ವಚನಗಳು -39

 



ಪ್ರೀತಿಯಲ್ಲಿ ಒಲಿದ ದೇವರು ನೀನಯ್ಯ

ಮಸಣದಲ್ಲೂ ಪೂಜಿಸುವರು ನಿನ್ನಯ್ಯ

ಭಕ್ತಿಯಲ್ಲಿ ಪೂಜೆಯ ಮಾಡಿ ಬೇಡುವರು ನಿನ್ನಯ್ಯ

ಒಳ್ಳೆಯ ಕಾಯಕವ ಮಾಡದೆ ಬೇಡಿದರೆ

ಕೈಲಾಸ ದೊರಕುವುದು ಎಂತು -ನಮ್ಮ ಬಸವಣ್ಣ


ಅನ್ನದಲಿ ವಿಷವಿಟ್ಟು ಸುಷ್ಠಿ ತೆಗೆದಿಹರು

ನೀರಿನಲ್ಲಿ ದೇಹ ತೊಳೆದು ಗೊಚ್ಚೆ ಮಾಡಿಹರು

ಜೀವಿಯ ಜೀವಾಳ ತೆಗೆದು ನಿರ್ಜೀವಿ ಏನುತಿಹರು 

ಮಗುವಿಲ್ಲದ ಹೆಣ್ಣಿಗೆ ಬಂಜೆ ಎಂದಿಹರು

ನೋವಿಲ್ಲದೆ ನಾಟಕದ ಕೆಲಸ ಮಾಡಿಹರು-ನಮ್ಮ ಬಸವಣ್ಣ


ಮನದಲ್ಲಿ ಹಾಲಾಹಲ ತುಂಬಿ

ಕಣ್ಣೆದುರು ನಾಟಕದ ಛಾಯೆತುಂಬಿ

ಕುಡಿವ ನೀರಲ್ಲಿ ಅಮೃತವ ತೆಗೆದು

ಕಾಯಕದಿ ಬೆರೆತವಗೆ ನೋವ ತಂದಿಹರು-ನಮ್ಮ ಬಸವಣ್ಣ


**********ರಚನೆ*********

ಡಾ.ಚಂದ್ರಶೇಖರ ಸಿ .ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20