಿ ಸರಿಯಾದ ರೀತಿ ಗೆಲುವು ಸಿಗದಿದ್ದಲ್ಲಿ ನಮ್ಮ ಮಾನಸಿಕ ಭಾವನೆಗಳು ಸಿಟ್ಟು, ಕೋಪ, ನಿರುತ್ಸಾಹ ಮತ್ತು ದುಃಖದಿಂದ ಕೂಡಿರುವುದು ಎಂದು ತಿಳಿಯಬಹುದು. ಇದೇ ರೀತಿ ನಮ್ಮ ದೈನಂದಿನ ಸಂತೋಷಗಳು ನಮ್ಮ ಭಾವನೆಗಳ ಮೇಲೆ ನಿಂತಿರುತ್ತವೆ. ನಮ್ಮ ಭಾವನೆಗಳು ಎರಡು ವಿಧದಲ್ಲಿ ನಾವು ತಿಳಿಯಬಹುದು. 1. ಸಕಾರಾತ್ಮಕ ಅಥವಾ ಧನಾತ್ಮಕ ಭಾವನೆಗಳು. 2. ನಕಾರಾತ್ಮಕ ಭಾವನೆಗಳು. ಈ ಭಾವನೆಗಳು ಮನುಷ್ಯನಲ್ಲಿ ಬಂದಾಗ ಮನುಷ್ಯನ ಮನಸ್ಸು ತನ್ನಷ್ಟಕ್ಕೆ ತಕ್ಕಂತೆ ಮಾತನಾಡಲು ಶುರುಮಾಡುತ್ತದೆ. ಅಂದರೆ ಮನಸ್ಸು ಚಂಚಲವಾಗುತ್ತದೆ ಹಾಗೂ ಭಾವನೆಗಳು ನಮ್ಮ ಮೆದುಳಿನ ಮೇಲೆ ಮತ್ತು ದೇಹದ ಮೇಲೆ ಪರಿಣಾಮ ಬೀರ...
🌹ಹೃದಯ🌹 ಹೃದಯದೊಳಗೆ ನೂರು ಕವನ ಗೀಚಲೆನೆ ಸುಮ್ಮನೆ ಕನಸಿನೊಳಗೆ ಬಂದು ಬಿಡು ಹಾಗೆ ನೀನು ಮೆಲ್ಲನೆ ಮನಸು ಮನಸು ತಾಕಿದಾಗ ಪ್ರೀತಿಯಾಯ್ತು ಗಮ್ಮನೆ ನೀನು ನಾನು ಹಾಡುವಾಗ ಸಂಗೀತವಾಯ್ತು ಗಲ್ಲನೆ 🌹ಎದೆ🌹 ಎದೆಯ ಮೇಲೆ ನಿನ್ನ ಹಚ್ಚೆ ಕಾಡಿತೇಕೋ ಕೆನ್ನೆ ಮಚ್ಛೆ ಪ್ರೀತಿಯಲಿ ಮನಸು ಬಿಚ್ಚೆ ಓದುವೆ ನಾನು ಸ್ವರವನು ರಾಗ ಮಿಡಿದ ಒಲವನು 🌹ನಾಡಿ ಮಿಡಿತ 🌹 ಕಣ ಕಣದಲ್ಲೂ ನಾಡಿ ಮಿಡಿತ ನಿನ್ನ ಮೇಲೆ ನನ್ನ ಪ್ರೀತಿ ತುಡಿತ ಒಲವು ಒಂದು ಖುಷಿಯ ಹಿತ ನೀನು ತಾನೇ ನನಗೆ ಸ್ವಂತ ********ರಚನೆ ******** ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment