38-ವಚನಗಳು



ಮನದಿ ಮಗುವಾಗಿ ಕಾಯಕವ ಮಾಡಿದೆ

ಜೀವದ ಅಂಗುತೊರೆದು ಕಾಯಕವ ಮಾಡಿದೆ

ಭಾವದಿ ಭಕ್ತಿಯಿಂದ ಕಾಯಕವ ಮಾಡಿದೆ

ಜ್ಞಾನದಿ ಗುರುವಿಂದ ಕಾಯಕವ ಮಾಡಿದೆ

ಕಾಯಕವೇ ದೇವರೆಂದ ನಮ್ಮ ಬಸವಣ್ಣನ ಬೇಡಿದೆ


ನೀಲಿ ಆಕಾಶದಿ ಕಪ್ಪು ಕಾರ್ಮೋಡ ಕವಿದು

ನೀರಿಲ್ಲದ  ಕೆರೆಗೆ ಉಕ್ಕಿ ನೆರೆ ಬಂದು

ಭರಡು ಭೂಮಿಯಲಿ ಹಸಿರು  ಚಿಗುರಿ

ಕಾಯಕದಿ ಮನವು ಸುಖ ಕಂಡಂತೆ -ನಮ್ಮ ಬಸವಣ್ಣ


ಪೂಜಿಸಿ ದೇವರ ಕೆಟ್ಟವರಿಲ್ಲ

ಜ್ಞಾನದಿ ಜೀವನದಿ ನೊಂದವರಿಲ್ಲ

ಅನ್ನಸಂತರ್ಪಣೆ ಮಾಡಿ ಬಡವರಾಗಿಲ್ಲ

ಕಾಯಕವ ಮಾಡಿ ಕೆಟ್ಟವರಿಲ್ಲ -ನಮ್ಮ ಬಸವಣ್ಣ


************ರಚನೆ ************

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ